Karnataka Waterfalls: ಈ ಮಳೆಗಾಲದಲ್ಲಿ ನೀವು ಭೇಟಿ ನೀಡಲೇಬೇಕಿರುವ ರಾಜ್ಯದ ಮನಮೋಹಕ ಜಲಪಾತಗಳಿವು
ಕರ್ನಾಟಕವು ಶ್ರೀಮಂತ ಪರಂಪರೆ ಹಾಗೂ ಪ್ರಕೃತಿಗೆ ಹೆಸರುವಾಸಿಯಾದ ರಾಜ್ಯವಾಗಿದೆ. ಹೆಸರಾಂತ ಜಲಪಾತಗಳಿಗೆ ನೆಲೆಯಾಗಿದೆ. ಈ ನೈಸರ್ಗಿಕ ಅದ್ಭುತಗಳು ಕೇವಲ ಪ್ರವಾಸಿ ತಾಣಗಳಾಗಿರದೇ, ಕನ್ನಡ ಸಾಹಿತ್ಯ ಹಾಗೂ ಸಂಗೀತಕ್ಕೆ ಸ್ಫೂರ್ತಿಯಾಗಿದೆ. ನೀವು ನಗರ ಜೀವನದಿಂದ ಬೇಸತ್ತಿದ್ದರೆ, ಕರ್ನಾಟಕದ ಈ ಮನಮೋಹಕ ಜಲಪಾತಗಳಿಗೆ ಭೇಟಿ ನೀಡಿ ಆನಂದಿಸಬಹುದು.
ಜೋಗ ಜಲಪಾತ
ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ಕರ್ನಾಟಕದ ಅದ್ಬುತಗಳಲ್ಲಿ ಒಂದಾಗಿದೆ. ಶರಾವತಿ ನದಿಯಿಂದ ಈ ಜಲಪಾತವು ಉದ್ಬವಿಸಿದೆ. ಜೋಗ ಜಲಪಾತವು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಅದ್ಭುತವಾದ ಜಲಪಾತವು ಮಳೆಗಾಲದಲ್ಲಿ ಭವ್ಯವಾಗಿ ಕಾಣಿಸುತ್ತದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಕೃತಿ ಪ್ರೀಯರನ್ನು ಆಕರ್ಷಿಸುತ್ತದೆ.

ಅಬ್ಬೆ ಜಲಪಾತ
ಮತ್ತೊಂದು ಗಮನಾರ್ಹ ಜಲಪಾತವೆಂದರೆ ಮಡಿಕೇರಿ ಬಳಿಯ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಬ್ಬೆ ಜಲಪಾತ. ಹಚ್ಚ ಹಸಿರಿನ ಕಾಫಿ ತೋಟಗಳು ಮತ್ತು ಎಸ್ಟೇಟ್ಗಳಿಂದ ಸುತ್ತುವರೆದಿರುವ ಅಬ್ಬೆ ಜಲಪಾತವು ಸುಂದರವಾದ ಅನುಭವವನ್ನು ನೀಡುತ್ತದೆ. ಇದು ಫೋಟೊಗ್ರಾಪಿ ಮತ್ತು ಕುಟುಂಬ ಪ್ರವಾಸಗಳಿಗೆ ಅತ್ಯಂತ ಪ್ರೆಕ್ಷನೀಯ ಸ್ಥಳವಾಗಿದೆ.
ಹೆಬ್ಬೆ ಜಲಪಾತ
ಚಿಕ್ಕಮಗಳೂರಿನಲ್ಲಿರುವ ಹೆಬ್ಬೆ ಜಲಪಾತವು ಮತ್ತೊಂದು ಆಕರ್ಷಕ ತಾಣವಾಗಿದೆ. ಈ ಜಲಪಾತದ ಪ್ರವೇಶವು ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಬರುತ್ತದೆ. ದಟ್ಟವಾದ ಕಾಡುಗಳ ಮೂಲಕ ರೋಮಾಂಚಕ ಜೀಪ್ ಸವಾರಿಯನ್ನು ನೀವಿಲ್ಲಿ ಮಾಡಬಹುದು. ಜಲಪಾತವನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ - ಬಿಗ್ ಫಾಲ್ಸ್ ಮತ್ತು ಸ್ಮಾಲ್ ಫಾಲ್ಸ್. ಈ ಎರಡೂ ಜಲಪಾತಗಳ ಸುತ್ತಮುತ್ತ ಬರುವ ಪ್ರದೇಶಗಳಲ್ಲಿ ಸೌಂದರ್ಯ ದೇವತೆ ಧರೆಗಿಳಿದು ಬಂದಿದ್ದಾಳೆ ಎಂದು ಹೇಳಲಾಗುತ್ತದೆ.

ಲಕ್ಷ್ಮಣ ತೀರ್ಥ ಜಲಪಾತ
ಇರ್ಪು ಜಲಪಾತವನ್ನು ಲಕ್ಷ್ಮಣ ತೀರ್ಥ ಜಲಪಾತ ಎಂದೂ ಕರೆಯುತ್ತಾರೆ. ಇದು ಕೊಡಗು ಜಿಲ್ಲೆಯಲ್ಲಿದೆ. ಈ ಜಲಪಾತವು ಧಾರ್ಮಿಕ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಮನುಷ್ಯರ ಪಾಪಗಳನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಇರ್ಪು ಜಲಪಾತಕ್ಕೆ ಚಾರಣವನ್ನು ಕೈಗೊಳ್ಳಬಹುದಾಗಿದೆ. ಇದು ಪಶ್ಚಿಮ ಘಟ್ಟಗಳ ರುದ್ರರಮಣೀಯ ಸ್ಥಳಗಳಲ್ಲಿ ಒಂದಾಗಿದೆ.

ಶಿವನಸಮುದ್ರ ಜಲಪಾತ
ಕೊನೆಯದಾಗಿ, ಕಾವೇರಿ ನದಿಯ ಮೇಲಿರುವ ಶಿವನಸಮುದ್ರ ಜಲಪಾತವು ಭೇಟಿ ನೀಡಲೇಬೇಕಾದ ಮತ್ತೊಂದು ಸ್ಥಳವಾಗಿದೆ. ಈ ಜಲಪಾತವು ಶಿವನಸಮುದ್ರ ದ್ವೀಪವನ್ನು ಸೃಷ್ಟಿಸಿದೆ. ಈ ದ್ವೀಪವನ್ನು ಅವಳಿ ಜಲಪಾತಗಳು ರೂಪಿಸಿವೆ. ಇದು ರುದ್ರರಮನೀಯ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ಈ ಜಲಪಾತದ ಸುತ್ತಲಿನ ಹಸಿರು ಮತ್ತು ಜಲಪಾತದ ಅಬ್ಬರವು ಪ್ರವಾಸಿಗರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.
-
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?












Click it and Unblock the Notifications