ಬೆಂಗಳೂರಲ್ಲಿ ಸೈಟ್ ಕೊಳ್ಳುವ ಆಸೆಗೆ ಎಳ್ಳುನೀರು
(ಮುಂದುವರಿದಿದೆ...) "ಮುನ್ನೂರು ಚದರಡಿಗೆ ಇಪ್ಪತ್ತೈದು ಲಕ್ಷವಾ?" ಹೌಹಾರಿದೆ ನಾನು. "ಕಳೆದ ವಾರ ಇಪ್ಪತ್ತಕ್ಕೆ ಕೇಳಿದ್ರು ಸಾರ್ ನಮ್ ಪಾರ್ಟಿ. ಕೊಡಲಿಲ್ಲ ಅವರು. ಇಪ್ಪತ್ತನಾಲ್ಕಕ್ಕೆ ಒಪ್ಪಬಹುದು" ಅನ್ನುತ್ತ ಕಾರಲ್ಲಿ ಕುಳಿತ ರಾಜ. ಇಪ್ಪತ್ತೈದು ಲಕ್ಷದ ಮುನ್ನೂರು ಚದರಡಿ ಜಾಗವನ್ನು ಕಣ್ಣಲ್ಲಿ ತುಂಬಿಸಿಕೊಳ್ಳುತ್ತ ನಾವೂ ಕಾರು ಏರಿದೆವು. ಸ್ವಲ್ಪ ಹೊತ್ತು ಕಳೆದು "ಯಾವುದು ಓಕೆ ಸಾರ್?" ಕೇಳಿದ ರಾಜ. "ರೇಟ್ ತುಂಬ ಜಾಸ್ತಿಯಾಯಿತಲ್ಲಪ್ಪ" ಅಂದೆ ನಾನು.
"ಎಲ್ಲಾ ಕಡೆ ಹೀಗೇ ರೇಟು ಸಾರ್.. ಇವತ್ತು ಬೆಂಗಳೂರಲ್ಲಿ ಇಪ್ಪತ್ತು ಮೂವತ್ತು ಲಕ್ಷಕ್ಕೆಲ್ಲ ಏನೂ ಸಿಗಲ್ಲ ಸಾರ್. ಮಿಡಲ್ ಇನ್ಕಮಿನೋರನ್ನ ಕೇಳೋರಿಲ್ಲ ಸಾರ್" ಅನ್ನುತ್ತ ರಾಜ ಅವರ ಆಫೀಸಿನ ಬಳಿ ಕಾರು ತಂದು ನಿಲ್ಲಿಸಿದ. ಕೆಳಗಿಳಿದೆವು ನಾವು. ಚಿಕ್ಕಪ್ಪನಲ್ಲಿ "ನನಗಿನ್ನೂ ರಿಟೈರ್ ಆಗಲಿಕ್ಕೆ ಏಳೆಂಟು ವರ್ಷ ಇದೆ. ಅರ್ಜೆಂಟೇನೂ ಇಲ್ಲ, ಬರುವ ವರ್ಷ ನೋಡುವಾ" ಅಂದೆ ನಾನು. ಅದನ್ನು ಕೇಳಿಸಿಕೊಂಡ ರಾಜ "ಇದೇ ಕೊನೆಗೆ ನೋಡಿದೆವಲ್ಲ, ಆ ಸೈಟಿಗೆ ಬರುವ ವರ್ಷ ಕೇಳಿದ್ರೆ... ಐವತ್ತು ಸಾರ್. ನಾನು ನೋಡ್ತಾ ಇದ್ದೇನೆ. ವರ್ಷ ವರ್ಷ ಹೋದ ಹಾಗೆ ರೇಟು ಜಾಸ್ತಿಯಾಗುತ್ತೆ, ಸೈಟು ಸಣ್ಣದಾಗುತ್ತೆ. ಮುಂದು ಮುಂದಕ್ಕೆ ನಿಮಗೆ ಸಿಟಿ ಒಳಗಡೆ ನೂರು ಚದರಡಿ ಸೈಟೂ ಸಿಗೋಲ್ಲ ನೋಡಿ ಬೇಕಿದ್ರೆ" ದೃಢವಾಗಿ ನುಡಿದ ರಾಜ.
ನನಗೂ ಚಿಕ್ಕಪ್ಪನಿಗೂ ಬೆಂಗಳೂರಿನ ದುಬಾರಿ ರೇಟು ಕೇಳಿ ಎಲ್ಲೋ ಕಳೆದು ಹೋದ ಅನುಭವ. ನಮ್ಮ ಜೀವಿತದಲ್ಲಿ ಸೈಟು ಸಾಧ್ಯವಾಗಲಾರದೇನೋ ಅನ್ನುವ ಹತಾಶ ಭಾವ. ಇವನ ಪೊಟ್ಟು ಭವಿಷ್ಯ ಬೇರೆ.. ಮುಂದಿನ ದಾರಿಯೇನು ಅಂತ ಶಾಮಣ್ಣನಲ್ಲಿ ಆಲೋಚಿಸಲು ಅಲ್ಲೇ ನಿಂತಿದ್ದೆವು. ರಾಜ ಹೋಗಿ ವರದಿ ಒಪ್ಪಿಸಿರಬೇಕು, ಶಾಮಣ್ಣನಿಗೂ ಗಿರಾಕಿ ಫಾಯಿದೆಯಿಲ್ಲದ್ದು ಅನ್ನಿಸಿರಬೇಕು. "ಮುವತ್ತು ಲಕ್ಷಕ್ಕೆ ವಿಧಾನಸೌಧ ಬಳಿ ಡಬಲ್ ಸೈಟ್ ಸಿಗುತ್ತೆ ಅಂತ ಅನ್ಕೊಂಡಿದ್ರಾ ಸಾರ್" ಎಂದ ಶಾಮಣ್ಣ ಗಹಗಹಿಸಿ ನಕ್ಕು ನಮ್ಮ ಇರವನ್ನೇ ಕಡೆಗಣಿಸಿ ಮೊಬೈಲಿನಲ್ಲಿ ಯಾರಲ್ಲೋ ಮಾತು ಹಚ್ಚಿದ.
ಉಪಾಯವಿಲ್ಲದೆ ಅಲ್ಲಿಂದ ಹೊರಟೆವು. ರಸ್ತೆ ಬಳಿ ರಾಜ ನಿಂತಿದ್ದ. "ಇಲ್ಲೊಂದು ಹದಿನೈದು ಬೈ ಹತ್ತು ಸೈಟಿದೆ. ಬೇರೆ ಬ್ರೋಕರಿದ್ದು. ನನ್ನ ಕಮಿಶನ್ ಐದು ಸಾವಿರ. ನೋಡ್ತೀರಾ ಸಾರ್?" ಕೇಳಿದ ಆತ. "ಹದಿನೈದು ಬೈ ಹತ್ತಾ?" ಅಂದೆ ನಾನು. "ಕೆಳಗೆ ಕಿಚನ್, ಬಾತ್ ರೂಮು ಮೇಲೆ ಬೆಡ್ ರೂಮು, ಮೂರು ಕಡೆ ಗೋಡೆ ಕಟ್ಟಿದ್ರೆ ಸಾಕು ಸಾರ್..ಒಂದು ಸೈಡಲ್ಲಿ ಗೋಡೆ ಈಗಾಗಲೇ ಇದೆ." ಅನ್ನುತ್ತ ನಮ್ಮ ಹಿಂದೆಯೇ ಬರುತ್ತಿದ್ದ ರಾಜ. ಆತನನ್ನು ಅಷ್ಟಾಗಿ ಹಚ್ಚಿಕೊಳ್ಳದೆ ನಾವು ಮುಂದೆ ನಡೆಯುತ್ತಿದ್ದೆವು. ನಮ್ಮನ್ನು ಹಿಂಬಾಲಿಸುವುದನ್ನು ನಿಲ್ಲಿಸಿ ರಾಜ ಕೂಗಿ ಹೇಳಿದ "ಈ ಸಾರಿನೇ ಎಲ್ಲಾದ್ರು ಕೊಂಡ್ಕೊಳ್ಳಿ ಸಾರ್... ಇಲ್ಲಾಂದ್ರೆ ಈ ಊರಲ್ಲಿ ಮುಂದೆ ನಿಮ್ಮ ಬಜೆಟ್ಟಿಗೆ ಕೊನೆಗೆ ಆರಡಿ ಬೈ ಮೂರಡಿ ಜಾಗನೂ ಸಿಗೋಲ್ಲಾ."
ಪುಣ್ಯಕ್ಕೆ ನನ್ನಾಕೆ ನಮ್ಮೊಂದಿಗಿರಲಿಲ್ಲ. ಇದ್ದರೆ ಅವಳ ಬತ್ತಳಿಕೆಗೆ ಇದೊಂದು ಬ್ರಹ್ಮಾಸ್ತ್ರ ಕೂಡ ಸೇರಿಕೊಳ್ಳುತ್ತಿತ್ತು! [ಏನ್ ಸಾರ್ ದೀಪಾವಳಿ ಹಬ್ಬ ಜೋರಾ?]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications