ಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ
ಅನಾಥ ಮಕ್ಕಳಿಗೆ, ಬಡವರ ಮಗುವಿಗೆ, ಜಾರಿಬಿದ್ದು ಚರಂಡಿಯಲ್ಲಿ ಕೊಚ್ಚಿಹೋಗುವ ದುರ್ದೈವಿ ಮಗುವಿಗೆ ಈ ಮೇಲೆ ವರ್ಣಿಸಿದ ಪದಗಳು ಅರ್ಥವಾಗುವುದಿಲ್ಲ. ಅದೇನಿದ್ದರೂ ಬರೆಯುವ ನಮಗೆ, ಓದುವ ನಿಮಗೆ ಮಾತ್ರ. ಬಡವರ ಕೂಸು ಕಿಡ್ಸ್ ಕೆಂಪಿಗೆ, ಬ್ಲೂಮಿಂಗ್ ಟನ್ ಮಾಲಿಗೆ ಹೋಗುವುದಿಲ್ಲ. ಚಿಪ್ಪಿನ ಚೂರು, ಮರಳು ರಾಶಿಯಲ್ಲಿ ಆಡುವ ಮಕ್ಕಳಿಗೆ ಬಾರ್ಬಿ ಇರಲಿ, ಒಂದು ಪ್ಲಾಸ್ಟಿಕ್ ಗಿಲಕಿ ಕೂಡ ಇಲ್ಲಿ ದಕ್ಕುವುದಿಲ್ಲ. ಎಳೆಯ ಕಣ್ಣುಗಳು, ಮುಗ್ಧ ಮನಸ್ಸುಗಳು ಬಣ್ಣದೊಂದಿಗೆ, ವಿವಿಧ ಆಕೃತಿಯ ಆಟಿಕೆಗಳೊಂದಿಗೆ ಆಡುವ ಸಂತಸವನ್ನು ಪಡೆದಿಲ್ಲ.
ಅಂಥ ಮಕ್ಕಳಿಗೆ ಒಂದು ಆಟಿಕೆ ಕೊಡುವ ಮನಸ್ಸು ನಿಮ್ಮದಾಗಲಿ. ಮನೆಯ ಯಾವುದೋ ಒಂದು ಮೂಲೆಯಲ್ಲಿ ಅಳುತ್ತ ಬಿದ್ದಿರುವ ಒಂದು ಬೊಂಬೆ ಬಡ ಕೂಲಿ ಕಾರ್ಮಿಕನ ಮನೆಯ ಮಗುವಿನ ಕೈಯಲ್ಲಿ ಆಡುತ್ತ ನಗಲಿ. ಸೋ, ರೇಡಿಯೋ ಮಿರ್ಚಿ ಹಮ್ಮಿಕೊಂಡಿರುವ ಬೊಂಬೆ ಬೆಟ್ಟ ಕಟ್ಟಿ ಕಾರ್ಯಕ್ರಮಕ್ಕೆ ನಿಮಗೆ ಮತ್ತೊಮ್ಮೆ ಸ್ವಾಗತ. ಎಫ್ ಎಂ ರೇಡಿಯೋ ಹಮ್ಮಿಕೊಂಡಿರುವ ಈ ಯೋಜನೆಯ ಪ್ರಕಾರ ಬೆಂಗಳೂರಿನ ನಾಗರಿಕರು ತಮ್ಮದೊಂದು ಬೊಂಬೆ ಅಥವಾ ಆಟದ ಸಾಮಾನನ್ನು ತಂದು ಗರುಡಾ ಮಾಲ್ ನಲ್ಲಿ ಇಟ್ಟಿರುವ ಬೊಂಬೆ ತೊಟ್ಟಿಗೆ ಹಾಕಬೇಕು. ಪ್ರಜೆಗಳು ದಾನಮಾಡಿದ ಇಂಥ ಬೊಂಬೆಗಳ ಅಭೂತಪೂರ್ವ ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆದಿಡಲಾಗುವುದು. ಬೊಂಬೆ ಯಜ್ಞಕ್ಕೆಂದೇ 30 ಅಡಿ ಉದ್ದಳತೆಯ ಶೆಲ್ಫ್ ನಿರ್ಮಿಸಲಾಗಿದ್ದು ನಿಮ್ಮ ಬೊಂಬೆಗೆ ಅಲ್ಲಿ ಜಾಗ ಸಿಗುವುದು.
ಆನಂತರ, ಈ ಎಲ್ಲ ಬೊಂಬೆಗಳನ್ನು ಬೆಂಗಳೂರಿನ ನಾನಾ ಭಾಗಗಳಲ್ಲಿರುವ ನಿರ್ಭಾಗ್ಯ ಮಕ್ಕಳಿಗೆ ಹಂಚಲಾಗುತ್ತದೆ. ನಾಳೆ, ಸೆಪ್ಟೆಂಬರ್ 19ರ ಶನಿವಾರ ರೆಡಿಯೋ ಮಿರ್ಚಿಯ ಬೊಂಬೆ ಯಜ್ಞವನ್ನು ಸುಧಾ ಮೂರ್ತಿ ಉದ್ಘಾಟಿಸುತ್ತಿದ್ದಾರೆ. ಸ್ಥಳ, ಬೆಂಗಳೂರಿನ ಗರುಡಾ ಮಾಲ್ ಬೆಳಗ್ಗೆ 11 ಗಂಟೆ. ಹೆಚ್ಚಿನ ವಿವವರಗಳಿಗೆ ಆಸಕ್ತಿ ಇರುವವರು ಧಿವಿಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ 99453 89476.
(ದಟ್ಸ್ ಕನ್ನಡ ವಾರ್ತೆ)