Karnataka municipal corporations; ಕರ್ನಾಟಕದ ಮಹಾನಗರ ಪಾಲಿಕೆಗಳು
ಮಹಾನಗರದ ಆಡಳಿತವನ್ನು ಮಹಾನಗರ ಪಾಲಿಕೆಗಳು ನೋಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅತಿ ದೊಡ್ಡ ಮಹಾನಗರ ಪಾಲಿಕೆಯಾಗಿದೆ. ಬಿಬಿಎಂಪಿ ಮೊದಲು 198 ವಾರ್ಡ್ಗಳನ್ನು ಹೊಂದಿತ್ತು. ಈಗ ಸರ್ಕಾರ ವಾರ್ಡ್ ಪುನರ್ ವಿಂಗಡನೆ ಮಾಡಿ ವಾರ್ಡ್ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದೆ.
ಒಂದು ನಗರ ಮಹಾನಗರ ಪಾಲಿಕೆಯಾಗಲು ನಗರ ಪ್ರದೇಶದಲ್ಲಿ 2 ಲಕ್ಷ ಮತ್ತು ಸುತ್ತಲಿನ ಪ್ರದೇಶದಲ್ಲಿ 1 ಲಕ್ಷ ಜನಸಂಖ್ಯೆ ಹೊಂದಿರಬೇಕು. ನಗರದ ಕಂದಾಯ ಆದಾಯ ಸುಮಾರು 6 ಕೋಟಿ ರೂ.ಗಳಿಗೂ ಹೆಚ್ಚಿರಬೇಕು. ತೆರಿಗೆ, ದಂಡ, ಬಾಡಿಗೆ ಪಾಲಿಕೆಯ ಪ್ರಮುಖ ಆದಾಯದ ಮೂಲಗಳು. ರಸ್ತೆ, ನೀರು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಮಹಾನಗರ ಪಾಲಿಕೆಗಳ ಕೆಲಸವಾಗಿದೆ.
2011ರ ಜನಗಣತಿ ಅನ್ವಯ ವಿಂಗಡನೆ ಮಾಡಿದಂತೆ ಕರ್ನಾಟಕದಲ್ಲಿರುವ ಮಹಾನಗರ ಪಾಲಿಕೆಗಳು 11. ಇವುಗಳಲ್ಲಿ ಬೆಂಗಳೂರಿನ ಆಡಳಿತವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಡಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಬೀದರ್, ಮಂಡ್ಯ ಸೇರಿದಂತೆ ವಿವಿಧ ನಗರಗಳು ಮಹಾನಗರ ಪಾಲಿಕೆಯಾಗುವ ಹಂತದಲ್ಲಿವೆ.

ಮಹಾನಗರ ಪಾಲಿಕೆ ಆಡಳಿತವನ್ನು ಆಯುಕ್ತರು ನೋಡಿಕೊಳ್ಳುತ್ತಾರೆ. ಜನರಿಂದ ಆಯ್ಕೆಗೊಂಡ ಸದಸ್ಯರು ನಗರದ ಮೇಯರ್ ಮತ್ತು ಉಪ ಮೇಯರ್ ಆಗಿರುತ್ತಾರೆ. ನಗರದ ಜನಸಂಖ್ಯೆ ಆಧಾರದ ಮೇಲೆ ವಾರ್ಡ್ಗಳನ್ನು ರಚನೆ ಮಾಡಲಾಗುತ್ತದೆ. ಮೇಯರ್ ಮತ್ತು ಉಪ ಮೇಯರ್ ಅವಧಿ ಒಂದು ವರ್ಷವಾಗಿರುತ್ತದೆ.
ಮಹಾನಗರ ಪಾಲಿಕೆಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಪ್ರತಿ ವರ್ಷ ಬಜೆಟ್ ಮಂಡನೆ ಮಾಡುತ್ತವೆ. ಬಜೆಟ್ನಲ್ಲಿ ನಗರದ ಅಭಿವೃದ್ಧಿ, ಆದಾಯ ಸಂಗ್ರಹಕ್ಕೆ ಯೋಜನೆಯನ್ನು ತಯಾರು ಮಾಡಲಾಗುತ್ತದೆ.
ಕರ್ನಾಟಕದ ಮಹಾನಗರ ಪಾಲಿಕೆಗಳ ಪಟ್ಟಿ
1 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (243 ವಾರ್ಡ್)
2 ಮೈಸೂರು ಮಹಾನಗರ ಪಾಲಿಕೆ (65 ವಾರ್ಡ್)
3 ಬೆಳಗಾವಿ ಮಹಾನಗರ ಪಾಲಿಕೆ (58 ವಾರ್ಡ್)
4 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (82 ವಾರ್ಡ್)
5 ಕಲಬುರಗಿ ಮಹಾನಗರ ಪಾಲಿಕೆ (55 ವಾರ್ಡ್)
6 ಬಳ್ಳಾರಿ ಮಹಾನಗರ ಪಾಲಿಕೆ (39 ವಾರ್ಡ್)
7 ಮಂಗಳೂರು ಮಹಾನಗರ ಪಾಲಿಕೆ (60 ವಾರ್ಡ್ಗಳು)
8 ವಿಜಯಪುರ ಮಹಾನಗರ ಪಾಲಿಕೆ (35 ವಾರ್ಡ್ಗಳು)
9 ತುಮಕೂರು ಮಹಾನಗರ ಪಾಲಿಕೆ (35 ವಾರ್ಡ್ಗಳು)
10 ದಾವಣಗೆರೆ ಮಹಾನಗರ ಪಾಲಿಕೆ (45 ವಾರ್ಡ್ಗಳು)
11 ಶಿವಮೊಗ್ಗ ಮಹಾನಗರ ಪಾಲಿಕೆ (35 ವಾರ್ಡ್ಗಳು)
ಮಹಾನಗರ ಪಾಲಿಕೆಯ ಪ್ರಮುಖ ಕಾರ್ಯಗಳನ್ನು ಈ ರೀತಿಯಾಗಿ ಪಟ್ಟಿ ಮಾಡಬಹುದಾಗಿದೆ.
ನೀರು ಸರಬರಾಜು ಹಾಗೂ ಒಳಚರಂಡಿ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಬೀದಿ ದೀಪ ಅಳವಡಿಕೆ, ಆಸ್ತಿ ತೆರಿಗೆ ವಸೂಲಾತಿ. ನೀರಿನ ತೆರಿಗೆ ವಸೂಲಾತಿ, ಮಳಿಗೆಗಳ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಿಗೆ ಫಿ ವಸೂಲಾತಿ, ಅಭಿವೃದ್ಧಿ ಕಾಮಗಾರಿಗಳು.
ಕರ್ನಾಟಕದಲ್ಲಿ ಮೊದಲು ಅಸ್ತಿತ್ವಕ್ಕೆ ಬಂದಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ. 1962ರಲ್ಲಿ 20 ಕಿ. ಮೀ. ಅಂತರದಲ್ಲಿರುವ ಎರಡು ನಗರಗಳ ಸಮ್ಮಿಲನದಿಂದ ಹುಬ್ಬಳ್ಳಿ-ಧಾರವಾಡ ಪಾಲಿಕೆಯು ಅಸ್ಥಿತ್ವಕ್ಕೆ ಬಂದಿತು. ಇದು ನಗರಾಡಳಿತ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಪ್ರಯೋಗವಾಗಿರುತ್ತದೆ.
ಕರ್ನಾಟಕದಲ್ಲಿ ಕೊನೆಯದಾಗಿ ರಚನೆಗೊಂಡಿರುವುದು ವಿಜಾಪುರ (ವಿಜಯಪುರ) ಮಹಾನಗರ ಪಾಲಿಕೆ. ಕರ್ನಾಟಕದ ಪ್ರಮುಖ 10 ಜನಸಂಖ್ಯೆಯ ನಗರಗಳಲ್ಲಿ ಇದೂ ಒಂದು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications