ಗುರುವನ್ನು ಅರಸಿ ಆರಿಸಿ ವಿದ್ಯಾರ್ಜನೆ ಮಾಡಬೇಕು

* ಮಾಲತಿ, ಬೆಂಗಳೂರು
ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿದವರನ್ನೆ ನಾವು ಇಂದು ಗುರು ಎಂಬುದಾಗಿ ತಿಳಿದಿದ್ದೇವೆ. ಆದರೆ 'ತೃಣಮಾತ್ರಂ ಕಲಿಸದಾತಂ ಗುರು' ಎಂಬ ಪಂಪನ ಉಕ್ತಿಯಂತೆ ನಮ್ಮಲ್ಲಿ ಧನಾತ್ಮಕ ಬದಲಾವಣೆ ತಂದ ಪ್ರತಿಯೊಬ್ಬರೂ ನಮ್ಮ ಗುರುವೇ ಸರಿ. ಹುಟ್ಟಿದ ಕ್ಷಣದಿಂದ ನಮ್ಮ ಆರೈಕೆ ಮಾಡಿ ಮಾನವರನ್ನಾಗಿಸಿದ ನಮ್ಮ ತಾಯಿ, ಸಮಾಜದ ರೀತಿ ನೀತಿಗಳನ್ನು ಕಲಿಸಿದ ನಮ್ಮ ತಂದೆ, ನಮ್ಮ ನೋವು ನಲಿವುಗಳನ್ನು ಹಂಚಿಕೊಂಡ ಅಣ್ಣ, ತಮ್ಮ, ಅಕ್ಕ, ತಂಗಿ, ಬಂಧು, ಮಿತ್ರರೆಲ್ಲರೂ ನಮ್ಮ ಗುರುಗಳೇ. ಈ ಎಲ್ಲರನ್ನು ನೆನೆದು ವಂದನೆಯನ್ನು ಅರ್ಪಿಸುವ ಸಲುವಾಗಿ ಈ ದಿನ.
ನಮ್ಮ ಸನಾತನ ಧರ್ಮದಲ್ಲಿ ಗುರುವಿನ ಬಗ್ಗೆ ಈ ವಿಶ್ಲೇಷಣೆಯನ್ನು ಕಾಣಬಹುದು:
ಆಚಿನೋತಿ ಚ ಶಾಸ್ತ್ರಾರ್ಥಂ ಆಚಾರೇ ಸ್ಥಾಪಯತ್ಯಪಿ|
ಸ್ವಯಮಾಚರತೆ ಯಸ್ಮಾತ್ ತಸ್ಮಾದಚಾರ್ಯ ಉಚ್ಯತೇ||
ವೈಜ್ಞಾನಿಕ, ವೈಚಾರಿಕ ಪದ್ಧತಿಗಳಿಂದ ಶಾಸ್ತ್ರಾರ್ಥವನ್ನು ಸಂಗ್ರಹಿಸುತ್ತಾ, ಶಾಸ್ತ್ರಾರ್ಥವನ್ನು ಶಿಷ್ಯರ ಮೂಲಕ ಅನುಷ್ಥಾನಗೊಳಿಸುತ್ತ ಸ್ವತಃ ತಾನೂ ಅದರಂತೆ ನಡೆಯುವವನೇ ಆಚಾರ್ಯನೆನಿಸಿಕೊಳ್ಳುತ್ತಾನೆ. ಆದ್ದರಿಂದ ಅಂತಹ ಗುರುವನ್ನು ನಾವು ಅರಸಿ, ಆರಿಸಿಕೊಂಡು, ಅವರ ಮಾರ್ಗದರ್ಶನದಲ್ಲಿ ಅಧ್ಯಯನಮಾಡಿ, ವಿದ್ಯಾರ್ಜನೆಯಿಂದ ಜ್ಞಾನಸಂಪನ್ನರಾಗಿ, ಸಮಷ್ಟಿಹಿತಕ್ಕಾಗಿ, ರಾಷ್ಟ್ರಹಿತಕ್ಕಾಗಿ ಜೀವನ ನಡೆಸಬೇಕು.
ಅಂತಹ ವಿಷಯಗಳನ್ನು ಬೋಧಿಸಿ ಜ್ಞಾನ ಸೃಷ್ಟಿ ಮಾಡುವ ಗುರುವೇ ಬ್ರಹ್ಮ, ನಮ್ಮ ತಪ್ಪುಗಳನ್ನು ತಿದ್ದಿ ನಮ್ಮ ಬುದ್ಧಿಯನ್ನು ಸಮಸ್ಥಿತಿಯಲ್ಲಿಡುವ ಅವನೇ ವಿಷ್ಣು, ಹಾಗೆಯೇ ನಮ್ಮ ಅಜ್ಞಾನವನ್ನು ನಾಶಮಾಡುವ ಲಯಕರ್ತನೆ ಮಹೇಶ್ವರ. ಹಾಗೆಂದೇ ನಾವು:
ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುದೇವೋ ಮಹೇಶ್ವರಃ|
ಗುರುರ್ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ||
ಎಂಬುದಾಗಿ ವಂದಿಸುತ್ತೇವೆ. ಇಂತಹ ಜ್ಞಾನಸಂಪನ್ನರಾದ ಅನೇಕ ಗುರುಗಳಿದ್ದುದರಿಂದಲೇ ತಕ್ಷಶಿಲೆ ಭರತಭೂಮಿಯ ತಿಲಕಪ್ರಾಯವಾಗಿದ್ದುದು, ನಳಂದ ವಿಶ್ವವಿದ್ಯಾಲಯ ವಿಶ್ವವಿಖ್ಯಾತವಾಗಿದ್ದುದು. ಆದ್ದರಿಂದ ಮಾತಾ ಪಿತೃಗಳ ನಂತರ ನಮ್ಮ ಜೀವನವನ್ನು ರೂಪಿಸಿದ ನಮ್ಮ ಗುರುಗಳಿಗೆ ಈ ದಿನ ನಾವೆಲ್ಲ ಭಕ್ತಿಪೂರ್ವಕವಾಗಿ ನೆನೆದು ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications