ಅಪರೂಪದ ಸೂಪರ್ನೋವಾ ಸ್ಫೋಟ ಪತ್ತೆ ಹಚ್ಚಿದ ವಿಜ್ಞಾನಿಗಳು
ಭಾರತೀಯ ಖಗೋಳ ವಿಜ್ಞಾನಿಗಳು ಅಪರೂಪದ ಸೂಪರ್ನೋವಾ ಸ್ಫೋಟವನ್ನು ಪತ್ತೆಹಚ್ಚಿದ್ದಾರೆ. ವುಲ್ಫ್-ರಯೆಟ್ ನಕ್ಷತ್ರಗಳು ಅಥವಾ ಡಬ್ಲ್ಯುಆರ್ ನಕ್ಷತ್ರಗಳು ಎಂದು ಕರೆಯಲಾಗುವ ಅತ್ಯಂತ ಹೆಚ್ಚಿನ ತಾಪಮಾನದ ನಕ್ಷತ್ರಗಳಲ್ಲಿ ಈ ಸ್ಫೋಟವನ್ನು ಗುರುತಿಸಲಾಗಿದೆ.
ಅಪರೂಪದ ವುಲ್ಫ್-ರಯೆಟ್ ನಕ್ಷತ್ರಗಳು ಸೂರ್ಯನ ಸಾವಿರ ಪಟ್ಟು ಹೆಚ್ಚು ಪ್ರಕಾಶಮಾನವಾದವು. ಇವು ದೀರ್ಘಕಾಲದದಿಂದ ಖಗೋಳಶಾಸ್ತ್ರಜ್ಞರ ಕುತೂಹಲಕ್ಕೆ ಕಾರಣವಾಗಿವೆ. ಇವು ಬೃಹತ್ ನಕ್ಷತ್ರಗಳಾಗಿದ್ದು ತಮ್ಮ ಮೇಲ್ಮೈ ಹೈಡ್ರೋಜನ್ ಹೊದಿಕೆಯನ್ನು ಹೊರಹಾಕುತ್ತವೆ, ಇದು ಹೀಲಿಯಂ ಮತ್ತು ಇತರ ಅಂಶಗಳ ಸಮ್ಮಿಳನಕ್ಕೆ ಸಂಬಂಧಿಸಿದೆ.
ಬೃಹತ್ ಪ್ರಕಾಶಮಾನದ ಸೂಪರ್ನೋವಾ ಸ್ಫೋಟದ ಪತ್ತೆಹಚ್ಚುವಿಕೆಯು ವಿಜ್ಞಾನಿಗಳಿಗೆ ನಿಗೂಢವಾಗಿಯೇ ಉಳಿದಿರುವ ಈ ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.

ನೈನಿತಾಲ್ನಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿರುವ ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್ (ARIES) ನ ಖಗೋಳಶಾಸ್ತ್ರಜ್ಞರ ತಂಡವು, ಅಂತಾರಾಷ್ಟ್ರೀಯ ಸಹವರ್ತಿಗಳೊಂದಿಗೆ ಸೇರಿ 2015 ರಲ್ಲಿ ಗುರುತಿಸಲ್ಪಟ್ಟ ಗ್ಯಾಲಕ್ಸಿ ಎನ್ಜಿಸಿ 7371 ನ ಎಸ್ಎನ್ 2015 ಡಿಜೆ ಎಂಬ ಸೂಪರ್ನೋವಾಗಳ ಆಪ್ಟಿಕಲ್ ಮಾನಿಟರಿಂಗ್ ಅನ್ನು ನಡೆಸಿದೆ. ತಂಡವು ಸೂಪರ್ನೋವಾದಿಂದ ಕುಸಿದ ನಕ್ಷತ್ರದ ಪ್ರಮಾಣ ಮತ್ತು ಅದರ ಹೊರಸೂಸುವಿಕೆಯ ರೇಖಾಗಣಿತವನ್ನು ಲೆಕ್ಕಹಾಕಿದರು. ಈ ಬಗ್ಗೆ ಇತ್ತೀಚೆಗೆ 'ದಿ ಆಸ್ಟ್ರೋಫಿಸಿಕಲ್ ಜರ್ನಲ್'ನಲ್ಲಿ ಪ್ರಕಟಿಸಲಾಗಿದೆ.
ಮೂಲ ನಕ್ಷತ್ರವು ಎರಡು ನಕ್ಷತ್ರಗಳ ಸಂಯೋಜನೆಯಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ - ಅವುಗಳಲ್ಲಿ ಒಂದು ಬೃಹತ್ ಡಬ್ಲ್ಯುಆರ್ ನಕ್ಷತ್ರ ಮತ್ತು ಇನ್ನೊಂದು ನಕ್ಷತ್ರ ಸೂರ್ಯನಿಗಿಂತ ಕಡಿಮೆ ಗಾತ್ರದ್ದು. ಸೂಪರ್ನೋವಾ (ಎಸ್ಎನ್ಇ) ಬ್ರಹ್ಮಾಂಡದಲ್ಲಿ ಹೆಚ್ಚು ಶಕ್ತಿಯುತವಾದ ಸ್ಫೋಟವಾಗಿದ್ದು, ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
ಇದರ ದೀರ್ಘಕಾಲೀನ ಮೇಲ್ವಿಚಾರಣೆಯು ಸ್ಫೋಟಗೊಳ್ಳುವ ನಕ್ಷತ್ರದ ಸ್ವರೂಪ ಮತ್ತು ಸ್ಫೋಟದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಬೃಹತ್ ನಕ್ಷತ್ರಗಳನ್ನು ಎಣಿಸಲು ಸಹ ಇದು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಯನ್ನು ಈ ಜರ್ನಲ್(https://ui.adsabs.harvard.edu/abs/2021ApJ...909..100S/abstract) ಮೂಲಕ ಪಡೆದುಕೊಳ್ಳಬಹುದು.
-
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು











Click it and Unblock the Notifications