Women's Day 2025: ಗಂಡು ಸಂತಾನಕ್ಕಾಗಿ ಜೀವವನ್ನೇ ಬಲಿ ಕೊಟ್ಟ ಲಕ್ಷ್ಮಿಯ ದುರಂತ ಕಥೆ
ಸುಮಾರು ಎಂಟು ವರ್ಷಗಳಿಂದ, ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಒತ್ತಡಗಳ ನಡುವೆ, ಮನಸಿಗೆ ನೆಮ್ಮದಿ ಸಂತೋಷ ತರುವ ಕೆಲಸವೆಂದರೆ ಹೆರಿಗೆ ನಿರ್ವಹಣೆ. ಗರ್ಭವತಿ ಎಂದು ತಿಳಿದ ಕ್ಷಣ ದಿಂದ ಹೆರಿಗೆಯ ತನಕ ಎಲ್ಲಾ ಸೇವೆಗಳನ್ನು ನಮ್ಮಲ್ಲಿ ನೀಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರಕರಣಗಳೇ ಹೆಚ್ಚಿರುವುದರಿಂದ , ನಮ್ಮಲ್ಲಿಗೆ ಬರುವವರನ್ನು ಪ್ರೋತ್ಸಾಹಿಸಿ, ಸಮಾಲೋಚನೆ ನೀಡಿ ಕಡೆಯವರೆಗೂ ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಅತೀ ನಾಜೂಕಿನ ಕೆಲಸ.
ಹೆರಿಗೆಯ ನಂತರ, ಹುಟ್ಟಿದ ಮಗು ಹೆಣ್ಣು ಮಗು ಅಂತಾದರೆ ಚೂರು ಖುಷಿ ಇದ್ದರೂ, ಗಂಡು ಮಗು ಆಗಿದಿದ್ದರೆ ಸರಿ ಇತ್ತು ಎನ್ನುವ ಅಸಮಾಧನವೇ ಹೆಚ್ಚು. ಎರಡನೆಯ, ಮೂರನೇಯ ಮಗು ಕೂಡಾ ಹೆಣ್ಣಾಗಿದ್ದಲ್ಲಿ ಆ ತಾಯಿಯ ಕಣ್ಣಲ್ಲಿ ಕಾಣುವ ನಿರಾಶೆಯ ಭಾವಕ್ಕೆ, ಯಾವ ಸಮಾಧಾನವೂ ಇಲ್ಲ. ನಾಕು ಹೆಣ್ಣು ಹೆತ್ತು ಬಿಟ್ಟೆಯಲ್ಲ ಅನ್ನುವ ಚುಚ್ಚು ಮಾತು ಮಾತ್ರವೇ ಅವಳ ಪಾಲಿಗೆ ಉಳಿಯುವುದು.

ಹೆಣ್ಣಿನ ಕೆಲಸ ಹೆರುವುದು, ಹೊರುವುದು. ಹಾಗಾಗಿ ಎಷ್ಟೇ ಹೆಣ್ಣು ಮಕ್ಕಳು ಇದ್ದರೂ ಗಂಡುಮಗು ಬೇಕೇ ಬೇಕು ಎನ್ನುವ ಗಂಡ, ಅತ್ತೆ , ಅತ್ತಿಗೆ ನಾದಿನಿಯರು ನಮ್ಮ ನಡುವೆ ಇದ್ದಾರೆ. ವಿಪರ್ಯಾಸ ಎಂದರೆ, ಕೆಲವೊಮ್ಮೆ ತಾಯಿಯೂ ಇದಕ್ಕೆ ಇಂಬು ಕೊಡುತ್ತಾಳೆ. ಇದರಲ್ಲಿ ಅಕ್ಷರಸ್ಥರು, ಅನಕ್ಷರರು ಎಂಬ ಭೇದವಿಲ್ಲ. ಒಟ್ಟಿನಲ್ಲಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ, ಇರುವ ಮಕ್ಕಳಿಗೆ ತಾಯಿ ಇರಬೇಕೆನ್ನುವ ಮುಂದಾಲೋಚನೆ ಮಾಡುವುದಿಲ್ಲ. ಹದಿನಾರನೇ ಶತಮಾನದಿಂದಲೂ ಹೆಣ್ಣು ಹೆಣ್ಣೇಂದೇತಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು ಎನ್ನುವ ಮಾತನ್ನು ಕೇಳಿಸಿಕೊಳ್ಳುತ್ತಲೇ ಬಂದಿದ್ದರೂ ಕೇಳದ ಕಿವುಡರಾಗಿ ಎಷ್ಟೋ ತಾಯಂದಿರನ್ನು ಕಳೆದು ಕೊಳ್ಳುವಂತಾಗಿದೆ.
ಲಕ್ಷ್ಮಿಯ ಕಥೆಯೂ ಹೀಗೆ ಆಗಿದ್ದು
ಸಾವಿರಾರು ಪ್ರಾರ್ಥನೆಗಳು, ಹರಕೆಗಳು, ತನ್ನ ಮಕ್ಕಳ ಕರೆಗೂ ಓಗೊಡದೆ ಲಕ್ಷ್ಮಿ ಹೊರಟು ಬಿಟ್ಟಳು. ಒಂಭತ್ತು ತಿಂಗಳ ಕೆಳಗೆ, ಲಕ್ಷ್ಮಿಯ ಪರಿಚಯ ನನಗಿರಲಿಲ್ಲ. ಮೂರು ಮಕ್ಕಳ ಜೊತೆಗೆ ಮಡಿಲಲ್ಲಿ ಇನ್ನೊಂದು ಹೊತ್ತ ಲಕ್ಷ್ಮಿ, ಆ ದಿನ ಅಬೋರ್ಟ್ ಮಾಡಿಕೊಡಿ ಎಂದು ಕೇಳಲು ಬಂದಿದ್ದವಳು. ಗರ್ಭದ ತಿಂಗಳು ಹೆಚ್ಚಾಗಿ ಹೋಗಿದ್ದರಿಂದ, ಮುಂದುವರೆಸಲು ಹೇಳಿದೆ. ಕಣ್ಣಲ್ಲಿ ನಿರೀಕ್ಷೆ, ಮನದಲ್ಲಿ ಅಳುಕು ಎರಡು ಕಾಣುತಿತ್ತು.

ತಿಂಗಳು ತಿಂಗಳು ಮುಟ್ಟು ಸರಿಯಾಗಿ ಆಗುತ್ತಿರಲಿಲ್ಲ, ಹಾಗಾಗಿ ನನಗೆ ಗೊತ್ತಾಗಲಿಲ್ಲ, ದಯವಿಟ್ಟು ಇದನ್ನು ಹೆರಿಗೆ ಮಾಡಿಸಿಕೊಡಿ ಮತ್ತು ಮಕ್ಕಳಾಗದೇ ಇರುವ ಹಾಗೆ ಆಪರೇಷನ್ ಕೂಡ ಮಾಡಿಸಿ ಕೊಡಿ ಎಂದು ಕೇಳಿಕೊಂಡಳು. ಅಗತ್ಯ ಗರ್ಭಿಣಿ ಸೇವೆಗಳಲ್ಲಿ ಚೂರು ವ್ಯತ್ಯಾಸ ಆಗದಂತೆ ನೋಡಿಕೊಳ್ಳಲಾಯಿತು. ಇನ್ನೇನು ಹೆರಿಗೆಗೆ ಒಂದು ವಾರವಿದೆ ಎನ್ನುವಾಗ, ನಗುತ್ತಾ ಹೋದವಳು, ಮತ್ತೆ ವಾಪಸು ಬಂದಿದ್ದು ಹೆಣವಾಗಿಯೇ.
ಅಮ್ನಿಓಟಿಕ್ಲ್ ಫ್ಲೂಯಿಡ್ ಎಂಬಾಲಿಸಂ ಜೊತೆಗೆ ಬ್ರಾನ್ಕೊ ನ್ಯುಮೋನಿಯಾ ಅವಳನ್ನು ಬಲಿ ಪಡೆದವು. ಬದುವುಕುವುದೇ ಕಷ್ಟ ಎನ್ನುವಂತಿದ್ದ ಲಕ್ಷ್ಮಿ, ಸಾವು ಬದುಕಿನ ನಡುವೆ ನಲ್ವತ್ತು ದಿನಗಳು ಭಯಂಕರ ಹೋರಾಟ ನಡೆಸಿ, ಕಡೆಗೆ ಸೋತು ಹೋದಳು. ಎಲ್ಲಾ ಸೂಕ್ತ ಚಿಕಿತ್ಸೆ ಸಿಕ್ಕರೂ, ಸಾವು ಅವಳನ್ನು ಅಪ್ಪಿಕೊಂಡುಬಿಟ್ಟಿತ್ತು. ಒಂದೆರೆಡು ದಿನ ಕಳೆದು ಲಕ್ಷ್ಮಿಯ ಮನೆಗೆ ಹೋದಾಗ, ಅವಳ ಗಂಡ ಯಾರೊಟ್ಟಿಗೋ ನನ್ನ ಮಗ ಮುದ್ದಾಗಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ, ತೊಟ್ಟಿಲಲ್ಲಿದ್ದ ಕೂಸು ಮಾತ್ರ, ಹಸಿವಿಗೋ, ಅಪ್ಪುಗೆಗೊ ಅಳುತ್ತಲೇ ಇತ್ತು.
ವಿಶೇಷ ಬರಹ- ಡಾ. ವರ್ಣಿತ ಎಂ ಕೆ. ಮಳವಳ್ಳಿ, ಮಂಡ್ಯ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications