ಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ

ಅನಾಥ ಮಕ್ಕಳಿಗೆ, ಬಡವರ ಮಗುವಿಗೆ, ಜಾರಿಬಿದ್ದು ಚರಂಡಿಯಲ್ಲಿ ಕೊಚ್ಚಿಹೋಗುವ ದುರ್ದೈವಿ ಮಗುವಿಗೆ ಈ ಮೇಲೆ ವರ್ಣಿಸಿದ ಪದಗಳು ಅರ್ಥವಾಗುವುದಿಲ್ಲ. ಅದೇನಿದ್ದರೂ ಬರೆಯುವ ನಮಗೆ, ಓದುವ ನಿಮಗೆ ಮಾತ್ರ. ಬಡವರ ಕೂಸು ಕಿಡ್ಸ್ ಕೆಂಪಿಗೆ, ಬ್ಲೂಮಿಂಗ್ ಟನ್ ಮಾಲಿಗೆ ಹೋಗುವುದಿಲ್ಲ. ಚಿಪ್ಪಿನ ಚೂರು, ಮರಳು ರಾಶಿಯಲ್ಲಿ ಆಡುವ ಮಕ್ಕಳಿಗೆ ಬಾರ್ಬಿ ಇರಲಿ, ಒಂದು ಪ್ಲಾಸ್ಟಿಕ್ ಗಿಲಕಿ ಕೂಡ ಇಲ್ಲಿ ದಕ್ಕುವುದಿಲ್ಲ. ಎಳೆಯ ಕಣ್ಣುಗಳು, ಮುಗ್ಧ ಮನಸ್ಸುಗಳು ಬಣ್ಣದೊಂದಿಗೆ, ವಿವಿಧ ಆಕೃತಿಯ ಆಟಿಕೆಗಳೊಂದಿಗೆ ಆಡುವ ಸಂತಸವನ್ನು ಪಡೆದಿಲ್ಲ.
ಅಂಥ ಮಕ್ಕಳಿಗೆ ಒಂದು ಆಟಿಕೆ ಕೊಡುವ ಮನಸ್ಸು ನಿಮ್ಮದಾಗಲಿ. ಮನೆಯ ಯಾವುದೋ ಒಂದು ಮೂಲೆಯಲ್ಲಿ ಅಳುತ್ತ ಬಿದ್ದಿರುವ ಒಂದು ಬೊಂಬೆ ಬಡ ಕೂಲಿ ಕಾರ್ಮಿಕನ ಮನೆಯ ಮಗುವಿನ ಕೈಯಲ್ಲಿ ಆಡುತ್ತ ನಗಲಿ. ಸೋ, ರೇಡಿಯೋ ಮಿರ್ಚಿ ಹಮ್ಮಿಕೊಂಡಿರುವ ಬೊಂಬೆ ಬೆಟ್ಟ ಕಟ್ಟಿ ಕಾರ್ಯಕ್ರಮಕ್ಕೆ ನಿಮಗೆ ಮತ್ತೊಮ್ಮೆ ಸ್ವಾಗತ. ಎಫ್ ಎಂ ರೇಡಿಯೋ ಹಮ್ಮಿಕೊಂಡಿರುವ ಈ ಯೋಜನೆಯ ಪ್ರಕಾರ ಬೆಂಗಳೂರಿನ ನಾಗರಿಕರು ತಮ್ಮದೊಂದು ಬೊಂಬೆ ಅಥವಾ ಆಟದ ಸಾಮಾನನ್ನು ತಂದು ಗರುಡಾ ಮಾಲ್ ನಲ್ಲಿ ಇಟ್ಟಿರುವ ಬೊಂಬೆ ತೊಟ್ಟಿಗೆ ಹಾಕಬೇಕು. ಪ್ರಜೆಗಳು ದಾನಮಾಡಿದ ಇಂಥ ಬೊಂಬೆಗಳ ಅಭೂತಪೂರ್ವ ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆದಿಡಲಾಗುವುದು. ಬೊಂಬೆ ಯಜ್ಞಕ್ಕೆಂದೇ 30 ಅಡಿ ಉದ್ದಳತೆಯ ಶೆಲ್ಫ್ ನಿರ್ಮಿಸಲಾಗಿದ್ದು ನಿಮ್ಮ ಬೊಂಬೆಗೆ ಅಲ್ಲಿ ಜಾಗ ಸಿಗುವುದು.
ಆನಂತರ, ಈ ಎಲ್ಲ ಬೊಂಬೆಗಳನ್ನು ಬೆಂಗಳೂರಿನ ನಾನಾ ಭಾಗಗಳಲ್ಲಿರುವ ನಿರ್ಭಾಗ್ಯ ಮಕ್ಕಳಿಗೆ ಹಂಚಲಾಗುತ್ತದೆ. ನಾಳೆ, ಸೆಪ್ಟೆಂಬರ್ 19ರ ಶನಿವಾರ ರೆಡಿಯೋ ಮಿರ್ಚಿಯ ಬೊಂಬೆ ಯಜ್ಞವನ್ನು ಸುಧಾ ಮೂರ್ತಿ ಉದ್ಘಾಟಿಸುತ್ತಿದ್ದಾರೆ. ಸ್ಥಳ, ಬೆಂಗಳೂರಿನ ಗರುಡಾ ಮಾಲ್ ಬೆಳಗ್ಗೆ 11 ಗಂಟೆ. ಹೆಚ್ಚಿನ ವಿವವರಗಳಿಗೆ ಆಸಕ್ತಿ ಇರುವವರು ಧಿವಿಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ 99453 89476.
(ದಟ್ಸ್ ಕನ್ನಡ ವಾರ್ತೆ)
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications