ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ
ಅಮ್ಮಂದಿರ ದಿನದ ಬಗ್ಗೆ ಅಕ್ಷರಗಳಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಶಿವಾಜಿಯನ್ನು ಛತ್ರಪತಿ ಮಾಡಿದ ಜೀಜಾಬಾಯಿ, ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಗೆಲ್ಲುವ ಚೇತನ ನೀಡಿದ ಶಬನಮ್ ಸಿಂಗ್, ಮಗ ಪ್ರಧಾನಿಯಾದರೂ ಆಟೋದಲ್ಲೇ ತೆರಳುವ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್... ಉದಾಹರಣೆಗಳ ಪಟ್ಟಿ ಬೆಳೆಯುತ್ತದೆ... ಈ ಎಲ್ಲ ಮಹಾತಾಯಂದಿರಿಗೆ ಒಂದು ಸಲಾಂ ಹೇಳಿ ಮುಂದಕ್ಕೆ ಸಾಗಬೇಕು.
ಎಲ್ಲರಿಗೂ ಅವರ ತಾಯಿ ನಾಯಕಿಯೇ, ಆದರ್ಶವೇ.. ಬದುಕಿನ ಪುಟಗಳೇ ಹಾಗೆ, ತಿರುವಿಹಾಕಿದಷ್ಟು ಮುಗಿಯದ ಹೊತ್ತಿಗೆ.... ಬಾಲ್ಯದ ಅಮ್ಮ ಕೊನೆವರೆಗೂ ಅಮ್ಮನೇ....[ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ 'ಬಾಹುಬಲಿ']

ಅಂಗನವಾಡಿಯ ಟೀಚರ್,ಪ್ರಾಥಮಿಕ ಶಾಲೆಯ ಅಕ್ಕೋರು, ಹೈಸ್ಕೂಲಿನ ಮೆಡಮ್, ಪಿಯುಸಿಯ ಮೇಡಮ್, ಡಿಗ್ರಿಯ ಇಂಗ್ಲಿಷ್ ಮೇಡಮ್, ಗೆಳತಿ, ಪ್ರೇಯಸಿ...
ಅಷ್ಟೆ ಏಕೆ ವಿಧಾನ ಸೌಧದಲ್ಲಿ ಕೆಲಸ ಮಾಡುವ ಮಹಿಳೆಯೂ, ಸ್ಟೇಟ್ ಬ್ಯಾಂಕ್ ನ ಕ್ಯಾಷಿಯರ್, ಬಿಎಂಟಿಸಿ ಲೇಡಿ ಕಂಡಕ್ಟರ್, ಗಗನ ಸಖಿ, ನರ್ಸ್, ಸಹ ಅಮ್ಮನಾಗಿ ಕಾಣಿಸಬಹುದು..
ಮಳೆ, ಪ್ರಕೃತಿ, ಇಳೆ, ಭೂಮಿ, ಮರ, ಅಮ್ಮಂದಿರಿಗೆ ಅಮ್ಮ.. ಭಾರತೀಯರೂ ನಿಸರ್ಗಕ್ಕೆ ಮಾತೆ ಎಂದು ಕರೆದುಕೊಂಡೇ ಬಂದಿದ್ದಾರೆ. ಅದನ್ನು ಪೂಜೆ ಮಾಡುತ್ತಲೇ ಇದ್ದಾರೆ.[ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್]

ಅಮ್ಮನ ಅನುಭೂತಿಯೇ ಹಾಗೆ, ಇದ್ದಾಗ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ವ್ಯಕ್ತಪಡಿಸುವ ಪ್ರಮೇಯವೂ ಬರಲ್ಲ. ಅವಳಿಗೆ ನೀವು ತೆಗೆಸಿಕೊಡುವ ಸೀರೆ ಬೇಕಾಗಿಲ್ಲ. ಅವಳಿಗೆ ನೀವು ಕೊಡುವ ಚಿನ್ನದ ಒಡವೆಯೂಬೇಕಾಗಿಲ್ಲ. ನೀವು ಬೈದರೂ ಆಕೆ ಬೇಜಾರು ಮಾಡಿಕೊಳ್ಳಲ್ಲ. ಅದಕ್ಕೆ ಅವಳನ್ನು ತಾಯಿ ಎಂದು ಕರೆಯುವುದು.

ಸಾಮಾಜಿಕ ತಾಣಗಳು ತಾಯಂದಿರಿಗೆ ನಮನ ಸಲ್ಲಿಕೆ ಮಾಡಿವೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಮ್ಮಂದಿರ ದಿನ ಜೋರಾಗಿಯೇ ಇದೆ. ಸಾಮಾಜಿಕ ತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಿ ಅಮ್ಮಂದಿರ ದಿನವನ್ನು ನೆನಪು ಮಾಡಿಕೊಂಡರೆ ತಪ್ಪೇನು ಇಲ್ಲ.[ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]
ಆದರೆ ಅಮ್ಮನ ಪ್ರತಿದಿನದ ಆಗು ಹೋಗುಗಳು, ಅವಳಿಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆ ಈ ಬಗ್ಗೆಯೂ ನೀವು ಕುಳಿತಲ್ಲಿಂದಲೇ ಚಿಂತಿಸಬೇಕಿದೆ. ಆಕೆ ನಿಮಗೆ ಕರೆ ಮಾಡಿ ನನಗೆ ಎದೆನೋವು ಎಂದು ಹೇಳಿಲ್ಲದೇ ಇರಬಹುದು. ಆದರೆ ಆಕೆಯನ್ನು ಮೂರು ತಿಂಗಳಿಗೊಮ್ಮೆಯಾದರೂ ಮೆಡಿಕಲ್ ಚೆಕ್ ಅಪ್ ಮಾಡಿಸುವ ಕನಿಷ್ಠ ಜವಾಬ್ದಾರಿಯನ್ನಾದರೂ ನಿಭಾಯಿಸೋಣ...
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications