Get Updates
Get notified of breaking news, exclusive insights, and must-see stories!

ಪಿತೃ ಪಕ್ಷ 2022: ಈ ಮರಗಳ ಪೂಜೆಯಿಂದ ಸಿಗುತ್ತೆ ಪೂರ್ವಜರ ಆಶೀರ್ವಾದ

ಹಿಂದೂ ಧರ್ಮದಲ್ಲಿ ಸನಾತನ ಕಾಲದಿಂದಲೂ ಮರಗಳನ್ನು ಪೂಜೆ ಮಾಡಲಾಗುತ್ತದೆ. ಈ ಪೂಜೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಪಿತೃ ಪಕ್ಷದಲ್ಲಿಯೂ ಕೆಲವು ಮರಗಳನ್ನು ಪೂಜಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಮರಗಳನ್ನು ಪೂಜಿಸುವುದರಿಂದ ಪೂರ್ವಜರ ಆಶೀರ್ವಾದ ದೊರೆಯುತ್ತದೆ. ಮಾತ್ರವಲ್ಲದೆ ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ. ಹಾಗಾದರೆ ಆ ಮರಗಳು ಯಾವವು ಎಂದು ತಿಳಿಯೋಣ.

ಪಿತೃ ಪಕ್ಷ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಿದೆ. 15 ದಿನಗಳ ಪಿತೃ ಪಕ್ಷದಲ್ಲಿ ಪೂರ್ವಜರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಪಿಂಡದಾನ ಮತ್ತು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಪೂರ್ವಜರ ಆಶೀರ್ವಾದ ದೊರೆಯುತ್ತದೆ. ಇದರೊಂದಿಗೆ ಕೆಲವು ಮರಗಳನ್ನು ಪೂಜಿಸುವುದು ಪಿತೃ ದೋಷವನ್ನು ತೊಡೆದುಹಾಕುತ್ತದೆ ಎಂಬ ನಂಬಿಕೆ ಇದೆ. ಇವು ಯಾವ ಮರಗಳು ಮತ್ತು ಅವುಗಳ ಪ್ರಯೋಜನಗಳೇನು ಎಂದು ತಿಳಿಯೋಣ.

ಪಿತ್ರಾ ದೋಷವನ್ನು ತೊಡೆದುಹಾಕಲು ಮತ್ತು ಪೂರ್ವಜರನ್ನು ಮೆಚ್ಚಿಸಲು ಈ ಅವಧಿಯಲ್ಲಿ ಕೆಲವು ಮರಗಳನ್ನು ಪೂಜಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಮರಗಳನ್ನು ಪೂಜಿಸುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅವುಗಳೆಂದರೆ ಆಲದ ಮರ, ಅರಳಿ ಮರ ಮತ್ತು ಬೇಲ್ ಮರ ಇತ್ಯಾದಿಗಳನ್ನು ಒಳಗೊಂಡಿದೆ. ಪಿತ್ರ ಪಕ್ಷದಲ್ಲಿ ಈ ಮರಗಳನ್ನು ಪೂಜಿಸುವ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಯಿರಿ.

ಪಿತೃಪಕ್ಷದಲ್ಲಿ ಆಲದ ಮರದ ಪೂಜೆ

ಪಿತೃಪಕ್ಷದಲ್ಲಿ ಆಲದ ಮರದ ಪೂಜೆ

ಬನ್ಯಾನ್ ಟ್ರೀ (Banyan tree) ಅಂದರೆ ಆಲದ ಮರ ಎಂದೂ ಕರೆಯುತ್ತಾರೆ. ಪಿತೃಪಕ್ಷದಲ್ಲಿ ಈ ಮರವನ್ನು ಪೂಜಿಸುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಿತೃ ಪಕ್ಷದಲ್ಲಿ ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಆಲದ ಮರಕ್ಕೆ ಅರ್ಪಿಸಿ. ಇದರಿಂದ ಪೂರ್ವಜರ ಆತ್ಮಗಳು ತೃಪ್ತವಾಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ ಆಲದ ಮರವು ಭಾರತದ ರಾಷ್ಟ್ರೀಯ ಮರವೂ ಆಗಿದೆ.

ಪಿತೃಪಕ್ಷದಲ್ಲಿ ಅರಳಿ ಮರ

ಪಿತೃಪಕ್ಷದಲ್ಲಿ ಅರಳಿ ಮರ

ಪೀಪಲ್ ಮರವು ವೈಜ್ಞಾನಿಕವಾಗಿ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಮರವು ಎಲ್ಲಾ ಇತರ ಮರಗಳಿಗಿಂತ ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದು ನಮ್ಮ ಜೀವನದ ಮುಖ್ಯ ಅಂಶವಾಗಿದೆ. ಪಿತೃ ಪಕ್ಷದಲ್ಲಿ ಪೀಪಲ್ ವೃಕ್ಷವನ್ನು ಪೂಜಿಸುವುದರಿಂದ ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ. ಈ ಅವಧಿಯಲ್ಲಿ ನಿತ್ಯ ಮಧ್ಯಾಹ್ನದ ವೇಳೆಗೆ ನೀರಿಗೆ ಹಾಲನ್ನು ಬೆರೆಸಿ ಪೀಪಲ್ ಮರಕ್ಕೆ ಅರ್ಪಿಸಿ. ಸಾಯಂಕಾಲ ಪೀಪಲ್ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಪಿತೃ ಶಾಂತಿ ಮಂತ್ರವನ್ನು ಪಠಿಸಿ. ಇದರಿಂದ ಜೀವನದಲ್ಲಿ ಸುಖ ಶಾಂತಿ ನೆಲೆಸಲಿದೆ.

ಪಿತೃಪಕ್ಷದಲ್ಲಿ ಬಿಲ್ವಪತ್ರೆ ಗಿಡ

ಪಿತೃಪಕ್ಷದಲ್ಲಿ ಬಿಲ್ವಪತ್ರೆ ಗಿಡ

ಪೂರ್ವಜರು ಬಿಲ್ವಪತ್ರೆ ಗಿಡವನ್ನು ನೆಟ್ಟು ನಿಯಮಿತವಾಗಿ ಆರೈಕೆ ಮಾಡುವುದರಿಂದ ಸಂತುಷ್ಟರಾಗುತ್ತಾರೆ ಎಂದು ನಂಬಲಾಗುತ್ತದೆ. ಪಿತೃ ಪಕ್ಷದಲ್ಲಿ ಪ್ರತಿದಿನ ಬೆಳಗ್ಗೆ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಬಿಲ್ವಪತ್ರೆ ಗಿಡಕ್ಕೆ ಅರ್ಪಿಸಿ. ಹಾಗೆ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಹಸು, ನಾಯಿ, ಕಾಗೆಗಳಿಗೆ ಆಹಾರ

ಹಸು, ನಾಯಿ, ಕಾಗೆಗಳಿಗೆ ಆಹಾರ

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ಹಸುಗಳು, ನಾಯಿಗಳು ಮತ್ತು ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಇದನ್ನು ಮಾಡುವುದರಿಂದ ಪೂರ್ವಜರಿಗೆ ಸಂತೋಷ ಸಿಗುತ್ತದೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರಿಂದ ಅವರು ಶಾಂತಿ-ಸಮೃದ್ಧಿಯ ಆಶೀರ್ವಾದವನ್ನು ನೀಡುತ್ತಾರೆ ಎಂದು ನಂಬಲಾಗಿದೆ.

ಮಕ್ಕಳಿಗಾಗಿ ಮಾತಾ-ಪಿತೃಗಳು ಮಾಡಿದ ತ್ಯಾಗ, ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡುಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೆ ತಪ್ಪಿಲ್ಲ. ತಾಯಿ, ತಂದೆಯ ಋಣ ಎಂದಿಗೂ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ಮನುಷ್ಯ ತನ್ನ ಜೀವಿತ ಕಾಲದಲ್ಲಿ ಪ್ರತಿವರ್ಷ ಒಂದು ದಿನವಾದರೂ ತಮ್ಮ ಹೆತ್ತವರ ಸ್ಮರಣೆಯಲ್ಲಿ ಉಳಿಯಲಿ ಎಂದೇ ನಮ್ಮ ಪೂರ್ವಜರು ಈ ವಿಧಿಯನ್ನು ಆಚರಣೆಗೆ ತಂದಿದ್ದು, ಸರ್ವ ರೀತಿಯಿಂದಲೂ ಇದು ಪವಿತ್ರ ಕರ್ತವ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+