ನೀವು ಕಂಡಿರಾ! ಸಂಗೀತದಲೆಗಳ ಮೇಲೆ ಜೀವಗೊಳ್ಳುವ ಕ್ರಿಸ್ಮಸ್ ಲೀಲೆ

ಕ್ರಿಸ್ಮಸ್ ಕುರಿತು ವಿಭಿನ್ನವಾಗಿ ಚಿಂತಿಸಿರುವ ಲಂಡನ್ನಿನ ಕವಿ ರೋಷನ್ ಡಗ್. ಈತನ ವಾಸ ಕವಿಗಳ ನಿತ್ಯ ಹರಿದ್ವರ್ಣ ವನವೆನಿಸಿದ ಬ್ರಿಟನ್ನಿನ ಎರಡನೆಯ ದೊಡ್ಡ ನಗರ ಬರ್ಮಿಂಗ್ಹ್ಯಾಂನಲ್ಲಿ . ಪೂರ್ವಜರು ಭಾರತದ ಪಂಜಾಬಕ್ಕೆ ಸೇರಿದವರು.
ರೋಷನ್ ಹೇಳುವಂತೆ - ಕ್ರಿಸ್ಮಸ್ ಕ್ರೆೃಸ್ತ ಧರ್ಮೀಯರಿಗೆ ಮಾತ್ರ ಸೀಮಿತವಲ್ಲ . ಉಳಿದಂತೆ ಹಿಂದೂಗಳು, ಸಿಖ್ಖರು, ಮುಸಲ್ಮಾನರು ಕೂಡ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಗಳಾಗುತ್ತಾರೆ. ಕ್ರಿಸ್ಮಸ್ ಮರಗಳನ್ನು ಮನೆ ಮುಂದೆ ಇಡುತ್ತಾರೆ. ಕ್ರಿಸ್ತನ ಹುಟ್ಟಿನ ಕುರಿತ ಕಥೆಯನ್ನು ಹೇಳಿಕೊಂಡು ಖುಷಿಯಾಗುತ್ತಾರೆ. ಒಟ್ಟಿನಲ್ಲಿ ಕ್ರಿಸ್ಮಸ್ ಎನ್ನುವುದು ನೀವು ಏನನ್ನು ಅಂದುಕೊಳ್ಳುತ್ತೀರೋ ಅದರ ಫಲಿತ.
ಬರ್ಮಿಂಗ್ ಹ್ಯಾಂ ಪೋಸ್ಟ್ ಪತ್ರಿಕೆಯಲ್ಲಿ ರೋಷನ್ ತಮ್ಮ ಕ್ರಿಸ್ಮಸ್ ಯೋಚನೆಗಳನ್ನು ಹಂಚಿಕೊಂಡಿದ್ದಾರೆ. ಅವರು ಸಾಂಪ್ರದಾಯಿಕ ಕ್ರಿಸ್ಮಸ್ ಆಚರಣೆಗಳಿಗಿಂತ ಭಿನ್ನವಾದ ಆಚರಣೆಗಳ ಕುರಿತು ತಮ್ಮ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ. ಕ್ರಿಸ್ಮಸ್ ಟ್ರೀ ಕೂಡಾ ಸಂಪ್ರದಾಯವಾಗಿ ಬೆಳೆದುಬಂದಿದೆಯೇ ಹೊರತು, ಮೂಲ ಕ್ರಿಸ್ಮಸ್ಗೂ ಅದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ. ಅವರ ಪ್ರಕಾರ ಕ್ರಿಸ್ಮಸ್ ಟ್ರೀ ಸಹಜತೆಯ, ಸಮೃದ್ಧತೆಯ ಸಂಕೇತ. ಪ್ರಕೃತಿಯ ಪ್ರತೀಕ.
ರೋಷನ್ರ ಮತ್ತೊಂದು ಹೊಳಹು ನಾರ್ಡಿಕ್ ಗಾಡ್ ವೋಡೆನ್. ಆತ ಸೂರ್ಯ. ಬದುಕನ್ನು ನೀಡುವವ. ಸ್ಫೂರ್ತಿದಾಯಕ ಬದುಕಿಗೆ ಕಾರಣ ಎಂದು ಬಣ್ಣಿಸುತ್ತಾರೆ. ಫಾದರ್ ಕ್ರಿಸ್ಮಸ್ ಬಗ್ಗೆ ಹೇಳುವುದಾದರೆ, ಆತ ದೇವರಿಗಿಂತ ಮುನ್ನಿನ ಮಾನವೀಯತೆಯ ಪ್ರತಿಮೆ. ಆತ ಬದುಕು, ಆರೋಗ್ಯ, ಅವ್ಯಾಜ ಪ್ರೀತಿ, ಮಕ್ಕಳನ್ನು ಕರುಣಿಸುವವ.
ಕ್ರಿಸ್ಮಸ್ಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಆಯಾಮಗಳಿವೆ ಎಂದು ಬಣ್ಣಿಸುವ ರೋಷನ್ ಈಚಿನ ದಿನಗಳಲ್ಲಿ ಕ್ರಿಸ್ಮಸ್ ವಾಣಿಜ್ಯೀಕರಣಗೊಳ್ಳುತ್ತಿದೆ ಎಂದು ವಿಷಾದಿಸುತ್ತಾರೆ. ಅವರಿಗೆ ಕ್ರಿಸ್ಮಸ್ ಎಂದರೆ ಕಾಮನಬಿಲ್ಲಲ್ಲ . ರಂಗಿನ ಹಬ್ಬವಲ್ಲ . ಮಿಗಿಲಾಗಿ ಕುಡಿದು ಕುಣಿವ ಮೋಜಿನ ಹಬ್ಬವೂ ಅಲ್ಲ . ಬದಲಿಗೆ ಕ್ರಿಸ್ಮಸ್ ಸಂತೋಷದ ಹಬ್ಬ , ಸ್ಫೂರ್ತಿದಾಯಕ ಹಬ್ಬ ಎಂದು ಅವರು ವಿವರಿಸುತ್ತಾರೆ. ಆದುದರಿಂದಲೇ ಅವರ ಕಣ್ಣಿಗೆ ಕ್ರಿಸ್ಮಸ್ನಲ್ಲಿ ಸಂಗೀತದ ಹಾಗೂ ಕವಿತೆಯ ಲಯ ಕಾಣುತ್ತದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications