Childrens: ನಿಮ್ಮ ಮಗುವಿನಲ್ಲಿರುವ ಕ್ರಿಯೇಟಿವಿಟಿಗೆ ಇರಲಿ ಪ್ರೋತ್ಸಾಹ
ಮಕ್ಕಳ ಮನಸು ಬಿಳಿ ಹಾಳೆ ಇದ್ದಂಗೆ. ಹುಟ್ಟಿದ ಮಗುವೊಂದು ಎರಡು ಮೂರು ವರ್ಷಗಳವರೆಗೆ ತಾನು ನೋಡುವುದನ್ನು, ಕೇಳುವುದನ್ನು ಬಣ್ಣ ಹಾಗೂ ಚಿತ್ರದ ರೂಪದಲ್ಲಿಯೇ ಅರ್ಥ ಮಾಡಿಕೊಳ್ಳಲು, ಪ್ರತಿಕ್ರಿಯಿಸಲು ಮುಂದಾಗುತ್ತದೆ. ಈ ಸೃಜನಶೀಲತೆಯನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವುದು ಹೇಗೆಂಬುದರ ಕುರಿತು ಈ ಸ್ಟೋರಿಯಲ್ಲಿ ನೋಡೋಣ.
ತನ್ನಿಷ್ಟದಂತೆ ಗೀಚುವುದಕ್ಕೆ ಬಿಡಿ
ಮಗುವೊಂದು ಪ್ರಾರಂಭದಲ್ಲಿ ತನ್ನ ಕೈಬೆರಳುಗಳಲ್ಲೆ ಆಟವಾಡುತ್ತಾ ಪ್ರತಿಕ್ರಿಯಿಸುತ್ತಿರುತ್ತದೆ. ನಂತರ ಮಗು ತನ್ನ ಕೈ ಬೆರಳುಗಳಲ್ಲಿ ವಸ್ತುವೊಂದನ್ನು ಹಿಡಿದುಕೊಳ್ಳಲು ಸಾಧ್ಯವಾದಾಗ ಆ ವಸ್ತುವಿನ ಮೂಲಕವೇ ತನ್ನ ಆಲೋಚನೆಯನ್ನು ಅಭಿವ್ಯಕ್ತಿಸುತ್ತದೆ. ಇಂತಹ ಸಂದರ್ಭದಲ್ಲಿ ಪೆನ್ನು, ಪೆನ್ಸಿಲ್ ಮೂಲಕ ಮಕ್ಕಳು ಮನೆಯ ಗೋಡೆಯ ಮೇಲೆ, ನೆಲ ಹೀಗೆ ತನಗೆ ಎಟಕುವ ಕಡೆಗಳಲ್ಲಿ ತನ್ನ ಗೀಚುತ್ತಾರೆ.

ಹಿರಿಯರಾದ ನಾವು ಮಕ್ಕಳು ಮೂಡಿಸುವ ಗೆರೆಗಳನ್ನು ತಾತ್ಸಾರವಾಗಿ ಕಾಣುತ್ತೇವೆ. ಗೋಡೆ ಹಾಳಾಯಿತೆಂದು ಭಾವಿಸಿ ಮಕ್ಕಳಿಗೆ ಗೋಡೆಯ ಮೇಲೆ ಬರೆಯಬಾರದೆಂದು ಎಚ್ಚರಿಕೆ ನೀಡುತ್ತೇವೆ. ಇದರಿಂದಾಗಿ ಮಕ್ಕಳಿಗೆ ಅಭಿವ್ಯಕ್ತಿಗೆ ಇರುವ ಏಕೈಕ ಮಾಧ್ಯಮವನ್ನು ಹಿರಿಯರಾದ ನಾವು ಮೊಟಕುಗೊಳಿಸುತ್ತೇವೆ. ಹೀಗಾಗಿ ಪೋಷಕರಾದ ನಾವು ಮಕ್ಕಳ ಸೃಜನಶೀಲತೆಯ ಸ್ವರೂಪಗಳ ಕುರಿತು ಜಾಗೃತಿಗೊಳ್ಳಬೇಕಿದೆ.
ನಿಮ್ಮ ಅಭಿಪ್ರಾಯ ಹೇರಬೇಡಿ
ಮಕ್ಕಳಿಗೂ ಹಲವಾರು ವಿಷಯಗಳ ಕುರಿತು ಹೇಳಲಿಕ್ಕೆ ಅಭಿಪ್ರಾಯಗಳಿರುತ್ತವೆ ಎಂಬುದನ್ನು ಹಿರಿಯರಾದ ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ಹಿರಿಯರು ಹೇಳಿದನ್ನು ಚಾಚು ತಪ್ಪದೆ ಪಾಲಿಸುವುದಷ್ಟೆ ಮಕ್ಕಳ ಕರ್ತವ್ಯವೆಂದು ಭಾವಿಸುವವರೇ ಹೆಚ್ಚಾಗಿದ್ದಾರೆ. ಇದರಿಂದ ಮಕ್ಕಳು ಕ್ರಮೇಣವಾಗಿ ಆಲೋಚಿಸುವುದನ್ನೆ ನಿಲ್ಲಿಸಿಬಿಡುತ್ತಾರೆ. ಆಲೋಚಿಸುವುದಿಲ್ಲವೆಂದರೆ ಪ್ರಶ್ನೆಗಳೇ ಇರುವುದಿಲ್ಲ, ಇಂತಹ ಮನಃಸ್ಥಿತಿ ಸೃಜನಶೀಲತೆಗೆ ಮಾರಕವಾದದ್ದು. ಹೀಗಾಗಿ ಪಾಲಕರಾದ ನಾವು ಮಕ್ಕಳ ಅಭಿಪ್ರಾಯಕ್ಕೆ ಮೊದಲ ಆದ್ಯತೆ ಕೊಡಬೇಕು.
ಅವರ ಸಾಮರ್ಥ್ಯವನ್ನು ಗುರುತಿಸಿ
ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಅನ್ನುವ ಹಾಗೆ ಪ್ರತಿಯೊಂದು ಮಗುವಿನಲ್ಲಿಯೂ ಸೃಜನಶೀಲತೆ ಎನ್ನುವುದು ಸ್ವಾಭಾವಿಕವಾಗಿಯೇ ಇರುವಂತಹದ್ದು. ಆದರೆ, ಒಂದೊಂದು ಮಗುವಿನಲ್ಲಿ ಒಂದು ರೀತಿಯಲ್ಲಿ ಇರುತ್ತದೆ. ಒಂದು ಮಗು ಓದುವುದರಲ್ಲಿ ತುಂಬಾ ಆಸಕ್ತಿ ವಹಿಸಿದ್ದರೆ, ಮತ್ತೊಂದು ಮಗು ಚಿತ್ರಕಲೆಯಲ್ಲಿ, ಡ್ಯಾನ್ಸ್ ಮಾಡುವುದರಲ್ಲಿ ಹೆಚ್ಚು ಕ್ರಿಯಾಶೀಲನಾಗಿರಬಹುದು. ಇಂತಹ ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವಂತಹ ಜವಾಬ್ದಾರಿ ಪೋಷಕರ, ಶಿಕ್ಷಕರದಾಗಿರುತ್ತದೆ ಎಂಬುದನ್ನು ಮರೆಯಬಾರದು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications