Pitru Paksha 2023: ಸರ್ವಪಿತೃ ಅಮವಾಸ್ಯೆ ಯಾವಾಗ? ಸೂರ್ಯಗ್ರಹಣ ಪೂಜೆಗೆ ಭಂಗ ತರಲಿದೆಯೇ?
ಪಿತೃ ಪಕ್ಷ ಯಾವಾಗಲೂ ಸರ್ವಪಿತೃ ಅಮಾವಾಸ್ಯೆಯೊಂದಿಗೆ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಅದರ ದಿನಾಂಕದ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಿದೆ. ಕೆಲವರು ಸರ್ವಪಿತೃ ಅಮಾವಾಸ್ಯೆ ಅಕ್ಟೋಬರ್ 13 ರಂದು ಎಂದು ಹೇಳುತ್ತಾರೆ. ಇನ್ನೂ ಕೆಲವರು ಅಮವಾಸ್ಯೆ 14 ರಂದು ಎಂದು ನಂಬುತ್ತಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 14 ರಂದು ಸರ್ವಪಿತೃ ಅಮಾವಾಸ್ಯೆ ಬರುತ್ತದೆ. ಈ ದಿನ ಶನಿವಾರವಾದ್ದರಿಂದ ಇದನ್ನು ಶನಿಶ್ಚರಿ ಅಮವಾಸ್ಯೆ ಎನ್ನಲಾಗುತ್ತದೆ. ಹಾಗಾದರೆ ಸರ್ವಪಿತೃ ಅಮವಾಸ್ಯೆ ಯಾವಾಗ? ಸೂರ್ಯಗ್ರಹಣ ಪೂಜೆಗೆ ಭಂಗ ತರಲಿದೆಯೇ? ಎನ್ನುವುದನ್ನು ತಿಳಿಯೋಣ.

ಸಾಮಾನ್ಯವಾಗಿ ತಮ್ಮ ಪೂರ್ವಜರ ಮರಣದ ದಿನಾಂಕವನ್ನು ತಿಳಿದಿಲ್ಲದ ಜನರು ಈ ಅಮವಾಸ್ಯೆಯಂದು ಅವರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುತ್ತಾರೆ. ಇದು ಪಿತೃ ಪಕ್ಷದ ಕೊನೆಯ ದಿನವಾಗಿದೆ. ಇದನ್ನು ಪಿತೃ ವಿಸರ್ಜನಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಭೂಮಿಗೆ ಬಂದ ಪೂರ್ವಜರು ಈ ದಿನದಂದು (ಅಕ್ಟೋಬರ್ 14) ತಮ್ಮ ಲೋಕಕ್ಕೆ ಮರಳುತ್ತಾರೆ. ಆದ್ದರಿಂದ ಈ ದಿನ ಜನರು ತಮ್ಮ ಮನೆಗಳಲ್ಲಿ ಪೂರ್ವಜರ ನೆಚ್ಚಿನ ಆಹಾರವನ್ನು ತಯಾರಿಸುವ ಮೂಲಕ ತಮ್ಮ ಪೂರ್ವಜರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಇದರಿಂದ ಪೂರ್ವಜರು ಸಂತೋಷದಿಂದ ಹೊರಡುತ್ತಾರೆ ಎಂಬ ನಂಬಿಕೆ ಇದೆ. ಈ ದಿನದಂದು ಶ್ರಾದ್ಧ, ತರ್ಪಣ ಮತ್ತು ಪಿಂಡದಾನ ಇತ್ಯಾದಿಗಳನ್ನು ಮಾಡುವುದರಿಂದ ಪೂರ್ವಜರ ಅಸಮಾಧಾನವೂ ದೂರವಾಗುತ್ತದೆ. ಇದರೊಂದಿಗೆ ಪಿತ್ರ ದೋಷದಿಂದಲೂ ಸ್ವಾತಂತ್ರ್ಯವನ್ನು ಪಡೆಯುತ್ತಾರೆ.
ಶ್ರಾದ್ಧ ಮುಹೂರ್ತ
ಅಮಾವಾಸ್ಯೆಯ ತಿಥಿಯು ಅಕ್ಟೋಬರ್ 13ರಂದು ರಾತ್ರಿ 9.50ಕ್ಕೆ ಪ್ರಾರಂಭವಾಗುತ್ತದೆ. ಆದರೆ ವೈದಿಕ ಧರ್ಮದಲ್ಲಿ, ಉದಯತಿಥಿ ಮಾನ್ಯವಾಗಿದೆ. ಆದ್ದರಿಂದ ಅಮವಾಸ್ಯೆಯ ತಿಥಿಯನ್ನು ಅಕ್ಟೋಬರ್ 14 ರಂದು ಪರಿಗಣಿಸಲಾಗುತ್ತದೆ. ಇದು ಅಕ್ಟೋಬರ್ 14 ರಂದು ರಾತ್ರಿ 11.24 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಈ ವರ್ಷದ ಪಿತೃ ಪಕ್ಷ ಅಕ್ಟೋಬರ್ 14 ರಂದು ಕೊನೆಗೊಳ್ಳುತ್ತದೆ. ಶ್ರಾದ್ಧದ ಶುಭ ಸಮಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಮೊದಲ ಮುಹೂರ್ತ: ಅಕ್ಟೋಬರ್ 14 ರಂದು ಬೆಳಿಗ್ಗೆ 11.44 ರಿಂದ ಮಧ್ಯಾಹ್ನ 12:30 ರವರೆಗೆ
ಎರಡನೇ ಮುಹೂರ್ತ: ಅಕ್ಟೋಬರ್ 14 ರಂದು ಮಧ್ಯಾಹ್ನ 12:30 ರಿಂದ ಮಧ್ಯಾಹ್ನ 1:16 ರವರೆಗೆ
ಮೂರನೇ ಮುಹೂರ್ತ: ಅಕ್ಟೋಬರ್ 14 ರಂದು ಮಧ್ಯಾಹ್ನ 1:16 ರಿಂದ 3:35 ರವರೆಗೆ
ಈ ದಿನ ಏನು ಮಾಡಬೇಕು?
ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಪೂರ್ವಜರಿಗೆ ಹಾಲು, ಎಳ್ಳು, ಹೂವುಗಳನ್ನು ಅರ್ಪಿಸಲಾಗುತ್ತದೆ. ನಿಮ್ಮ ಪೂರ್ವಜರ ನೆಚ್ಚಿನ ಆಹಾರವನ್ನು ತಯಾರಿಸಿ ಅವರ ಹೆಸರಿನಲ್ಲಿ ದಾನ ಕೂಡ ಮಾಡಬಹುದು. ಬ್ರಾಹ್ಮಣರಿಗೆ ಆಹಾರ ನೀಡಿ ಮತ್ತು ಪಿಂಡ ದಾನ ಮಾಡಲಾಗುತ್ತದೆ. ಅಮಾವಾಸ್ಯೆಯಂದು ವಿಷ್ಣುವನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ. ಆದರೆ ಈ ಬಾರಿ ಶನಿಶ್ಚರಿ ಅಮಾವಾಸ್ಯೆ ಆದ್ದರಿಂದ ಈ ದಿನ ಶನಿದೇವನನ್ನು ಪೂಜಿಸಲಾಗುತ್ತದೆ. ಇದು ಶನಿಪೀಡದಿಂದ ಬಳಲುತ್ತಿರುವವರಿಗೆ ಪರಿಹಾರವನ್ನು ನೀಡುತ್ತದೆ.
ಸೂರ್ಯ ಗ್ರಹಣದ ಪರಿಣಾಮವಿದೆಯೇ?
ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 14 ರಂದು ಸಂಭವಿಸುತ್ತದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಇದು ಅಮವಾಸ್ಯೆಯ ಪೂಜೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications