ಗುರುವನ್ನು ಅರಸಿ ಆರಿಸಿ ವಿದ್ಯಾರ್ಜನೆ ಮಾಡಬೇಕು

* ಮಾಲತಿ, ಬೆಂಗಳೂರು
ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿದವರನ್ನೆ ನಾವು ಇಂದು ಗುರು ಎಂಬುದಾಗಿ ತಿಳಿದಿದ್ದೇವೆ. ಆದರೆ 'ತೃಣಮಾತ್ರಂ ಕಲಿಸದಾತಂ ಗುರು' ಎಂಬ ಪಂಪನ ಉಕ್ತಿಯಂತೆ ನಮ್ಮಲ್ಲಿ ಧನಾತ್ಮಕ ಬದಲಾವಣೆ ತಂದ ಪ್ರತಿಯೊಬ್ಬರೂ ನಮ್ಮ ಗುರುವೇ ಸರಿ. ಹುಟ್ಟಿದ ಕ್ಷಣದಿಂದ ನಮ್ಮ ಆರೈಕೆ ಮಾಡಿ ಮಾನವರನ್ನಾಗಿಸಿದ ನಮ್ಮ ತಾಯಿ, ಸಮಾಜದ ರೀತಿ ನೀತಿಗಳನ್ನು ಕಲಿಸಿದ ನಮ್ಮ ತಂದೆ, ನಮ್ಮ ನೋವು ನಲಿವುಗಳನ್ನು ಹಂಚಿಕೊಂಡ ಅಣ್ಣ, ತಮ್ಮ, ಅಕ್ಕ, ತಂಗಿ, ಬಂಧು, ಮಿತ್ರರೆಲ್ಲರೂ ನಮ್ಮ ಗುರುಗಳೇ. ಈ ಎಲ್ಲರನ್ನು ನೆನೆದು ವಂದನೆಯನ್ನು ಅರ್ಪಿಸುವ ಸಲುವಾಗಿ ಈ ದಿನ.
ನಮ್ಮ ಸನಾತನ ಧರ್ಮದಲ್ಲಿ ಗುರುವಿನ ಬಗ್ಗೆ ಈ ವಿಶ್ಲೇಷಣೆಯನ್ನು ಕಾಣಬಹುದು:
ಆಚಿನೋತಿ ಚ ಶಾಸ್ತ್ರಾರ್ಥಂ ಆಚಾರೇ ಸ್ಥಾಪಯತ್ಯಪಿ|
ಸ್ವಯಮಾಚರತೆ ಯಸ್ಮಾತ್ ತಸ್ಮಾದಚಾರ್ಯ ಉಚ್ಯತೇ||
ವೈಜ್ಞಾನಿಕ, ವೈಚಾರಿಕ ಪದ್ಧತಿಗಳಿಂದ ಶಾಸ್ತ್ರಾರ್ಥವನ್ನು ಸಂಗ್ರಹಿಸುತ್ತಾ, ಶಾಸ್ತ್ರಾರ್ಥವನ್ನು ಶಿಷ್ಯರ ಮೂಲಕ ಅನುಷ್ಥಾನಗೊಳಿಸುತ್ತ ಸ್ವತಃ ತಾನೂ ಅದರಂತೆ ನಡೆಯುವವನೇ ಆಚಾರ್ಯನೆನಿಸಿಕೊಳ್ಳುತ್ತಾನೆ. ಆದ್ದರಿಂದ ಅಂತಹ ಗುರುವನ್ನು ನಾವು ಅರಸಿ, ಆರಿಸಿಕೊಂಡು, ಅವರ ಮಾರ್ಗದರ್ಶನದಲ್ಲಿ ಅಧ್ಯಯನಮಾಡಿ, ವಿದ್ಯಾರ್ಜನೆಯಿಂದ ಜ್ಞಾನಸಂಪನ್ನರಾಗಿ, ಸಮಷ್ಟಿಹಿತಕ್ಕಾಗಿ, ರಾಷ್ಟ್ರಹಿತಕ್ಕಾಗಿ ಜೀವನ ನಡೆಸಬೇಕು.
ಅಂತಹ ವಿಷಯಗಳನ್ನು ಬೋಧಿಸಿ ಜ್ಞಾನ ಸೃಷ್ಟಿ ಮಾಡುವ ಗುರುವೇ ಬ್ರಹ್ಮ, ನಮ್ಮ ತಪ್ಪುಗಳನ್ನು ತಿದ್ದಿ ನಮ್ಮ ಬುದ್ಧಿಯನ್ನು ಸಮಸ್ಥಿತಿಯಲ್ಲಿಡುವ ಅವನೇ ವಿಷ್ಣು, ಹಾಗೆಯೇ ನಮ್ಮ ಅಜ್ಞಾನವನ್ನು ನಾಶಮಾಡುವ ಲಯಕರ್ತನೆ ಮಹೇಶ್ವರ. ಹಾಗೆಂದೇ ನಾವು:
ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುದೇವೋ ಮಹೇಶ್ವರಃ|
ಗುರುರ್ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ||
ಎಂಬುದಾಗಿ ವಂದಿಸುತ್ತೇವೆ. ಇಂತಹ ಜ್ಞಾನಸಂಪನ್ನರಾದ ಅನೇಕ ಗುರುಗಳಿದ್ದುದರಿಂದಲೇ ತಕ್ಷಶಿಲೆ ಭರತಭೂಮಿಯ ತಿಲಕಪ್ರಾಯವಾಗಿದ್ದುದು, ನಳಂದ ವಿಶ್ವವಿದ್ಯಾಲಯ ವಿಶ್ವವಿಖ್ಯಾತವಾಗಿದ್ದುದು. ಆದ್ದರಿಂದ ಮಾತಾ ಪಿತೃಗಳ ನಂತರ ನಮ್ಮ ಜೀವನವನ್ನು ರೂಪಿಸಿದ ನಮ್ಮ ಗುರುಗಳಿಗೆ ಈ ದಿನ ನಾವೆಲ್ಲ ಭಕ್ತಿಪೂರ್ವಕವಾಗಿ ನೆನೆದು ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications