ಮಾಲಿನ್ಯರಹಿತ ದೀಪಾವಳಿಗೆ ಐದು ಸಲಹೆಗಳು

ನಾವು ಕೈಗೊಳ್ಳುವ ಸಣ್ಣ ಬದಲಾವಣೆ ಅನೇಕ ರೀತಿಯಿಂದ ಮಾಲಿನ್ಯ ತಡೆಯಲು ಸಹಕರಿಸುತ್ತೆ. ಇದಕ್ಕೆಂದು ಐದು ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ. ಒಮ್ಮೆ ನೋಡಿ.
1. ಗ್ರೀನ್ ಲೈಟ್ ಬಳಸಿ : ದೀಪಾವಳಿಯಲ್ಲಿ ಮನೆಗೆ ಬೆಳಕಿನ ಅಲಂಕಾರ ಮಾಡುವುದು ಸಂಪ್ರದಾಯ. ಹಬ್ಬದ ಒಂದು ವಾರದ ಮುಂಚೆ ಮತ್ತು ನಂತರ ಮನೆಯ ಒಳಗೆ ಮತ್ತು ಅಂಗಳದಲ್ಲಿ ಬೆಳಕು ಮೂಡಿರಬೇಕು. ಆದರೆ ದೀಪಗಳ ಬದಲು ಹಸಿರು ಲೈಟ್ ಬಳಸುವುದರಿಂದ ಹೆಚ್ಚು ಉಪಯೋಗವಿದೆ. ವಿವಿಧ ಬಣ್ಣಗಳಲ್ಲಿರುವ ಎಲೆಕ್ಟ್ರಾನಿಕ್ ಬಲ್ಬ್ ಬಳಸಿದರೆ ಅದೂ ಒಂದು ರೀತಿ ಪರಿಸರ ಪ್ರೇಮಿ ಕ್ರಮವೆನಿಸುತ್ತದೆ.
2. ಪಟಾಕಿಯನ್ನು ವಿಸ್ತಾರ ಜಾಗದಲ್ಲಿ ಸಿಡಿಸಿರಿ : ದೀಪಾವಳಿಯಲ್ಲಿ ಹೆಚ್ಚು ಪಟಾಕಿ ಸುಡುವುದರಿಂದ ಮಾಲಿನ್ಯವೂ ಹೆಚ್ಚು. ಆದರೆ ಪಟಾಕಿ ಸುಡಲೇಬೇಕೆಂದಿದ್ದವರು ಈ ಮಾರ್ಗವನ್ನು ಅನುಸರಿಸಬಹುದು. ಮನೆ, ಅಪಾರ್ಟ್ ಮೆಂಟ್ ಗಳ ಮುಂದೆ ಪಟಾಕಿ ಹೊಡೆಯುವುದಕ್ಕಿಂತ ನಿವಾಸಗಳಿಂದ ದೂರವಿರುವ ವಿಸ್ತಾರ ಜಾಗದಲ್ಲಿ ಸಿಡಿಸಬಹುದು.
3. ಲಘು ಪಟಾಕಿ ಇದ್ದರೆ ಚೆಂದ : ದೀಪಾವಳಿ ಬೆಳಕಿನ ಹಬ್ಬ. ಆದರೆ ಈ ಸಮಯದಲ್ಲಿ ಉಂಟಾಗುವ ಪಟಾಕಿ ಶಬ್ದ ಹೃದಯ ಬೆಚ್ಚಿಬೀಳುವಂತೆ ಮಾಡುತ್ತದೆ. ಕಿವಿಗೆ ಅಹಿತವೆನಿಸುವ ಬಾಂಬ್ ಪಟಾಕಿಗಳನ್ನು ಸಿಡಿಸುವ ಸಂಪ್ರದಾಯ ದೀಪಾವಳಿಯಲ್ಲಿಲ್ಲ. ಆದ್ದರಿಂದ ಲಘು ಪಟಾಕಿಗಳನ್ನು ಸಿಡಿಸಿದರೆ ಹಬ್ಬಕ್ಕೆ ಸಾಕು.
4. ನಿಮ್ಮ ಮನೆಯಂಗಳ ನೀವೆ ಶುದ್ಧಗೊಳಿಸಿ : ನಿಮ್ಮ ಮನೆಯಂಗಳದಲ್ಲಿ ನೀವೇ ಸಿಡಿಸಿದ ಪಟಾಕಿಯಿಂದ ಉಂಟಾದ ಕಸವನ್ನು ನೀವೇ ಶುದ್ಧಗೊಳಿಸಿದರೆ ನೀವು ಪರಿಸರಕ್ಕೆ ಮಾಡಬಹುದಾದ ಒಂದು ಒಳ್ಳೆ ಕೆಲಸ ಇದಾಗಿರುತ್ತದೆ.
5. ಪ್ಲಾಸ್ಟಿಕ್ ಹೆಚ್ಚು ಬಳಕೆ ಹಬ್ಬಕ್ಕೆ ಬೇಡ : ಹಬ್ಬದ ಸಮಯದಲ್ಲಿ ಪಟಾಕಿಯಿಂದ ಮಾಲಿನ್ಯವಾಗುವುದು ಸಹಜ. ಆದರೆ ಹಬ್ಬದ ನೆಪದಿಂದ ಪ್ಲಾಸ್ಟಿಕ್ ಬಳಕೆಯೂ ಹೆಚ್ಚಾಗುವುದು ವಿಷಾದ. ಸ್ವೀಟ್ ತರಲು, ಪಟಾಕಿ ತರಲು ಇನ್ನಿತರ ಕೆಲಸಗಳಿಗೆ ಪ್ಲಾಸ್ಟಿಕ್ ಪರ್ಯಾಯವಾಗಿ ಬೇರೆ ಮಾರ್ಗ ಅನುಸರಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.
ಈ ಐದೂ ಮಾರ್ಗಗಳನ್ನು ಅರಿತು ಅನುಸರಿಸಿದರೆ ಖಂಡಿತ ಈ ಬಾರಿಯ ದೀಪಾವಳಿ ಸ್ವಲ್ಪ ಮಟ್ಟಿಗಾದರೂ ಮಾಲಿನ್ಯರಹಿತವೆನಿಸುತ್ತದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications