ಮಾಲಿನ್ಯರಹಿತ ದೀಪಾವಳಿಗೆ ಐದು ಸಲಹೆಗಳು

ನಾವು ಕೈಗೊಳ್ಳುವ ಸಣ್ಣ ಬದಲಾವಣೆ ಅನೇಕ ರೀತಿಯಿಂದ ಮಾಲಿನ್ಯ ತಡೆಯಲು ಸಹಕರಿಸುತ್ತೆ. ಇದಕ್ಕೆಂದು ಐದು ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ. ಒಮ್ಮೆ ನೋಡಿ.
1. ಗ್ರೀನ್ ಲೈಟ್ ಬಳಸಿ : ದೀಪಾವಳಿಯಲ್ಲಿ ಮನೆಗೆ ಬೆಳಕಿನ ಅಲಂಕಾರ ಮಾಡುವುದು ಸಂಪ್ರದಾಯ. ಹಬ್ಬದ ಒಂದು ವಾರದ ಮುಂಚೆ ಮತ್ತು ನಂತರ ಮನೆಯ ಒಳಗೆ ಮತ್ತು ಅಂಗಳದಲ್ಲಿ ಬೆಳಕು ಮೂಡಿರಬೇಕು. ಆದರೆ ದೀಪಗಳ ಬದಲು ಹಸಿರು ಲೈಟ್ ಬಳಸುವುದರಿಂದ ಹೆಚ್ಚು ಉಪಯೋಗವಿದೆ. ವಿವಿಧ ಬಣ್ಣಗಳಲ್ಲಿರುವ ಎಲೆಕ್ಟ್ರಾನಿಕ್ ಬಲ್ಬ್ ಬಳಸಿದರೆ ಅದೂ ಒಂದು ರೀತಿ ಪರಿಸರ ಪ್ರೇಮಿ ಕ್ರಮವೆನಿಸುತ್ತದೆ.
2. ಪಟಾಕಿಯನ್ನು ವಿಸ್ತಾರ ಜಾಗದಲ್ಲಿ ಸಿಡಿಸಿರಿ : ದೀಪಾವಳಿಯಲ್ಲಿ ಹೆಚ್ಚು ಪಟಾಕಿ ಸುಡುವುದರಿಂದ ಮಾಲಿನ್ಯವೂ ಹೆಚ್ಚು. ಆದರೆ ಪಟಾಕಿ ಸುಡಲೇಬೇಕೆಂದಿದ್ದವರು ಈ ಮಾರ್ಗವನ್ನು ಅನುಸರಿಸಬಹುದು. ಮನೆ, ಅಪಾರ್ಟ್ ಮೆಂಟ್ ಗಳ ಮುಂದೆ ಪಟಾಕಿ ಹೊಡೆಯುವುದಕ್ಕಿಂತ ನಿವಾಸಗಳಿಂದ ದೂರವಿರುವ ವಿಸ್ತಾರ ಜಾಗದಲ್ಲಿ ಸಿಡಿಸಬಹುದು.
3. ಲಘು ಪಟಾಕಿ ಇದ್ದರೆ ಚೆಂದ : ದೀಪಾವಳಿ ಬೆಳಕಿನ ಹಬ್ಬ. ಆದರೆ ಈ ಸಮಯದಲ್ಲಿ ಉಂಟಾಗುವ ಪಟಾಕಿ ಶಬ್ದ ಹೃದಯ ಬೆಚ್ಚಿಬೀಳುವಂತೆ ಮಾಡುತ್ತದೆ. ಕಿವಿಗೆ ಅಹಿತವೆನಿಸುವ ಬಾಂಬ್ ಪಟಾಕಿಗಳನ್ನು ಸಿಡಿಸುವ ಸಂಪ್ರದಾಯ ದೀಪಾವಳಿಯಲ್ಲಿಲ್ಲ. ಆದ್ದರಿಂದ ಲಘು ಪಟಾಕಿಗಳನ್ನು ಸಿಡಿಸಿದರೆ ಹಬ್ಬಕ್ಕೆ ಸಾಕು.
4. ನಿಮ್ಮ ಮನೆಯಂಗಳ ನೀವೆ ಶುದ್ಧಗೊಳಿಸಿ : ನಿಮ್ಮ ಮನೆಯಂಗಳದಲ್ಲಿ ನೀವೇ ಸಿಡಿಸಿದ ಪಟಾಕಿಯಿಂದ ಉಂಟಾದ ಕಸವನ್ನು ನೀವೇ ಶುದ್ಧಗೊಳಿಸಿದರೆ ನೀವು ಪರಿಸರಕ್ಕೆ ಮಾಡಬಹುದಾದ ಒಂದು ಒಳ್ಳೆ ಕೆಲಸ ಇದಾಗಿರುತ್ತದೆ.
5. ಪ್ಲಾಸ್ಟಿಕ್ ಹೆಚ್ಚು ಬಳಕೆ ಹಬ್ಬಕ್ಕೆ ಬೇಡ : ಹಬ್ಬದ ಸಮಯದಲ್ಲಿ ಪಟಾಕಿಯಿಂದ ಮಾಲಿನ್ಯವಾಗುವುದು ಸಹಜ. ಆದರೆ ಹಬ್ಬದ ನೆಪದಿಂದ ಪ್ಲಾಸ್ಟಿಕ್ ಬಳಕೆಯೂ ಹೆಚ್ಚಾಗುವುದು ವಿಷಾದ. ಸ್ವೀಟ್ ತರಲು, ಪಟಾಕಿ ತರಲು ಇನ್ನಿತರ ಕೆಲಸಗಳಿಗೆ ಪ್ಲಾಸ್ಟಿಕ್ ಪರ್ಯಾಯವಾಗಿ ಬೇರೆ ಮಾರ್ಗ ಅನುಸರಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.
ಈ ಐದೂ ಮಾರ್ಗಗಳನ್ನು ಅರಿತು ಅನುಸರಿಸಿದರೆ ಖಂಡಿತ ಈ ಬಾರಿಯ ದೀಪಾವಳಿ ಸ್ವಲ್ಪ ಮಟ್ಟಿಗಾದರೂ ಮಾಲಿನ್ಯರಹಿತವೆನಿಸುತ್ತದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications