ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್ ಮತ್ತು ಸ್ಕೈರೂಟ್ ಕುರಿತ ಮಾಹಿತಿ
ನವದೆಹಲಿ, ನ.18: ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್ ನವೆಂಬರ್ 18 ರಂದು ಉಡಾವಣೆಯಾಗಿದೆ. ಶ್ರೀಹರಿಕೋಟಾದಲ್ಲಿರುವ ಇಸ್ರೋದ ಉಡಾವಣಾ ಕೇಂದ್ರವಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಇದರೊಂದಿಗೆ ದೇಶದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ರಾಕೆಟ್ ಕಂಪನಿಗಳ ಪ್ರವೇಶ ಆರಂಭವಾಗಿದೆ.
ಈ ರಾಕೆಟ್ ಅನ್ನು ಹೈದರಾಬಾದ್ನ ಖಾಸಗಿ ಸ್ಟಾರ್ಟಪ್ ಕಂಪನಿಯಾದ ಸ್ಕೈರೂಟ್ ತಯಾರಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೊಂದು ದೊಡ್ಡ ಸಾಧನೆ ಎನ್ನಲಾಗುತ್ತಿದೆ. ಇದರಿಂದ ಖಾಸಗಿ ಕಂಪನಿಗಳು ತಮ್ಮ ದೊಡ್ಡ ರಾಕೆಟ್ಗಳನ್ನು ಉಡಾವಣೆ ಮಾಡುವ ಕೆಲವು ದೇಶಗಳ ಸಾಲಿಗೆ ಭಾರತವು ಸೇರಿದೆ.

ಡಾ.ವಿಕ್ರಮ್ ಸಾರಾಭಾಯ್ ಸ್ಮರಣಾರ್ಥ ವಿಕ್ರಮ್ ಎಸ್
ಸ್ಕೈರೂಟ್ ಏರೋಸ್ಪೇಸ್ ಇಸ್ರೋ ಸಂಸ್ಥಾಪಕ ಡಾ.ವಿಕ್ರಮ್ ಸಾರಾಭಾಯ್ ಅವರಿಗೆ ಗೌರವ ಸಲ್ಲಿಸಲು ರಾಕೆಟ್ಗೆ ವಿಕ್ರಮ್ ಎಸ್ ಎಂದು ಹೆಸರಿಟ್ಟಿದೆ. ಸಣ್ಣ ಗಾತ್ರದ ಉಪಗ್ರಹಗಳನ್ನು ಹೊತ್ತೊಯ್ಯಲು ಅಭಿವೃದ್ಧಿಪಡಿಸಿರುವ ವಿಕ್ರಮ್ ಸರಣಿಯಲ್ಲಿ ಮೂರು ಬಗೆಯ ರಾಕೆಟ್ಗಳನ್ನು ಉಡಾವಣೆ ಮಾಡಲಾಗುತ್ತದೆ.
ವಿಕ್ರಮ್ ಸರಣಿಯಲ್ಲಿ ಒಟ್ಟು ಮೂರು ರಾಕೆಟ್ಗಳಿವೆ. ಇವೆಲ್ಲವೂ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಅಭಿವೃದ್ಧಿಪಡಿಸಲಾಗಿದೆ. ವಿಕ್ರಂ-1 ಈ ಸರಣಿಯ ಮೊದಲ ರಾಕೆಟ್ ಆಗಿದೆ. ಇದು 480 ಕೆಜಿಗಿಂತ ಕಡಿಮೆ ತೂಕದ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಒಯ್ಯುತ್ತದೆ. ನಂತರದ ವಿಕ್ರಮ್ II ಮತ್ತು ವಿಕ್ರಮ್ III ರಾಕೆಟ್ಗಳು ದೊಡ್ಡ ಪೇಲೋಡ್ಗಳನ್ನು ಸಾಗಿಸುವ ನಿರೀಕ್ಷೆಯಿದೆ.
|
2018 ರಲ್ಲಿ ಸ್ಕೈರೂಟ್ ಏರೋಸ್ಪೇಸ್ ಸ್ಟಾರ್ಟ್ಅಪ್ ಆರಂಭ
ರಾಕೆಟ್ ಅನ್ನು ಮೇ 2022 ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಸ್ಕೈರೂಟ್ ಈಗಾಗಲೇ ತಿಳಿಸಿದೆ. ಕಂಪನಿಯು ಈ ಮಿಷನ್ಗೆ ಪ್ರಾರಂಭ ಎಂದು ಹೆಸರಿಸಿದೆ. ಸ್ಕೈರೂಟ್ ಹೇಳಿಕೆಯ ಪ್ರಕಾರ, ವಿಕ್ರಮ್ ಎಸ್ ಅನ್ನು ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆ ಮಾಡಬೇಕಾಗಿತ್ತು. ಆದರೆ, ಕೆಟ್ಟ ಹವಾಮಾನದಿಂದಾಗಿ ಅದನ್ನು ನವೆಂಬರ್ 18 ರಂದು ಉಡಾವಣೆ ಮಾಡಲಾಗಿದೆ.
ಇಸ್ರೋ ಮಾಜಿ ವಿಜ್ಞಾನಿ ಪವನ್ ಕುಮಾರ್ ಚಂದನ್ ಮತ್ತು ನಾಗಾ ಭಾರತ್ ಡಾಕಾ ಅವರು 2018 ರಲ್ಲಿ ಸ್ಕೈರೂಟ್ ಏರೋಸ್ಪೇಸ್ ಅನ್ನು ಸ್ಟಾರ್ಟ್ಅಪ್ ಆಗಿ ಸ್ಥಾಪಿಸಿದರು.
ಈ ಕಾರ್ಯಾಚರಣೆಗೆ ಇಸ್ರೋ ಹಲವು ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿದೆ ಎಂದು ಅದರ ಸಿಇಒ ಪವನ್ ಕುಮಾರ್ ಚಂದನ್ ತಿಳಿಸಿದ್ದಾರೆ. ಇದಕ್ಕಾಗಿ ಇಸ್ರೋ ಕಡಿಮೆ ಶುಲ್ಕವನ್ನು ವಿಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

20,000 ಸಣ್ಣ ಉಪಗ್ರಹಗಳ ಬಿಡುಗಡೆ ಗುರು ಹೊಂದಿರುವ ಸ್ಕೈರೂಟ್
ಸ್ಕೈರೂಟ್ ಇಸ್ರೋ ಜೊತೆ ರಾಕೆಟ್ ಉಡಾವಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ಇದಲ್ಲದೇ, ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಮಾಸ್ ಮತ್ತು ಸ್ಪೇಸ್ಕಿಡ್ಜ್, ಕೊಯಮತ್ತೂರಿನ ಬೆಲಾಟ್ರಿಕ್ಸ್ ಏರೋಸ್ಪೇಸ್ನಂತಹ ಕೆಲವು ಕಂಪನಿಗಳು ಸಣ್ಣ ಉಪಗ್ರಹಗಳನ್ನು ಕಳುಹಿಸಲು ಅವಕಾಶಗಳನ್ನು ಹುಡುಕುತ್ತಿವೆ.
ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಅತ್ಯಂತ ಆರ್ಥಿಕವಾಗಿ ರಾಕೆಟ್ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದು ಸ್ಕೈರೂಟ್ ವಿಶ್ವಾಸ ವ್ಯಕ್ತಪಡಿಸಿದೆ. ಮುಂದಿನ ದಶಕದಲ್ಲಿ ಕಂಪನಿಯು 20,000 ಸಣ್ಣ ಉಪಗ್ರಹಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.
ಕಂಪನಿಯ ವೆಬ್ಸೈಟ್ನಲ್ಲಿ "ಟ್ಯಾಕ್ಸಿ ಬುಕ್ ಮಾಡುವುದಕ್ಕಿಂತ ಈಗ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುವುದು ಹೆಚ್ಚು ವೇಗ, ಹೆಚ್ಚು ನಿಖರ ಮತ್ತು ಅಗ್ಗವಾಗಲಿದೆ" ಎಂದು ಬರೆದಿದೆ.
ರಾಕೆಟ್ಗಳನ್ನು ಯಾವುದೇ ಉಡಾವಣಾ ಕೇಂದ್ರದಿಂದ 24 ಗಂಟೆಗಳ ಒಳಗೆ ಜೋಡಿಸಿ ಮತ್ತು ಬಿಡುಗಡೆ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಉದ್ಯಮದಲ್ಲಿ ಭಾರತದ ಪಾಲು 2%
ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ಭಾಗವಹಿಸುವಿಕೆ 2020 ರಿಂದ ಪ್ರಾರಂಭವಾಗಿದೆ. ಜೂನ್ 2020 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈ ವಲಯದಲ್ಲಿ ಬದಲಾವಣೆಗಳನ್ನು ಪ್ರಾರಂಭಿಸಿತು. ನಂತರ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಲಾಯಿತು.
ಇದಕ್ಕಾಗಿ, ಇಸ್ರೋ ಮತ್ತು ಬಾಹ್ಯಾಕಾಶ ಕಂಪನಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಇನ್-ಸ್ಪೇಸ್ ಇ ಎಂಬ ಹೊಸ ಸಂಸ್ಥೆಯನ್ನು ರಚಿಸಲಾಯಿತು.
2040 ರ ಹೊತ್ತಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಉದ್ಯಮದ ಗಾತ್ರವು ಒಂದು ಟ್ರಿಲಿಯನ್ ಡಾಲರ್ಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಭಾರತವು ಈ ಲಾಭದಾಯಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಲು ಉತ್ಸುಕವಾಗಿದೆ. ಪ್ರಸ್ತುತ ಈ ಉದ್ಯಮದಲ್ಲಿ ಭಾರತದ ಪಾಲು ಕೇವಲ 2%. ಈ ಕೊರತೆಯನ್ನು ತುಂಬಲು ಭಾರತವು ಹೊಸ ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ಖಾಸಗಿ ಕಂಪನಿಗಳನ್ನು ಉತ್ತೇಜಿಸುತ್ತಿದೆ.

ದೇಶದಿಂದ 1963ರಲ್ಲಿ ಮೊದಲ ರಾಕೆಟ್ ಉಡಾವಣೆ
ಭಾರತದ ಬಾಹ್ಯಾಕಾಶ ಯಾನವು 1960 ರ ದಶಕದಲ್ಲಿ ಪ್ರಾರಂಭವಾಯಿತು. ಡಾ. ವಿಕ್ರಮ್ ಸಾರಾಭಾಯ್ ಅವರ ನೇತೃತ್ವದಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿ (INCOSPAR) ರಚನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ಮೊದಲ ಉಪಗ್ರಹ ಆರ್ಯಭಟ್ಟವನ್ನು ಅಂದಿನ ಸೋವಿಯತ್ ಒಕ್ಕೂಟದ ಸಹಕಾರದೊಂದಿಗೆ ರಷ್ಯಾದ ಅಸ್ಟ್ರಾಖಾನ್ ಪ್ರದೇಶದಿಂದ ಉಡಾವಣೆ ಮಾಡಲಾಯಿತು. ಭಾರತೀಯ ಬಾಹ್ಯಾಕಾಶ ಯಾನ ಇತಿಹಾಸದಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲು.
ಭಾರತದ ನೆಲದಿಂದ ಮೊದಲ ರಾಕೆಟ್ ಅನ್ನು 21 ನವೆಂಬರ್ 1963 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದನ್ನು ತಿರುವನಂತಪುರಂ ಬಳಿಯ ತುಂಬಾದಿಂದ ಉಡಾವಣೆ ಮಾಡಲಾಯಿತು. 30 ಕೆಜಿ ತೂಕದ ಉಪಗ್ರಹವನ್ನು 207 ಕಿಮೀ ದೂರಕ್ಕೆ ಸಾಗಿಸಬಲ್ಲ ಈ ರಾಕೆಟ್ನ ತೂಕ 715 ಕೆಜಿ. ಆದರೆ ಆಗಿನ ಕಾಲಕ್ಕೆ ಹೋಲಿಸಿದರೆ 2022ರಲ್ಲಿ ಭಾರತ ಉಡಾವಣೆ ಮಾಡಿದ ಸುಧಾರಿತ ರಾಕೆಟ್ ಎಸ್ಎಸ್ಎಲ್ವಿ 120 ಟನ್ ತೂಕವಿತ್ತು.
-
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ












Click it and Unblock the Notifications