ಶತಕೋಟಿ ರೂ. ಆಸ್ತಿ ಒಡೆಯ ಬಿಜೆಪಿ ಅಭ್ಯರ್ಥಿ ಆರ್. ಶಂಕರ್
ಬೆಂಗಳೂರು, ಜೂ. 19: ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ಅನರ್ಹ ಶಾಸಕ, ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಆರ್. ಶಂಕರ್ ಅವರು ಶತಕೋಟಿ ರೂಪಾಯಿಗಳ ಆಸ್ತಿ ಒಡೆಯರಾಗಿದ್ದಾರೆ.
Recommended Video
ಪತ್ನಿ ಧನಲಕ್ಷ್ಮೀ ಅವರು ಕೂಡ ಶತಕೋಟಿ ರೂ. ಆಸ್ತಿಯ ಒಡತಿಯಾಗಿರುವುದು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಶಂಕರ್ ಅವರು ಸಲ್ಲಿಸಿರುವ ಅಫಿಡವಿಟ್ನಲ್ಲಿದೆ. ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಆರ್. ಶಂಕರ್ ಒಟ್ಟು ಆಸ್ತಿಯ ಮೌಲ್ಯವು 301.38 ಕೋಟಿ ರೂಪಾಯಿಗಳು. ಆರ್. ಶಂಕರ್ 195 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಧನಲಕ್ಷ್ಮೀ ಹೆಸರಲ್ಲಿ 106 ಕೋಟಿ ರು. ಮೌಲ್ಯದ ಆಸ್ತಿ ಇದೆ.
ಅದೇ ರೀತಿಯಾಗಿ ಆರ್. ಶಂಕರ್ ಅವರು 35.1 ಲಕ್ಷ ರು. ಹಾಗು ಅವರ ಪತ್ನಿ ಧನಲಕ್ಷ್ಮಿ ಅವರು 27.22 ಲಕ್ಷ ರು. ನಗದು ಹಣವನ್ನು ಹೊಂದಿದ್ದಾರೆ. ಮಾಜಿ ಸಚಿವ ಆರ್. ಶಂಕರ್ 28.9 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 166.3 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆರ್. ಶಂಕರ್ ಪತ್ನಿ ಧನಲಕ್ಷ್ಮೀ 13.9 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 92.25 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯ ಒಡತಿಯಾಗಿದ್ದಾರೆ. ಸಂಪೂರ್ಣ ಆಸ್ತಿ ವಿವರ ಮುಂದಿದೆ.

ಸಾಲವೂ ಇದೆ
ಇನ್ನು ಶತಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆರ್. ಶಂಕರ್ ಹಗೂ ಪತ್ನಿ ಧನಲಕ್ಷ್ಮೀ ಅವರಿಗೂ ಸಾಲದ ಕಾಟವಿದೆ. ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೂ ಸಾಲವೂ ಇದೆ. ಶಂಕರ್ ಅವರು 44.63 ಕೋಟಿ ರೂ. ಮತ್ತು ಪತ್ನಿ ಧನಲಕ್ಷ್ಮೀ ಅವರು 21.93 ಕೋಟಿ ರೂ. ಸಾಲ ಮಾಡಿದ್ದಾರೆ.

ಐಶಾರಾಮಿ ವಾಹನಗಳು
ಮಾಜಿ ಸಚಿವ ಆರ್. ಶಂಕರ್ ಶಂಕರ್ ಹಾಗೂ ಪತ್ನಿ ಧನಲಕ್ಷ್ಮೀ ಅವರು ವಿವಿಧ ಬಗೆಯ ಒಟ್ಟು 9 ಐಶಾರಾಮಿ ವಾಹನಗಳನ್ನು ಹೊಂದಿದ್ದಾರೆ. ಆರ್. ಶಂಕರ್ ಹೆಸರಿನಲ್ಲಿ 70 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ, 42 ಲಕ್ಷ ಬೆಲೆ ಬಾಳುವ 3 ಇನೋವಾ ಕಾರುಗಳು ಹಾಗೂ 14 ಲಕ್ಷಕ್ಕು ಅಧಿಕ ಬೆಲೆಯ ಸ್ಕಾರ್ಪಿಯೋ ಕಾರ್ ಇವೆ. ಪತ್ನಿ ಹೆಸರಲ್ಲಿ ಬಿಎಂಡಬ್ಲ್ಯೂ ಸೇರಿದಂತೆ ಒಟ್ಟು 81.91 ಲಕ್ಷ ರು. ಮೌಲ್ಯದ ಇನ್ನೋವಾ, ಮಹೀಂದ್ರಾ ಹಾಗೂ ಫೋರ್ಡ್ ಕಾರುಗಳಿವೆ.

ಚಿನ್ನಾಭರಣದ ವಿವರ
ವಿವಿಧ ಬ್ಯಾಂಕ್ನ ಖಾತೆಯಲ್ಲಿ 3.57 ಲಕ್ಷ ರು. ಪತ್ನಿಯ ಹೆಸರಲ್ಲಿನ ವಿವಿಧ ಬ್ಯಾಂಕ್ನಲ್ಲಿ 94,619 ರೂ ಠೇವಣಿಯಿದೆ. ಶಂಕರ್ ಅವರ ಬಳಿ 74.27 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 11,775 ಸಾವಿರ ರು. ಮೌಲ್ಯದ ಬೆಳ್ಳಿ ಇದೆ. ಶಂಕರ ಅವರ ಪತ್ನಿ ಧನಲಕ್ಷ್ಮೀ ಅವರ ಬಳಿ 61.72 ಲಕ್ಷ ರು. ಮೌಲ್ಯದ 2 ಕೆಜಿ ಚಿನ್ನ, 4.37 ಲಕ್ಷ ರು. ಮೌಲ್ಯದ 8 ಕೆಜಿ ಬೆಳ್ಳಿ ಮತ್ತು 10 ಲಕ್ಷ ರು. ಮೌಲ್ಯದ ಡೈಮಂಡ್ ನೆಕ್ಲೇಸ್ ಇದೆ ಎಂದು ಮಾಹಿತಿ ನೀಡಿದ್ದಾರೆ.

ಶಂಕರ್ ಮೇಲಿವೆ 3 ಪ್ರಕರಣಗಳು
ಜೊತೆಗೆ ಮಾಜಿ ಸಚಿವ. ಬಿಜೆಪಿಯ ಪರಿಷತ್ ಚುನಾವಣಾ ಅಭ್ಯರ್ಥಿ ಆರ್. ಶಂಕರ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು ಕೆಲವು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications