ದೀಪಾವಳಿಗೆ ಸ್ವಾದಿಷ್ಟಕರ ಡ್ರೈ ಫ್ರುಟ್ಸ್ ಹಲ್ವಾ

ಅದೇ ಒಣಹಣ್ಣುಗಳ ಸ್ವಾದಿಷ್ಟಕರ ಹಲ್ವಾ. ಈ ಸಿಹಿತಿನಿಸು ದೀಪಾವಳಿ ಹಬ್ಬಕ್ಕೆ ಒಂದು ಕಳೆತಂದುಕೊಡವಲ್ಲಿ ಸಂದೇಹವೇ ಇಲ್ಲ. ಈ ಹೊಸರುಚಿ ಸ್ವಾದಿಷ್ಟಕರ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ. ಮಕ್ಕಳಂತೂ ಇದನ್ನು ಆಸೆಪಟ್ಟು ತಿನ್ನುತ್ತವೆ. ಹಬ್ಬದಲ್ಲಿ ಮಾಡುವ ಸ್ವೀಟ್ ಮೆನುದಲ್ಲಿ ಡ್ರೈ ಫ್ರುಟ್ ಹಲ್ವಾ ಕೂಡ ಸೇರ್ಪಡೆಯಾಗಲಿ.
ಇದನ್ನು ತಯಾರಿಸುವಾಗ ಉತ್ತತ್ತಿ ಅಥವಾ ಖರ್ಜೂರವನ್ನು ಬಳಸಬಹುದು. ಎರಡೂ ರುಚಿಗಳು ವಿಭಿನ್ನವಾಗಿರುತ್ತವೆ. ಅದರಲ್ಲೂ, ಉತ್ತತ್ತಿ ಬಳಸಿದಾಗ ಸಿಗುವ ರುಚಿ ಖರ್ಜೂರಕ್ಕಿಂತ ಹೆಚ್ಚು. ಆದರೆ, ಖರ್ಜೂರವನ್ನು ಉಪಯೋಗಿಸಿದಾಗ ಉತ್ತತ್ತಿಯಂತೆ ನೆನೆಯಿಡುವ ಪ್ರಮೇಯ ಬರುವುದಿಲ್ಲ.
ಬೇಕಾಗುವ ಸಾಮಗ್ರಿಗಳು
* ಉತ್ತತ್ತಿ (ಒಣಗಿಸಿದ ಖರ್ಜೂರ) 8-10 (ಖರ್ಜೂರ ಕೂಡ ಬಳಸಬಹುದು)
* ಬಾದಾಮಿ 1 ಕಪ್
* ಗೋಡಂಬಿ 1 ಕಪ್
* ಒಣ ದ್ರಾಕ್ಷಿ 1 ಕಪ್
* ಹಾಲು 2 ಕಪ್
* ತುಪ್ಪ 1 ಕಪ್
* ಸಕ್ಕರೆ 1 ಕಪ್
* ರೋಸ್ ಎಸೆನ್ಸ್ 1 ಚಮಚ
* ಮೈದಾಹಿಟ್ಟು ಅಥವಾ ಕಡಲೆಹಿಟ್ಟು 2 ಚಮಚ (ಬೇಕಿದ್ದರೆ)
ತಯಾರಿಸುವ ವಿಧಾನ
* ಉತ್ತತ್ತಿಯಿಂದ ಬೀಜಗಳನ್ನು ಬೇರ್ಪಡಿಸಿ. ಒಂದು ದೊಡ್ಡ ಬುಟ್ಟಿಯಲ್ಲಿ ಹಾಲನ್ನು ಹಾಕಿ ಅದರಲ್ಲಿ ಉತ್ತತ್ತಿಗಳನ್ನು 4 ಗಂಟೆಗಳ ಕಾಲ ನನೆಯಿಡಿ.
* ಬಾದಾಮಿ ಮತ್ತು ಗೋಡಂಬಿಗಳನ್ನು ಸಣ್ಣ ತುಂಡು ಮಾಡಿಟ್ಟುಕೊಳ್ಳಿ.
* ಚೆನ್ನಾಗಿ ನೆಂದ ಉತ್ತತ್ತಿಗಳನ್ನು ಗ್ರೈಂಡರಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ತುಂಡು ಮಾಡಿಕೊಂಡ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹಾಕಿ ಮತ್ತೆ ಗ್ರೈಂಡರಲ್ಲಿ ಒಂದು ನಿಮಿಷ ತಿರುಗಿಸಿ.
* ಮತ್ತೊಂದು ಅಗಲ ತಳದ ಪಾತ್ರೆಯಲ್ಲಿ ಹಾಲು ಮತ್ತು ಸಕ್ಕರೆ ಹಾಕಿ ಕಾಯಿಸಲಿಕ್ಕೆ ಇಡಿ. ಹಾಲು ಕುದಿ ಹಂತಕ್ಕೆ ಬರುತ್ತಿದ್ದಂತೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ತುಪ್ಪವನ್ನು ಸ್ವಲ್ಪಸ್ವಲ್ಪವೇ ಹಾಕುತ್ತ ಕೈಯಾಡಿಸುತ್ತಿರಿ.
* ಇದು ಕುದ್ದು ಗಟ್ಟಿಯಾಗುತ್ತಿದ್ದಂತೆ ಸ್ಟೌನಿಂದ ಕೆಳಗಿಳಿಸಿ. ಬಿಸಿಬಿಸಿಯಾಗಿರುವಾಗಲೇ ಬಾಳೆ ಎಲೆ ಮೇಲೆ ಬಡಿಸಿದ ಊಟದೊಡನೆ ಒಣಹಣ್ಣುಗಳ ಹಲ್ವಾ ಬಡಿಸಿರಿ. ದೀಪಾವಳಿಗೆ ಈ ಸಿಹಿ ತಿನಿಸು ವಿಶೇಷ ಕಳೆತಂದುಕೊಡುವಲ್ಲಿ ಸಂದೇಹವೇ ಇಲ್ಲ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications