ಭಕುತಿಯಿಂದ ಪೂಜಿಸಿದ ಗಣಪನ ಫೋಟೋ ನಮಗೆ ಕಳಿಸಿಕೊಡಿ
ಹಿಂದೂಗಳಿಗೆ ಕೃಷ್ಣ ಜನ್ಮಾಷ್ಟಮಿ ಎಷ್ಟು ಪ್ರಿಯವೋ, ಗಣೇಶ ಚತುರ್ಥಿ ಕೂಡ ಅಷ್ಟೇ ಪ್ರಿಯ. ಕೃಷ್ಣ ಜನ್ಮಾಷ್ಟಮಿಯಂದು ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ಹೇಗೆ ಕೃಷ್ಣನ ವೇಷ ಹಾಕಿ ಅಂದಚೆಂದ ಕಣ್ಣಲ್ಲಿ ತುಂಬಿಕೊಳ್ಳುತ್ತಾರೋ, ಹಾಗೆ ಗಣೇಶ ಚತುರ್ಥಿಯನ್ನು ತಮ್ಮ ಮಕ್ಕಳಿಗೆ ಗಣಪನ ವೇಷ ಹಾಕಲ್ಲ ಅಷ್ಟೇ.
ಆದರೆ, ಇಂದಿನ ಮಕ್ಕಳು ಗಜಾನನನಿಗಿಂತ ಕಡಿಮೆಯೆ? ನೈವೇದ್ಯಕ್ಕಂತ ಇಟ್ಟ ಮೋದಕ, ಕಡುಬು, ಚಕ್ಕುಲಿಗಳನ್ನು ನೋಡನೋಡುತ್ತಿದ್ದಂತೆ ಗಾಯಬ್ ಮಾಡಿರುತ್ತಾರೆ. ಹೊಸ ಬಟ್ಟೆ ಹಾಕಿಕೊಂಡು ನಲಿದಾಡಿದ್ದು ಅಲ್ಲದೆ, ಸಂಜೆ ಅರ್ಧ ಚಂದ್ರನನ್ನು ಬೇಕಂತಲೇ ನೋಡಿ ಶ್ಯಮಂತಮಣಿ ಕಥೆಯನ್ನು ಕೇಳಿಯೇ ನಿದ್ದೆಗೆ ಜಾರುವುದು.

ಈ ಬಾರಿ ಎಲ್ಲರೂ ಪರಿಸರ ಪ್ರೇಮಿಗಳಾಗಲೇಬೇಕು. ಏಕೆಂದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿರುವ ಸಿಂಗಾರಗೊಂಡ ಗಣೇಶನನ್ನು ಕೂಡಿಸುವ ಹಾಗಿಲ್ಲ. ಪ್ರತಿಯೊಬ್ಬರೂ ಮಣ್ಣಿನ ಗಣಪನನ್ನೇ ಕೂಡಿಸಿ, ಪೂಜಿಸಿ, ವಿಸರ್ಜಿಸಬೇಕು. ಯಾರೇಕೆ ಬಲವಂತ ಪಡಿಸಬೇಕು? ನಾವೇ ಪರಿಸರ ಪ್ರೇಮಿಗಳಾದರಾಯಿತು.

ಅಂದ ಹಾಗೆ, ಮನೆಗೆ ಎಂಥ ಗಣಪನನ್ನು ಕರೆತರುತ್ತೀರಿ? ಪುಟಾಣಿ ಗಣೇಶನಾ, ಬಲಮುರಿ ಗಣೇಶನಾ, ಪೀಠದ ಮೇಲೆ ಪವಡಿಸಿದ ಗಣಪನಾ? ವಿಘ್ನವಿನಾಯಕ ಎಂಥವನೇ ಆಗಿರಲಿ, ಮಣ್ಣಿನಿಂದ ಮಾಡಿರಲಿ ಮತ್ತು ಎಲ್ಲ ವಿಘ್ನಗಳನ್ನು ನಿವಾರಣೆ ಮಾಡಲಿ, ಎಲ್ಲರಿಗೂ ಒಳಿತನ್ನು ಮಾಡಲಿ.
ನಿಮ್ಮಲ್ಲಿ ನಮ್ಮದೊಂದು ಅರಿಕೆ. ಅದೇನೆಂದರೆ, ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳು ಫೋಟೋಗಳನ್ನು ಕಳಿಸಿದಂತೆ, ಗಣೇಶ ಚತುರ್ಥಿಯಂದೂ ನೀವು ಮನೆಯಲ್ಲಿ ಭಕುತಿಯಿಂದ ಪೂಜಿಸಿದ ಗಣೇಶನ ಮೂರ್ತಿಯ ಫೋಟೋಗಳನ್ನು ನಮಗೆ ಕಳಿಸಿ. ನಿಮ್ಮ ಊರು, ಮತ್ತಿತರ ವಿವರ ಕಳಿಸಲು ಮರೆಯಬೇಡಿ.

ಗಣೇಶನ ಹಬ್ಬದ ಫೋಟೋಗಳೆಂದರೆ, ಬರೀ ಗಣೇಶ ಅಥವಾ ಜೊತೆಗೆ ಕುಳಿತ ಗೌರಿಯ ಫೋಟೋ ಮಾತ್ರ ಕಳಿಸಬೇಕಂತಿಲ್ಲ. ನಿಮಗೇನೂ ಅಭ್ಯಂತರವಿಲ್ಲದಿದ್ದರೆ, ನಿಮ್ಮ ಕುಟುಂಬ ಒಟ್ಟಿಗೆ ಗಣೇಶನ ಹಬ್ಬ ಆಚರಿಸಿದ ಫೋಟೋಗಳನ್ನು ಕೂಡ ಕಳಿಸಬಹುದು. ಅವನ್ನು ನಮ್ಮ ಒನ್ಇಂಡಿಯಾ ಕನ್ನಡದ ಫೋಟೋ ಗ್ಯಾಲರಿಯಲ್ಲಿ ಪ್ರಕಟಿಸಲಾಗುವುದು.
ನೀವು ಈ ಇ-ಮೇಲ್ ಐಡಿಗೆ ಕಳುಹಿಸಬೇಕು : [email protected]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications