ತುತ್ತು ಅನ್ನಕ್ಕಾಗಿ ವೇಶ್ಯಾವಾಟಿಕೆಗಿಳಿದ ಶ್ರೀಲಂಕಾ ಮಹಿಳೆಯರು
ಕೊಲಂಬೊ ಜುಲೈ 19: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಮಹಿಳೆಯರು ಔಷಧಿ ಮತ್ತು ಎರಡು ಹೊತ್ತಿನ ಊಟಕ್ಕೂ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರದಿಯ ಪ್ರಕಾರ, ಶ್ರೀಲಂಕಾದಲ್ಲಿ ಸುಮಾರು 6 ಮಿಲಿಯನ್ ಜನರು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸಿದ್ದಾರೆ.
ಈ ಅಂಕಿ ಅಂಶವು ವೇಗವಾಗಿ ಹೆಚ್ಚುತ್ತಿದೆ. ಜನರು ಈಗ ಆಹಾರವನ್ನು ಉಳಿಸಲು ದಿನಕ್ಕೆ ಒಮ್ಮೆ ಮಾತ್ರ ತಿನ್ನುತ್ತಿದ್ದಾರೆ. ದೇಶದ ಜನಸಂಖ್ಯೆಯ 28 ಪ್ರತಿಶತದಷ್ಟು ಜನರು ತೀವ್ರ ತೊಂದರೆಯಲ್ಲಿದ್ದಾರೆ. ವೇಶ್ಯಾವಾಟಿಕೆಯಲ್ಲಿ ತೊಡಗುವವರು ಹೆಚ್ಚಾಗುವುದರೊಂದಿಗೆ ಮಹಿಳೆಯರನ್ನು ಬಲವಂತದಿಂದಲೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವರದಿಗಳಿವೆ.
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹಣಕ್ಕಾಗಿ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದೆ. ಆಯುರ್ವೇದ ಮತ್ತು ಸ್ಪಾ ಕೇಂದ್ರಗಳು ಈಗ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿವೆ. ಮಹಿಳೆಯರು ಈ ವ್ಯವಹಾರದಲ್ಲಿ ವೇಗವಾಗಿ ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಕೊಂಚ ಹಣ ಸಂಪಾದಿಸಲು ಸಾಧ್ಯವಾಗುತ್ತಿದೆ.
ಶ್ರೀಲಂಕಾದ ದಿ ಮಾರ್ನಿಂಗ್ ನ್ಯೂಸ್ ವರದಿಯ ಪ್ರಕಾರ, ಸ್ಪಾ ಸೆಂಟರ್ಗಳಲ್ಲಿ ಕರ್ಟನ್ಗಳನ್ನು ನೇತುಹಾಕುವ ಮೂಲಕ ಸೆಕ್ಸ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜವಳಿ ಉದ್ಯಮದಲ್ಲಿ ತೊಡಗಿರುವ ಮಹಿಳೆಯರು ಅತ್ಯಂತ ವೇಗವಾಗಿ ಈ ವ್ಯವಹಾರಕ್ಕೆ ಸೇರುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ, ಈ ದೇಶದಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಹರಡುತ್ತದೆ ಎನ್ನಲಾಗುತ್ತಿದೆ. ಜವಳಿ ಉದ್ಯಮ ಮುಚ್ಚುವ ಭೀತಿಯೂ ಎದುರಾಗಿದ್ದು, ಮಹಿಳೆಯರು ಜೀವನ ನಿರ್ವಹಣೆಗಾಗಿ ಪರ್ಯಾಯ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ.

ತುತ್ತು ಅನ್ನಕ್ಕಾಗಿ ವೇಶ್ಯಾವಾಟಿಕೆ
ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದಲ್ಲಿ ಬಹುತೇಕ ಕೈಗಾರಿಕೆಗಳು ಮುಚ್ಚುತ್ತಿದ್ದು, ದೇಶದ ಆರ್ಥಿಕತೆ ಹದಗೆಟ್ಟಿರುವುದು ಮಹಿಳೆಯರನ್ನು ಈ ಉದ್ಯಮಕ್ಕೆ ಬರುವಂತೆ ಮಾಡಿದೆ. ಲೈಂಗಿಕ ಕಾರ್ಯಕರ್ತರೊಬ್ಬರು ಶ್ರೀಲಂಕಾದ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, "ದೇಶದ ಆರ್ಥಿಕ ಬಿಕ್ಕಟ್ಟಿನಿಂದ ನಾವು ನಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು ಮತ್ತು ಈ ಸಮಯದಲ್ಲಿ ನಾವು ನೋಡಬಹುದಾದ ಉತ್ತಮ ಪರಿಹಾರವೆಂದರೆ ಲೈಂಗಿಕ ಕೆಲಸ ಎಂದು ನಾವು ನಂಬಿದ್ದೇವೆ. ನಮ್ಮ ತಿಂಗಳ ಸಂಬಳ ಸುಮಾರು 28,000 ರೂ. ಮತ್ತು ನಾವು ಓವರ್ಟೈಮ್ ಮೂಲಕ 35 ಸಾವಿರದವರೆಗೆ ಗಳಿಸಬಹುದು. ಆದರೆ, ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಇದಕ್ಕಿಂತ ಹೆಚ್ಚಿನದನ್ನು ಗಳಿಸುತ್ತೇವೆ'' ಎಂದಿದ್ದಾರೆ.
ಮಹಿಳೆ ದಿ ಮಾರ್ನಿಂಗ್ಗೆ ಮಾತನಾಡಿ, "ನಾ ಹೇಳುವುದನ್ನು ಯಾರೂ ಒಪ್ಪವುದಿಲ್ಲ, ಆದರೆ ಇದು ಸತ್ಯ" ಎಂದು ಹೇಳಿದರು. Ecotextile.com ನ ಹಿಂದಿನ ವರದಿಯ ಪ್ರಕಾರ, ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾವು ಭಾರತ ಮತ್ತು ಬಾಂಗ್ಲಾದೇಶದಿಂದ 10 ರಿಂದ 20 ಪ್ರತಿಶತದಷ್ಟು ಆರ್ಡರ್ಗಳನ್ನು ಕಳೆದುಕೊಳ್ಳುತ್ತಿದೆ ಎಂದು ಶ್ರೀಲಂಕಾದ ಜಾಯಿಂಟ್ ಅಪ್ಯಾರಲ್ ಅಸೋಸಿಯೇಷನ್ ಫೋರಮ್ ವ್ಯಾಪಾರ ಸಂಸ್ಥೆ ಬಹಿರಂಗಪಡಿಸಿದೆ. ಖರೀದಿದಾರರು ನಂಬಿಕೆ ಈಗ ಕುಗ್ಗಿದೆ.

ಕಡಿಮೆ ಸಮಯದಲ್ಲಿ ಹೆಚ್ಚು ದುಡಿಮೆ
ಮಾರ್ನಿಂಗ್ ಮತ್ತು Ecotextile.com ಹಾಗೂ UK ಯ ಟೆಲಿಗ್ರಾಫ್ ಕೂಡ ಈ ವರ್ಷದ ಜನವರಿಯಿಂದ ರಾಜಧಾನಿ ಕೊಲಂಬೊದಲ್ಲಿ 30 ಪ್ರತಿಶತದಷ್ಟು ಹೊಸ ಮಹಿಳೆಯರು ಲೈಂಗಿಕ ಉದ್ಯಮಕ್ಕೆ ಸೇರಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿಕೊಂಡಿದೆ. ಲೈಂಗಿಕ ಉದ್ಯಮಕ್ಕೆ ಸೇರ್ಪಡೆಗೊಳ್ಳುತ್ತಿರುವ ಹೊಸ ಮಹಿಳೆಯರು ದೇಶದ ಆಂತರಿಕ ಭಾಗದಿಂದ ಬಂದವರು ಎಂದು ವರದಿ ಹೇಳಿದೆ. ಅವರು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಮಹಿಳೆಯರು ಮೊದಲು ಜವಳಿ ಉದ್ಯಮದಲ್ಲಿ ಉದ್ಯೋಗಿಯಾಗಿದ್ದರು.
ಎರಡೂ ಪ್ರಕಟಣೆಗಳು ಈ ಸತ್ಯದ ಮೇಲೆ ದೇಶದ ಪ್ರಮುಖ ಲೈಂಗಿಕ ಕಾರ್ಯಕರ್ತರ ವಕಾಲತ್ತು ಗುಂಪು ಸ್ಟ್ಯಾಂಡ್ ಅಪ್ ಮೂವ್ಮೆಂಟ್ ಲಂಕಾ (SUML) ಅನ್ನು ಉಲ್ಲೇಖಿಸಿವೆ. ಎಸ್ಯುಎಂಎಲ್ನ ಕಾರ್ಯನಿರ್ವಾಹಕ ನಿರ್ದೇಶಕಿ ಆಶಿಲಾ ದಾಂಡೇನಿಯಾ ಅವರು "ತಮ್ಮ ಮಕ್ಕಳು, ಪೋಷಕರು ಅಥವಾ ಅವರ ಒಡಹುಟ್ಟಿದವರಿಗೆ ಆಹಾರ ನೀಡಲು ಅಥವಾ ಚಿಕಿತ್ಸೆ ನೀಡಲು ಉದ್ಯಮಕ್ಕೆ ಪ್ರವೇಶಿಸಿದ್ದಾರೆ" ಎಂದು ವರದಿಯು ಉಲ್ಲೇಖಿಸಿದೆ. ಇದನ್ನು ದೂಗಿಸಲು ಉಳಿದಿರುವ ಏಕೈಕ ಉದ್ಯಮವೆಂದರೆ ಲೈಂಗಿಕ ಉದ್ಯಮ. ಕಡಿಮೆ ಸಮಯದಲ್ಲಿ ಹಣ ದೊರೆಯುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ವೇಶ್ಯಾವಾಟಿಕೆ
ಜವಳಿ ಉದ್ಯಮದ ಮೇಲಿನ ಬಿಕ್ಕಟ್ಟಿನಿಂದಾಗಿ ವೇಶ್ಯಾವಾಟಿಕೆ ದಂಧೆ ಕೂಡ ಬಹಳ ವೇಗವಾಗಿ ಹೆಚ್ಚಾಗುತ್ತಿದೆ. ಹಣದುಬ್ಬರದ ಸಮಸ್ಯೆಯೆ ಇದಕ್ಕೆ ಕಾರಣ ಎಂದು ವರದಿಗಳಲ್ಲಿ ಹೇಳಲಾಗಿದೆ. ಜವಳಿ ಉದ್ಯಮದ ಮಹಿಳೆಯರಿಗೆ ಬೇರೆ ಆಯ್ಕೆಗಳಿಲ್ಲದೆ ವೇಶ್ಯಾವಾಟಿಕೆಗೆ ಗುರಿಯಾದರೆ. ವಿಶೇಷವಾಗಿ ಇಂಧನ, ಆಹಾರ ಮತ್ತು ಔಷಧಿಗಳ ಬೆಲೆಗಳ ಏರಿಕೆಯು ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ. ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಸ್ಥಳೀಯ ಅಂಗಡಿಯವರು ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಾರೆ ಮತ್ತು ಪ್ರತಿಯಾಗಿ ಅವರಿಗೆ ಪಡಿತರ ಮತ್ತು ಔಷಧಿಗಳನ್ನು ನೀಡುತ್ತಾರೆ ಎಂದು ವರದಿಗಳು ಹೇಳಿವೆ. ಪೊಲೀಸ್ ರಕ್ಷಣೆ ಮತ್ತು ನಿಯಮಗಳ ಪ್ರಕಾರ, ಕೊಲಂಬೊ ಬಂದರಿನ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ.

ಗುಂಪು ಮತ್ತು ಮಾಫಿಯಾ
ಈ ಮಹಿಳೆಯರ ಅಸಾಹಯಕತೆಯನ್ನು ಹಲವು ಹಂತಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅನೇಕ ಮಹಿಳೆಯರು ಗ್ರಾಹಕರಿಂದ ಅಸುರಕ್ಷಿತ ಲೈಂಗಿಕತೆಯನ್ನು ಹೊಂದಲು ಒತ್ತಾಯಿಸುತ್ತಾರೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗುತ್ತಿದೆ. ಏಕೆಂದರೆ ಈ ಉದ್ಯಮವೂ ದೊಡ್ಡ ಮಾಫಿಯಾವಾಗುತ್ತಿದೆ.
ಸ್ಥಳೀಯ ಮಟ್ಟದಲ್ಲಿ ಸಣ್ಣ ಗುಂಪುಗಳು ರೂಪುಗೊಳ್ಳಲು ಪ್ರಾರಂಭಿಸಿವೆ. ಅವರು ಲೈಂಗಿಕ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ವರದಿಗಳ ಪ್ರಕಾರ, ಕೃಷಿ ಉತ್ಪಾದನೆಯು ಕಳೆದ ವರ್ಷ ಶೇಕಡಾ 50 ರಷ್ಟು ಕಡಿಮೆಯಾಗಿದೆ. ಮೇ 2021 ರಲ್ಲಿ ರಾಜಪಕ್ಸೆ ಆಡಳಿತವು ನಿಷೇಧಿಸಿದ ರಾಸಾಯನಿಕ ಗೊಬ್ಬರಗಳು ದೇಶದ ಕೃಷಿ ಭೂಮಿಯ ಹೆಚ್ಚಿನ ಭಾಗಗಳನ್ನು ಪಾಳು ಬಿಟ್ಟು, ಜನರ ಸಂಕಟವನ್ನು ಹೆಚ್ಚಿಸಿವೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications