ಗೆಳೆತನ ಸಂತಸ ಆರೋಗ್ಯದ ಸಂಕೇತ ಕ್ರಿಸ್ಮಸ್

ನಾಡಿನಾದ್ಯಂತ ಇಗರ್ಜಿಗಳಲ್ಲಿ, ಕ್ರೈಸ್ತ ಬಾಂಧವರ ಮನೆಮನೆಗಳಲ್ಲಿ ಕ್ರಿಸ್ತ ಹುಟ್ಟಿನ ಸಂದರ್ಭವನ್ನು ಮತ್ತೆ ಜ್ಞಾಪಿಸುವ ಗುಡಿಸಲುಗಳ ನಿರ್ಮಾಣ, ಬಣ್ಣದ ಬಣ್ಣದ ಮಿನುಗು ದೀಪಗಳಿಂದ ಅಲಂಕೃತವಾದ ಕ್ರಿಸ್ಮಸ್ ಗಿಡ, ಕೇಕ್ ಪ್ರದರ್ಶನಗಳನ್ನು ನೋಡುವುದೇ ಒಂದು ಆನಂದ. ಕ್ರಿಸ್ಮಸ್ ಹಿಂದಿನ ದಿನ ನಡುರಾತ್ರಿ ನಡೆಯುವ ಸಮ್ಮಿಲನದಲ್ಲಿ ಕರ್ನಾಟಕದೆಲ್ಲೆಡೆ ಆನಂದ ಮೇರೆ ಮೀರಿತ್ತು. ಮೇಣಬತ್ತಿಗಳು ಬೆಳಗಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿಸಿದರು.
ಅಂಗಡಿ ಮುಂಗಟ್ಟುಗಳಲ್ಲಿ ಭರ್ತಿ ಮಾರಾಟದ ಭರಾಟೆ. ನಾನಾ ರೀತಿಯ ರಿಯಾಯತಿಗಳ ಪ್ರಯೋಜನ ಪಡೆದು ಉಳ್ಳವರು ತಮಗೆ ಮಾತ್ರವಲ್ಲ ಇಲ್ಲದವರಿಗೂ ಉಡುಗೊರೆಗಳನ್ನು ಕೊಂಡಿರುತ್ತಾರೆ. ಕ್ರಿಸ್ಮಸ್ ಹಬ್ಬದ ಆಶಯವೂ ಇದೇ ಆಗಿದೆ. ಜನರೆಲ್ಲ ಒಟ್ಟಾಗಿ ಕೂಡಿ ಆಚರಿಸುವ ಈ ಹಬ್ಬದಲ್ಲಿ ಪರಿಚಯದ ಜೊತೆಗೆ ಗೆಳೆತನವೂ ಬೆಳೆದಿರುತ್ತದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಆಯೋಜಿಸಲಾಗುವ ಕೇಕ್ ಪ್ರದರ್ಶನದಲ್ಲಿ ಕ್ರೈಸ್ತ ಬಾಂಧವರು ಮಾತ್ರವಲ್ಲ ಉಳಿದ ಮತದವರೂ ಅಷ್ಟೇ ಉತ್ಸಾಹದಿಂದ ಭಾಗವಹಿಸಿರುತ್ತಾರೆ. ಎಚ್ಎನ್ ಕಲಾಕ್ಷೇತ್ರದಲ್ಲಿ ಹರಿದ ನಗೆಹೊಳೆಯಲ್ಲಿ ಸರ್ವಧರ್ಮೀಯರೂ ತೇಲಾಡಿದ್ದಾರೆ.
ಪ್ರಕೃತಿಯ ಉಪಾಸನೆ : ಪ್ರಕೃತಿಯನ್ನು ಯಾರು ಇಷ್ಟಪಡುವುದಿಲ್ಲ? ಮಾನಸಿಕವಾಗಿ ಎಷ್ಟೇ ಬಳಲಿದ್ದರೂ ಒಂದು ಕ್ಷಣ ಹಸಿರಿನಿಂದ ಕೂಡಿದ ಪ್ರಕೃತಿಯತ್ತ ಕಣ್ಣು ಹಾಯಿಸಿದರೆ ನೋವು, ಆಯಾಸಗಳೆಲ್ಲ ಮಂಗಮಾಯವಾಗಿರುತ್ತದೆ. ಎಲ್ಲ ಚರ್ಚ್ ಗಳಲ್ಲಿ ಕ್ರಿಸ್ಮಸ್ ಗಿಡವನ್ನು ನೆಟ್ಟು ಅಲಂಕರಿಸುವ ಉದ್ದೇಶವೂ ಇದೇ ಆಗಿದೆ. ಮನೋತಜ್ಞರ ಪ್ರಕಾರ, ಹಸಿರಿನಿಂದ ಕಂಗೊಳಿಸುವ ಕ್ರಿಸ್ಮಸ್ ಗಿಡದತ್ತ ಐದೇ ಐದು ನಿಮಿಷ ಕಣ್ಣಿಟ್ಟು ನೋಡಿದರೆ ರಕ್ತದೊತ್ತಡ ಜರ್ರನೆ ಇಳಿದುಹೋಗಿರುತ್ತದೆ, ಸಹಜವಾಗಿ ಆರೋಗ್ಯವೂ ಉತ್ತಮವಾಗುತ್ತದೆ ಅಂತಾರೆ ತಜ್ಞರು.
ಕ್ರಿಸ್ಮಸ್ ಎಂದರೆ ಸಂತೋಷದ ಆಲಾಪನೆ, ಸಂಗೀತದ ಆರಾಧನೆ. ಗೆಳೆತನದ ಮಹತ್ವ ಸಾರುವ, ಬಾಂಧವ್ಯವನ್ನು ವೃದ್ಧಿಸುವ, ಖುಷಿಯನ್ನು ಹಂಚುವ ಈ ಹಬ್ಬದ ಸಂದರ್ಭದಲ್ಲಿ ಎಲ್ಲ ಕ್ರೈಸ್ತ ಬಾಂಧವರಿಗೆ ಮತ್ತು ದಟ್ಸ್ ಕನ್ನಡ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳು. ಕ್ರಿಸ್ಮಸ್ ಹಬ್ಬದಂದೇ ಹುಟ್ಟುಹಬ್ಬ ಆಚರಿಸುತ್ತಿರುವ 87 ವರ್ಷದ 'ಅಜಾತಶತ್ರು' ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಶುಭಾಶಯಗಳು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications