ವಿಡಿಯೋ: ಒಡಹುಟ್ಟಿದವರನ್ನು ಎತ್ತಿಕೊಂಡು ರಸ್ತೆಗುಂಡಿ ದಾಟಿಸಿದ ಬಾಲಕ
ಒಡಹುಟ್ಟಿದವರ ನಡುವಿನ ಬಾಂಧವ್ಯವು ಶುದ್ಧ ಮತ್ತು ಅತ್ಯಂತ ಮುಗ್ಧವಾಗಿದೆ. ನೀವು ಜಗಳವಾಡಬಹುದು, ನೀವು ಅವರನ್ನು ದ್ವೇಷಿಸಲು ಇಷ್ಟಪಡಬಹುದು. ಆದರೆ ಕೊನೆಯಲ್ಲಿ ಅವರು ಯಾವಾಗಲೂ ನಿಮ್ಮ ಬೆನ್ನಲುಬಾಗಿರುತ್ತಾರೆ.
ಆಗಸ್ಟ್ 11 ರಂದು ದೇಶಾದ್ಯಂತ ರಕ್ಷಾ ಬಂಧನವನ್ನು ಆಚರಿಸಲಾಗಿದ್ದು, ಕೆಲವರು ಇಂದು ಕೂಡ ಆಚರಿಸುತ್ತಿದ್ದಾರೆ. ಈ ಸಂದರ್ಭದ ನಿಜವಾದ ಸಾರವನ್ನು ನಿಮಗೆ ತೋರಿಸಲು ಈ ವೈರಲ್ ವಿಡಿಯೋ ಹೆಚ್ಚು ಸೂಕ್ತವಾಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರು ಪುಟ್ಟ ಬಾಲಕನೊಬ್ಬ ತನ್ನ ಒಡಹುಟ್ಟಿದವರನ್ನು ರಸ್ತೆಗುಂಡಿ ದಾಟಿಸುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇದು ಆನ್ಲೈನ್ನಲ್ಲಿ ತುಂಬಾ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋವನ್ನು ಸುಶಾಂತ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್ನಲ್ಲಿ, ಪುಟ್ಟ ಹುಡುಗನೊಬ್ಬ ತನ್ನ ಒಡಹುಟ್ಟಿದವರನ್ನು ಎತ್ತಿಕೊಂಡ ಗುಂಡಿಯನ್ನು ದಾಟಿಸುವುದನ್ನು ಕಾಣಬಹುದು.
ಅವನು ವಾಸ್ತವವಾಗಿ ಬಾಲಕ. ತನ್ನ ಇಬ್ಬರು ಚಿಕ್ಕ ಒಡಹುಟ್ಟಿದವರನ್ನು ಎತ್ತಿಕೊಂಡು ಕೊಚ್ಚೆಯನ್ನು ದಾಟಿಸುತ್ತಾನೆ. ಕೊಚ್ಚೆಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಅವರನ್ನು ಎತ್ತಿಕೊಂಡು ಒಬ್ಬೊಬ್ಬರಾಗಿ ಮತ್ತೊಂದು ಬದಿಯತ್ತ ಬೆನ್ನ ಮೇಲೆ ಹೊತ್ತುಕೊಂಡು ದಾಟಿಸುತ್ತಾನೆ. ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ನಂಬಿಕೆಯ ಪವಿತ್ರ ಹಬ್ಬವಾದ ರಕ್ಷಾ ಬಂಧನದಂದು ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು" ಎಂದು ವಿಡಿಯೋವನ್ನು ಹಂಚಿಕೊಳ್ಳುವಾಗ ಸುಶಾಂತ ನಂದಾ ಬರೆದಿದ್ದಾರೆ.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ವಿಡಿಯೋ 26 ಸಾವಿರ ವೀಕ್ಷಣೆಗಳನ್ನು ಸಂಗ್ರಹಿಸಿದೆ. ನೆಟಿಜನ್ಗಳು ಹೃದಯಸ್ಪರ್ಶಿ ಕ್ಲಿಪ್ ಅನ್ನು ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್ಗಳ ವಿಭಾಗದಲ್ಲಿ ಒಡಹುಟ್ಟಿದವರ ಮೇಲೆ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೊವನ್ನು ಇಲ್ಲಿ ನೋಡಿ:
भाई-बहन के प्यार व विश्वास के पावन पर्व रक्षाबंधन की सभी को हार्दिक शुभकामनाएं🙏🙏 pic.twitter.com/m3g31hH6iy
— Susanta Nanda IFS (@susantananda3) August 11, 2022
"ನಾನು ಇದನ್ನು ಪ್ರೀತಿಸುತ್ತೇನೆ" ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ತುಂಬಾ ಸುಂದರ" ಎಂದು ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್ಗಳನ್ನು ಇಲ್ಲಿ ನೋಡಿ:
Really great Sir 👍 https://t.co/Kh5oW0RXXj
— Sukanta Kumar Das (@Sukanta56964321) August 11, 2022
-
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications