ಆಪರೇಷನ್ ಗಂಗಾ: ಉಕ್ರೇನ್ನಿಂದ ಸ್ಥಳಾಂತರಗೊಳ್ಳುವ ಭಾರತೀಯರಿಗೆ ಇಲ್ಲಿದೆ ವಿಮಾನಗಳ ಪಟ್ಟಿ
ನವದೆಹಲಿ, ಫೆಬ್ರವರಿ 28: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ಪ್ರಸ್ತುತ ಹೆಚ್ಚಿದೆ. ಕಳೆದ ವಾರ ರಷ್ಯಾದ ಮಿಲಿಟರಿ ದಾಳಿಯ ಘೋಷಣೆಯನ್ನು ಮಾಡಿದ ಬಳಿಕ ಉಕ್ರೇನ್ನಲ್ಲಿ ಯುದ್ಧ ಭುಗಿಲೆದ್ದಿದೆ. ಎಲ್ಲಾ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಕೇಳಲಾಗಿದೆ.
ಈ ನಡುವೆ ಭದ್ರತೆ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಉಕ್ರೇನ್ನ ವಾಯು ಮಾರ್ಗಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಯಿಂದಾಗಿ ಭಾರತೀಯ ಪ್ರಜೆಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಅಂಕಿಅಂಶಗಳ ಪ್ರಕಾರ, ಪ್ರಸ್ತುತ ರಷ್ಯಾದ ಆಕ್ರಮಣದ ಮಧ್ಯೆ 18,000 ಕ್ಕೂ ಹೆಚ್ಚು ಭಾರತೀಯ ರಾಷ್ಟ್ರಗಳು ಉಕ್ರೇನ್ನಲ್ಲಿ ನೆಲೆಸಿದ್ದಾರೆ.
ಪ್ರಸ್ತುತ ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಗಂಗಾ' ಹೆಸರಿನ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿದೆ. ಇಲ್ಲಿಯವರೆಗೆ, ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳು ಉಕ್ರೇನ್ನಿಂದ 600 ಕ್ಕೂ ಹೆಚ್ಚು ಭಾರತೀಯರನ್ನು ಹೊತ್ತು ದೇಶಕ್ಕೆ ಬಂದಿಳಿದಿವೆ. ಉಕ್ರೇನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ಹಂಗೇರಿ, ಪೋಲೆಂಡ್, ಸ್ಲೋವಾಕಿಯಾ ಮತ್ತು ರೊಮೇನಿಯಾದಿಂದ ಭಾರತೀಯರಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶ್ರಿಂಗ್ಲಾ ಪ್ರಕಾರ ನಿರ್ದಿಷ್ಟ ಗಡಿ ದಾಟುವ ಸ್ಥಳಗಳನ್ನು ಗುರುತಿಸಲಾಗಿದೆ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರದ ತಂಡಗಳನ್ನು ನಿಯೋಜಿಸಿದೆ. "ಭಾರತೀಯ ರಾಯಭಾರ ಕಚೇರಿಯು ಸಲಹೆಯನ್ನು ನೀಡಿದ ನಂತರ ಒಟ್ಟು 4000 ಭಾರತೀಯ ಪ್ರಜೆಗಳು ಯುದ್ಧದ ಪರಿಸ್ಥಿತಿಗೆ ಮುಂಚಿತವಾಗಿ ಉಕ್ರೇನ್ ತೊರೆದಿದ್ದಾರೆ. ದೇಶದಲ್ಲಿ ಇನ್ನೂ ಸುಮಾರು 15,000 ಜನರನ್ನು ಸ್ಥಳಾಂತರಿಸಬೇಕಾಗಿದೆ. ತೆರವು ಪ್ರಕ್ರಿಯೆ ಸರಕಾರದ ವೆಚ್ಚದಲ್ಲಿ ನಡೆಯಲಿದೆ," ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶ್ರಿಂಗ್ಲಾ ತಿಳಿಸಿದ್ದಾರೆ.
ಭಾರತೀಯ ಪ್ರಜೆಗಳನ್ನು ದೇಶಕ್ಕೆ ಮರಳಿ ಕರೆತರಲು ಕಾರ್ಯನಿರ್ವಹಿಸುತ್ತಿರುವ ಬುಕಾರೆಸ್ಟ್ ಮತ್ತು ಬುಡಾಪೆಸ್ಟ್ನಿಂದ ಏರ್ ಇಂಡಿಯಾದ ವಿಶೇಷ ವಿಮಾನಗಳ ಪಟ್ಟಿಯನ್ನು ಕೆಳಗೆ ಉಲ್ಲೇಖಿಸಲಾಗಿದೆ.

ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ರಷ್ಯಾ ಮತ್ತು ಉಕ್ರೇನ್ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಶ್ರಿಂಗ್ಲಾ ಹೇಳಿದ್ದಾರೆ. ನಾನು ಭಾರತೀಯ ನಾಗರಿಕರು ಕೇಂದ್ರೀಕೃತವಾಗಿರುವ ಸ್ಥಳಗಳನ್ನು ಹಂಚಿಕೊಂಡಿದ್ದೇನೆ. ಇಬ್ಬರೂ ರಾಯಭಾರಿಗಳು ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ನಾಗರಿಕರ ಸುರಕ್ಷತೆಯ ಬಗ್ಗೆ ನಮಗೆ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.
ಹಂಗೇರಿ ಮತ್ತು ರೊಮೇನಿಯಾದ ಗಡಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಭಾರತೀಯರು ಗಮನಿಸಬೇಕು. ಆದರೆ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರಜೆಗಳು ಉಕ್ರೇನ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಪೋಲೆಂಡ್ನ ಗಡಿಗಳನ್ನು ನಿರ್ಬಂಧಿಸಲಾಗಿದೆ. ಗಡಿಯಲ್ಲಿರುವ ಜನರಿಗೆ ಹಂತ ಹಂತವಾಗಿ ಗಡಿ ಮಾರ್ಗದರ್ಶನ ನೀಡಲಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯು ಪ್ರತಿ ದಿನವೂ ಹೆಚ್ಚುತ್ತಿದೆ. ಎರಡು ರಾಷ್ಟ್ರಗಳ ನಡುವಿನ ಸಂಘರ್ಷವು ಮೂರನೇ ಮಹಾಯುದ್ಧದ ಆರಂಭಕ್ಕೂ ಕಾರಣವಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ.
ಇನ್ನು ಉಕ್ರೇನ್ನಲ್ಲಿ ಸಿಲುಕಿದ್ದ 249 ಭಾರತೀಯ ಪ್ರಜೆಗಳನ್ನು ಹೊತ್ತ ಐದನೇ ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್ (ರೊಮೇನಿಯಾ) ನಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದೆ. "ಸರ್ಕಾರ ನಮಗೆ ಸಾಕಷ್ಟು ಸಹಾಯ ಮಾಡಿದೆ. ಭಾರತೀಯ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸಲಾಗಿದೆ. ಪ್ರಮುಖ ಸಮಸ್ಯೆ ಗಡಿ ದಾಟುವುದು ಆಗಿದೆ. ಎಲ್ಲಾ ಭಾರತೀಯರನ್ನು ಮರಳಿ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ. ಇನ್ನೂ ಹಲವಾರು ಭಾರತೀಯರು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ," ಎಂದು ಉಕ್ರೇನ್ನಿಂದ ನವದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳು ಹೇಳಿದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications