Monkey in Polling Booth: ಮತಗಟ್ಟೆಯಲ್ಲಿ ಮಂಗ: ಮುಂದೇನಾಯ್ತು ವಿಡಿಯೋ ನೋಡಿ...
ಮಹಾರಾಷ್ಟ್ರದ 8 ಸಂಸದೀಯ ಸ್ಥಾನಗಳಿಗೆ ಶುಕ್ರವಾರ (ಏಪ್ರಿಲ್ 26) ಮತದಾನ ನಡೆಯಿತು. ರಾಜ್ಯದ ವಾರ್ಧಾ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಮತಗಟ್ಟೆಗೆ ಮಂಗವೊಂದು ಆಗಮಿಸಿದೆ. ಇದರಿಂದ ಮತಗಟ್ಟೆಯಲ್ಲಿ ಮತದಾರರು ಸೇರಿದಂತೆ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ಅಷ್ಟಕ್ಕೂ ಮಂಗ ತಾನು ಸಿಂಗಲ್ ಆಗಿ ಮತಗಟ್ಟೆಗೆ ಬಂದಿರಲಿಲ್ಲ. ಬದಲಿಗೆ ಓರ್ವ ವ್ಯಕ್ತಿಯೊಂದಿಗೆ ಆಗಮಿಸಿತ್ತು.
ಮತಕೇಂದ್ರಕ್ಕೆ ಬಂದ ವ್ಯಕ್ತಿಯ ಹೆಗಲ ಮೇಲೆ ಹಾಗೂ ತಲೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಿದ್ದ ಮಂಗನನ್ನು ಕಂಡು ಜನ ಶಾಕ್ ಆಗಿದ್ದಾರೆ. ಮತಗಟ್ಟೆಯಲ್ಲಿ ಏನೆಲ್ಲಾ ದಾಂದಲೆ ಮಾಡುತ್ತೋ ಅನ್ನೋ ಆತಂಕವನ್ನು ಮಂಗ ಸೃಷ್ಟಿಸಿತ್ತು. ಆದರೆ ಮಂಗ ಅಷ್ಟೇಲ್ಲಾ ಮೈ ಮೇಲೆ ಎಗರಾಡುತ್ತಿದ್ದರೂ ವ್ಯಕ್ತಿ ಮಾತ್ರ ಭಯಪಡದೆ ಗೊಂದಲಕ್ಕೊಳಗಾಗದೆ ಮತಗಟ್ಟೆಯತ್ತ ನಡೆದುಕೊಂಡು ಹೋಗಿರುವ ದೃಶ್ಯ ವೈರಲ್ ಆಗಿದೆ.

#WATCH | Vinod Kshirsagar says, "It (Langur) has been with me for the past 3 months. Stray dogs had attacked it and it received 3 stitches. It doesn't go to anyone else but just stays with me wherever I go...So, it accompanied me in voting too...It is like my child. It didn't… https://t.co/Fo30IrHs8R pic.twitter.com/jCM64GWq4V
— ANI (@ANI) April 26, 2024
ವಿನೋದ್ ಕ್ಷೀರಸಾಗರ್ ಎಂಬುವವರು ವಾರ್ಧಾದ ಮತಗಟ್ಟೆಯಲ್ಲಿ ಮತ ಚಲಾಯಿಸಲು ತಮ್ಮ ಸಾಕು ಪ್ರಾಣಿ ಮಂಗನೊಂದಿಗೆ ಆಗಮನಿಸಿದರು. ವಿನೋದ್ ಕ್ಷೀರಸಾಗರ್ ಅವರು ತನ್ನ ಮುದ್ದಿನ ಸಾಕು ಮಂಗಕ್ಕೆ 'ಬಜರಂಗ್' (bajrang) ಎಂದು ಹೆಸರಿಟ್ಟಿದ್ದಾರೆ.
ಮತಗಟ್ಟೆ ವಿನೋದ್ ಮಂಗನೊಂದಿಗೆ ಆಗಮಿಸುತ್ತಿದ್ದಂತೆ ಮನುಷ್ಯರು ಮತ್ತು ಮಂಗಗಳ ನಡುವಿನ ಸ್ನೇಹ ಚರ್ಚೆಯ ವಿಷಯವಾಯಿತು. ಅಷ್ಟಕ್ಕೂ ವಿನೋದ್ ಮಂಗನೊಂದಿಗೆ ಮತಗಟ್ಟೆಗೆ ಬಂದಿದ್ದು ಯಾಕೆ? ಇದಕ್ಕೆ ವಿನೋದ್ ಹೇಳುವುದೇನು ತಿಳಿಯೋಣ.

ನಾಯಿ ಕಚ್ಚಿ ಗಾಯಗೊಂಡಿದ 'ಬಜರಂಗ್'
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಈ ಅನನ್ಯ ಸ್ನೇಹ ಸುಮಾರು ಮೂರು ತಿಂಗಳ ಹಿಂದೆ ಪ್ರಾರಂಭವಾಯಿತು. ವಿನೋದ ಕ್ಷೀರಸಾಗರ್ ಅವರಿಗೆ 'ಬಜರಂಗ್' ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿತು. ಹೌದು... ವಿನೋದ್ ಕ್ಷೀರಸಾಗರ್ ಪ್ರಕಾರ, ಮೂರು ತಿಂಗಳ ಹಿಂದೆ ಈ 'ಬಜರಂಗ್'ಗೆ ನಾಯಿಯೊಂದು ಕಚ್ಚಿತ್ತು. ವಿನೋದ್ ತಕ್ಷಣ ಅದನ್ನು ವೈದ್ಯರ ಬಳಿ ಕರೆದುಕೊಂಡು ಹೋದರು.
ಚಿಕಿತ್ಸೆ ನಂತರ ವೈದ್ಯರು 'ಬಜರಂಗ್'ಗೆ ಮೂರು ಹೊಲಿಗೆಗಳನ್ನು ಹಾಕಿದರು. ಇದಾದ ಬಳಿಕ 'ಬಜರಂಗ್' ವಿನೋದ್ ಅವರು ಬಿಟ್ಟು ಇರಲೇ ಇಲ್ಲ. ಕಳೆದ ಮೂರು ತಿಂಗಳಿಂದ ನನ್ನೊಂದಿಗೆ 'ಬಜರಂಗ್' ಇದೆ. ನಾನು ಎಲ್ಲಿಗೆ ಹೋದರೂ ಈ ಮಂಗ ಕೂಡ ನನ್ನ ಜೊತೆ ಬರುತ್ತದೆ ಎನ್ನುತ್ತಾರೆ ವಿನೋದ್.
ಈ 'ಬಜರಂಗ್' ಕುರಿತು ಮತ್ತಷ್ಟು ಮಾತನಾಡಿದ ವಿನೋದ್ ಕ್ಷೀರಸಾಗರ್, ಇಂದು ನಾನು ಮತಗಟ್ಟೆಗೆ ಮತ ಹಾಕಲು ಬಂದಾಗಲೂ ನನ್ನ ಜತೆ 'ಬಜರಂಗ್' ಬಂದಿದ್ದನು.
ವಿನೋದ್ ಕ್ಷೀರಸಾಗರ್ ಈ 'ಬಜರಂಗ್' ತಂದಾಗ ನಾಯಿ ಕಡಿತದಿಂದ ಅದರ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆಯ ನಂತರ ವೈದ್ಯರು ಮೂರು ಹೊಲಿಗೆಗಳನ್ನು ಹಾಕಿದರು. ವಿನೋದ್ ಕ್ಷೀರಸಾಗರ್ ಅವರು ಚೇತರಿಸಿಕೊಳ್ಳುವವರೆಗೂ ಈ 'ಬಜರಂಗ್'ವನ್ನು ನೋಡಿಕೊಂಡರು.
'ಬಜರಂಗ್' ನನ್ನು ಮಕ್ಕಳಂತೆ ನೋಡಿಕೊಂಡ ವಿನೋದ್
ವಿನೋದ್ ಅವರು ಬಜರಂಗನನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರು ಅದಕ್ಕೆ ದ್ರಾಕ್ಷಿ, ಸೇಬು ಮತ್ತು ಇತರ ವಸ್ತುಗಳ ಜೊತೆಗೆ ಹಾಲು ಕೊಟ್ಟು ನಿತ್ಯ ಆರೈಕೆ ಮಾಡುತ್ತಾರೆ. ಮತದಾನದ ಸಮಯದಲ್ಲಿ ಮತಗಟ್ಟೆಯ ಸಿಬ್ಬಂದಿ 'ಬಜರಂಗ್' ಅನ್ನು ಒಳಗೆ ತರದಂತೆ ತಡೆದರು. ಆದರೆ ನಂತರ ಅದನ್ನು ಒಳಗೆ ಬಿಡಲಾಯಿತು. ವಿನೋದ್ ಮಂಗನೊಂದಿಗೆ ಮತಚಲಾಯಿಸಿ ಹೊರಬಂದಿದ್ದಾರೆ.
ವಿನೋದ್ ಕ್ಷೀರಸಾಗರ್ ಅವರು ತಮ್ಮನ್ನು 'ಬಜರಂಗ್' ತುಂಬಾ ಪ್ರೀತಿಸುತ್ತಾನೆ ಎಂದು ಹೇಳುತ್ತಾರೆ. ನಾನು ಹೊಲಗಳಿಗೆ, ಮಾರುಕಟ್ಟೆಗೆ ಅಥವಾ ಬೇರೆಲ್ಲಿಗೆ ಹೋದರೂ 'ಬಜರಂಗ್' ನನ್ನೊಂದಿಗೆ ಬರುತ್ತಾನೆ. ಹೀಗಾಗಿ ನಾನು ಕೂಡ ಅದನ್ನು ಬಿಟ್ಟು ಹೋಗುವುದಿಲ್ಲ ಎನ್ನುತ್ತಾರೆ ವಿನೋದ್.
ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ
ಈ ವೀಡಿಯೊಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವ್ಯಕ್ತಿಯನ್ನು ದೂಷಿಸಿದ್ದಾರೆ. ಮತದಾನದಂತಹ ಗಂಭೀರ ಘಟನೆಯನ್ನು ಸಾರ್ವಜನಿಕ ಪ್ರದರ್ಶನವಾಗಿ ಪರಿವರ್ತಿಸಿದ್ದಾರೆ. ಅವರು ಸುದ್ದಿಯಾಗಲು ಕೋತಿಯನ್ನು ಮತಗಟ್ಟೆಗೆ ಕರೆತಂದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಇನ್ನೂ ಅನೇಕ ಬಳಕೆದಾರರು ಈ ಘಟನೆಯಲ್ಲಿ ಹಾಸ್ಯವನ್ನು ಕಂಡುಕೊಂಡರು. ಪ್ರಕ್ರಿಯೆಯಲ್ಲಿ ರಾಜಕಾರಣಿಗಳನ್ನು ಗೇಲಿ ಮಾಡಿದ್ದಾರೆ. "ಮನುಷ್ಯನು ತನ್ನೊಂದಿಗೆ ಅಭ್ಯರ್ಥಿಯನ್ನು ಕರೆತಂದಿದ್ದಾನೆಯೇ?" ಎಂದು ಬಳಕೆದಾರರು ಗೇಲಿ ಮಾಡಿದ್ದಾರೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications