ದಸರಾ: ಲೋಹದ ಹಕ್ಕಿಗಳ ಅದ್ಭುತ ಹಾರಾಟ
ಮೈಸೂರು, ಸೆ. 22: ಬಾನಂಗಳದಲ್ಲಿ ಹಾರಾಡುವ ಲೋಹದ ಹಕ್ಕಿಗಳಿಂದ ರೋಮಾಂಚನಗೊಳಿಸುವ ಮೈನವಿರೇಳಿಸುವ ವೈವಿಧ್ಯಮಯ ವೈಮಾನಿಕ ಪ್ರದರ್ಶನವನ್ನು ಸೆಪ್ಟಂಬರ್ 22 ಮತ್ತು 24ರಂದು ಬನ್ನಿಮಂಟಪದಲ್ಲಿ ಆಯೋಜಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವೈಮಾನಿಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೊದಲ ದಿನದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯ ಸೈನಿಕರು ತಮ್ಮ ಕುಶಲ ಕಲೆಯನ್ನು ಪ್ರದರ್ಶಿಸಿದರು. ಸೂಪರ್ ಜೆಟ್ ಸೂರ್ಯ ಕಿರಣ್ ಹಾಗೂ ಲಘು ಏರ್ ಕ್ರಾಫ್ಟ್ ಸಾರಾಂಗ್ ಅತಿವೇಗದ ಹಾರಾಟ ಪ್ರದರ್ಶನ ನೀಡಿದವು. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಈ ಬಾರಿಯ ವೈಮಾನಿಕ ಪ್ರದರ್ಶನ ಆಕರ್ಷಿಸುತ್ತಿದೆ ಎಂದು ದಸರಾ ವೈಮಾನಿಕ ಪ್ರದರ್ಶನ ಉಪ ಸಮಿತಿಯ ಸಲಹೆಗಾರ, ಮುಖ್ಯಸ್ಥ ಪಾಲಯ ಹೇಳಿದರು.
ಕಾರ್ಯಕ್ರಮದ ಆಕರ್ಷಣೆ ಹೀಗಿದೆ:
*3 ಯುದ್ದ ವಿಮಾನಗಳಿಂದ ಫ್ಲೈ ಫಾಸ್ಟ್
*3 ಸಾರಿಗೆ ವಿಮಾನಗಳಿಂದ ಫ್ಲೈ ಫಾಸ್ಟ್
*1 ಚೇತಕ್ ವಿಮಾನದಿಂದ ಸ್ಥಿರ (ಸ್ಟ್ಯಾಟಿಕ್) ಪ್ರದರ್ಶನ
*ಹೆಲಿಕಾಪ್ಟರ್ನಿಂದ ಪುಷ್ಪ ವೃಷ್ಟಿ
*ಒಂದು ಮಿಗ್-8 ಸ್ಥಿರ (ಸ್ಟ್ಯಾಟಿಕ್) ಪ್ರದರ್ಶನ
*ಸ್ಕೈ ಡೈವಿಂಗ್, ಸ್ಲಿತರಿಂಗ್ ಹಾಗೂ ಸ್ಟೀ ಪ್ರದರ್ಶನ
*ಸಾರಂಗ್ ತಂಡದಿಂದ ಬನ್ನಿಮಂಟಪದ ಮೈದಾನದ ಮೇಲೆ ವೈಮಾನಿಕ ಪ್ರದರ್ಶನ
*ಏರ್ ವಾರಿಯರ್ ಡ್ರಿಲ್ ತಂಡದಿಂದ ಬನ್ನಿಮಂಟಪ ಮೈದಾನದಲ್ಲಿ ಪ್ರದರ್ಶನ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಎಂ ಎಸ್ ಲೋಕೇಶ್,
ಮುಖ್ಯ ಆಡಳಿತಾಧಿಕಾರಿ, ಕಾವಾ, ಮೈಸೂರು.
ದೂರವಾಣಿ: +91 821243831
ಫ್ಯಾಕ್ಸ್: + 918212330001
ಮೊಬೈಲ್: +919342182006
(ದಟ್ಸ್ ಕನ್ನಡ ವಾರ್ತೆ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications