Kartik Purnima 2022: ಕಾರ್ತಿಕ ಪೂರ್ಣಿಮಾ ಶುಭ ಸಮಯ, ಪೂಜಾ ವಿಧಾನ, ಸ್ನಾನ-ದಾನದ ಮಹತ್ವ ತಿಳಿಯಿರಿ

ಕಾರ್ತಿಕ ಪೂರ್ಣಿಮಾ ವಿಷ್ಣು ಹಾಗೂ ಶಿವನನ್ನು ಪೂಜಿಸುವ ಹಿಂದೂಗಳ ಪವಿತ್ರ ಹಬ್ಬ. ಕಾರ್ತಿಕ ಪೂರ್ಣಿಮೆಯ ದಿನದಂದು ಶ್ರೀ ಹರಿಯು ನೀರಿನಲ್ಲಿ ಮತ್ಸ್ಯ ರೂಪದಲ್ಲಿ ಆಸೀನನಾಗುತ್ತಾನೆ. ಆದ್ದರಿಂದ ಈ ದಿನ ಸ್ನಾನ ಮತ್ತು ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇಲ್ಲಿ ತಿಥಿ, ಶುಭ ಮುಹೂರ್ತವನ್ನು ತಿಳಿಯಿರಿ.

ಪೂರ್ಣಿಮಾ ತಿಥಿ ಪ್ರತಿ ತಿಂಗಳು ಬರುತ್ತದೆ. ಆದರೆ ಕಾರ್ತಿಕ ಪೂರ್ಣಿಮೆಯ ಮಹತ್ವವನ್ನು ಇವೆಲ್ಲವುಗಳಿಗಿಂತ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಅಥವಾ ಪವಿತ್ರ ನೀರಿನಿಂದ ಸ್ನಾನ ಮಾಡುವುದು ಮತ್ತು ದೀಪಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದರಿಂದ ಜನ್ಮ ಜನ್ಮಗಳ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಕಾರಣದಿಂದಲೇ ಕಾರ್ತಿಕ ಪೂರ್ಣಿಮೆಯಂದು ಪುಣ್ಯನದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ನಾನ ಮಾಡಿ, ದಾನ ಇತ್ಯಾದಿ ಕಾರ್ಯಗಳನ್ನು ಮಾಡುತ್ತಾರೆ. ಈ ದಿನದಂದು ಪೂಜೆ, ಹವನ, ಪಠಣ ಮತ್ತು ತಪಸ್ಸು ಕೂಡ ವಿಶೇಷ ಮಹತ್ವವನ್ನು ಹೊಂದಿದೆ.

ಈ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನದ ಮಹತ್ವ

ಈ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನದ ಮಹತ್ವ

ಸನಾತನ ಧರ್ಮದ ಎಲ್ಲಾ ತಿಂಗಳುಗಳಲ್ಲಿ ಕಾರ್ತಿಕ ಮಾಸವನ್ನು ಅತ್ಯಂತ ವಿಶೇಷ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಷ್ಣು ಪುರಾಣದ ಪ್ರಕಾರ, ಭಗವಾನ್ ವಿಷ್ಣುವು ಕಾರ್ತಿಕ ಪೂರ್ಣಿಮೆಯ ದಿನದಂದು ಮತ್ಸ್ಯ ಅವತಾರವನ್ನು ಧರಿಸಿದನು. ಇದನ್ನು ಶ್ರೀ ಹರಿಯ ಮೊದಲ ಅವತಾರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಕಾರ್ತಿಕ ಮಾಸದ ಹುಣ್ಣಿಮೆಯ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ, ಜನರು ವಿಷ್ಣು ಮತ್ತು ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ಮಾಸದಲ್ಲಿ ಮಾಡುವ ಉಪವಾಸ ಶ್ರೀ ಹರಿಯ ಮಂಗಳಕರ ಅನುಗ್ರಹವನ್ನು ನೀಡುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಪೂರ್ಣಿಮೆ ಯಾವಾಗ, ಅದರ ಮಂಗಳಕರ ಸಮಯ ಮತ್ತು ದಾನದ ಪ್ರಾಮುಖ್ಯತೆ ಏನು ಎಂದು ತಿಳಿಯೋಣ.

ಕಾರ್ತಿಕ ಪೂರ್ಣಿಮಾ 2022 ದಿನಾಂಕ, ಶುಭ ಮುಹೂರ್ತ

ಕಾರ್ತಿಕ ಪೂರ್ಣಿಮಾ 2022 ದಿನಾಂಕ, ಶುಭ ಮುಹೂರ್ತ

ಕಾರ್ತಿಕ ಪೂರ್ಣಿಮಾವನ್ನು ಈ ವರ್ಷ ನವೆಂಬರ್ 8ರಂದು ಆಚರಿಸಲಾಗುತ್ತದೆ. ಈ ಬಾರಿ ಕಾರ್ತಿಕ ಪೂರ್ಣಿಮೆಯ ಆರಾಧನೆಯ ಶುಭ ಸಮಯ ನವೆಂಬರ್ 8 ರಂದು ಸಂಜೆ 4.57 ನಿಮಿಷದಿಂದ 5.49 ನಿಮಿಷಗಳವರೆಗೆ ಇರುತ್ತದೆ. ಈ ದಿನದಂದು ಪೂಜೆ ಮಾಡಲು ಮಂಗಳಕರ ಸಮಯ ಸುಮಾರು 52 ನಿಮಿಷಗಳವರೆಗೆ ಮಾತ್ರ ಇರುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಪೂರ್ಣಿಮೆಯಂದು ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಆದ್ದರಿಂದ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿರುತ್ತದೆ. ಬ್ರಹ್ಮ ಮುಹೂರ್ತ ಬೆಳಿಗ್ಗೆ 04.57 ರಿಂದ 05.49 ಆಗಿದೆ.

ಕಾರ್ತಿಕ ಪೂರ್ಣಿಮಾ ಪೂಜಾ ವಿಧಿ

ಕಾರ್ತಿಕ ಪೂರ್ಣಿಮಾ ಪೂಜಾ ವಿಧಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಪೂರ್ಣಿಮೆಯಂದು ಬೆಳಿಗ್ಗೆ ಬೇಗನೆ ಎದ್ದು ಗಂಗಾ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಿ ನಂತರ ಉದಯಿಸುವ ಸೂರ್ಯನಿಗೆ ಪೂಜೆಯನ್ನು ಸಲ್ಲಿಸಬೇಕು. ಕಾರ್ತಿಕ ಪೂರ್ಣಿಮೆಯ ದಿನದಂದು ಉಪವಾಸ ಮಾಡುವಾಗ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನ ವಿಷ್ಣುವಿನ ಜೊತೆಗೆ ತುಳಸಿ ಪೂಜೆಯ ಮಹತ್ವವನ್ನು ಹೇಳಲಾಗಿದೆ. ಈ ದಿನ ದಾನ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

ತ್ರಿಪುರಾರಿ ಪೂರ್ಣಿಮೆ

ತ್ರಿಪುರಾರಿ ಪೂರ್ಣಿಮೆ

ಪದ್ಮ ಪುರಾಣದ ಪ್ರಕಾರ, ಕಾರ್ತಿಕ ಮಾಸದಲ್ಲಿ ಭಗವಾನ್ ವಿಷ್ಣುವು ಮೀನಿನ ರೂಪದಲ್ಲಿ ನೀರಿನಲ್ಲಿ ನೆಲೆಸುತ್ತಾನೆ. ಕಾರ್ತಿಕ ಪೂರ್ಣಿಮೆಯಂದು ನದಿ, ಕೊಳ ಅಥವಾ ನೀರಿನ ತೊಟ್ಟಿಯಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. ಈ ದಿನ ಯಾರು ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡುತ್ತಾರೋ ಅವರ ದೈಹಿಕ, ದೈವಿಕ, ಭೌತಿಕ ಶಕ್ತಿ ಶಾಂತವಾಗುತ್ತದೆ ಮತ್ತು ಅಂತವರು ಆರೋಗ್ಯದ ವರವನ್ನು ಪಡೆಯುತ್ತಾರೆ.

ಕಾರ್ತಿಕ ಪೂರ್ಣಿಮೆಯನ್ನು ತ್ರಿಪುರಾರಿ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ ಈ ದಿನ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದು ಮತ್ತೆ ಮೂರು ಲೋಕಗಳಲ್ಲಿ ಧರ್ಮವನ್ನು ಸ್ಥಾಪಿಸಿದನು. ಅಂದಿನಿಂದ ಶಿವನಿಗೆ ಮಹಾದೇವ ತ್ರಿಪುರಾರಿ ಎಂದು ಹೆಸರಿಸಲಾಯಿತು. ಕಾರ್ತಿಕ ಪೂರ್ಣಿಮೆಯ ದಿನದಂದು ದೇವ್ ದೀಪಾವಳಿಯನ್ನು ಸಹ ಆಚರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+