ಶತಕೋಟಿ ರೂ. ಆಸ್ತಿ ಒಡೆಯ ಬಿಜೆಪಿ ಅಭ್ಯರ್ಥಿ ಆರ್. ಶಂಕರ್
ಬೆಂಗಳೂರು, ಜೂ. 19: ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ಅನರ್ಹ ಶಾಸಕ, ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಆರ್. ಶಂಕರ್ ಅವರು ಶತಕೋಟಿ ರೂಪಾಯಿಗಳ ಆಸ್ತಿ ಒಡೆಯರಾಗಿದ್ದಾರೆ.
Recommended Video
ಪತ್ನಿ ಧನಲಕ್ಷ್ಮೀ ಅವರು ಕೂಡ ಶತಕೋಟಿ ರೂ. ಆಸ್ತಿಯ ಒಡತಿಯಾಗಿರುವುದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಶಂಕರ್ ಅವರು ಸಲ್ಲಿಸಿರುವ ಅಫಿಡವಿಟ್ನಲ್ಲಿದೆ. ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಆರ್. ಶಂಕರ್ ಒಟ್ಟು ಆಸ್ತಿಯ ಮೌಲ್ಯವು 301.38 ಕೋಟಿ ರೂಪಾಯಿಗಳು. ಆರ್. ಶಂಕರ್ 195 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಧನಲಕ್ಷ್ಮೀ ಹೆಸರಲ್ಲಿ 106 ಕೋಟಿ ರು. ಮೌಲ್ಯದ ಆಸ್ತಿ ಇದೆ.
ಅದೇ ರೀತಿಯಾಗಿ ಆರ್. ಶಂಕರ್ ಅವರು 35.1 ಲಕ್ಷ ರು. ಹಾಗು ಅವರ ಪತ್ನಿ ಧನಲಕ್ಷ್ಮಿ ಅವರು 27.22 ಲಕ್ಷ ರು. ನಗದು ಹಣವನ್ನು ಹೊಂದಿದ್ದಾರೆ. ಮಾಜಿ ಸಚಿವ ಆರ್. ಶಂಕರ್ 28.9 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 166.3 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆರ್. ಶಂಕರ್ ಪತ್ನಿ ಧನಲಕ್ಷ್ಮೀ 13.9 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 92.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯ ಒಡತಿಯಾಗಿದ್ದಾರೆ. ಸಂಪೂರ್ಣ ಆಸ್ತಿ ವಿವರ ಮುಂದಿದೆ.

ಸಾಲವೂ ಇದೆ
ಇನ್ನು ಶತಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆರ್. ಶಂಕರ್ ಹಗೂ ಪತ್ನಿ ಧನಲಕ್ಷ್ಮೀ ಅವರಿಗೂ ಸಾಲದ ಕಾಟವಿದೆ. ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೂ ಸಾಲವೂ ಇದೆ. ಶಂಕರ್ ಅವರು 44.63 ಕೋಟಿ ರೂ. ಮತ್ತು ಪತ್ನಿ ಧನಲಕ್ಷ್ಮೀ ಅವರು 21.93 ಕೋಟಿ ರೂ. ಸಾಲ ಮಾಡಿದ್ದಾರೆ.

ಐಶಾರಾಮಿ ವಾಹನಗಳು
ಮಾಜಿ ಸಚಿವ ಆರ್. ಶಂಕರ್ ಶಂಕರ್ ಹಾಗೂ ಪತ್ನಿ ಧನಲಕ್ಷ್ಮೀ ಅವರು ವಿವಿಧ ಬಗೆಯ ಒಟ್ಟು 9 ಐಶಾರಾಮಿ ವಾಹನಗಳನ್ನು ಹೊಂದಿದ್ದಾರೆ. ಆರ್. ಶಂಕರ್ ಹೆಸರಿನಲ್ಲಿ 70 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ, 42 ಲಕ್ಷ ಬೆಲೆ ಬಾಳುವ 3 ಇನೋವಾ ಕಾರುಗಳು ಹಾಗೂ 14 ಲಕ್ಷಕ್ಕು ಅಧಿಕ ಬೆಲೆಯ ಸ್ಕಾರ್ಪಿಯೋ ಕಾರ್ ಇವೆ. ಪತ್ನಿ ಹೆಸರಲ್ಲಿ ಬಿಎಂಡಬ್ಲ್ಯೂ ಸೇರಿದಂತೆ ಒಟ್ಟು 81.91 ಲಕ್ಷ ರು. ಮೌಲ್ಯದ ಇನ್ನೋವಾ, ಮಹೀಂದ್ರಾ ಹಾಗೂ ಫೋರ್ಡ್ ಕಾರುಗಳಿವೆ.

ಚಿನ್ನಾಭರಣದ ವಿವರ
ವಿವಿಧ ಬ್ಯಾಂಕ್ನ ಖಾತೆಯಲ್ಲಿ 3.57 ಲಕ್ಷ ರು. ಪತ್ನಿಯ ಹೆಸರಲ್ಲಿನ ವಿವಿಧ ಬ್ಯಾಂಕ್ನಲ್ಲಿ 94,619 ರೂ ಠೇವಣಿಯಿದೆ. ಶಂಕರ್ ಅವರ ಬಳಿ 74.27 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 11,775 ಸಾವಿರ ರು. ಮೌಲ್ಯದ ಬೆಳ್ಳಿ ಇದೆ. ಶಂಕರ ಅವರ ಪತ್ನಿ ಧನಲಕ್ಷ್ಮೀ ಅವರ ಬಳಿ 61.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 4.37 ಲಕ್ಷ ರು. ಮೌಲ್ಯದ 8 ಕೆಜಿ ಬೆಳ್ಳಿ ಮತ್ತು 10 ಲಕ್ಷ ರು. ಮೌಲ್ಯದ ಡೈಮಂಡ್ ನೆಕ್ಲೇಸ್ ಇದೆ ಎಂದು ಮಾಹಿತಿ ನೀಡಿದ್ದಾರೆ.

ಶಂಕರ್ ಮೇಲಿವೆ 3 ಪ್ರಕರಣಗಳು
ಜೊತೆಗೆ ಮಾಜಿ ಸಚಿವ. ಬಿಜೆಪಿಯ ಪರಿಷತ್ ಚುನಾವಣಾ ಅಭ್ಯರ್ಥಿ ಆರ್. ಶಂಕರ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು ಕೆಲವು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications