ಹಾಸ್ಯ ಪ್ರಸಂಗ : ಬೈಬಲ್ ಮಾರಾಟಗಾರರು

ಅದೊಂದು ಚರ್ಚು. ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಒಳಗಾಯಿತು. ಅನಿವಾರ್ಯವಾಗಿ ಆ ಚರ್ಚಿನಲ್ಲಿದ್ದ ಹತ್ತು ಸಾವಿರ ಬೈಬಲುಗಳನ್ನು ಮಾರಾಟ ಮಾಡಲು ಪಾದ್ರಿ ನಿರ್ಧರಿಸಿದರು. ಇದಕ್ಕೆ ಮೂರು ಸ್ವಯಂಸೇವಕರನ್ನು ನಿಯೋಜಿಸಲಾಯಿತು. ಅವರ ಹೆಸರು ಜಾಕ್, ಪೌಲ್ ಮತ್ತು ಲೂಯಿ.
ಪಾದ್ರಿಗೆ ಜಾಕ್ ಮತ್ತು ಪೌಲ್ ಮೇಲೆ ದೃಢ ನಂಬಿಕೆಯಿತ್ತು. ಇವರಿಬ್ಬರು ವೃತ್ತಿಪರ ಮಾರಾಟಗಾರರು. ಆದರೆ ಲೂಯಿ ಪಾಪದ ಹುಡುಗ. ಆತ ರೈತನ ಮಗ. ಆದರೂ ಆತನನ್ನೂ ಬೈಬಲ್ ಮಾರಾಟಕ್ಕೆ ಕಳುಹಿಸಿದರು. ಒಂದು ವಾರ ಕಳೆದ ಬಳಿಕ ಮೂವರು ಪಾದ್ರಿ ಬಳಿಗೆ ಬಂದರು.
ಜಾಕ್ 200 ಡಾಲರನ್ನು ಪಾದ್ರಿಗೆ ಕೈಗಿಟ್ಟು 20 ಬೈಬಲ್ ಮಾರಿದಾಗಿ ತಿಳಿಸಿದ. ಪಾದ್ರಿಗೆ ಖುಷಿಯಾಯಿತು. "ನೀನು ನಿಜಕ್ಕೂ ಉತ್ತಮ ಮಾರಾಟಗಾರ. ನಮ್ಮ ಚರ್ಚಿಗೆ ನಿನ್ನ ಅಗತ್ಯವಿದೆ" ಎಂದರು.
ನಂತರ ಪೌಲ್ ದುಡ್ಡಿದ್ದ ಕವರನ್ನು ಪಾದ್ರಿಗೆ ನೀಡಿದ. ನಾನು 28 ಬೈಬಲ್ ಮಾರಾಟ ಮಾಡಿದೆ. ಇದರಲ್ಲಿ 280 ಡಾಲರ್ ಹಣ ಸಂಗ್ರಹಿಸಿದೆ. ಪಾದ್ರಿಗೆ ಮತ್ತೂ ಖುಷಿಯಾಯಿತು. "ನಿಜಕ್ಕೂ ನೀನು ವೃತ್ತಿಪರ ಮಾರಾಟಗಾರ. ನಿನ್ನ ಮೇಲೆ ಭಗವಂತನ ಆಶೀರ್ವಾದ ಯಾವತ್ತೂ ಇರಲಿ" ಎಂದರು.
ಸರಿ ಇವರಿಬ್ಬರ ಮಾರಾಟ ಉತ್ತಮವಾಗಿದೆ. ಪಾಪದ ಹುಡುಗ ಒಂದೆರಡಾದರೂ ಮಾರಾಟ ಮಾಡಿರಬಹುದೇ ಎಂದು ಪಾದ್ರಿಗೆ ಕುತೂಹಲವಿತ್ತು. "ಲೂಯಿ ನೀನು ಎಷ್ಟು ಬೈಬಲ್ ಮಾರಾಟ ಮಾಡಿದ್ದೀ" ಪಾದ್ರಿ ಪ್ರಶ್ನಿಸಿದರು.
ಲೂಯಿ ಮೌನವಾಗಿ ದೊಡ್ಡ ಕವರೊಂದನ್ನು ಪಾದ್ರಿಗೆ ನೀಡಿದ. ಪಾದ್ರಿ ಕವರ್ ತೆರೆದು ನೋಡಿದಾಗ ಅಲ್ಲಿ ದುಡ್ಡಿನ ರಾಶಿಯೇ ಇತ್ತು. ಲೆಕ್ಕ ಮಾಡಿ ನೋಡಿದಾಗ 3 ಸಾವಿರಕ್ಕಿಂತ ಹೆಚ್ಚು ಡಾಲರ್ ಸಂಗ್ರಹವಾಗಿತ್ತು.
"ಲೂಯಿ ಏನಿದು. ಒಂದು ವಾರದಲ್ಲಿ ಅಷ್ಟು ಪುಸ್ತಕ ಮನೆ ಮನೆಗೆ ಮಾರಿ ಇಷ್ಟು ದುಡ್ಡು ಸಂಗ್ರಹಿಸಿದೆಯಾ?" ಎಂದು ಪಾದ್ರಿ ದೊಡ್ಡ ಸ್ವರದಲ್ಲಿ ಆಶ್ಚರ್ಯಸೂಚಕವಾಗಿ ಕೇಳಿದಾಗ ಲೂಯಿ ಮೌನವಾಗಿ ಹೌದೆಂದು ತಲೆಯಲ್ಲಾಡಿಸಿದ.
"ಇದು ಸಾಧ್ಯನೇ ಇಲ್ಲ" ಜಾಕ್ ಮತ್ತು ಪೌಲ್ ಕಿರುಚಿದರು. ನಮ್ಮಂತ ವೃತ್ತಿಪರರಿಗೆ ಇಷ್ಟು ಕಷ್ಟವಾಗಿರುವಾಗ ನಮಗಿಂತ ಹತ್ತು ಪಟ್ಟು ಹೆಚ್ಚು ಮಾರಾಟ ಮಾಡಲು ಈ ಮುಗ್ಧ ರೈತನ ಮಗನಿಗೆ ಸಾಧ್ಯನೇ ಇಲ್ಲ ಎಂದು ವಾದಿಸಿದರು. ಇವರ ಮಾತಿಗೆ ಪಾದ್ರಿ ಕೂಡ "ಹೌದು ಇಷ್ಟು ಮಾರಾಟ ಮಾಡಲು ಇವನಿಗೆ ಕಷ್ಟ" ಎಂದರು.
ಸರಿ ನೀನು ಹೇಗೆ ಮಾರಾಟ ಮಾಡಿದ್ದು? ಮನೆ ಮನೆ ಬಾಗಿಲಿಗೆ ಹೋಗಿ ಏನು ಹೇಳಿದೆ? ಎಂದು ಪಾದ್ರಿ ಕೇಳಿದರು. ಅದಕ್ಕೆ ಲೂಯಿ ಹೀಗೆಂದ.
"ನಾ.... ನಾ..... ನು ಎಲ್ಲರ ಮ...ಮ...ನೆಯ ಬಾಗಿಲು ತಟ್ಟಿ ಅವರಲ್ಲಿ ಹೇಳುತ್ತಿ..ದ್ದೆ.... ಹತ್ತು.... ಡಾಲ...ರ್ ನೀಡಿ..... ಈ ಬೈಬಲ್.... ಖರೀ...ದಿಸುವಿರಾ.... ಅದು ನಿಮಗೆ ಸಾಧ್ಯ....ವಾಗದಿದ್ದರೆ... ಈ... ಬೈಬಲ...ನ್ನು ಇಲ್ಲೇ...... ನಿ..ಮಗಾ...ಗಿ... ಇಲ್ಲೇ ..... ಓದಿ... ಹೇಳು..ತ್ತೇನೆ.. ದಯಾ...ಮಯಿ..ಯಾದ.. ತಂ..ದೆ ಏಸುಕ್ರಿಸ್ತ....
ನಾನು ಹೀಗೆ ಶುರು ಮಾಡಿದಾಗ ಅವರೆಲ್ಲ ದೂಸರಾ ಮಾತನಾಡದೇ ಬೈಬಲ್ ಖರೀದಿಸುತ್ತಿದ್ದರು ಎಂದು ರೈತನ ಮಗ ಹೇಳಿದ. ಜಾಕ್, ಪೌಲ್ ಮತ್ತು ಪಾದ್ರಿ ಬೆಕ್ಕಸಬೆರಗಾಗಿ ಲೂಯಿಯನ್ನೇ ನೋಡುತ್ತಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications