ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ
ಅಮ್ಮಂದಿರ ದಿನದ ಬಗ್ಗೆ ಅಕ್ಷರಗಳಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಶಿವಾಜಿಯನ್ನು ಛತ್ರಪತಿ ಮಾಡಿದ ಜೀಜಾಬಾಯಿ, ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಗೆಲ್ಲುವ ಚೇತನ ನೀಡಿದ ಶಬನಮ್ ಸಿಂಗ್, ಮಗ ಪ್ರಧಾನಿಯಾದರೂ ಆಟೋದಲ್ಲೇ ತೆರಳುವ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್... ಉದಾಹರಣೆಗಳ ಪಟ್ಟಿ ಬೆಳೆಯುತ್ತದೆ... ಈ ಎಲ್ಲ ಮಹಾತಾಯಂದಿರಿಗೆ ಒಂದು ಸಲಾಂ ಹೇಳಿ ಮುಂದಕ್ಕೆ ಸಾಗಬೇಕು.
ಎಲ್ಲರಿಗೂ ಅವರ ತಾಯಿ ನಾಯಕಿಯೇ, ಆದರ್ಶವೇ.. ಬದುಕಿನ ಪುಟಗಳೇ ಹಾಗೆ, ತಿರುವಿಹಾಕಿದಷ್ಟು ಮುಗಿಯದ ಹೊತ್ತಿಗೆ.... ಬಾಲ್ಯದ ಅಮ್ಮ ಕೊನೆವರೆಗೂ ಅಮ್ಮನೇ....[ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ 'ಬಾಹುಬಲಿ']

ಅಂಗನವಾಡಿಯ ಟೀಚರ್,ಪ್ರಾಥಮಿಕ ಶಾಲೆಯ ಅಕ್ಕೋರು, ಹೈಸ್ಕೂಲಿನ ಮೆಡಮ್, ಪಿಯುಸಿಯ ಮೇಡಮ್, ಡಿಗ್ರಿಯ ಇಂಗ್ಲಿಷ್ ಮೇಡಮ್, ಗೆಳತಿ, ಪ್ರೇಯಸಿ...
ಅಷ್ಟೆ ಏಕೆ ವಿಧಾನ ಸೌಧದಲ್ಲಿ ಕೆಲಸ ಮಾಡುವ ಮಹಿಳೆಯೂ, ಸ್ಟೇಟ್ ಬ್ಯಾಂಕ್ ನ ಕ್ಯಾಷಿಯರ್, ಬಿಎಂಟಿಸಿ ಲೇಡಿ ಕಂಡಕ್ಟರ್, ಗಗನ ಸಖಿ, ನರ್ಸ್, ಸಹ ಅಮ್ಮನಾಗಿ ಕಾಣಿಸಬಹುದು..
ಮಳೆ, ಪ್ರಕೃತಿ, ಇಳೆ, ಭೂಮಿ, ಮರ, ಅಮ್ಮಂದಿರಿಗೆ ಅಮ್ಮ.. ಭಾರತೀಯರೂ ನಿಸರ್ಗಕ್ಕೆ ಮಾತೆ ಎಂದು ಕರೆದುಕೊಂಡೇ ಬಂದಿದ್ದಾರೆ. ಅದನ್ನು ಪೂಜೆ ಮಾಡುತ್ತಲೇ ಇದ್ದಾರೆ.[ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್]

ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ವ್ಯಕ್ತಪಡಿಸುವ ಪ್ರಮೇಯವೂ ಬರಲ್ಲ. ಅವಳಿಗೆ ನೀವು ತೆಗೆಸಿಕೊಡುವ ಸೀರೆ ಬೇಕಾಗಿಲ್ಲ. ಅವಳಿಗೆ ನೀವು ಕೊಡುವ ಚಿನ್ನದ ಒಡವೆಯೂಬೇಕಾಗಿಲ್ಲ. ನೀವು ಬೈದರೂ ಆಕೆ ಬೇಜಾರು ಮಾಡಿಕೊಳ್ಳಲ್ಲ. ಅದಕ್ಕೆ ಅವಳನ್ನು ತಾಯಿ ಎಂದು ಕರೆಯುವುದು.

ಸಾಮಾಜಿಕ ತಾಣಗಳು ತಾಯಂದಿರಿಗೆ ನಮನ ಸಲ್ಲಿಕೆ ಮಾಡಿವೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಮ್ಮಂದಿರ ದಿನ ಜೋರಾಗಿಯೇ ಇದೆ. ಸಾಮಾಜಿಕ ತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಿ ಅಮ್ಮಂದಿರ ದಿನವನ್ನು ನೆನಪು ಮಾಡಿಕೊಂಡರೆ ತಪ್ಪೇನು ಇಲ್ಲ.[ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]
ಆದರೆ ಅಮ್ಮನ ಪ್ರತಿದಿನದ ಆಗು ಹೋಗುಗಳು, ಅವಳಿಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆ ಈ ಬಗ್ಗೆಯೂ ನೀವು ಕುಳಿತಲ್ಲಿಂದಲೇ ಚಿಂತಿಸಬೇಕಿದೆ. ಆಕೆ ನಿಮಗೆ ಕರೆ ಮಾಡಿ ನನಗೆ ಎದೆನೋವು ಎಂದು ಹೇಳಿಲ್ಲದೇ ಇರಬಹುದು. ಆದರೆ ಆಕೆಯನ್ನು ಮೂರು ತಿಂಗಳಿಗೊಮ್ಮೆಯಾದರೂ ಮೆಡಿಕಲ್ ಚೆಕ್ ಅಪ್ ಮಾಡಿಸುವ ಕನಿಷ್ಠ ಜವಾಬ್ದಾರಿಯನ್ನಾದರೂ ನಿಭಾಯಿಸೋಣ...
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications