ಮಸೀದಿಯಲ್ಲಿ ಗಣೇಶೋತ್ಸವ !
ಬೆಳಗಾವಿ : ಗಣಪತಿಯ ಮೆರವಣಿಗೆ ಸಂಭ್ರಮದ ವಿಷಯವಾಗಿ ಈಗ ಉಳಿದಿಲ್ಲ . ಒಂದೆಡೆ ಭಕ್ತಿಭಾವ ಮೈದುಂಬಿದ್ದರೆ, ಒಳಗೊಳಗೇ ಭಯ ಮಡುಗಟ್ಟಿರುತ್ತದೆ. ಗಣೇಶೋತ್ಸವ ಮೆರವಣಿಗೆ ಎಂದರೆ ಊರ ಹಿರಿಯರ ಪಾಲಿಗಂತೂ ಬಿಸಿ ಗಂಟಲಲ್ಲಿನ ಕಡುಬು!
ಚೆಂಡೆ, ಭಜನೆ, ಪ್ರಭಾವಳಿ, ಸಾಲು ಸಾಲು ಜನ- ಗಣೇಶೋತ್ಸವ ಅಂದರೆ ಈ ಸಂಭ್ರಮದ ಚಿತ್ರಗಳು ಮಾತ್ರವಾ? ಊಹ್ಞೂಂ. ಊರಿನ ಮಸೀದಿಯ ಮುಂದೆ ಮೆರವಣಿಗೆ ಸಾಂಗವಾಗಿ ಮುಂದೆ ಹೋಗುತ್ತದೆಯೇ ಎಂಬುದು ಗಣೇಶೋತ್ಸವ ಮಂಡಳಿಯ ಹಿರಿಯರ ಪ್ರತಿ ವರ್ಷದ ಆತಂಕ. ಮಸೀದಿ ಮುಂದೆ ಘೋಷ ವಾದ್ಯಗಳನ್ನು ಮೊಳಗಿಸಬೇಡಿ ಎಂಬುದು ಭಿನ್ನ ಧರ್ಮೀಯರ ಪಟ್ಟು. ಸ್ವತಂತ್ರ ರಾಜ್ಯದಲ್ಲಿ ಇವರದೇನು ಕಟ್ಟು ಪಾಡು, ನಾವ್ಯಾಕೆ ಮೌನ ಮೆರವಣಿಗೆ ಮಾಡಬೇಕು ಎಂಬ ಹಿಂದೂಗಳ ಮರು ಪ್ರಶ್ನೆ. ಹೀಗೆ, ನಾ ಬಿಡೆ ತಾ ಬಿಡೆ ಎಂಬ ಮೌನ ಯುದ್ಧ ಯಾವಾಗ ಸ್ಫೋಟಿಸುತ್ತದೋ ಯಾರಿಗೆ ಗೊತ್ತು ? ಎಲ್ಲಾ ಸಾಂಗವಾಗಿ ನಡೆಯಲಪ್ಪಾ ದೇವರೇ .. ಎಂದು ಹಿರಿಯರು ಗಣೇಶನಿಗೆ ಅಡಿಗಡಿಗೆ ಪ್ರಾರ್ಥಿಸುತ್ತಿರುತ್ತಾರೆ.
ಆದರೆ, ಕೊಲ್ಹಾಪುರ ಜಿಲ್ಲೆಯ ಈ ಹಳ್ಳಿಯಲ್ಲಿ ಹಾಗಲ್ಲ. ದೇಶವಿಡೀ ಒಡಕಿನ ಮಾತು ಕೇಳಿಬರುತ್ತಿರುವಾಗ ಈ ಹಳ್ಳಿಯದು ಒಗ್ಗಟ್ಟಿನ ಗಾಥೆ! ಎಲ್ಲ ಊರುಗಳಿಗೂ ಮಾದರಿಯಾದ ಯಶೋಗಾಥೆ ಅನ್ನಲಿಕ್ಕಡ್ಡಿಯಿಲ್ಲ .
ಅದು ಶಿರೋಳ ತಾಲ್ಲೂಕಿನ ಕುರುಂದವಾಡ ಗ್ರಾಮ. ಅಲ್ಲಿ ಗುಡಿಗಳೂ ಇವೆ, ಮಸೀದಿಗಳೂ ಇದೆ. ಪ್ರತಿ ವರ್ಷ ಊರಲ್ಲಿ ಗಣೇಶೋತ್ಸವ ನಡೆಯುತ್ತದೆ. ಆದರೆ ಗಣಪತಿಯ ಸಂಭ್ರಮ ಮಂದಿರದಲ್ಲಿ ಮಾತ್ರವಲ್ಲ- ಹಬ್ಬದಂದು ಮಸೀದಿಯನ್ನೂ ತುಂಬಿಕೊಳ್ಳುತ್ತದೆ. ಹಬ್ಬದ ದಿನ ಬೆಳಗ್ಗೆ ಗಣೇಶ ಪ್ರತಿಮೆಯನ್ನು ಸಿಂಗರಿಸಿದ ಮಸೀದಿಗೆ ತರಲಾಗುತ್ತದೆ. ಅಚ್ಚುಕಟ್ಟಾಗಿ ನಿರ್ಮಿಸಿದ ಪೀಠದಲ್ಲಿ ಕುಳ್ಳಿರಿಸಲಾಗುತ್ತದೆ. ಹಿಂದೂ- ಮುಸ್ಲಿಂ ಎರಡೂ ಜನಾಂಗದವರು ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಿಸುತ್ತಾರೆ. ಜೈ ಗಣೇಶ ಎನ್ನುತ್ತಾರೆ.
ಕುರುಂದವಾಡದ ಜನಸಂಖ್ಯೆ ಸುಮಾರು 75 ಸಾವಿರ. ಈ ಪೈಕಿ ಶೇ. 40ರಷ್ಟು ಮುಸ್ಲಿಮರಿದ್ದಾರೆ. ಕುರುಂದವಾಡದಲ್ಲಿ 18 ಮಸೀದಿಗಳಿವೆ. 18ರಲ್ಲಿ ಐದು ಮಸೀದಿಗಳು ಗಣೇಶ ಹಬ್ಬವನ್ನು ಪ್ರತಿ ವರ್ಷ ಸಡಗರದಿಂದ ಆಚರಿಸುತ್ತವೆ. ಇದು ಕಳೆದ 25 ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಉತ್ಸವದ ಆಚರಣೆಗಾಗಿ ಕಾರ್ಖನಫಿರ್ ಗಣೇಶೋತ್ಸವ ಮಂಡಳಿ ರಚಿಸಲಾಗಿದೆ. ಮಂಡಳಿಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮ್ ಸದಸ್ಯರು ಸಮ ಸಂಖ್ಯೆಯಲ್ಲಿದ್ದಾರೆ. ಈ ಮಂಡಳಿಗೆ ಈ ಬಾರಿ ಬೆಳ್ಳಿ ಹಬ್ಬದ ಖುಷಿ. ಆ ಖುಷಿಯಲ್ಲಿ ಈ ಬಾರಿ 8 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕುರುಂದವಾಡದ ಬೈರಗೆರೆ ಮಸೀದಿಯಲ್ಲಿ ಈ ವರ್ಷದ ಗಣೇಶೋತ್ಸವ ಜೋರೊ ಜೋರು. ಗಣೇಶನ ಹುಟ್ಟು ಹಬ್ಬಕ್ಕೆ ಬ್ಯಾಂಡು ಭಜಂತ್ರಿ ಭಜನೆ ಎಲ್ಲವೂ ಉಂಟೆನ್ನುತ್ತಾರೆ ಬೈರಗೆರೆ ಮಸೀದಿಯ ಸನ್ಮಿತ್ರ ಯುವಕ ಮಂಡಲದ ಅಧ್ಯಕ್ಷ ಬಾಬಾ ಸಾಹೇಬ್ ಫಕೀರ್.
ಕೇಸರಿಯ ಭಗವಾ ಧ್ವಜ ಕಂಡರೆ ಮುಸ್ಲಿಮರು ಇಲ್ಲಿ ಕೆಂಡ ಕಾರುವುದಿಲ್ಲ. ಮುಸ್ಲಿಮರ ಹಸಿರು ಧ್ವಜವನ್ನು ಹಿಂದೂಗಳು ದ್ವೇಷಿಸುವುದಿಲ್ಲ. ಈ ಬೈರಗೆರೆ ಮಸೀದಿಯ ಹಸಿರು ಮತ್ತು ಕೇಸರಿ ಧ್ವಜಗಳೆರಡನ್ನೂ ಗಣೇಶ ಹಬ್ಬದಂದು ಮಸೀದಿ ಸುತ್ತ ಕಟ್ಟಿ ಸಿಂಗರಿಸಲಾಗುತ್ತದೆ. ಬೈರಗೆರೆ ಮಸೀದಿಯಲ್ಲಿ ಈ ಸಾಮರಸ್ಯ ಗಣೇಶೋತ್ಸವ ಕಳೆದ 40 ವರ್ಷಗಳಿಂದ ನಡೆದು ಕೊಂಡು ಬಂದಿದೆ ಎಂದು ಬಾಬಾ ಸಾಹೇಬ್ಫಕೀರ್ ಹೆಮ್ಮೆಯಿಂದ ಹೇಳುತ್ತಾರೆ.
ಅಲ್ಲಿ ಮಸೀದಿಗೆ ಬರುವ ಮುಸ್ಲಿಮರನ್ನು ಮಾತನಾಡಿಸಿದರೆ - ನಮಗೆ ಮೊಹರಂ ಮತ್ತು ಗಣೇಶ ಹಬ್ಬದ ನಡುವೆ ಅಂಥ ವ್ಯತ್ಯಾಸವೇನಿಲ್ಲ. ಹಬ್ಬದ ಖುಷಿಗೆ ಜಾತಿಯ ಕಟ್ಟಳೆಯೇಕೆ ಎಂದು ಮರು ಪ್ರಶ್ನಿಸುತ್ತಾರೆ. ಹಬ್ಬಲಿ ಇವರ ರಸಬಳ್ಳಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications