'ಎಸ್.ಎಲ್.ಭೈರಪ್ಪ ಅಂತವರ ಕೆಟ್ಟ ಮಾನಸಿಕ ಸಂತತಿಗೆ ನನ್ನ ಧಿಕ್ಕಾರವಿದೆ'
ಹಳೆಯ ಪುಸ್ತಕದಲ್ಲಿ "ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ" ಎಂಬ ಸಾಲು ಇದೆ. ಆದರೆ ಹೊಸ ಪುಸ್ತಕದಲ್ಲಿ ಈ ಸಾಲನ್ನೇ ಕಿತ್ತುಹಾಕಲಾಗಿದ್ದು ಸಂವಿಧಾನ ರಚನೆಯಲ್ಲಿ ಯಾವ ಶ್ರಮವೂ ಇಲ್ಲದ ಸದಸ್ಯರೊಬ್ಬರನ್ನು ಅವರೇ ಸಂವಿಧಾನ ರಚಿಸಿದರು ಎನ್ನುವ ಭಾವನೆ ಬರುವಂತೆ ಪರಿಚಯಿಸಲಾಗಿದೆ.
ಭಾರತಕ್ಕೆ ಸಂವಿಧಾನ ಬರೆದುಕೊಟ್ಟಿದ್ದು ಅಂಬೇಡ್ಕರ್ ಮಾತ್ರವೇ ಎಂದು ಕರಡು ಸಮಿತಿಯ ಎಲ್ಲಾ ಸದಸ್ಯರೂ ಹೇಳಿದ್ದಾರೆ. ಹೀಗಿರುವಾಗ ಬಾಬಾ ಸಾಹೇಬರ ಕುರಿತು ಗೊತ್ತಿದ್ದ ತಪ್ಪು ಮಾಹಿತಿ ನೀಡುವ ತಿರುಚಿದ ಪಠ್ಯವನ್ನು ಮಕ್ಕಳೇಕೆ ಓದಬೇಕು?
ಇನ್ನು ಬಹು ಮುಖ್ಯವಾಗಿ ನಮ್ಮ ನಡುವಿನ ಸಾಹಿತಿ ಎನಿಸಿಕೊಂಡ ಎಸ್.ಎಲ್.ಭೈರಪ್ಪನವರು ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಆಗ್ರಹಿಸಿದ್ದು, ಇಂದಿರಾ ಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು ಎಂದು ಹೇಳಿದ್ದಾರೆ.

ಆದರೆ ಬಾಬಾ ಸಾಹೇಬರ ವಿಷಯದಲ್ಲಿ ಮತ್ತು ಇನ್ನಿತರ ಸಂಗತಿಗಳ ಸಂದರ್ಭದೊಳಗೆ ವಾಸ್ತವ ಸಂಗತಿಗಳನ್ನು ಮರೆಮಾಚುವ ಸ್ಪಷ್ಟವಾದ ಸಂಗತಿಗಳು ಕಾಣಿಸುತ್ತಿದ್ದರೂ ಆ ಬಗ್ಗೆ ಮಾತನಾಡದೇ ಭೈರಪ್ಪನವರು ಜಾಣ ಮೌನ ವಹಿಸಿರುವುದು ಅವರ ಮಾನಸಿಕತೆ ಹಾಗೂ ಜಾತಿಗ್ರಸ್ಥ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಭೈರಪ್ಪನವರೇ, ಇಂದಿರಾ ಗಾಂಧಿ ಕಾಲದಲ್ಲಿ ಬುದ್ದಿವಂತರು ಹಾಗೂ ಮಹಾನ್ ವಿದ್ವಾಂಸರಿದ್ದರು. ಅವರಿಗೆ ನೀವು ಆ ಕಾಲಕ್ಕೆ ಹೊಂದುತ್ತಿದ್ದ ಅಜ್ಞಾನಿ ಚಕ್ರತೀರ್ಥ ಎಂಬ ಸಂಗತಿಯು ತಿಳಿದಿದ್ದರಿಂದಲೇ ನಿಮ್ಮನ್ನು ಅವರು ಹೊರಗಿಟ್ಟಿದ್ದಾರೆ. ನನ್ನ ಪ್ರಕಾರ ನಿಮ್ಮಂತಹ ಜಾತಿವಾದಿ ಪೂರ್ವಾಗ್ರಹ ಪೀಡಿತರನ್ನು ಅವರು ಹೊರಗಿಟ್ಟಿದ್ದೇ ಸರಿಯಾದ ನಡೆ ಎಂಬುದು ನನ್ನ ಅಭಿಪ್ರಾಯ.

ಓರ್ವ ಬರಹಗಾರ ತನ್ನ ಬರಹ ಸಾಮರ್ಥ್ಯವನ್ನು ಮತ್ತು ಆಲೋಚನಾ ಶಕ್ತಿಯನ್ನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬಳಸಿದರೆ ಆತ ಸಮಾಜದ್ರೋಹಿ ಆಗಿರುತ್ತಾನೆ. ಕಣ್ಣೆದುರಿಗೇ ಹತ್ತಾರು ಪಠ್ಯದ ಅಪದ್ಧಗಳು ಇದ್ದಾಗ ಅದನ್ನು ಸರಿಪಡಿಸದೇ ಜ್ಞಾನ ಭ್ರಷ್ಟತೆಯನ್ನು ಎಸಗುತ್ತಿರುವ ಭೈರಪ್ಪನವರು ಹಿಂದೆ ಹೇಳಿದಂತೆಯೇ ಓರ್ವ ಸಾಮಾಜಿಕ ವಂಚಕ.
ಜ್ಞಾನ ಮತ್ತು ಸಂಸ್ಕಾರಕ್ಕೆ ಯಾವುದೇ ಜಾತಿಯಿಲ್ಲ, ಉತ್ತಮ ಸಂಸ್ಕಾರ & ಜ್ಞಾನ ಉಳ್ಳವನು ತಮ್ಮ ಜಾತಿಗೆ ಸೇರಬಲ್ಲ ಎಂಬ ಮಾತು ರೂಢಿಯಲ್ಲಿದ್ದರೂ ಜಾತಿ ಆಧಾರಿತವಾಗಿ ಬರಹಗಾರರ ಬರಹಗಳನ್ನು ಬಳಸಿಕೊಂಡು ಪಠ್ಯವನ್ನು ರಚಿಸಿರುವುದು ಇವರ ಮಾನಸಿಕ ಅಧ:ಪತನಕ್ಕೆ ಸಾಕ್ಷಿಯಾಗಿದೆ.
ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಮನರಂಜನೆ ಕ್ಷೇತ್ರವನ್ನು ಭ್ರಷ್ಟಗೊಳಿಸಿ ಎಲ್ಲದರಲ್ಲೂ ವೈದಿಕಶಾಹಿಯ ದುರ್ಬುದ್ಧಿಯನ್ನು ತುರುಕಿ ಸಮಾಜವನ್ನು ಮೌಢ್ಯ ಮತ್ತು ಅಜ್ಞಾನ ಹಾಗೂ ಅಸಮಾನತೆಯ ಕಡೆಗೆ ಕೊಂಡೊಯ್ಯಲು ಹೊರಟಿರುವ ಭೈರಪ್ಪ ಅಂತವರ ಕೆಟ್ಟ ಮಾನಸಿಕ ಸಂತತಿಗೆ ನನ್ನ ಧಿಕ್ಕಾರವಿದೆ!
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications