ಎಣ್ಣೆ ಹಾಕಿಕೊಂಡ ಕುಡುಕರಿಗೆ ಇಂಗ್ಲೀಷ್ ಮೇಲೆ 'Full Love' ಯಾಕೆ!?
ಕುಡಿಯುವವರೆಗೂ ಮಾತ್ರ ಬೇರೆಯವರ ಹವಾ, ಕುಡಿದ ಮೇಲೆ ನಂದೇ ಹವಾ. ಕನ್ನಡ ಸಿನಿಮಾದ ಡೈಲಾಗ್ ಹೊಡೆಯುವ ಕುಡುಕರು, ಕೊಂಚ ಕಿಕ್ ಹೊಡೆಯುತ್ತಿದ್ದಂತೆ ಭಾಷೆಯನ್ನೇ ಚೇಂಜ್ ಮಾಡಿ ಬಿಡುತ್ತಾರೆ.
ಮದ್ಯದ ಮತ್ತು ನೆತ್ತಿಗೆ ಏರುತ್ತಿದ್ದಂತೆ ಕುಡುಕರ ಸ್ಟೈಲೇ ಚೇಂಜ್ ಆಗಿ ಬಿಡುತ್ತೆ. ಕುಡಿಯುವ ಮುನ್ನ ಕನ್ನಡ ಕನ್ನಡ ಎನ್ನುತ್ತಿದ್ದವರು ದಿಢೀರನೇ ಇಂಗ್ಲೀಷ್ ಡೈಲಾಗ್ ಹೊಡೆಯುವುದಕ್ಕೆ ಶುರು ಮಾಡಿ ಬಿಡುತ್ತಾರೆ. ಇನ್ನೂ ಕೆಲವರು ಹಿಂದಿಯಲ್ಲಿ ಕಹಾನಿ ಶುರುವಿಟ್ಟುಕೊಳ್ಳುತ್ತಾರೆ.
ಸಾಮಾನ್ಯವಾಗಿ ಕುಡಿದ ಮೇಲೆ ಮಂದಿ ಯಾಕೆ ಇಂಗ್ಲೀಷ್ ಮಾತನಾಡುತ್ತಾರೆ ಎಂಬ ಅನುಮಾನ ಎಲ್ಲರಿಗೂ ಇದ್ದೇ ಇರುತ್ತದೆ. ಇಂಗ್ಲೀಷ್ ಗೊತ್ತಿಲ್ಲದವರಿಗೂ ಅದ್ಯಾಗೋ ಇಂಗ್ಲೀಷ್ ಮೇಲೆ ಲವ್ ಹುಟ್ಟಿಕೊಳ್ಳುತ್ತೆ. ಇದರ ಹಿಂದಿನ ಅಸಲಿ ಕಥೆಯನ್ನು ಸಮೀಕ್ಷೆಯೊಂದು ಬಟಾಬಯಲು ಮಾಡಿದೆ.

ಕುಡುಕರ ಕಹಾನಿ ಬಿಚ್ಚಿಟ್ಟ ಸಮೀಕ್ಷೆ ಯಾವುದಯ್ಯಾ?
ಕುಡುಕರು ಹಾಕಿಕೊಳ್ಳುವ ಎಣ್ಣೆಯ ಅಮಲು ಅವರನ್ನು ಬೇರೆ ಭಾಷೆ ಮಾತನಾಡುವುದಕ್ಕೆ ಸಹಾಯ ಮಾಡುತ್ತದೆ ಎಂದು 'ಜರ್ನಲ್ ಆಫ್ ಸೈಕೋಫಾರ್ಮಕಾಲಜಿ' ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.
ಲಿವರ್ಪೂಲ್ ವಿಶ್ವವಿದ್ಯಾನಿಲಯ, ಬ್ರಿಟನ್ನ ಕಿಂಗ್ಸ್ ಕಾಲೇಜ್ ಮತ್ತು ನೆದರ್ಲ್ಯಾಂಡ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಭಾಷೆ ಬದಲಾವಣೆ ನಡುವಳಿಕೆ ಒಂದು ಭಾಗ
ಮದ್ಯಪಾನ ಮಾಡಿದ ನಂತರದಲ್ಲಿ ಸಾಮಾನ್ಯವಾಗಿ ವ್ಯಕ್ತಿಗಳ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ನಡವಳಿಕೆ ಬದಲಾವಣೆ ಆಗಿದೆ ಎಂಬುದನ್ನು ತೋರಿಸುವುದರಲ್ಲಿ ಭಾಷಾಶೈಲಿಯೂ ಸಹ ಸೇರಿದೆ. ಮದ್ಯಪಾನ ಮಾಡಿದ ವ್ಯಕ್ತಿಯ ಮಾತಿನಲ್ಲಿ ತೊದಲಿಕೆಯ ಜೊತೆಗೆ ಬೇರೆ ಭಾಷೆಯ ಮೇಲೆ ಆತನಿಗಿರುವ ವ್ಯಾಮೋಹವು ಮದ್ಯದ ಅಮಲಿನಲ್ಲಿ ಹೊರಗೆ ಬೀಳುತ್ತದೆ. ಅದು ಇಂಗ್ಲೀಷ್ ಆಗಿರಬೇಕು ಅಂತೇನಿಲ್ಲ ಹಿಂದಿಯಾಗಿದ್ದರೂ ಓಕೆ, ಉರ್ದು ಆಗಿದ್ದರೂ ಓಕೆ.

ಆತ್ಮವಿಶ್ವಾಸದೊಂದಿಗೆ ಎಣ್ಣೆ ಏಟಿನಲ್ಲಿ ಮಾತುಗಾರಿಕೆ
ಸಾಮಾನ್ಯವಾಗಿ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಆದರೆ ಎಣ್ಣೆ ಹಾಕಿಕೊಂಡ ವ್ಯಕ್ತಿಗಳಲ್ಲಿ ಅವರಿಗೆ ಅರಿವಿಲ್ಲದಂತೆಯೇ ಆತ್ಮವಿಶ್ವಾಸವನ್ನು ಹೆಚ್ಚಿಸಿರುತ್ತದೆ. ಅದೇ ಆತ್ಮವಿಶ್ವಾಸದಲ್ಲಿ ತಮ್ಮ ದೃಷ್ಟಿಕೋನ ಮತ್ತು ವಿಚಾರಗಳನ್ನು ಧೈರ್ಯವಾಗಿ ಎದುರಿಗಿರುವ ವ್ಯಕ್ತಿಗಳ ಬಳಿ ಮಂಡಿಸುತ್ತಾರೆ. ಈ ವೇಳೆಯಲ್ಲಿ ಅವರ ಭಾಷಾ ಕೌಶಲ್ಯವನ್ನು ಪ್ರದರ್ಶಿಸುವುದಕ್ಕೆ ಮದ್ಯ ಸಹಾಯ ಮಾಡುತ್ತದೆ ಎಂದು ಸಂಶೋಧನೆಯು ಹೇಳಿದೆ.

ಮದ್ಯಪಾನ ಮಾಡಿದರೆ ಇಂಗ್ಲೀಷ್ ಮಾತುಗಾರಿಕೆ ಸುಲಭವೇ?
ಇಂಗ್ಲೀಷ್ ಮಾತನಾಡುವುದಕ್ಕೆ ಬಾರದವರು ಇತರರ ಮುಂದೆ ಆ ಭಾಷೆಯನ್ನು ಬಳಸುವುದಿಲ್ಲ. ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಅಂಥವರು ಭಯಪಡುತ್ತಾರೆ. ಆದರೆ ಮದ್ಯಪಾನ ಮಾಡಿದ ಸಮಯದಲ್ಲಿ ಅದೇ ವ್ಯಕ್ತಿಗಳಲ್ಲಿನ ಭಯ ಮಂಗಮಾಯವಾಗುತ್ತದೆ. ಆಗ ತಮಗೆ ತಿಳಿದಷ್ಟು ಇಂಗ್ಲೀಷ್ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಮದ್ಯದ ಮತ್ತಿನಲ್ಲಿ ಇರುವ ಮಂದಿಗೆ ಯಾವುದೇ ಭಯ ಇರುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications