Get Updates
Get notified of breaking news, exclusive insights, and must-see stories!

ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಮಾಡಬಾರದು? ಇಲ್ಲಿದೆ ಕಾರಣ

ಇದು ಮಳೆ ದೇವ ನಮ್ಮ ಮೇಲೆ ಆಶೀರ್ವಾದವನ್ನು ನೀಡುವ ತಿಂಗಳು. ಈ ತಿಂಗಳು ನಿರಂತರವಾಗಿ ಮಳೆಯಾಗುತ್ತದೆ. ಹೀಗಾಗಿ ಇದು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ತಿಂಗಳುಗಳಲ್ಲಿ ಒಂದಾಗಿದೆ.

ಈ ತಿಂಗಳು ಜನರು ಶಿವನನ್ನು ಪೂಜಿಸುತ್ತಾರೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ದೂರ ಮಾಡುವಂತೆ ಶಿವನ ಆಶೀರ್ವಾದಕ್ಕಾಗಿ ಪ್ರಾರ್ಥಿಸುತ್ತಾರೆ. ಶ್ರಾವಣ ಎಂದೂ ಕರೆಯಲ್ಪಡುವ ಈ ಮಾಸವು ಸಸ್ಯಾಹಾರಿ ಆಹಾರಗಳೊಂದಿಗೆ ಸಂಬಂಧಿಸಿದೆ. ಇದು ಮುಗಿಯುವವರೆಗೆ ಮಾಂಸಾಹಾರವನ್ನು ಸೇವಿಸುವುದರಿಂದ ದೂರವಿರಲಾಗುತ್ತದೆ.

Shravan (Sawan) 2023

ಹಾಗಾದರೆ ಈ ತಿಂಗಳಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ಏಕೆ ನಿಷೇಧಿಸಲಾಗಿದೆ ಎಂದು ಬಹುತೇಕರಿಗೆ ತಿಳಿದಿಲ್ಲ. ಇದರ ಬಗ್ಗೆ ಕೊಂಚ ಮಾಹಿತಿಯನ್ನು ಪಡೆಯೋಣ.

ಶ್ರಾವಣ ಮಾಸದಲ್ಲಿ ಯಾಕೆ ಜನರು ನಾನ್ ವೆಜ್ ತಿನ್ನುವುದಿಲ್ಲ?

ಧಾರ್ಮಿಕ ಕಾರಣಗಳು

ಹಿಂದೂ ಧರ್ಮದ ಪ್ರಕಾರ, ಈ ತಿಂಗಳ ಪ್ರತಿ ದಿನ ನಿರ್ದಿಷ್ಟ ದೇವರಿಗೆ ಮೀಸಲಾಗಿರುತ್ತದೆ. ಮಾತ್ರವಲ್ಲದೆ ಇದು ಭಕ್ತರಲ್ಲಿ ಮಹತ್ವವನ್ನು ಹೊಂದಿದೆ. ಹೀಗಾಗಿ ಇಡೀ ತಿಂಗಳು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಸೋಮವಾರ ಶಿವಪೂಜೆ, ಮಂಗಳವಾರ ಮಂಗಳಗೌರಿ ಪೂಜೆ, ಬುಧವಾರ ಬುಧಪೂಜೆ ಮಾಡಲಾಗುತ್ತದೆ. ಇನ್ನೂ ಗುರುವಾರ ಬೃಹಸ್ಪತಿ ಪೂಜೆ, ಶುಕ್ರವಾರ ಜಲ ಪೂಜೆ ಮತ್ತು ಶನಿವಾರವನ್ನು ಮಾರುತಿ ಪೂಜೆಗಾಗಿ ಇರಿಸಲಾಗುತ್ತದೆ. ಅಲ್ಲದೆ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ ಮತ್ತು ನಾಗ ಪಂಚಮಿಯಂತಹ ಹಲವಾರು ಪ್ರಮುಖ ಹಿಂದೂ ಹಬ್ಬಗಳು ಶ್ರಾವಣದಲ್ಲಿ ಬರುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.

ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದ ಪ್ರಕಾರ, ಶ್ರಾವಣ ಮಾಸದಲ್ಲಿ ನಮ್ಮ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರುತ್ತದೆ. ಈ ತಿಂಗಳಲ್ಲಿ ಮಾಂಸಾಹಾರ, ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಮತ್ತು ಜೀರ್ಣಾಂಗ ವ್ಯವಸ್ಥೆಯು ಹದಗೆಡಬಹುದು. ಈ ಕಾರಣಕ್ಕಾಗಿಯೇ ಆಯುರ್ವೇದ ಸೂಪ್‌ ಹಾಗೂ ಲಘು ಆಹಾರವನ್ನು ಸೇವಿಸಬೇಕೆಂದು ಹೇಳುತ್ತದೆ.

Shravan (Sawan) 2023

ವೈಜ್ಞಾನಿಕ ಕಾರಣ

ಶ್ರಾವಣ ಮಾಸದಲ್ಲಿ ನಮ್ಮ ದೇಹ ತುಂಬಾ ದುರ್ಬಲವಾಗುತ್ತದೆ. ನಿಧಾನವಾದ ಚಯಾಪಚಯ ಕ್ರಿಯೆಯಿಂದ ದುರ್ಬಲ ಜೀರ್ಣಾಂಗ ವ್ಯವಸ್ಥೆ, ಸೋಂಕುಗಳು ಮತ್ತು ಆಲಸ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಈ ತಿಂಗಳು ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಒಬ್ಬ ವ್ಯಕ್ತಿಯು ಮಾಂಸಾಹಾರಿ ಆಹಾರವನ್ನು ಸೇವಿಸಿದರೆ, ಇದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದು ನಿಮ್ಮ ಇಡೀ ದೇಹದ ಚಕ್ರಕ್ಕೆ ಅಡ್ಡಿಪಡಿಸುತ್ತದೆ ಮತ್ತು ನಿಮ್ಮ ದೇಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಶ್ರಾವಣದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.

ಸಂತಾನೋತ್ಪತ್ತಿ ಕಾರಣ

ಶ್ರಾವಣ ಮಾಸವನ್ನು ಎಲ್ಲಾ ಪ್ರಾಣಿಗಳ ಸಂತಾನೋತ್ಪತ್ತಿ ಕಾಲವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ತಿಂಗಳು ಪ್ರೀತಿಯನ್ನು ಸೂಚಿಸುತ್ತದೆ ಮತ್ತು ಹಿಂದೂ ಧರ್ಮದಲ್ಲಿ ಯಾವುದೇ ಜೀವಿಗಳನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಲಾಗಿರುವುದರಿಂದ ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಸೇವಿಸಲಾಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+