ಮೋದಿ, ಸಚಿನ್ ಸಾಲಿನಲ್ಲಿ ಬೆಂಗಳೂರು ಪೊಲೀಸರ ಫೇಸ್ ಬುಕ್ ಪುಟ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ಸಂಸದರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಂತರದ ಸ್ಥಾನ ಸಚಿನ್ ತೆಂಡೂಲ್ಕರ್ ಪಾಲಾಗಿದೆ. ಅತಿ ಹೆಚ್ಚು ಚರ್ಚೆಗೆ ಕಾರಣರಾದ ಲೋಕಸಭೆ ಸದಸ್ಯ ಮೋದಿ ಅವರಾದರೆ, ಸಚಿನ್ ತೆಂಡೂಲ್ಕರ್ ಹೆಚ್ಚು ಚರ್ಚೆಗೊಳಗಾದ ರಾಜ್ಯಸಭಾ ಸದಸ್ಯರು.
ಮೀಮ್ಸ್ ಗಳನ್ನು ಬಳಸುವುದರಲ್ಲಿ ಬೆಂಗಳೂರಿನ ಪೊಲೀಸರು ಪ್ರಖ್ಯಾತರಂತೆ. ಅಷ್ಟೇ ಅಲ್ಲ, ಜತೆಗೆ ಸಾರ್ವಜನಿಕರಿಗೆ ಸ್ಪಂದಿಸುವುದರಲ್ಲೂ ಬೆಂಗಳೂರು ಸಂಚಾರ ಪೊಲೀಸರಿಗೆ ಬಹಳ ಒಳ್ಳೆ ಹೆಸರಿದೆ. ಆ ನಂತರದ ಸ್ಥಾನ ಕೋಲ್ಕತ್ತಾ ಮತ್ತು ಹೈದರಾಬಾದ್ ಪೊಲೀಸರಿಗೆ.
ಒಟ್ಟು ಷೇರ್ ಗಳು, ಚರ್ಚೆ, ಪ್ರತಿಕ್ರಿಯೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಪಟ್ಟಿ ಸಿದ್ಧವಾಗಿದೆ. ಇನ್ನು ಪಟ್ಟಿಯಲ್ಲಿರುವ ಇತರರೆಂದರೆ ಆರ್ ಕೆ ಸಿನ್ಹಾ, ಅಮಿತ್ ಶಾ, ಅಸಾದುದ್ದೀನ್ ಒವೈಸಿ ಮತ್ತು ಭಗ್ವಂತ್ ಮನ್. ಇನ್ನು ಪಿಎಂಒ ಇಂಡಿಯಾ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೂಡ ಫೇಸ್ ಬುಕ್ ನಲ್ಲಿ ಬಹಳ ಜನಪ್ರಿಯ.

ಸಚಿವಾಲಯಗಳ ಪೈಕಿ ವಿದೇಶಾಂಗ ಖಾತೆಗೆ ನಂಬರ್ ಸ್ಥಾನ. ಪಿಎಂಒ ಇಂಡಿಯಾಗೆ 1.37 ಕೋಟಿ ಫಾಲೋವರ್ ಗಳಿದ್ದರೆ, 1.38 ಕೋಟಿ ಫೇಸ್ ಬುಕ್ ಪೇಜ್ ಲೈಕ್ ಗಳಿವೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಗೆ 40.8 ಲಕ್ಷ ಫಾಲೋವರ್ ಗಳು ಹಾಗೂ 40.9 ಲಕ್ಷ ಫೇಸ್ ಬುಕ್ ಪೇಜ್ ಲೈಕ್ ಗಳಿವೆ.
ರಾಜ್ಯ ಸರಕಾರಗಳ ಪೈಕಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹಳ ಜನಪ್ರಿಯರು. ಆ ನಂತರದ ಸ್ಥಾನದಲ್ಲಿರುವವರು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ. ಆಸಕ್ತಿಕರ ಅಂಶವೆಂದರೆ ರಾಜಕೀಯ ಪಕ್ಷಗಳ ಪೈಕಿ ಮೊದಲ ಸ್ಥಾನದಲ್ಲಿ ಬಿಜೆಪಿ ಇದ್ದರೆ, ಆಮ್ ಆದ್ಮಿ ಪಕ್ಷಕ್ಕೆ ಎರಡನೇ ಸ್ಥಾನ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications