Akshaya Tritiya 2023 : ಅಕ್ಷಯ ತೃತೀಯ ಪೂಜಾ ವಿಧಿ, ಚಿನ್ನ ಖರೀದಿಸಲು ಶುಭ ಮುಹೂರ್ತದ ಕುರಿತು ಇಲ್ಲಿದೆ ಮಾಹಿತಿ
ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಯ ಜೊತೆಗೆ ಭಗವಂತ ವಿಷ್ಣು, ಭಗವಂತ ಕೃಷ್ಣ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ.
ಸಂಸ್ಕೃತದಲ್ಲಿ ಅಕ್ಷಯ ಎಂದರೆ 'ಶಾಶ್ವತ, ಎಂದಿಗೂ ಮುಗಿಯದ ಸಂತೋಷ, ಯಶಸ್ಸು ಮತ್ತು ಆನಂದ' ಮತ್ತು ತೃತೀಯಾ ಎಂದರೆ 'ಮೂರನೇ'. ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ನಂಬಿಕೆಯೂ ಇದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಪೂಜೆ ಮಾಡುತ್ತಾರೆ.

ವಿಷ್ಣುವಿಗೆ ಧೂಪದ್ರವ್ಯ, ಶ್ರೀಗಂಧ, ತುಳಸಿ ಎಲೆಗಳು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಅಕ್ಷಯ ತೃತೀಯದ ದಿನಾಂಕ, ಚಿನ್ನ ಖರೀದಿಸಲು ಶುಭ ಮುಹೂರ್ತ ಹಾಗೂ ಪೂಜಾ ವಿಧಾನದ ಬಗ್ಗೆ ತಿಳಿಯೋಣ.
ಅಕ್ಷಯ ತೃತೀಯ 2023 ದಿನಾಂಕ
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿ ಪ್ರಾರಂಭವಾಗುತ್ತದೆ: 22 ಏಪ್ರಿಲ್ 2023, ಶನಿವಾರ, ಬೆಳಿಗ್ಗೆ 07:49 ರಿಂದ
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿ ಕೊನೆಗೊಳ್ಳುತ್ತದೆ: 23 ಏಪ್ರಿಲ್ 2023, ಭಾನುವಾರ, 07:47 am
ಅಕ್ಷಯ ತೃತೀಯ 2023 ಪೂಜಾ ಮುಹೂರ್ತ
ಅಕ್ಷಯ ತೃತೀಯದಲ್ಲಿ ಲಕ್ಷ್ಮೀ-ನಾರಾಯಣ ಮತ್ತು ಕಲಶ ಪೂಜೆಯ ಸಮಯ: ಶುಭ ಸಮಯ 22 ಏಪ್ರಿಲ್ 2023 ರಂದು ಬೆಳಿಗ್ಗೆ 07:49 ರಿಂದ ಮಧ್ಯಾಹ್ನ 12:20 ರವರೆಗೆ ಇರುತ್ತದೆ.
ಒಟ್ಟು ಪೂಜೆ ಅವಧಿ: 04 ಗಂಟೆ 31 ನಿಮಿಷಗಳು

ಚಿನ್ನ ಖರೀದಿಗೆ ಶುಭ ಸಮಯ:
22 ಏಪ್ರಿಲ್ 2023, ಶನಿವಾರ, 07:49 AM
ಏಪ್ರಿಲ್ 23, 2023, ಭಾನುವಾರ, 07:47 AM
ಅಕ್ಷಯ ತೃತೀಯ ಮಹತ್ವ
ಅಕ್ಷಯ ತೃತೀಯವನ್ನು ವರ್ಷದ ಮೂರೂವರೆ ಮಂಗಳಕರ ಸಮಯವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ತ್ರೇತಾಯುಗವೂ ಇದೇ ದಿನ ಆರಂಭವಾಯಿತು ಎಂಬ ನಂಬಿಕೆಯೂ ಇದೆ. ಈ ದಿನ ಒಬ್ಬ ವ್ಯಕ್ತಿಯು ಅನೇಕ ಶುಭ ಕಾರ್ಯಗಳನ್ನು ಮಾಡಬಹುದು. ಈ ದಿನದಂದು ಗಂಗಾ ಸ್ನಾನಕ್ಕೂ ವಿಶೇಷ ಮಹತ್ವವಿದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವವನು ಎಲ್ಲಾ ನಕಾರಾತ್ಮಕತೆಗಳಿಂದ ಮುಕ್ತನಾಗುತ್ತಾನೆ. ಈ ದಿನ ಪಿತ್ರಾ ಶ್ರಾದ್ಧವನ್ನೂ ಮಾಡಬಹುದು. ಪೂರ್ವಜರ ಹೆಸರಿನಲ್ಲಿ ಬಾರ್ಲಿ, ಗೋಧಿ, ಬೇಳೆ, ಮೊಸರು-ಅನ್ನ, ಹಾಲಿನಿಂದ ಮಾಡಿದ ವಸ್ತುಗಳನ್ನು ದಾನ ಮಾಡಿ ನಂತರ ಪಂಡಿತರಿಗೆ ಭೋಗವನ್ನು ಅರ್ಪಿಸಬೇಕು. ಈ ದಿನ ಚಿನ್ನವನ್ನು ಖರೀದಿಸುವುದು ಮಂಗಳಕರ ಎಂದು ಕೆಲವರು ನಂಬುತ್ತಾರೆ.
ಅಕ್ಷಯ ತೃತೀಯ ಉಪವಾಸ ಮತ್ತು ಪೂಜಾ ವಿಧಾನ
*ಈ ದಿನ ವ್ರತವನ್ನು ಆಚರಿಸುವವರು ಬೆಳಿಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿದ ನಂತರ ಹಳದಿ ಬಟ್ಟೆಗಳನ್ನು ಧರಿಸಬೇಕು.

*ವಿಷ್ಣುವಿನ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ ಮತ್ತು ಗಂಗಾಜಲದಿಂದ ಸ್ನಾನ ಮಾಡಿಸಬೇಕು.
*ಇದರ ನಂತರ ತುಳಸಿ, ಹಳದಿ ಹೂವಿನ ಮಾಲೆ ಅಥವಾ ಹಳದಿ ಹೂಗಳನ್ನು ಅರ್ಪಿಸಿ.
*ಧೂಪ ಮತ್ತು ತುಪ್ಪದ ದೀಪವನ್ನು ಹಚ್ಚಿ ಹಳದಿ ಆಸನದ ಮೇಲೆ ಕುಳಿತುಕೊಳ್ಳಿ.
*ಇದರ ನಂತರ ವಿಷ್ಣು ಸಹಸ್ರನಾಮ, ವಿಷ್ಣು ಚಾಲೀಸಾ ಮುಂತಾದ ವಿಷ್ಣು ಸಂಬಂಧಿತ ಗ್ರಂಥಗಳನ್ನು ಪಠಿಸಿ.
*ಇದರ ನಂತರ, ಕೊನೆಯಲ್ಲಿ ವಿಷ್ಣುವಿನ ಆರತಿಯನ್ನು ಮಾಡಿ ಹಾಡಿರಿ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications