Get Updates
Get notified of breaking news, exclusive insights, and must-see stories!

ಮನೆಯ ಸಂತೋಷಕ್ಕಾಗಿ ದಸರಾ ದಿನದಂದು ಈ 5 ಕೆಲಸಗಳನ್ನು ಮಾಡಿ...

ದಸರಾ ಹಬ್ಬ ಅಂದರೆ ವಿಜಯದಶಮಿಯನ್ನು ಇಡೀ ದೇಶದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಶ್ವಿನ್ ಮಾಸದ ಶುಕ್ಲ ಪಕ್ಷದ ಹತ್ತನೆಯ ದಿನದಂದು ಈ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಈ ದಿನ ಲಂಕಾದ ರಾಜ ರಾವಣನನ್ನು ಶ್ರೀರಾಮನು ಕೊಂದನು. ಈ ಹತ್ಯೆಯನ್ನು ಅಧರ್ಮದ ಮೇಲೆ ಧರ್ಮದ ವಿಜಯವಾಗಿ ನೋಡಲಾಗುತ್ತದೆ. ಹೀಗಾಗಿ ವಿಜಯದಶಮಿಯ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು.

ದಾನ ಮಾಡುವುದು

ಹಣಕಾಸಿನ ಬಿಕ್ಕಟ್ಟು, ಸಾಲ ಅಥವಾ ಕಾಯಿಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ದಸರಾ ದಿನದಂದು ದಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಈ ದಿನ ಬೆಳಿಗ್ಗೆ ಸ್ನಾನ ಮಾಡಿ ಶುದ್ಧವಾದ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ಮಾತೆಯ ಆಶೀರ್ವಾದ ಪಡೆಯಿರಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಹಣದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.

Do these 5 things on Dussehra day for household happiness

ನೀವು ಜೀವನದಲ್ಲಿ ಸಮಸ್ಯೆಗಳನ್ನು ಜಯಿಸಲು ಬಯಸಿದರೆ ವಿಶೇಷ ನೈವೇದ್ಯಗಳನ್ನು ಅರ್ಪಿಸುವ ಮೂಲಕ ದೇವಿಯನ್ನು ಸಂತೋಷಪಡಿಸಿ, ಆಕೆಯ ಆಶೀರ್ವಾದವನ್ನು ಪಡೆಯಬಹುದು. ಜೊತೆಗೆ ರಾವಣ ದಹನದ ಅಗ್ನಿಯಲ್ಲಿ ತೆಂಗಿನಕಾಯಿಯನ್ನು ಅರ್ಪಿಸಿ. ಎಲ್ಲಾ ಸಮಸ್ಯೆಗಳು ನಾಶವಾಗುತ್ತವೆ.

ರಾವಣ ದಹನ ಭಸ್ಮ

ರಾವಣ ದಹನದ ನಂತರ ರಾವಣನ ಚಿತಾಭಸ್ಮವನ್ನು ಮನೆಗೆ ತಂದರೆ ಅದು ತುಂಬಾ ಶುಭ. ಈ ಭಸ್ಮವನ್ನು ಮನೆಯ ತಿಜೋರಿಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಮತ್ತು ಹೊಸ ಗಳಿಕೆಯ ದಾರಿಗಳು ತೆರೆದುಕೊಳ್ಳುತ್ತವೆ. ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣಲಿದೆ. ಒಂದು ವರ್ಷದವರೆಗೆ ಯಾವುದೇ ರೀತಿಯ ತೊಂದರೆ ಅಥವಾ ರೋಗವು ವ್ಯಕ್ತಿಯನ್ನು ಮುಟ್ಟುವುದಿಲ್ಲ.

ತುಳಸಿ ಗಿಡ

ವಿಜಯದಶಮಿಯಂದು ತುಳಸಿ ಸಸಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ ಶತ್ರುಗಳು ನಾಶವಾಗುತ್ತಾರೆ. ಇದರಿಂದಾಗಿ ನಿಮಗೆ ಹಾನಿ ಮಾಡಲು ಪ್ರಯತ್ನಿಸುವವರು ನಿಮ್ಮಿಂದ ದೂರ ಉಳಿಯುತ್ತಾರೆ. ವಿಶೇಷ ಆಚರಣೆಗಳೊಂದಿಗೆ ತುಳಸಿ ಗಿಡವನ್ನು ಪೂಜಿಸುವುದರಿಂದ ಮಾತೃದೇವತೆಯ ಆಶೀರ್ವಾದ ಸಿಗುತ್ತದೆ.

ಶಮಿ ಮರ

ಶಮಿ ಮರವು (ಬನ್ನಿ ಮರ) ಶಿವನಿಗೆ ಬಹಳ ಪ್ರಿಯವಾಗಿದೆ. ಈ ದಿನ ಈ ಮರವನ್ನು ಪೂಜಿಸುವುದು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶನಿ ದೋಷವನ್ನು ಕಡಿಮೆ ಮಾಡಲು ಬನ್ನಿ ಮರವನ್ನು ಪೂಜಿಸಬಹುದು. ಜೀವನದ ಅನೇಕ ತೊಂದರೆಗಳನ್ನು ಮುಕ್ತಿಯನ್ನು ಪಡೆಯಬಹುದು.

ಅಕ್ಟೋಬರ್ 15ರಿಂದ ಅಕ್ಟೋಬರ್ 23ರವರೆಗೆ ನವರಾತ್ರಿ ಪೂಜೆಯನ್ನು ಮಾಡಲಾಗುತ್ತದೆ. ಇಂದು ಅಂದರೆ ಒಂಬತ್ತನೇ ದಿನ ದುರ್ಗಾ ದೇವಿಯ ಒಂಬತ್ತನೇ ರೂಪ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ನಾಳೆ ಅಕ್ಟೋಬರ್ 24ರಂದು ವಿಜಯದಶಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಮಹಿಷಾಸುರ ಎಂಬ ರಾಕ್ಷಸನನ್ನು ದುರ್ಗಾ ದೇವಿ ಸಂಹರಿಸುವ ಜಯದ ಸಂಕೇತವಾಗಿ ಆಚರಣೆ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+