OnePlus: ಒನ್ಪ್ಲಸ್ ಫೋನ್ಸ್ ಈಗ ಕೊಂಡರೆ ಭರ್ಜರಿ ಉಳಿತಾಯ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಗ್ರಾಕಕರು ಡಿಸ್ಕೌಂಟ್ ಯಾವಾಗ ಬರುತ್ತದೆ ಎಂದು ಕಾಯುತ್ತಲೇ ಇರುತ್ತಾರೆ. ಆ ದಿನವನ್ನು ನೋಡಿಕೊಂಡು ತಮ್ಮ ನೆಚ್ಚಿನ ಫೋನ್ ತೆಗೆದುಕೊಂಡು ಹಣವನ್ನು ಉಳಿಸಿದರೆ ಆತು ಎಂಬ ಲೆಕ್ಕಾಚಾರ ಅವರದ್ದಾಗಿರುತ್ತದೆ. ಇಷ್ಟೇ ಅಲ್ಲದೆ ತಮಗೆ ಇಷ್ಟವಾದ ಪೋನ್ಗಳನ್ನು ಕೈಗೆಟಕುವ ದರದಲ್ಲಿ ಪಡೆಯುವ ಚಾನ್ಸ್ ಸಹ ಗ್ರಾಹಕರಿಗೆ ಇರುತ್ತದೆ. ಇಂತಹದ್ದೇ ಸೇಲ್ ಅನ್ನು ಈಗ ಒನ್ ಪ್ಲಸ್ ಆರಂಭಿಸಿದೆ.
ನೀವು ಏನಾದ್ರೂ ಚೀನಾ ಮೂಲದ ಕಂಪನಿಯ ಅಭಿಮಾನಿಗಳು ಆಗಿದ್ದರೆ, ಈ ಫೋನ್ ತೆಗೆದುಕೊಳ್ಳುವ ಆಸೆ ನಿಮ್ಮಲ್ಲಿ ಇದ್ದರೆ, ಇದೋ ನಿಮಗಿದು ಸುವರ್ಣ ಅವಕಾಶ. ಒನ್ಪ್ಲಸ್ ನಿಂದ ಹೊಸ ಸೇಲ್ ಘೋಷಿಸಲಾಗಿದೆ. ಕಂಪನಿಯು ಈ ಹೊಸ ಮಾರಾಟವನ್ನು ಒನ್ಪ್ಲಸ್ ಕಮ್ಯುನಿಟಿ ಸೇಲ್ ಎಂದು ಹೆಸರಿಸಿದೆ. ಒನ್ಪ್ಲಸ್ ತನ್ನ ಗ್ರಾಹಕರಿಗೆ ಈ ಮಾರಾಟದಲ್ಲಿ ಅದ್ಭುತ ಕೊಡುಗೆಗಳು, ರಿಯಾಯಿತಿಗಳು ನೀಡುತ್ತಿದೆ.

ಎಷ್ಟು ದಿನದ ವರೆಗೆ ರಿಯಾಯಿತಿ?
ನೀವು ಒನ್ ಪ್ಲಸ್ ಮೊಬೈಲ್ ಫೋನ್ಗಳ ಅಭಿಮಾನಿ ಆಗಿದ್ದು, ಈ ಫೊನ್ಗಳನ್ನು ತೆಗೆದುಕೊಳ್ಳಲು ಬಯಸಿದ್ದಲ್ಲಿ ಇವುಗಳನ್ನು ಇನ್ನು ಐದು ದಿನದಲ್ಲಿ ಪಡೆದರೆ ಜೇಬಿಗೆ ಕತ್ತರಿ ಬೀಳುವುದು ತಪ್ಪುತ್ತದೆ. ಕಮ್ಯುನಿಟಿ ಸೇಲ್ ಒನ್ಪ್ಲಸ್ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಲಭ್ಯ. ಈ ಮಾರಾಟವು 6 ಜೂನ್ 2024 ರಿಂದ 11 ಜೂನ್ 2024 ರವರೆಗೆ ನಡೆಯುತ್ತದೆ. ನೀವು ಸ್ಮಾರ್ಟ್ಫೋನ್ಗಳು ಮತ್ತು ಇತರ ಪ್ರೀಮಿಯಂ ಗ್ಯಾಜೆಟ್ಗಳನ್ನು 6 ದಿನಗಳವರೆಗೆ ದೊಡ್ಡ ರಿಯಾಯಿತಿಗಳೊಂದಿಗೆ ಖರೀದಿಸಬಹುದು.
ಮತ್ತೇನಿದೆ ಆಫರ್?
ಕಮ್ಯುನಿಟಿ ಸೇಲ್ನಲ್ಲಿ ಗ್ರಾಹಕ ತನ್ನಿಷ್ಟದ ಗೆಜೆಟ್ ಖರೀದಿಸಿದ್ದೇ ಆದಲ್ಲಿ, ವಿಶೇಷ ಕೊಡುಗಡೆಗಳ ಲಾಭ ಪಡೆಯಬಹುದು. ವೆಬ್ಸೈಟ್ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಮಾರಾಟದ ಸಮಯದಲ್ಲಿ ಗ್ರಾಹಕರು ಒನ್ಪ್ಲಸ್ ಕೀಬೋರ್ಡ್ 81 ಪ್ರೊ ( 17,999 ರೂ) ಅನ್ನು ಗೆಲ್ಲಬಹುದು. ಈ ಪ್ರೀಮಿಯಂ ಕೀಬೋರ್ಡ್ ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ

ಭಾರೀ ರಿಯಾಯಿತಿ
ಒನ್ಪ್ಲಸ್ Open ಕಂಪನಿಯ ಮೊದಲ ಫೋಲ್ಡಬಲ್ ಸ್ಮಾರ್ಟ್ಫೋನ್. ಈ ಸ್ಮಾರ್ಟ್ಫೋನ್ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಒನ್ಪ್ಲಸ್ Open ಬೆಲೆ ಸುಮಾರು 1 ಲಕ್ಷ 40 ಸಾವಿರ ರೂ. ಒನ್ಪ್ಲಸ್ ಕಮ್ಯುನಿಟಿ ಸೇಲ್ನಲ್ಲಿ ಈ ಫೋನ್ಗೆ ಶೇಕಡಾ 14 ರಿಂದ 16 ಪರ್ಸೆಂಟ್ ರಿಯಾಯಿತಿ ಲಭ್ಯ.
OnePlus Buds Pro 2 ಖರೀದಿಸಿದರೆ ನೀವು ಶೇಕಡಾ 35 ರಷ್ಟು ಹಣವನ್ನು ಉಳಿಸಬಹುದು. ಲಾಂಚ್ ಪ್ರೈಸ್ 13,999 ಆಗಿದ್ದು, ಬಡ್ಸ್ ಅನ್ನು ನೀವು ಈಗ 8,999 ರೂ.ಗೆ ಖರೀದಿಸಬಹುದು. OnePlus 12R ಫೋನ್ಗಳ ಮೇಲೆ ಶೇಕಡಾ 7ರಿಂದ 10 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. OnePlus 12 ಈಗ ನೀವು ಖರೀದಿಸಿದರೆ ಒಳ್ಳೆಯ ಪ್ರೀಮಿಯಂ ಫೋನ್ ನಿಮ್ಮ ಕೈಗೆ 60,724 ರೂಪಾಯಿಗೆ ಲಭ್ಯ. ಈ ಫೋನ್ ಬಿಡುಗಡೆ ಆದಾಗ 69,999 ರೂ ಬೆಲೆ ಇತ್ತು. OnePlus Nord CE4 ಫೋನ್ ಖರೀದಿಸಿದಾಗಲು ಆಕರ್ಷಕ ಡಿಸ್ಕೌಂಟ್ ಹಾಗೂ ಬ್ಯಾಂಕ್ ಆಫರ್ಗಳನ್ನು ಪಡೆಯಬಹುದು.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications