ವಿಡಿಯೊ: ಬೆಂಕಿಯನ್ನೇ ತಿನ್ನುವ ಅಗ್ನಿ ಪ್ರೇಮಿ
ಡೆಹ್ರಾಡೂನ್ ಮೇ 25: ಬೆಂಕಿಯೊಂದಿಗೆ ಸರಸ ಬೇಡ ಎನ್ನುವ ಮಾತು ಜನಜನಿತವಾಗಿದ್ದರೂ ಇಲ್ಲೊಬ್ಬ ವ್ಯಕ್ತಿ ಬೆಂಕಿಯನ್ನು ಸುಲಭ ಹಾಗೂ ಸರಳವಾಗಿ ಆಹಾರ ಸೇವಿಸುವಂತೆ ತಿನ್ನುತ್ತಾನೆ. ನೀವು ಇಂತಹ ವ್ಯಕ್ತಿಯನ್ನು ಎಲ್ಲಾದರೂ ನೋಡಿರುವುದು ಉಂಟೆ? ಬೆಂಕಿಯೊಂದಿಗೆ ಕಟ್ಟಿಗೆಯನ್ನು ತಿನ್ನುವುದು ಈತನ ಹವ್ಯಾಸ. ಹೌದು, ಈ ವ್ಯಕ್ತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಅನೇಕ ಜನರು ಈತನನ್ನು "ಬೆಂಕಿ ತಿನ್ನುವ ಮನುಷ್ಯ" ಎಂದು ಕರೆಯುತ್ತಾರೆ. ಭೂಮಿಯ ಮೇಲೆ ಯಾರು ಬೆಂಕಿಯನ್ನು ತಿನ್ನಲು ಬಯಸುವುದಿರಲಿ ಅದರ ಹತ್ತಿರ ಸುಳಿಯಲು ಯೋಚಿಸುತ್ತಾರೆ. ಹೀಗಿರುವಾಗ ಈತ ಉರಿಯನ್ನು ಬಾಯಲ್ಲಿಟ್ಟುಕೊಂಡು ತಿನ್ನುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

'ಕಲ್ಲಿದ್ದಲು ಬಿಕ್ಕಟ್ಟಿಗೆ ಇವರೇ ಕಾರಣ'
ಈ ವ್ಯಕ್ತಿಯನ್ನು ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ತಾಸ್ಪದವಾಗಿ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಹೋಗೊಬ್ಬ ವ್ಯಕ್ತಿ, "ಕಲ್ಲಿದ್ದಲು ಬಿಕ್ಕಟ್ಟು ಮತ್ತು ವಿದ್ಯುತ್ ಸಿಗದಕ್ಕೆ ಕಾರಣ ಈ ವ್ಯಕ್ತಿಯೇ, ಈತನನ್ನು ಇಂಟರ್ನೆಟ್ನಲ್ಲಿ ಹುಡುಕುವುದು ಕಷ್ಟ...!"ಎಂದು ಬರೆದಿದ್ದಾರೆ. ಜೊತೆಗೆ ಅದೇ ಸಮಯಕ್ಕೆ ಮತ್ತೊಬ್ಬರು, "ಇವರಿಗೆ ಆಧಾರ್ ಕಾರ್ಡ್ ಕೇಳಬೇಕು, ಅಷ್ಟಕ್ಕೂ ಇವರು ಯಾರು?" ಎಂದು ಬರೆದಿದ್ದಾರೆ.

ಅಗ್ನಿ ದೇವತೆ ಸಿಕ್ಕ ಮನುಷ್ಯ
ಈ ವೀಡಿಯೋವನ್ನು ನೋಡಿದ ಬಲುದ್ದೀನ್ ಎಂಬ ಬಳಕೆದಾರರು ಫೇಸ್ಬುಕ್ನಲ್ಲಿ "ಈ ಮನುಷ್ಯನೊಳಗೆ ಆತ್ಮವಿದೆ" ಎಂದು ಬರೆದಿದ್ದಾರೆ. ರಿಜ್ಜಿ ಹುಸೇನ್ ಎಂಬ ಬಳಕೆದಾರ, "ಸರ್ಕಾರ ಇವರ ಪಡಿತರ ಚೀಟಿಯನ್ನು ಮುಟ್ಟುಗೋಲು ಹಾಕಿಕೊಂಡಂತೆ ತೋರುತ್ತಿದೆ" ಎಂದು ಬರೆದಿದ್ದಾರೆ. ಹರಿನಾರಾಯಣ ಗಾರ್ಗ್ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರ, "ಸಹೋದರರೇ..ಇವರಿಗೆ ಅಗ್ನಿ ದೇವತೆ ಸಿಕ್ಕಿದ್ದಾರೆ! ಮೋದಿ ಸರ್ಕಾರಕ್ಕೆ ನನ್ನ ವಿನಮ್ರ ವಿನಂತಿಯೆಂದರೆ ಅವರಿಗೆ ಅಗ್ನಿ ದೇವತಾ ಬಿರುದು ನೀಡಿ!" ಎಂದು ಬರೆದಿದ್ದಾರೆ.
|
'ಬಿಸಿ ಆಹಾರ ಆರೋಗ್ಯಕ್ಕೆ ಒಳ್ಳೆದು ಹಾಗಂತಾ..'
ಈ ವ್ಯಕ್ತಿ ಪರ್ವತ ಪ್ರದೇಶದವರು. ಆದರೆ, ಅವರ ವೈಯಕ್ತಿಕ ಗುರುತು ಇನ್ನೂ ಬಹಿರಂಗವಾಗಿಲ್ಲ. ಆದರೆ.. ಇದನ್ನು ನೋಡಿದ ಜನ ಅಚ್ಚರಿಗೊಂಡಿದ್ದಾರೆ. ಬಳಕೆದಾರ ತಾಮ್ರಕರ್ ಬಿಜೇಂದ್ರ ಅವರು ಪ್ರತಿಕ್ರಿಯಿಸಿ, 'ಓಹ್ ಸಹೋದರ, ತಾಜಾ ಮತ್ತು ಬಿಸಿಯಾದ ಆಹಾರವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನೀವು ಇದನ್ನು ಕಲಿಯಬಹುದೇ!" ಎಂದು ಪ್ರಶ್ನೆ ಮಾಡಿದ್ದಾರೆ. ಅಂತೆಯೇ ಇನ್ನೊಬ್ಬ ಬಳಕೆದಾರ "ಸಹೋದರ ವಿದ್ಯುತ್ ಸ್ಥಾವರದಲ್ಲಿ ಕೆಲಸ ಇದೆ ನೀವು ಬರುತ್ತೀರಾ?" ಎಂದು ಕೇಳಿದ್ದಾರೆ.

ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ
ಇವರನ್ನು ಉತ್ತರಾಖಂಡದವರು ಎಂದು ಹೇಳಲಾಗುತ್ತಿದೆ. ಆದರೆ ಇವರ ನಿಜವಾದ ಸ್ಥಳ ಇನ್ನೂ ಬಹಿರಂಗವಾಗಿಲ್ಲ. ಇವರ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜನ ಇವರು ಬೆಂಕಿ ತಿನ್ನುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಂತಹ ನಡುವಳಿಕೆಗಳು ಬೇರೆಯವರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಕೆಲವರು ಮನವಿ ಮಾಡಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications