ಬನದ ಹುಣ್ಣಿಮೆ ಆಚರಣೆಗೆ ಸಕಲ ಸಿದ್ಧತೆ
ಶುದ್ಧ ಹುಣ್ಣಿಮೆಯಂದು ಬನಶಂಕರಿ ಅಮ್ಮನನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು ಎಂಬುದು ನಂಬಿಕೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳ ರಾಹುಕಾಲಗಳಲ್ಲೇ ಈಕೆಗೆ ವಿಶೇಷ ಪೂಜೆ. ಈ ಬಾರಿ ಜ.10ಕ್ಕೆ ಬನದ ಹುಣ್ಣಿಮೆ. ಹಾಗಾಗಿ ಬನಶಂಕರಿ ಅಮ್ಮನಿಗೀಗ ವಿಶೇಷ ಅಲಂಕಾರ-ನೈವೇದ್ಯದ ಅಭಿಷೇಕ, ಚಿನ್ನ-ಬೆಳ್ಳಿ-ವಜ್ರಾಭರಣಗಳ ಹೊದಿಸಲಾಗುತ್ತದೆ.
ನಗರದ ಬನಶಂಕರಿ ದೇಗುಲಕ್ಕೆ ಬರುವ ಭಕ್ತಾದಿಗಳು ಇಚ್ಛಾನುಸಾರವಾಗಿ ನಿಂಬೆ ಹಣ್ಣು, ತೆಂಗಿನಕಾಯಿ ಹಣ್ಣು ಹೂವನ್ನು ಒಯ್ಯುವುದರಿಂದ ಸುತ್ತಮುತ್ತಲಿನ ವರ್ತಕರಿಗೂ ಈಗ ಸುದ್ಗ್ಗಿ ಕಾಲ. ಬಾದಾಮಿಯ ಬನಶಂಕರಿ ಹಾಗೂ ಬೆಂಗಳೂರಿನ ಬನಶಂಕರಿ ದೇವಸ್ಥಾನ ಎರಡೇ ದೇವಸ್ಥಾನಗಳು ಕರ್ನಾಟಕದಲ್ಲಿ ಜನಪ್ರಿಯ. ಬಾಗಲಕೋಟೆ ಜಿಲ್ಲೆಯ ಚೋಳಚಗುಡ್ಡದ ತುಂಬೆಲ್ಲಾ ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ಮೈ ಮರೆಯುತ್ತಾರೆ. ಪುಷ್ಯ ಮಾಸದಲ್ಲಿ ಒಂದು ತಿಂಗಳು ಜಾತ್ರೆ, ಉತ್ಸವಗಳನ್ನು ಮಾಡಿ ದೇವಿಯನ್ನು ಆರಾಧಿಸಲಾಗುತ್ತದೆ. ಕೆಲ ವರ್ಷಗಳ ಹಿಂದೆ ಟೂರಿಂಗ್ ಟಾಕೀಸುಗಳು, 10 ಕ್ಕೂ ಹೆಚ್ಚು ಪೌರಣಿಕ ನಾಟಕಕ್ಕೆ ಹೆಸರಾದ ಡ್ರಾಮಾ ಕಂಪೆನಿಗಳು ಇಲ್ಲಿ ಬೀಡುಬಿಡುತ್ತಿದ್ದವು. ಜೊತೆಗೆ ಮಕ್ಕಳನ್ನು ರಂಜಿಸಲು ಸರ್ಕಸ್, ಟೋರಾ ಟೋರಾ ಇರುತ್ತಿತ್ತು.
ಈಗ
ಇವೆಲ್ಲಾ
ಕಾಣಸಿಗುವುದೇ
ಅಪರೂಪ.
ಸುತ್ತಮುತ್ತಲ
ಹಳ್ಳಿಯ
ಜನತೆಗೆ
ಸುಗ್ಗಿಯ
ವಾತಾವರಣವನ್ನು
ಸೃಷ್ಟಿಸುತ್ತಿದೆ
ಬನದ
ಹುಣ್ಣಿಮೆ.
ಸಂಕ್ರಾಂತಿಗೂ
ಮೊದಲೇ
ಬರುವ
ಈ
ಜಾತ್ತೆಯಲ್ಲಿ
ಎತ್ತುಗಳಿಗೆ
ವಿಶೇಷ
ಅಲಂಕಾರ
ಮಾಡಿ
ಮೆರಸಲಾಗುತ್ತದೆ.
ದೂರದ
ಊರುಗಳಿಂದ
ಬಂದ
ಭಕ್ತರು
ತಮ್ಮಮ್ಮ
ಎತ್ತಿನ
ಬಂಡಿಗಳಲ್ಲಿ
ಖಡಕ್
ಜೋಳದ
ರೊಟ್ಟಿ,
ಹೆಸರುಕಾಳು
ಪಲ್ಯ(ಸಬ್ಜಿ),
ಮೊಸರು,
ಗೆರೆಳ್ಳು
ಚಟ್ನಿ
ಕಟ್ಟಿಕೊಂಡು
ಬರುವುದನ್ನು
ಮರೆಯುವುದಿಲ್ಲ.
ಉಳಿದಂತೆ ಮಲ್ಲೇಶ್ವರದ 9 ನೇ ಅಡ್ಡರಸ್ತೆಯ ಶ್ರೀ ಮಹಾಗಣಪತಿ ಆವರಣದಲ್ಲಿರುವ ಅಮ್ಮನ ದೇವಸ್ಥಾನ ಭಕ್ತರಿಂದ ಸದಾ ತುಂಬಿರುತ್ತದೆ. ಮಲ್ಲೇಶ್ವರದಲ್ಲಿ ದೇವರುಗಳ ಕಾಂಪ್ಲೆಕ್ಸ್ ಎನ್ನಬಹುದಾದ ಈ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ, ಆಂಜನೇಯ, ರಾಮ, ಗಣಪತಿ, ನವಗ್ರಹ, ನಾಗರಕಟ್ಟೆ, ಅಶ್ವಥಕಟ್ಟೆ ಹಾಗೂ ಬನ್ನಿ ವೃಕ್ಷಗಳನ್ನು ಕಣ್ತುಂಬ ನೋಡಿ ಭಗವತ್ ಕೃಪೆಗೆ ಪಾತ್ರರಾಗಬಹುದು.
ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲದ ಅಮ್ಮ ವನದುರ್ಗಿ, ಶಾಕಾಂಬರಿ ಹಾಗೂ ಬನಶಂಕರಿ ಅಮ್ಮ ಎಂಬ ಮೂರು ಸ್ವರೂಪಗಳನ್ನು ಹೊಂದಿರುವ ಜಗನ್ಮಾತೆ ಭಕ್ತರನ್ನು ಹರಸಲು ಕಾಯುತ್ತಿದ್ದಾಳೆ. ಒಮ್ಮೆ ಭೇಟಿ ನೀಡಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಿರಿ ಎನ್ನುತ್ತಾರೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಮಣ್ಯ ಶಾಸ್ತ್ರಿಗಳು. ದೇವಿಯನ್ನು ಆರಾಧಿಸಿ ಎಲ್ಲರೂ ಸಂತೋಷದಿರಬೇಕೆಂದು ಶಾಸ್ತ್ರಿಗಳು ಹಾರೈಸಿದ್ದಾರೆ.
ಇದನ್ನೂ ಓದಿ: