ವರಮಹಾಲಕ್ಷ್ಮೀ: ಶ್ರದ್ದೆ, ಭಕ್ತಿ, ಸಂಪ್ರದಾಯದ ಮುಂದೆ ಕೊರೊನಾ ಧೂಳೀಪಟ
ಮಾರ್ಚ್ ತಿಂಗಳಿನಿಂದ ವಕ್ಕರಿಸಿಕೊಂಡಿರುವ ಕೊರೊನಾ ಹಾವಳಿ ಯಾವ ಮಟ್ಟಿಗೆ ವಿಶ್ವವನ್ನು ನಡುಗಿಸಿತ್ತು ಎಂದು ಮತ್ತೆಮತ್ತೆ ಬರೆದು ಜನರ ರೋಗ ನಿರೋಧಕ ಶಕ್ತಿಯನ್ನು ಕಮ್ಮಿಮಾಡುವುದು ಸರಿಯಲ್ಲ.
ಎಲ್ಲೆಲ್ಲೂ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಅದಾದ ನಂತರ ಬಕ್ರೀದ್, ರಕ್ಷಾ ಬಂಧನ. ಶ್ರಾವಣಮಾಸ ಎಂದರೆ ಹಾಗೇನೇ, ಹಬ್ಬಗಳ ಸರಮಾಲೆ. ಆದರೆ, ಕೊರೊನಾದಿಂದ ಹಬ್ಬದ ಆಚರಣೆ ನಿಯಮಿತವಾಗಿರುತ್ತದೆ ಎಂದುಕೊಂಡರೆ, ಅದನ್ನು ಬೆಂಗಳೂರಿಗರು ಉಲ್ಟಾ ಮಾಡಿದ್ದಾರೆ.
ಮಡಿವಾಳ, ಬನಶಂಕರಿ, ಮಲ್ಲೇಶ್ವರಂ, ಯಶವಂತಪುರ, ದಾಸರಹಳ್ಳಿ, ಹೆಬ್ಬಾಳ ಮುಂತಾದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ. ಸಾಮಾಜಿಕ ಅಂತರದ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಬೇಕಾದ ಜನಪ್ರತಿನಿಧಿಗಳೇ ಕ್ಯಾರೇ ಅನ್ನದಿದ್ದಾಗ, ಇನ್ನು, ಜನಸಾಮಾನ್ಯರು ಇದರ ಬಗ್ಗೆ ತಲೆಕೆಡಿಸಿಕೊಂಡಾರಾ?

ಕೊರೊನಾ ಭಯಕ್ಕೆ ನಾಲ್ಕು ತಿಂಗಳಿನಿಂದ ಮನೆಯ ಹೊಸ್ತಿಲು ದಾಟದ ಜನರೆಲ್ಲಾ, ಆಗಿದ್ದಾಗಲಿ ಎಂದು ರಸ್ತೆಗಿಳಿದರೋ ಅಥವಾ ದುಡ್ಡೇ ದೊಡ್ಡಪ್ಪ ಆಗಿರುವ ಈ ಜಗತ್ತಿನಲ್ಲಿ, ಲಕ್ಷ್ಮೀಯನ್ನು ಆರಾಧಿಸುವ ಹಬ್ಬವಾಗಿರುವುದರಿಂದ ನಿಯತ್ತಾಗಿ ಪೂಜೆ ಮಾಡೋಣ ಎಂದು ಹೊರಗೆ ಬಂದರೋ, ಗೊತ್ತಿಲ್ಲ, ಒಟ್ಟಿನಲ್ಲಿ ಬರಿದಾಗಿದ್ದ ರಸ್ತೆಯಲ್ಲಿ ಜನ..ಜನ..ಜನ..!
ಭಾರತೀಯರ ಜೀವನಶೈಲಿ, ಮೈಂಡ್ ಸೆಟ್ ಬೇರೆ ಎನ್ನುವುದು ಹಲವು ಬಾರಿ ರುಜುವಾತಾಗಿದೆ. ಶ್ರದ್ದೆ, ಭಕ್ತಿ, ಸಂಪ್ರದಾಯದ ಮುಂದೆ ಕೊರೊನಾ ವೈರಸ್, ಯಾವುದೇ ಲೆಕ್ಕಕ್ಕಿಲ್ಲ ಎನ್ನುವುದನ್ನು ರುಜುವಾತು ಪಡಿಸುವಂತಿತ್ತು, ವರಮಹಾಲಕ್ಷ್ಮಿ ಹಬ್ಬದ ಪೂರ್ವ ತಯಾರಿ.
ಕೊರೊನಾ ಇಲ್ಲದ ವರಮಹಾಲಕ್ಷ್ಮೀ ಹೇಗಿತ್ತೋ, ಅದಕ್ಕೆ ಏನೂ ಕಮ್ಮಿಯಿಲ್ಲದಂತೆ, ಜನರು ಹಬ್ಬದ ಖರೀದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೋದ ವರ್ಷದಂತೆ, ಹೂವು, ಹಣ್ಣು ಹಂಪಲಿನ ಬೆಲೆಗಳು ತೀರಾ ಗಗನಕ್ಕೇರದಿದ್ದರೂ, ಚೌಕಾಸಿ ಮಾತ್ರ ಎಂದಿನಂತಿತ್ತು.
ಬಿಬಿಎಂಪಿ ಹಬ್ಬದಾಚರಣೆಗೆ ಮಾರ್ಗಸೂಚಿಯನ್ನೇನೋ ರೂಪಿಸಿದೆ, ಪಾಲಿಸಬೇಕಾದದ್ದು ಜವಾಬ್ದಾರಿಯುತ ನಾಗರೀಕರ ಕರ್ತವ್ಯ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಜಾಸ್ತಿಯಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಖರೀದಿ ಆಯಿತು, ಇನ್ನೇನು ಮೂರು ವಾರದಲ್ಲಿ ಗೌರೀಗಣೇಶ.
ಗಣೇಶ ಚತುರ್ಥಿ ಯುನಿವರ್ಸಲ್ ಆಗಿ ಆಚರಿಸುವ ಹಬ್ಬ, ಗೌಜಿ ಗದ್ದಲ ಜಾಸ್ತಿಯೇ ಇರುತ್ತದೆ ಎನ್ನುವುದು ತಿಳಿದಿರುವ ವಿಚಾರ. ಆದರೂ, ನಮ್ಮ ಜಾಗೃತೆಯಲ್ಲಿ ನಾವಿದ್ದರೆ ಒಳ್ಳೆಯದು. ಹೇಗೂ, ಗಣೇಶ ನಮ್ಮವನೇ, ಮುಂದಿನ ವರ್ಷ ಅದ್ದೂರಿಯಾಗಿ ನಿನ್ನನ್ನು ಪೂಜಿಸುತ್ತೇನೆ, ಈ ವರ್ಷ ಬೇಸರ ಮಾಡಿಕೊಳ್ಳಬೇಡ ಎಂದರೆ ನಮ್ಮ ಗಣಪ ತಥಾಸ್ತು ಅನ್ನದೇ ಇರುತ್ತಾನಾ..?
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications