Get Updates
Get notified of breaking news, exclusive insights, and must-see stories!

ತಾಜ್ ಮಹಲ್‌ನಲ್ಲಿ ಹಿಂದೂ ದೇವರ ವಿಗ್ರಹದ ಚಿತ್ರಗಳು ಹೇಳುವುದೇನು?

ತಾಜ್ ಮಹಲ್ ಒಳಗಿನ ವಿಷಯಗಳ ಕುರಿತಾಗಿ "ಸತ್ಯ-ಶೋಧನೆ ವಿಚಾರಣೆ" ಮಾಡುವಂತೆ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ರೋಚಕ ಸಂಗತಿಯೊಂದು ಹೊರ ಬಿದ್ದಿದೆ.

ಈ ವರ್ಷದ ಆರಂಭದಲ್ಲಿ ಸ್ಮಾರಕದ ಪುನಃಸ್ಥಾಪನೆ ಕಾರ್ಯದ ಸಮಯದಲ್ಲಿ ಕ್ಲಿಕ್ ಮಾಡಲಾಗಿದೆ ಎನ್ನಲಾಗಿರುವ ಕೆಲವು ಫೋಟೋಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬಿಡುಗಡೆ ಮಾಡಿದೆ. ತಾಜ್ ಮಹಲ್‌ನ 22 ಮುಚ್ಚಿದ ಕೊಠಡಿಗಳನ್ನು ತೆರೆಯಲು ಹೈಕೋರ್ಟ್ ಅರ್ಜಿ ಸಲ್ಲಿಸಿರುವ ವಿವಾದದ ನಡುವೆ ಈ ಬೆಳವಣಿಗೆ ನಡೆದಿದೆ.

ಕಳೆದ ಜನವರಿ ತಿಂಗಳಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೆಲವು ಭೂಗತ ಕೊಠಡಿಗಳ ಛಾಯಾಚಿತ್ರಗಳನ್ನು ಒಳಗೊಂಡಿತ್ತು, ಇದನ್ನು ಸ್ಮಾರಕದಲ್ಲಿ ಪುನಃಸ್ಥಾಪನೆ ಕಾರ್ಯದ ಸಮಯದಲ್ಲಿ ಕ್ಲಿಕ್ ಮಾಡಲಾಗಿತ್ತು. ವರದಿಗಳ ಪ್ರಕಾರ, ತಾಜ್ ಮಹಲ್‌ನಲ್ಲಿನ ಪುನಃಸ್ಥಾಪನೆ ಕಾರ್ಯವು ಡಿಸೆಂಬರ್ 2021 ಮತ್ತು ಮೇ 2022ರ ನಡುವೆ ನಡೆಯಿತು. ಅದರ ಫೋಟೋಗಳನ್ನು ಎಲ್ಲರೂ ನೋಡುವಂತೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹಾಗಿದ್ದರೆ ಆ ಫೋಟೋಗಳು ಹೇಗಿವೆ?, ವರದಿಯಲ್ಲಿ ಏನಿದೆ ಎಂಬುದನ್ನು ಓದಿರಿ.

ಶಿಥಿಲಗೊಂಡ ಸುಣ್ಣದ ಪ್ಲಾಸ್ಟರ್ ತೆಗೆದು ತಾಜಾ ಕೋಟ್

ಶಿಥಿಲಗೊಂಡ ಸುಣ್ಣದ ಪ್ಲಾಸ್ಟರ್ ತೆಗೆದು ತಾಜಾ ಕೋಟ್

"ತಾಜ್ ಮಹಲ್‌ನ ನದಿ ತೀರದಲ್ಲಿರುವ ಭೂಗತ ಕೋಶಗಳ ನಿರ್ವಹಣಾ ಕಾರ್ಯವನ್ನು ಕೆಲವು ತಿಂಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಕೊಳೆತ ಮತ್ತು ಶಿಥಿಲಗೊಂಡ ಸುಣ್ಣದ ಪ್ಲಾಸ್ಟರ್ ಅನ್ನು ತೆಗೆದುಹಾಕಲಾಯಿತು ಮತ್ತು ತಾಜಾ ಕೋಟ್ ಅನ್ನು ಹಾಕಲಾಯಿತು. ಅನ್ವಯಿಸುವ ಮೊದಲು ಸಾಂಪ್ರದಾಯಿಕ ಸುಣ್ಣದ ಸಂಸ್ಕರಣೆ ನಡೆಯಿತು" ಎಂಬುದನ್ನು ಎಎಸ್‌ಐ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಸ್ಮಾರಕಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆ ಎಎಸ್ಐ ಕರ್ತವ್ಯ

ಭಾರತದಲ್ಲಿ ಸ್ಮಾರಕಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆಯು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕರ್ತವ್ಯವಾಗಿರುತ್ತದೆ. ಆದ್ದರಿಂದಲೇ ಅವರು ದೇಶದಲ್ಲಿ ಯಾವುದೇ ಐತಿಹಾಸಿಕ ಸ್ಥಳಗಳಿರಲಿ. ಅಲ್ಲಿಯ ಪ್ರದೇಶವು ಸಂದರ್ಶಕರಿಗೆ ತೆರೆದಿರಲಿ ಅಥವಾ ಇಲ್ಲದಿರಲಿ, ಸಾಮಾನ್ಯವಾಗಿ ತಪಾಸಣೆಗಳನ್ನು ನಡೆಸುತ್ತಾರೆ.

ತಾಜ್ ಮಹಲ್‌ನ ಗೌಪ್ಯ ಕೊಠಡಿ ತೆರೆಯುವ ಸಂಬಂಧ ಅರ್ಜಿ

ತಾಜ್ ಮಹಲ್‌ನ ಗೌಪ್ಯ ಕೊಠಡಿ ತೆರೆಯುವ ಸಂಬಂಧ ಅರ್ಜಿ

ಆಗ್ರಾದಲ್ಲಿ ಇರುವ ಐತಿಹಾಸಿಕ ತಾಜ್ ಮಹಲ್‌ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯಲು ಮತ್ತು "ಸತ್ಯಶೋಧನೆಯ ತನಿಖೆ" ಯನ್ನು ಪ್ರಾರಂಭಿಸುವಂತೆ ಕೋರಿ ಕಳೆದ ವಾರ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಬಾಗಿಲು ಮುಚ್ಚುವ ಮೂಲಕ ತನ್ನ ಸಾಂವಿಧಾನಿಕ ಹಕ್ಕುಗಳಲ್ಲಿ ಯಾವುದನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಸೂಚಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು.

ತಾಜ್ ಮಹಲ್‌ನಲ್ಲಿ ಹಿಂದೂ ದೇವತೆಗಳ ಸ್ಮಾರಕ

ತಾಜ್ ಮಹಲ್‌ನಲ್ಲಿ ಹಿಂದೂ ದೇವತೆಗಳ ಸ್ಮಾರಕ

ಬಿಜೆಪಿಯ ಅಯೋಧ್ಯೆ ಘಟಕದ ಉಸ್ತುವಾರಿ ಆಗಿರುವ ರಜನೀಶ್ ಸಿಂಗ್, ಈ ತಿಂಗಳ ಆರಂಭದಲ್ಲಿ ಅರ್ಜಿ ಸಲ್ಲಿಸಿದ್ದು, ತಾಜ್ ಮಹಲ್‌ನಲ್ಲಿರುವ 22 ಭೂಗತ ಕೊಠಡಿಗಳನ್ನು ಬಾಗಿಲುಗಳ ಹಿಂದೆ ಹಿಂದೂ ದೇವತೆಗಳ ವಿಗ್ರಹಗಳಿವೆಯೇ ಎಂದು ಪರಿಶೀಲಿಸಲು ಎಎಸ್‌ಐಗೆ ಒತ್ತಾಯಿಸಿದರು. ತಾಜ್ ಮಹಲ್ ವಾಸ್ತವವಾಗಿ ತೇಜೋ ಮಹಾಲಯ ಎಂದು ಕರೆಯಲ್ಪಡುವ ಶಿವನಿಗೆ ಸಮರ್ಪಿತವಾದ ಹಳೆಯ ದೇವಾಲಯವಾಗಿದೆ ಎಂದು ಅರ್ಜಿದಾರರು ಹಲವಾರು ಹಿಂದುತ್ವ ಗುಂಪುಗಳಿಂದ ಸಮರ್ಥಿಸಿಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+