ನಿವೃತ್ತ ಐಎಎಸ್ ಅಧಿಕಾರಿ ಡಾ ಸಿ ಸೋಮಶೇಖರ್ ಆತ್ಮಕತನ 'ನೀನೊಲಿದ ಬದುಕು' ಪುಸ್ತಕ ಬಿಡುಗಡೆ
ಬೆಂಗಳೂರು, ನವೆಂಬರ್ 04: ಕರ್ನಾಟಕಕ್ಕೆ ಡಾ: ಸಿ.ಸೋಮಶೇಖರ್ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಸದಾಕಾಲ ಕ್ರೀಯಾಶೀಲರಾಗಿ ಕೊಡುಗೆ ನೀಡುತ್ತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ನಿವೃತ್ತ ಐಎಎಸ್ ಅಧಿಕಾರಿ ಡಾ: ಸಿ.ಸೋಮಶೇಖರ್ ಅವರ ಆತ್ಮಕಥನ 'ನೀನೊಲಿದ ಬದುಕು' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಅಧಿಕಾರಿಯಾಗಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅಧಿಕಾರ ಇಲ್ಲದಾಗಲೂ ಅಷ್ಟೇ ನಿರಂತರವಾಗಿ ಮಾಡುತ್ತಿದ್ದಾರೆ. ಅವರು ಗಡಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಗಡಿ, ಭಾಷೆ,ಆಧ್ಯಾತ್ಮ, ವಚನ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ, ಅನುಭವ ಇದೆ ಎಂದರು.

ಬದುಕನ್ನು ಒಲಿಸಿಕೊಂಡ ಧೀಮಂತ:
ಅವರು ಬರೆದಿರುವ ಆದರೆ, ಮುದ್ರಿಸದೇ ಇರುವ ಬರಹ ಬಹಳಷ್ಟಿದೆ. ಸೋಮಶೇಖರ್ ಅವರದ್ದು ವರ್ಣ ರಂಜಿತ ಬದುಕು. ಎಲ್ಲಾ ರಂಗದಲಿಯೂ ಬಹಳ ಆಸಕ್ತಿವುಳ್ಳವರು.
ಒಲವನ್ನು ಬದುಕಿನಲ್ಲಿ ಗಳಿಸಿಕೊಳ್ಳಬೇಕಾಗುತ್ತದೆ. ತಾಯಿ ಮಗುವಿನ ಪ್ರೀತಿಯಿಂದ ಹಿಡಿದು ಎಲ್ಲಾ ಸಂಬಂಧ ಗಳಲ್ಲಿ ಒಲವು ಪಡೆದುಕೊಳ್ಳುವುದು ಕಷ್ಟದ ಕೆಲಸ. ನಾನು ಅನ್ನುವುದು ಬಿಟ್ಟಾಗ ಒಲವು ಸಿಗುತ್ತದೆ.ಸೋಮಶೇಖರ್ ಅವರ ಬದುಕಿನಲ್ಲಿ ನಾನು ಎನ್ನುವುದು ಅತ್ಯಂತ ವಿರಳವಾಗಿ ಬಂದಿದೆ. ಯಾವುದೇ ಸ್ಥಾನಮಾನ ಸಿಕ್ಕರೂ ಜನರ ಸೇವೆ ಮಾಡಿದ್ದಾರೆ. ಅವರು ಆಧ್ಯಾತ್ಮವನ್ನು ಬಲ್ಲವರು, ಸಂಪೂರ್ಣವಾಗಿಬದುಕನ್ನು ಒಲಿಸಿಕೊಂಡು, ಗಳಿಸಿಕೊಂಡು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ ಎಂದರು.
ತಾಳ್ಮೆ ಇರಬೇಕು
ತಾಳ್ಮೆ ಇದ್ದವರಿಗೆ ಬದುಕು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಂದೂ ಕೂಡ ಮನುಷ್ಯ ನಿರಾಶರಾಗಬಾರದು. ಅವರು ಅಧಿಕಾರದಲ್ಲಿದ್ದಾಗ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರೋ ಅಷ್ಟೇ ಕ್ರಿಯಾಶೀಲರಾಗಿ ಅಧಿಕಾರ ಇಲ್ಲದಾಗಲೂ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಜನಸಮೂಹವನ್ನು ಗೆದ್ದಾಗ ಇದು ಬರುತ್ತದೆ ಎಂದರು.

ಬಸವ ಪ್ರಶಸ್ತಿ ಪ್ರಾರಂಭಿಸಿದವರು
ಬಸವ ಪ್ರಶಸ್ತಿ ಪ್ರಾರಂಭಿಸಿ, ಅಧಿಕಾರಿಗಳಿಗೆ, ಸಾಹಿತ್ಯ ವರ್ಗಕ್ಕೆ, ಬೇಕಾದವರಾಗಿದ್ದಾರೆ. ಸಮಾಜಕ್ಕೆ ನಗುವನ್ನು ಹರಡುವ ಸ್ವಭಾವದವರು. ಅವರು ಜೀವನದಲ್ಲಿ ನೋವು ಅನುಭವಿಸಿದ್ದಾರೆ ಅದನ್ನು ಮನದಾಳದಲ್ಲಿ ಇಟ್ಟುಕೊಂಡು ನಮಗೆಲ್ಲಾ ಸಂತೋಷ ನೀಡಿದ್ದಾರೆ. ಅವರ ಆಸೆಗಳನ್ನು ಈಡೇರಿಸುವ ದಿನಗಳು ದೂರ ಇಲ್ಲ. ಬಹಳಷ್ಟು ಆತ್ಮಕಥನಗಳಲ್ಲಿ ಹೇಳಿದ್ದಕ್ಕಿಂತ ಮುಚ್ಚಿಡುವುದೇ ಹೆಚ್ಚಿರುತ್ತದೆ. ಕನ್ನಡ ನಾಡಿಗೆ ಭಿನ್ನವಾದ, ಅಪರೂಪದ ಸಾಹಿತಿ, ಅಧಿಕಾರಿಯಾಗಿದ್ದಾರೆ. ಸೋಮಶೇಖರ್ ತಮ್ಮ ಬದುಕಿನ ಮೌಲ್ಯ ನಿರಂತರ ಹರಡಿ. ಇದೇ ಬದುಕಿನ ಬುತ್ತಿ ಎಂದರು. ಗಡಿ ಅಭಿವೃದ್ಧಿಯನ್ನು ಬಹಳಷ್ಟು ಗಟ್ಟಿಯಾಗಿ ಮಾಡಲಿ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಸುನಿಲ್ ಕುಮಾರ್, ವಿ. ಸೋಮಣ್ಣ, ನಿ. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications