ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ
ಮಹಾರಾಷ್ಟ್ರ ರಾಜ್ಯದ ಒಂದು ಲೋಕಸಭಾ ಕ್ಷೇತ್ರ ಲಾಥೂರ್. ತೀವ್ರ ಬರಪೀಡಿತವಾದ ಜಿಲ್ಲೆಗೆ ಮಹಾರಾಷ್ಟ್ರ ಸರ್ಕಾರ ರೈಲ್ವೆ ಇಲಾಖೆಯ ಸಹಕಾರದ ಮೂಲಕ ಕುಡಿಯುವ ನೀರನ್ನು ರೈಲಿನ ಮೂಲಕ ಪೂರೈಕೆ ಮಾಡಿತ್ತು. ಆಗ ದೇಶದ ಮಟ್ಟದಲ್ಲಿ ಲಾಥೂರ್ ಗಮನ ಸೆಳೆದಿತ್ತು.
ರಾಷ್ಟ್ರಕೂಟರ ಇತಿಹಾಸವನ್ನು ತಿಳಿಯುವಾಗ ಲಾಥೂರ್ ಅನ್ನು ಮರೆಯುವಂತಿಲ್ಲ. ಲಟ್ಟಲೂರು ಎಂಬುದು ಲಾಥೂರ್ ಹಳೆಯ ಹೆಸರು. ರಾಷ್ಟ್ರಕೂಟರ ಮೊದಲ ದೊರೆ ದಂತಿದುರ್ಗ ಲಾಥೂರ್ಗೆ ಸೇರಿದವನು ಎನ್ನುತ್ತದೆ ಇತಿಹಾಸ.
ಅಮೋಘವರ್ಷ ಲಾಥೂರ್ ಅನ್ನು ಅಭಿವೃದ್ಧಿ ಮಾಡಿದನು. ಕರ್ನಾಟಕದ ಬಾದಾಮಿಯನ್ನು ಆಳಿದ ಚಾಲುಕ್ಯರು ಸಹ ತಾವು ಲಾಥೂರ್ ಮೂಲದವರು ಎಂದು ಹೇಳಿಕೊಳ್ಳುತ್ತಾರೆ. ಮಂಜಿರಾ ನದಿಯಿಂದ ಲಾಥೂರ್ಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದರೆ, ಬರಗಾಲದ ಸಂದರ್ಭದಲ್ಲಿ ನದಿ ಬತ್ತಿಹೋಗುತ್ತದೆ.

1993ರ ಸೆಪ್ಟೆಂಬರ್ನಲ್ಲಿ ಲಾಥೂರ್ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಸುಮಾರು 6.3 ತೀವ್ರತೆಯ ಕಂಪನದಿಂದ 10 ಸಾವಿರ ಜನರು ಮೃತಪಟ್ಟಿದ್ದರು. 30 ಸಾವಿರ ಜನರು ಗಾಯಗೊಂಡಿದ್ದರು. ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು.
ಲಾಥೂರ್ನ ಒಟ್ಟು ಜನಸಂಖ್ಯೆ 24,40,559. ಇವರಲ್ಲಿ ಶೇ 73.87ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ 26.13ರಷ್ಟು ಜನರು ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಶೇ 19.90 ಎಸ್ಸಿ, 2.27ರಷ್ಟು ಎಸ್ಟಿ ಸಮುದಾಯದ ಜನರಿದ್ದಾರೆ.

ಮೀರಜ್ನಿಂದ ಲಾಥೂರ್ಗೆ 10 ಟ್ಯಾಂಕ್ಗಳ 'ಜಲದೂತ್' ಮೂಲಕ 5 ಲಕ್ಷ ಲೀಟರ್ ನೀರನ್ನು ಮೊದಲು ಪೂರೈಸಲಾಗಿತ್ತು. ಬಳಿಕ ರಾಜಸ್ಥಾನದ ಕೋಟಾದಿಂದ 50 ಟ್ಯಾಂಕ್ನ ರೈಲಿನಲ್ಲಿ 25 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡಲಾಗಿತ್ತು.
ರೈಲಿನ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಿದಾಗ ಲಾಥೂರ್ ದೇಶದ ಗಮನ ಸೆಳೆದಿತ್ತು. ಲಾಥೂರ್ ಸಕ್ಕರೆ ಕಾರ್ಖನೆಗಳಿಗೂ ಪ್ರಸಿದ್ಧಿಪಡೆದಿದೆ. ಹಲವು ಸಕ್ಕರೆ ಕಾರ್ಖನೆಗಳು ಇಲ್ಲಿದ್ದು, ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತವೆ.

ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಲಾಥೂರ್ ರಸ್ತೆ ಮಾರ್ಗದ ಮೂಲಕ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ರೈಲು ಮತ್ತು ವಿಮಾನ ನಿಲ್ದಾಣಗಳು ಇಲ್ಲಿವೆ. ವಿಲಾಸ್ರಾವ್ ದೇಶ್ಮುಖ್ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಲಾಥೂರ್ನವರು.
ಲಾಥೂರ್ ಕ್ಷೇತ್ರದ ಸಂಸದ ಬಿಜೆಪಿಯ ಡಾ.ಸುನೀಲ್ ಬಿ.ಗಾಯಕ್ವಾಡ್. 2014ರ ಚುನಾವಣೆಯಲ್ಲಿ ಅವರು 6,16,509 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸುನೀಲ್ ಎದುರಾಳಿಯಾಗಿದ್ದ ಬಿ.ದತ್ತಾತ್ರೇಯ ಗುಂಡೇರಾವ್ 3,63,114 ಮತಗಳನ್ನು ಪಡೆದಿದ್ದರು.

ಲಾಥೂರ್ ಕ್ಷೇತ್ರದ ಒಟ್ಟು ಮತದಾರರು 16,82,607. ಇವರಲ್ಲಿ 8,97,919 ಪುರುಷರು, 7,84,688 ಮಹಿಳಯೆರು. 2014ರ ಚುನಾವಣೆಯಲ್ಲಿ 10,57,156 ಜನರು ಮತದಾನ ಮಾಡಿದ್ದು ಶೇ 63ರಷ್ಟು ಮತದಾನವಾಗಿತ್ತು.
ಲಾಥೂರ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1962ರ ಬಳಿಕ ಕಾಂಗ್ರೆಸ್ 11 ಬಾರಿ ಕ್ಷೇತ್ರದಲ್ಲಿ ಜಯಗಳಿಸಿದೆ. ಬಿಜೆಪಿ 2 ಬಾರಿ ಗೆಲುವು ಸಾಧಿಸಿದೆ. ಹಾಲಿ ಸಂಸದ ಡಾ.ಸುನೀಲ್ ಬಿ.ಗಾಯಕ್ವಾಡ್ ಸಂಸತ್ನಲ್ಲಿ ಶೇ 97ರಷ್ಟು ಹಾಜರಾತಿ ಹೊಂದಿದ್ದಾರೆ. 40 ಚರ್ಚೆಗಳಲ್ಲಿ ಪಾಲ್ಗೊಂಡಿದ್ದು,640 ಪ್ರಶ್ನೆಗಳನ್ನು ಕೇಳಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications