ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ
ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ. ಪ್ರತಿ ಎರಡು ದಿನಕ್ಕೊಮ್ಮೆ ಉಪವಾಸ ವ್ರತಾಚರಣೆ ಮಾಡುವ ಸಂಪ್ರದಾಯಸ್ಥರು ತಮ್ಮ ಒಂದು ವರ್ಷದ ತಾಪ್ಸಾಯ ವನ್ನು ಅಂದು ಮುಕ್ತಾಯಗೊಳಿಸುತ್ತಾರೆ.
ಜೈನರಿಗೂ ಅಕ್ಷಯ ತೃತೀಯ ವಿಶೇಷ ದಿನ. ಪ್ರತಿ ಎರಡು ದಿನಕ್ಕೊಮ್ಮೆ ಉಪವಾಸ ವ್ರತಾಚರಣೆ ಮಾಡುವ ಸಂಪ್ರದಾಯಸ್ಥರು ತಮ್ಮ ಒಂದು ವರ್ಷದ ತಾಪ್ಸಾಯ ವನ್ನು ಅಂದು ಮುಕ್ತಾಯಗೊಳಿಸುತ್ತಾರೆ. ಪುರಾಣದಲ್ಲಿ ಋಷಭದೇವ ಕಬ್ಬಿನ ರಸ ಕುಡಿದು ತನ್ನ ಅಖಂಡ ವ್ರತಕ್ಕೆ ಅಂತ್ಯ ಸಾರಿದನೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಈಗಲೂ ಕಬ್ಬಿನ ರಸ ಕುಡಿದೇ ಉಪವಾಸ ಪರಿಸಮಾಪ್ತಿಗೊಳಿಸುವುದು ಪದ್ಧತಿ.
ದಕ್ಷಿಣಾಯನದಲ್ಲಿ ವಿಜಯ ದಶಮಿಯಾದರೆ ಉತ್ತರಾಯಣದಲ್ಲಿ ಅಕ್ಷಯ ತದಿಗೆ ಇವೆರಡೂ ತಿಥಿ ಪ್ರಧಾನವಾಗಿ ಗುರುತಿಸಲ್ಪಡುವ ದಿನಗಳು.ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ. ಅದರಂತೆ ಇದು ಕಲ್ಪಾದಿಯ ದಿನವೂ ಅಹುದು. ಚೈತ್ರ ಮಾಸದಲ್ಲಿ ಪೂಜೆಗೊಳ್ಳುತ್ತಾ ಬಂದಿದ್ದ ಡೋಲಾಗೌರಿಯ ಪೂಜೆಗೆ ಇಂದು ಕೊನೆಯ ದಿನ. ಸುಮಂಗಲಿಯರ ಇಂದಿನ ಸಡಗರ ಸಂಭ್ರಮಗಳ ಸೊಗಸನ್ನು ನೋಡಿಯೇ ಅನುಭವಿಸಬೇಕು.[ಚಿನ್ನ ಖರೀದಿ ಬೇಡ ಎನ್ನಲು 7 ಕಾರಣಗಳು]

ಧರ್ಮಸಾಧನೆ ಮಾಡಬೇಕೆನ್ನುವವರಿಗೆ ವೈಶಾಖ ಮಾಸದ ಒಂದೊಂದು ದಿನವೂ ಯೋಗ್ಯ ದಿನವೆಂದು ತಿಳಿದು ಬರುತ್ತದೆ. ಉಳ್ಳವರು ಇಲ್ಲದವರಿಗೆ ನೀಡುವುದರಲ್ಲಿಯೇ ಇಹಪರಗಳ ಸಾರ್ಥಕ್ಯವಿದೆ. ಶಿವನ ಮುಡಿಯಿಂದ ಎಲ್ಲರ ದಾಹ ತಣಿಸುವ ಗಂಗೆ ಭೂಮಿಗೆ ಇಳಿದು ಬಂದ ಶುಭದಿನ ಕೂಡ ಇದೇ ಎಂದು ನಂಬಲಾಗಿದೆ.
ಬದರಿನಾರಾಯಣನ ಮಂದಿರದ ದ್ವಾರವನ್ನು ತೆರೆಯುವುದು ಅಕ್ಷಯ ತೃತೀಯದಂದು. ಅದು ಮುಕ್ತಿದ್ವಾರವನ್ನು ತೆರೆಯುವ ತಿಥಿ ಎಂದು ಪರ್ಯಾಯವಾಗಿ ಹೇಳಬಹುದು. 12ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವಣ್ಣನವರು ಜನಿಸಿದ್ದು ಕೂಡ ಇದೇ ದಿನ. ಅಂದು ಸೂರ್ಯ ಮತು ಚಂದ್ರರಿಬ್ಬರು ಅವರ ಉಜ್ವಲತೆಯ ಉತ್ತುಂಗದಲ್ಲಿರುತ್ತಾರೆ. ಹಗಲೂ ಪ್ರಖರ, ರಾತ್ರಿಯೂ ತುಂಬ ಬೆಳಕು![ಅಕ್ಷಯ ತೃತೀಯ ಬಗ್ಗೆ ಜನ ಏನಂತಾರೆ?]
ಮಗದೊಂದು ಗರಿಮೆ ಅಂದರೆ ವಾದೀಂದ್ರರು ಗುರು ಗುಣಸ್ತವನವನ್ನು ಈ ದಿನದಂದೇ ಮಂತ್ರಾಲಯ ಗುರು ಸಾರ್ವಭೌಮರಿಗೆ ಭಕ್ತಿ ಭಾವದಿಂದ ಸಮರ್ಪಿಸಿದರೆಂದೂ, ಅವರ ಭಕ್ತಿ ಭಾವಗಳಿಗೆ ಪುಳಕಿತರಾಗಿ ರಾಘವೇಂದ್ರರು ವೃಂದಾವನ ಸಮೇತವೇ ತಲೆದೂಗಿ ವಾದೀಂದ್ರರ ಕೀರ್ತಿಯನ್ನು ಅನೇಕ ತಲೆಮಾರುಗಳ ತನಕ ಹಬ್ಬಿಸಿ ಅನಂತ ಫಲ ನೀಡಿದ್ದು ಅಕ್ಷಯ ತೃತೀಯ ಮಹಿಮೆಯೇ ಆಗಿದೆ. ಹೀಗಾಗಿ ಅಂದು ಗಂಧಲೇಪಿತ ಗುರುರಾಜನ ದರ್ಶನ, ಪರಮ ಮಂಗಳಕರ.[ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?]
ಇಷ್ಟೇ ಏಕೆ? ಇದರ ಹೆಗ್ಗಳಿಕೆ ಮತ್ತೊಂದು ಹಿನ್ನೆಲೆಯಿದೆ. ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಪಡಿಸಿದ್ದು, ಸದಾ ಪರಿಶುದ್ಧಳ ಪುನಃ ಪರಿಶುದ್ಧತೆ ಸದಾ ಸಂಪಾದಿಸಬೇಕಾದ eನವನ್ನು ಪುನಃ ಸಂಪಾದಿಸುವ, ಜ್ಞಾನಯಜ್ಞದ ಪ್ರತೀಕವೂ ಆಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications