Get Updates
Get notified of breaking news, exclusive insights, and must-see stories!

ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ

Kannada and Christians
ಕನ್ನಡ ಕ್ರೈಸ್ತರು ಯೇಸುಕ್ರಿಸ್ತನ ಜನ್ಮದಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಕನ್ನಡ ಭಾಷಾ ಸಮಸ್ಯೆಯಿಂದ ಸ್ಥಳೀಯ ಕ್ರೈಸ್ತರಿಗೆ ಹಿಂದಿನಿಂದಲೂ ಆಗತ್ತಿರುವ ಅನ್ಯಾಯದ ಬಗ್ಗೆ ಒಂದು ನೋಟ :

ಯೇಸುಕ್ರಿಸ್ತನ ಶುಭಸಂದೇಶವನ್ನು ಜಗದೆಲ್ಲೆಡೆ ಸಾರುವ ಮಹದಾಸೆಯಿಂದ ಭಾರತಕ್ಕೆ ಕಾಲಿರಿಸಿದ ಕ್ರೈಸ್ತ ಧರ್ಮಪ್ರಚಾರಕರು ಕರ್ನಾಟಕದಲ್ಲೂ ಹದಿನೈದನೇ ಶತಮಾನ ಸುಮಾರಿಗೆ ಕಾಲಿರಿಸಿದ್ದರು. ಆದರೆ, ಇಲ್ಲಿನ ಜನರನ್ನು ಕ್ರೈಸ್ತ ಮತಕ್ಕೆ ಸೇರಿಸಿಕೊಳ್ಳುವ ಆಸೆ ಈಡೇರಿದರೂ, ಸ್ಥಳೀಯತೆಗೆ ಆದ್ಯತೆ ತಕ್ಷಣಕ್ಕೆ ಸಿಕ್ಕಿರಲಿಲ್ಲ. ಈಗ ಎಲ್ಲಡೆ ಹೇಳುವ 'ಪಿತನ, ಸುತನ, ಪವಿತ್ರಾತ್ಮರ ಹೃದಯದಲಿ ಅಮೆನ್' ಎಂಬ ಸರಳವಾಣಿ ಕೂಡಾ ಆಗ ಇಂಗ್ಲೀಷ್ ಹಾಗೂ ಇತರೆ ವಿದೇಶಿ ಭಾಷೆಯಲ್ಲಿರುತ್ತಿತ್ತು.

ಗೋವೆ ಮುಖ್ಯ ಕಚೇರಿ ಮಾಡಿಕೊಂಡಿದ್ದ ಇಟಲಿ ಮೂಲದ ಧರ್ಮಪ್ರಚಾರಕರು, ನಂತರ ಕನ್ನಡ ನಾಡಿನ ಕರಾವಳಿಯ ಮಂಗಳೂರು, ಹೊನ್ನಾವರ ಪ್ರವೇಶಿಸಿದರು. ಕ್ರೈಸ್ತ ಮತ ಮೈಸೂರು ರಾಜ್ಯ ಸೇರಿದ ಮೇಲೆ ಶ್ರೀರಂಗಪಟ್ಟಣ, ದೇವನಹಳ್ಳಿಯಲ್ಲಿ ಹೆಚ್ಚು ಪ್ರಚಾರ ಪಡೆಯಿತು. ಇಟಲಿ, ಪೋರ್ಚುಗೀಸ್, ಫ್ರೆಂಚ್ ಪಾದ್ರಿಗಳ ನಂತರ ಇಂಗ್ಲೀಷ್ ಪಾದ್ರಿಗಳ ಪ್ರವಚನ ಕೇಳುತ್ತಿದ್ದ ಕನ್ನಡ ಕ್ರೈಸ್ತರಿಗೆ ಭಾಷಾ ಸಮಸ್ಯೆ ಎದುರಾಗಿತ್ತು.

ತಮಿಳರ ಪ್ರಾಬಲ್ಯ: ಬೆಂಗಳೂರಿನಲ್ಲಿ ಅದಾಗಲೇ ಇಂಗ್ಲಿಷರ ಸೇವಕರಾಗಿ ಮನೆಮಾಡಿದ್ದ ತಮಿಳರು ಚರ್ಚ್ ಗಳಲ್ಲಿ ತಮ್ಮ ಆಧಿಪತ್ಯ ನಡೆಸಿದ್ದರು. ಈ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ( ತಿಗಳ) ಜನಾಂಗಕ್ಕೆ ಸೇರಿದ ಕ್ರೈಸ್ತರು ಕನ್ನಡದಲ್ಲಿ ಧರ್ಮದೀಕ್ಷೆ ಪಡೆದು ಕನ್ನಡದಲ್ಲೇ ವ್ಯವಹರಿಸುವವರಾಗಿದ್ದರೂ ಸಹ ಅವರನ್ನು ತಮಿಳರೆಂದೇ ತಪ್ಪಾಗಿ ಭಾವಿಸಲಾಗಿತ್ತು.

ಈ ಎಲ್ಲ ಕಾರಣಗಳಿಂದಾಗಿ ಮೈಸೂರು ಸೀಮೆಯಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಮೂಲನಿವಾಸಿಗಳಾಗಿದ್ದ ಕನ್ನಡಿಗ ಕ್ರೈಸ್ತರಿಗೆ ಹೆಚ್ಚಿನ ಆತ್ಮಿಕ ಪೋಷಣೆ ಸಿಗಲಿಲ್ಲ. ಆದರೆ ಗೃಹಸ್ಥ ಉಪದೇಶಿಗಳ ನಿರಂತರ ಕಾರ್ಯತತ್ಪರತೆಯ ಕಾರಣದಿಂದ ಹಳ್ಳಿಗಳಲ್ಲಿನ ಕ್ರೈಸ್ತರಲ್ಲಿ ಕನ್ನಡತನ ಉಳಿದಿತ್ತೆಂಬುದೇ ಸಮಾಧಾನದ ಅಂಶ.

ಶರ್ಬಾನೋ ಎಂಬ ಫಾದರ್ ಮೈಸೂರು ಮಿಷನ್ನಿನ ಬಿಷಪರಾಗಿ ಬಂದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ನಂತರ ನೇಮಕಗೊಂಡ ತೋಮಾಸ್ ಪೋತ್ತಕಮರಿ ಎಂಬ ಸ್ಥಳೀಯ ಬಿಷಪರು ಮಂಗಳೂರು ಕ್ರೈಸ್ತಪೀಠದಿಂದ ಹಲವಾರು ಫಾದರ್ ಗಳನ್ನು ಎರವಲಾಗಿ ಪಡೆದುಕೊಂಡು ಕನ್ನಡತನವನ್ನು ಮೆರೆದರು.

ಮತ್ತೆ ಆಗಲಿ ಕ್ರಾಂತಿ: ಪಾದ್ರಿ ಲೂರ್ದುಸ್ವಾಮಿ ಅವರ ತಮಿಳು ಭಾಷಾಪ್ರೇಮವನ್ನು ದಿಕ್ಕರಿಸಿದ ಕನ್ನಡ ಕ್ರೈಸ್ತರು ಹೋರಾಟ ನಡೆಸಿದ್ದಂತೆ ಈಗಲೂ ಹೋರಾಟದ ಅಗತ್ಯವಿದೆ. ಕರ್ನಾಟಕದ ಚರ್ಚುಗಳಲ್ಲಿ ಕನ್ನಡಕ್ಕೆ ಮೊದಲ ಮರ್ಯಾದೆ ಸಿಕ್ಕಬೇಕು, ಚರ್ಚುಗಳ ಸವಲತ್ತುಗಳು ಸ್ಥಳೀಯ ಕನ್ನಡ ಕ್ರೈಸ್ತರಿಗೂ ದಕ್ಕಬೇಕು ಎಂಬ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು 1977 ರಲ್ಲಿ "ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ" ಎಂಬ ನಾಮಫಲಕದಡಿ ಹೊಸ ಕ್ರಾಂತಿ ನಡೆಸಲಾಗಿತ್ತು.

ಕ್ರೈಸ್ತ ಕನ್ನಡಿಗರ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸುವುದರ ಬದಲಿಗೆ ಧರ್ಮಸಭೆಯು ತಮಿಳು ಕ್ರೈಸ್ತರನ್ನು ಎತ್ತಿಕಟ್ಟಿ ವಿರೋಧ ಹುಟ್ಟಿಸುವಲ್ಲಿ ಯಶಸ್ವಿಯಾಯಿತಲ್ಲದೆ ಚಳವಳಿಗಾರರನ್ನು ಜೈಲಿಗೆ ಕಳಿಸುವ ಸಾಹಸಕ್ಕೂ ಕೈ ಹಾಕಿತು. ಅನಂತರ ಚಳವಳಿಯ ಬಿಸಿ ರೋಮ್ ಚರ್ಚ್ ಗೂ ತಟ್ಟಿತ್ತು.

ಬಿಷಪ್ ಅಲ್ಫೊನ್ಸ್ ಮಥಾಯಿಸರು ಬೆಂಗಳೂರಿನ ಭಾಷಾ ಸಮಸ್ಯೆಗೆ ಬೇರೊಂದು ಬಣ್ಣ ಕೊಟ್ಟರು. ಬೆಂಗಳೂರು ಕಾಸ್ಮೋಪಾಲಿಟನ್ ನಗರವಾದ್ದರಿಂದ ಕನ್ನಡಕ್ಕೆ ಹೆಚ್ಚು ಮನ್ನಣೆ ನೀಡಬೇಕಿಲ್ಲ ಎಂದರು. ಕ್ರೈಸ್ತ ಕನ್ನಡಿಗರ ಭಾಷಾ ಚಳವಳಿ ಅಧಿಕಾರದಾಹಕ್ಕಾಗಿ ನಡೆದಿದೆ ಎಂದು ತುತ್ತೂರಿ ಊದತೊಡಗಿದರು. ಇದು ಎಂದಿಗೂ ಒಮ್ಮತವೂ ಅಲ್ಲ, ಸಮ್ಮತವೂ ಅಲ್ಲ ಎಂದ ಕನ್ನಡ ಕ್ರೈಸ್ತರು ಕೂಗುತ್ತಲೇ ಇದ್ದಾರೆ.

--

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+