ಕ್ರಿಸ್ಮಸ್ ಹಬ್ಬದ ಸಡಗರ ಹೆಚ್ಚಿಸಲು ಆಂಡ್ರಾಯ್ಡ್ ಆಪ್
ಯಸ್, ಇಟ್ಸ್ ಟೈಮ್ ಫಾರ್ ಕ್ರಿಸ್ಮಸ್. ಕ್ರಿಸ್ಮಸ್ ಹಬ್ಬ ಅಂದ್ರೆ ಕ್ರಿಶ್ಚಿಯನ್ನರಿಗೆ ಮಾತ್ರ ಹಬ್ಬವಲ್ಲ. ಇತರರ ಕಣ್ಣಿಗೂ ಹಬ್ಬ. ಕ್ರಿಶ್ಚಿಯನ್ನರಿಗೆ ವರ್ಷಕ್ಕೊಂದೇ ದೊಡ್ಡ ಹಬ್ಬವಾದ್ದರಿಂದ ಚರ್ಚುಗಳಲ್ಲಿ ಸಡಗರ, ಅಂಗಳದಲ್ಲಿ ಅಲಂಕರಿಸಿ ನಿಲ್ಲಿಸಿದ ಕ್ರಿಸ್ಮಸ್ ಟ್ರೀಯಲ್ಲಿ ಏನೋ ಕಲರವ! ಫ್ರೂಟ್ ಕೇಕಿನ ಘಮಲು, ವೈನಿನ ಅಮಲು!
ಕ್ರಿಸ್ಮಸ್ ಸಡಗರವನ್ನು ಇನ್ನಷ್ಟು ಹೆಚ್ಚಿಸಲೆಂದು ಗೂಗಲ್ ಪ್ಲೇಸ್ಟೋರ್ ನಲ್ಲಿ ಹೊಸದೊಂದು ಅಪ್ಲಿಕೇಷನ್ (ಆಪ್) ಕಾದು ಕುಳಿತಿದೆ. ಎಲ್ಲರ ಕೈಯಲ್ಲಿ ಓಡಾಡುತ್ತಿರುವ ಸ್ಮಾರ್ಟ್ ಹುಡುಗ, ಹುಡುಗಿಯರ ಸ್ಮಾರ್ಟ್ ಫೋನುಗಳಲ್ಲಿ ಈ ಆಪ್ ಈಗಾಗಲೆ ಸಂಚಲನ ಮೂಡಿಸಿದೆ.
ಮಾಡಬೇಕಾದುದಿಷ್ಟೆ : ಗೂಗಲ್ ಪ್ಲೇ ಸ್ಟೋರ್ ನ ಆಪ್ ಸರ್ಚ್ ನಲ್ಲಿ 'It's Time for Christmas' ಎಂದು ಟೈಪಿಸಿ ಆಂಡ್ರಾಯ್ಡ್ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ.
ಯುವಜನತೆ ಮಾತ್ರವಲ್ಲ ಎಲ್ಲ ವಯಸ್ಸಿನವರಿಗೆ ಏನೇನು ಬೇಕೋ ಅದೆಲ್ಲವೂ ಇಲ್ಲಿದೆ. ಅನಿಮೇಟೆಡ್ ವಾಲ್ ಪೇಪರ್, ಶುಭಾಶಯ ಪತ್ರಗಳು, ಸೋಷಿಯಲ್ ತಾಣಗಳಿಗಾಗಿ ವಿಶೇಷ ಕವರ್ ಫೋಟೋಗಳು, ತಿನಿಸನ್ನು ಇಷ್ಟಪಡುವವರಿಗೆ ತರಹೇವಾರಿ ಖಾದ್ಯಗಳ ಕುರಿತು ಮಾಹಿತಿ, ಮಕ್ಕಳಿಗಾಗಿ ರೋಚಕ ಕಥೆಗಳು... ಜಿಂಗ್ ಜಿಂಗಲ್ ಬೆಲ್ ಜಿಂಗಲ್ ಆಲ್ ದಿ ವೇ...
ಕಸ್ಟಮೈಜ್ ಮಾಡಿರುವ ವಾಲ್ ಪೇಪರುಗಳನ್ನು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಬಹುದು. ಫೇಸ್ ಬುಕ್, ಗೂಗಲ್ ಪ್ಲಸ್, ಟ್ವಿಟ್ಟರ್ ಪುಟಗಳನ್ನು ಮತ್ತಷ್ಟು ಅಂದಗೊಳಿಸಲೆಂದು ವಿಶೇಷವಾದ ಕವರ್ ಫೋಟೋಗಳನ್ನು ಕೂಡ ಇಲ್ಲಿ ನೀಡಲಾಗಿದೆ. [ಕ್ರಿಸ್ಮಸ್ ಕುರಿತ ಸೋಜಿಗ ಸ್ವಾರಸ್ಯಗಳು]
ಕ್ರಿಸ್ಮಸ್ ಯಾಕೆ ಆಚರಿಸ್ತಾರೆ, ಸಾಂತಾ ಕ್ಲಾಸ್ ಯಾಕೆ ಬರುತ್ತಾನೆ, ಏನೇನು ತರುತ್ತಾನೆ... ಕಥೆಗಳನ್ನು ಮಕ್ಕಳಿಗೆ ಹೇಳಬೇಕಾ? ಪುಟ್ಟಪುಟ್ಟ ಕಥೆಗಳ ಹಂದರ ಇಲ್ಲಿದೆ. ಕ್ರಿಸ್ಮಸ್ ಟ್ರೀಯನ್ನು ಹೇಗೆ ಅಲಂಕರಿಸಬೇಕು ಎಂಬ ಚಿಂತೆಯೆ, ಅದಕ್ಕೂ ಇಲ್ಲಿ ಮಾರ್ಗದರ್ಶನ ನೀಡಲಾಗಿದೆ.
ಇನ್ನು ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಏನೇನು ತಿಂಡಿತಿನಿಸುಗಳನ್ನು ಮಾಡಬೇಕೆಂಬ ರೆಸಿಪಿ ವಿಭಾಗವೇ ಇಲ್ಲಿ ತೆರೆದುಕೊಂಡಿದೆ. ಜೊತೆಗೆ, ಬಂಧುಗಳಿಗೆ, ಸ್ನೇಹಿತರಿಗೆ ಎಂಥ ಉಡುಗೊರೆ ಕೊಡಬೇಕೆಂಬ ಸಂದಿಗ್ಧತೆ ಇದ್ದರೆ, ಅದಕ್ಕೂ ಇಲ್ಲಿ ಪರಿಹಾರವಿದೆ. [ರೆಡಿ ಮಾಡಿ ಎಗ್ ನಾಗ್ ರೆಸಿಪಿ]
ಇನ್ನು, ನಿಮ್ಮ ಮಗು ಕ್ರಿಸ್ಮಸ್ ಸಮಯದಲ್ಲಿ ಶುಭಾಶಯ ತಿಳಿಸಬೇಕೆಂದು ಬಯಸಿದ್ದರೆ, ಅವನ್ನು ಕಳಿಹಿಸಬಹುದು. ನಮ್ಮ ಸಂಪಾದಕರು ಅವೆಲ್ಲವನ್ನು ಕ್ರೋಢೀಕರಿಸಿ ಅತ್ಯುತ್ತಮವಾದ ಶುಭಾಶಯ, ಸಂದೇಶವನ್ನು ಬೋಲ್ಡ್ ಸ್ಕೈ ತಾಣದಲ್ಲಿ ಪ್ರಕಟಿಸುತ್ತಾರೆ. ಈ ಆಪ್ ನಿಮ್ಮ ಕ್ರಿಸ್ಮಸ್ ಸಡಗರವನ್ನು ಇನ್ನಷ್ಟು ಹೆಚ್ಚಿಸಲಿ, ಮೆರ್ರಿ ಕ್ರಿಸ್ಮಸ್.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್














Click it and Unblock the Notifications