ದಸರಾ : ಸ್ತಬ್ಧಚಿತ್ರಗಳೆಡೆ ಚಿತ್ರವಿಚಿತ್ರ ನಡೆ!
ಪ್ರಿಯ ವೀಕ್ಷಕರೇ, ಅಲ್ಲ, ಪ್ರಿಯ ಓದುಗರೇ, ಇದು ಈ ಸಲದ ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳ ಎಡೆ(ಯಲ್ಲಿ) ನಾನು ಗಮನಿಸಿದ ಚಿತ್ರ ವಿಚಿತ್ರ ನಡೆ.
* ಎಚ್. ಆನಂದರಾಮ ಶಾಸ್ತ್ರೀ
* "ವೀಕ್ಷಕರೇ, ನಿಮಗೆಲ್ಲ ಸ್ವಾಗತ, ಸುಸ್ವಾಗತ."
* "......ಆದಂಥ ಡಾ......ಅವರು ಜನರತ್ತ ಕೈಬೀಸ್ತಾ ಇದ್ದಾರೆ. ನಿಜಕ್ಕೂ ಒಂದು ಆನಂದದ ಕ್ಷಣ."
* "ಡಾ.....ಅವರು ಪ್ರೇಕ್ಷಕರತ್ತ ಕೈಬೀಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರೇಕ್ಷಕರು ಅತೀ ಆನಂದದಿಂದ ಇದನ್ನು ನೋಡ್ತಾ ಇದ್ದಾರೆ."
- ಹೀಗೆ ದೂರದರ್ಶನದ 'ಚಂದನ' ವಾಹಿನಿಯ ನಿರೂಪಕರಿಂದ ಪರಾಕು ಹೇಳಿಸಿಕೊಳ್ಳುತ್ತ, ಸುಮ್ಮಸುಮ್ಮನೇ ಜನರ ಕೈಲುಕುತ್ತ, ಕಲಾವಿದರ ಬೆನ್ನು ತಟ್ಟುತ್ತ, ಈ ಸಲದ ಮೈಸೂರು ದಸರಾ ಜಂಬೂ ಸವಾರಿಯ ನೇರ ಪ್ರಸಾರದಲ್ಲಿ (ಪ್ರತಿ ವರ್ಷದಂತೆ ಈ ವರ್ಷವೂ) ಅತಿ ಹೆಚ್ಚು ಚೌಕಟ್ಟುಗಳಲ್ಲಿ ವೀಕ್ಷಕರಿಗೆ ದರ್ಶನ ಕೊಟ್ಟ ಅತಿ ಗಣ್ಯ ವ್ಯಕ್ತಿ ಅದೇ 'ಚಂದನ' ವಾಹಿನಿಯ ಮುಖ್ಯಸ್ಥ ಡಾ. ಮಹೇಶ ಜೋಶಿ!
***
* "ವೀಕ್ಷಕರೇ, ಈಗ ಒಂದು ವಾಣಿಜ್ಯ ಬ್ರೇಕ್."
* "ನಮ್ಮ ಕ್ಯಾಮರಾದವರು ಅಡ್ವಾಂಟೇಜಿಯಸ್ ಪೊಜಿಷನ್ನಲ್ಲಿ ಕ್ಯಾಮರಾ ಇಟ್ಟು ನಮಗೆ ಈ ದೃಶ್ಯ ತೋರಿಸ್ತಾ ಇದ್ದಾರೆ."
* "ವಿ ಆರ್ ಗೋಯಿಂಗ್ ಟು ಟೇಕ್ ಎ ಷಾರ್ಟ್ ಬ್ರೇಕ್ ನೌ."
* "ಲೆಟ್ ಅಸ್ ಟೇಕ್ ಎ ಕಮರ್ಷಿಯಲ್ ಬ್ರೇಕ್."
* "ಹೋಸ್ಟ್ ಟ್ಯಾಬುಲೋ ಲಾಸ್ಟ್ ಬರುತ್ತೆ."
* "ನೀವೆಲ್ಲ ನೇರಪ್ರಸಾರ ಎಂಜಾಯ್ ಮಾಡಿದೀರಿ ಅನ್ಸುತ್ತೆ. ನಮಸ್ಕಾರ."
- ಹೀಗೆ ಕನ್ನಡನಾಡಿನ ಹಬ್ಬದಲ್ಲಿ ಆಂಗ್ಲ ಆಣಿಮುತ್ತುಗಳನ್ನು ಉದುರಿಸುತ್ತಿದ್ದುದು ಶಂಕರ್ ಪ್ರಕಾಶ್, ನಾಗಣ್ಣ, ಜಗದೀಶ್ ಈ ನಿರೂಪಕ ತ್ರಿಮೂರ್ತಿ ತಂಡ. ಕನ್ನಡಕ್ಕಾಗಿ ಕೈಯೆತ್ತುವುದು ದಂಡ!
***
* "ಆನೆ ಬಲರಾಮ ತನ್ನ ಸಹಪಾಠಿ(!)ಗಳೊಂದಿಗೆ ಬರ್ತಾ ಇದ್ದಾನೆ."
* "ದಸರಾ ವೈಭವ ಆಹೋ(!)ರಾತ್ರಿ ಇರುವಂಥದು."
* "ದಸರಾ ಸಂದರ್ಭದ ಸಂದರ್ಭದಲ್ಲಿ..."
* "ಈಗ ಒಂದು ಷಿಪ್ ನೋಡ್ತಾ ಇದೀವಿ. ದೋಣಿಯನ್ನ ನೋಡ್ತಾ ಇದೀವಿ."
* "ಅಣ್ಣಿಗೇರಿಯ ದೇವಸ್ಥಾನದಲ್ಲಿ ಪಂಪಕವಿಯ ಪ್ರೌಢಿಮೆಯನ್ನು(?)(!) ನೋಡಿದಿವಿ."
- ಇವು ವಿರೂಪಕ, ಕ್ಷಮಿಸಿ, ನಿರೂಪಕ ಶಂಕರ್ ಪ್ರಕಾಶರ ಪ್ರಕಾಶಮಾನ ನುಡಿಗಳು. ಅರ್ಥಶುದ್ಧಿ, ಭಾಷಾಶುದ್ಧಿ, ವ್ಯಾಕರಣ? ಲೇಕರ್ ಕ್ಯಾ ಕರ್ನಾ?
***
* "ಜಿಲ್ಲಾ ಪಂಚಾಯತ್ ಉಡುಪಿಯನ್ನು ನೋಡುತ್ತಿದ್ದೇವೆ. ಜಿಲ್ಲಾ ಪಂಚಾಯತ್ ಕೊಪ್ಪಳವನ್ನು ನೋಡುತ್ತಿದ್ದೇವೆ..."
- ಇದು ಶಂಕರ ಉವಾಚ. ಆದರೆ ನಾವು ಅಲ್ಲಿ ನೋಡುತ್ತಿದ್ದುದು ಸ್ತಬ್ಧಚಿತ್ರರೂಪಿ ದೇವಸ್ಥಾನ, ಕೋಟೆ...! ಶಂಭೋ ಶಂಕರ!
***
* 'ಚಂದನ' ನಿರೂಪಕನ ಅಳತೆಗೋಲಿನ ಪ್ರಕಾರ ಜಂಬೂ ಸವಾರಿ ಮೆರವಣಿಗೆಯ ಉದ್ದ ನಾಲ್ಕು ಕಿಲೋಮೀಟರ್.
- 'ಟಿವಿ 9' ನಿರೂಪಕನ ಅಳತೆಗೋಲಿನ ಪ್ರಕಾರ ಮೆರವಣಿಗೆಯ ಉದ್ದ ಎರಡು ಕಿಲೋಮೀಟರ್!
***
* ಶಂಕರ್ ಪ್ರಕಾಶ್ ಅವರು ವೀಕ್ಷಕ ವಿವರಣೆಯುದ್ದಕ್ಕೂ "ಬಹುಶಃ, ಬಹುಶಃ" ಎನ್ನುತ್ತಿದ್ದರು.
- ಬಹುಶಃ ಅವರಿಗೆ ತಮ್ಮ ಮಾತಿನಮೇಲೇ ನಂಬಿಕೆಯಿರಲಿಲ್ಲ! ಇಂತಹವರನ್ನು ಹೊಂದಿರುವ ಭಾರತ ನಿಜಕ್ಕೂ ಪ್ರಕಾಶಿಸುತ್ತಿದೆ.
***
* ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈದು ವೇದಿಕೆಯಿಂದ ಕೆಳಗಿಳಿದು ಹೋದ ಮುಖ್ಯಮಂತ್ರಿಗಳು ಮಾಧ್ಯಮದವರ ಕೋರಿಕೆಯಂತೆ ಅವರ ಕ್ಯಾಮೆರಾಗಳಿಗಾಗಿ ಮತ್ತೊಮ್ಮೆ ವೇದಿಕೆ ಹತ್ತಿ ಮತ್ತೊಮ್ಮೆ ಪುಷ್ಪಾರ್ಚನೆ ಮಾಡಿದರು!
- ಮಾಧ್ಯಮವು ನಿಜಕ್ಕೂ ಶಕ್ತಿಶಾಲಿ.
***
* 'ನವಭಾರತ ರಥ' ಎಂಬ ಹೆಸರು ಹೊತ್ತ, ಲೋಕಸಭೆ ಕಟ್ಟಡದ ಸ್ತಬ್ಧಚಿತ್ರವನ್ನು ಯಂತ್ರದೋಷದಿಂದಾಗಿ ಒಂದಷ್ಟು ದೂರದವರೆಗೆ ಜನರು ತಳ್ಳಬೇಕಾಯಿತು!
- ಎಷ್ಟು ಅರ್ಥಪೂರ್ಣ!
- ಪ್ರಿಯ ವೀಕ್ಷಕರೇ, ಅಲ್ಲ, ಪ್ರಿಯ ಓದುಗರೇ, ಇದು ಈ ಸಲದ ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳ ಎಡೆ(ಯಲ್ಲಿ) ನಾನು ಗಮನಿಸಿದ ಚಿತ್ರ ವಿಚಿತ್ರ ನಡೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications