ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ
ಮಹಾರಾಷ್ಟ್ರ ರಾಜ್ಯದ ಒಂದು ಲೋಕಸಭಾ ಕ್ಷೇತ್ರ ಲಾಥೂರ್. ತೀವ್ರ ಬರಪೀಡಿತವಾದ ಜಿಲ್ಲೆಗೆ ಮಹಾರಾಷ್ಟ್ರ ಸರ್ಕಾರ ರೈಲ್ವೆ ಇಲಾಖೆಯ ಸಹಕಾರದ ಮೂಲಕ ಕುಡಿಯುವ ನೀರನ್ನು ರೈಲಿನ ಮೂಲಕ ಪೂರೈಕೆ ಮಾಡಿತ್ತು. ಆಗ ದೇಶದ ಮಟ್ಟದಲ್ಲಿ ಲಾಥೂರ್ ಗಮನ ಸೆಳೆದಿತ್ತು.
ರಾಷ್ಟ್ರಕೂಟರ ಇತಿಹಾಸವನ್ನು ತಿಳಿಯುವಾಗ ಲಾಥೂರ್ ಅನ್ನು ಮರೆಯುವಂತಿಲ್ಲ. ಲಟ್ಟಲೂರು ಎಂಬುದು ಲಾಥೂರ್ ಹಳೆಯ ಹೆಸರು. ರಾಷ್ಟ್ರಕೂಟರ ಮೊದಲ ದೊರೆ ದಂತಿದುರ್ಗ ಲಾಥೂರ್ಗೆ ಸೇರಿದವನು ಎನ್ನುತ್ತದೆ ಇತಿಹಾಸ.
ಅಮೋಘವರ್ಷ ಲಾಥೂರ್ ಅನ್ನು ಅಭಿವೃದ್ಧಿ ಮಾಡಿದನು. ಕರ್ನಾಟಕದ ಬಾದಾಮಿಯನ್ನು ಆಳಿದ ಚಾಲುಕ್ಯರು ಸಹ ತಾವು ಲಾಥೂರ್ ಮೂಲದವರು ಎಂದು ಹೇಳಿಕೊಳ್ಳುತ್ತಾರೆ. ಮಂಜಿರಾ ನದಿಯಿಂದ ಲಾಥೂರ್ಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದರೆ, ಬರಗಾಲದ ಸಂದರ್ಭದಲ್ಲಿ ನದಿ ಬತ್ತಿಹೋಗುತ್ತದೆ.

1993ರ ಸೆಪ್ಟೆಂಬರ್ನಲ್ಲಿ ಲಾಥೂರ್ನಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ಸುಮಾರು 6.3 ತೀವ್ರತೆಯ ಕಂಪನದಿಂದ 10 ಸಾವಿರ ಜನರು ಮೃತಪಟ್ಟಿದ್ದರು. 30 ಸಾವಿರ ಜನರು ಗಾಯಗೊಂಡಿದ್ದರು. ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು.
ಲಾಥೂರ್ನ ಒಟ್ಟು ಜನಸಂಖ್ಯೆ 24,40,559. ಇವರಲ್ಲಿ ಶೇ 73.87ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ 26.13ರಷ್ಟು ಜನರು ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಶೇ 19.90 ಎಸ್ಸಿ, 2.27ರಷ್ಟು ಎಸ್ಟಿ ಸಮುದಾಯದ ಜನರಿದ್ದಾರೆ.

ಮೀರಜ್ನಿಂದ ಲಾಥೂರ್ಗೆ 10 ಟ್ಯಾಂಕ್ಗಳ 'ಜಲದೂತ್' ಮೂಲಕ 5 ಲಕ್ಷ ಲೀಟರ್ ನೀರನ್ನು ಮೊದಲು ಪೂರೈಸಲಾಗಿತ್ತು. ಬಳಿಕ ರಾಜಸ್ಥಾನದ ಕೋಟಾದಿಂದ 50 ಟ್ಯಾಂಕ್ನ ರೈಲಿನಲ್ಲಿ 25 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡಲಾಗಿತ್ತು.
ರೈಲಿನ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಿದಾಗ ಲಾಥೂರ್ ದೇಶದ ಗಮನ ಸೆಳೆದಿತ್ತು. ಲಾಥೂರ್ ಸಕ್ಕರೆ ಕಾರ್ಖನೆಗಳಿಗೂ ಪ್ರಸಿದ್ಧಿಪಡೆದಿದೆ. ಹಲವು ಸಕ್ಕರೆ ಕಾರ್ಖನೆಗಳು ಇಲ್ಲಿದ್ದು, ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತವೆ.

ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಲಾಥೂರ್ ರಸ್ತೆ ಮಾರ್ಗದ ಮೂಲಕ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ರೈಲು ಮತ್ತು ವಿಮಾನ ನಿಲ್ದಾಣಗಳು ಇಲ್ಲಿವೆ. ವಿಲಾಸ್ರಾವ್ ದೇಶ್ಮುಖ್ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಲಾಥೂರ್ನವರು.
ಲಾಥೂರ್ ಕ್ಷೇತ್ರದ ಸಂಸದ ಬಿಜೆಪಿಯ ಡಾ.ಸುನೀಲ್ ಬಿ.ಗಾಯಕ್ವಾಡ್. 2014ರ ಚುನಾವಣೆಯಲ್ಲಿ ಅವರು 6,16,509 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಸುನೀಲ್ ಎದುರಾಳಿಯಾಗಿದ್ದ ಬಿ.ದತ್ತಾತ್ರೇಯ ಗುಂಡೇರಾವ್ 3,63,114 ಮತಗಳನ್ನು ಪಡೆದಿದ್ದರು.

ಲಾಥೂರ್ ಕ್ಷೇತ್ರದ ಒಟ್ಟು ಮತದಾರರು 16,82,607. ಇವರಲ್ಲಿ 8,97,919 ಪುರುಷರು, 7,84,688 ಮಹಿಳಯೆರು. 2014ರ ಚುನಾವಣೆಯಲ್ಲಿ 10,57,156 ಜನರು ಮತದಾನ ಮಾಡಿದ್ದು ಶೇ 63ರಷ್ಟು ಮತದಾನವಾಗಿತ್ತು.
ಲಾಥೂರ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1962ರ ಬಳಿಕ ಕಾಂಗ್ರೆಸ್ 11 ಬಾರಿ ಕ್ಷೇತ್ರದಲ್ಲಿ ಜಯಗಳಿಸಿದೆ. ಬಿಜೆಪಿ 2 ಬಾರಿ ಗೆಲುವು ಸಾಧಿಸಿದೆ. ಹಾಲಿ ಸಂಸದ ಡಾ.ಸುನೀಲ್ ಬಿ.ಗಾಯಕ್ವಾಡ್ ಸಂಸತ್ನಲ್ಲಿ ಶೇ 97ರಷ್ಟು ಹಾಜರಾತಿ ಹೊಂದಿದ್ದಾರೆ. 40 ಚರ್ಚೆಗಳಲ್ಲಿ ಪಾಲ್ಗೊಂಡಿದ್ದು,640 ಪ್ರಶ್ನೆಗಳನ್ನು ಕೇಳಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications