ಸಂಧ್ಯಾ ಸುರಕ್ಷಾ ಯೋಜನೆ- ಪ್ರಯೋಜನ, ಅರ್ಜಿ, ಅರ್ಹತೆ ಇತ್ಯಾದಿ ಮಾಹಿತಿ
ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆ ಜಾರಿಯಲ್ಲಿದೆ. ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ ಒಂದು ಸಾವಿರ ರೂ ಹಣವನ್ನು ರಾಜ್ಯ ಸರಕಾರ ಒದಗಿಸುತ್ತದೆ.
ಹಿರಿಯ ನಾಗರಿಕರ ಭದ್ರತೆಗೆಂದು ಸರಕಾರ ರೂಪಿಸಿರುವ ಯೋಜನೆಗಳಲ್ಲಿ ಸಂಧ್ಯಾ ಸುರಕ್ಷಾ ಕೂಡ ಒಂದು. ಮಾಸಿಕ ಪಿಂಚಣಿ ಜೊತೆಗೆ ವೈದ್ಯಕೀಯ ನೆರವು, ಬಸ್ ಪಾಸ್ ರಿಯಾಯಿತಿ ಇತ್ಯಾದಿ ಸೌಲಭ್ಯಗಳನ್ನು ಸರಕಾರ ನೀಡುತ್ತದೆ.
ಹಾಗೆಯೇ, ವೃದ್ಧಾಶ್ರಮಗಳನ್ನು ಸ್ಥಾಪಿಸಲು ಎನ್ಜಿಒಗಳಿಗೆ ಸರಕಾರ ಸಹಾಯ ಮಾಡುತ್ತದೆ. ಎನ್ಜಿಒಗಳ ಮೂಲಕ ವೃದ್ಧರಿಗೆ ವೈದ್ಯಕೀಯ ವ್ಯವಸ್ಥೆ ಕೂಡ ಮಾಡುತ್ತದೆ. ಸಾಮಾನ್ಯವಾಗಿ ನಿಗದಿ ಸರಕಾರೇತರ ಸಂಸ್ಥೆಗಳು ಈ ಯೋಜನೆಯನ್ನು ಜಾರಿ ಮಾಡಲು ಸರಕಾರಕ್ಕೆ ಸಹಾಯ ಮಾಡುತ್ತವೆ.
ಈ ಯೋಜನೆಗೆ ಯಾರು ಅರ್ಹರು? ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕೆ ಬೇಕಾಗುವ ದಾಖಲೆಗಳೇನು, ಮಾನದಂಡಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ.

ಸಂಧ್ಯಾ ಸುರಕ್ಷಾ ಯೋಜನೆ ಲಾಭ
* ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ತಿಂಗಳಿಗೆ ಒಂದು ಸಾವಿರ ರೂ ಸಿಗುತ್ತದೆ
* ಬಿಎಂಟಿಸಿ ಸೇರಿದಂತೆ ಕೆಎಸ್ಸಾರ್ಟಿಸಿ ಬಸ್ ಪಾಸುಗಳು ರಿಯಾಯಿತಿ ದರಕ್ಕೆ ಸಿಗುತ್ತದೆ
* ಫಲಾನುಭವಿಗಳಿಗೆ ಎನ್ಜಿಒಗಳ ಮೂಲಕ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ.
* ಹಿರಿಯ ನಾಗರಿಕರಿಗೆ ಸಹಾಯವಾಗಲೆಂದು ವೃದ್ಧಾಶ್ರಮ ಸ್ಥಾಪನೆಗೆ ಎನ್ಜಿಒಗಳಿಗೆ ಸರಕಾರ ನೆರವು ಕೊಡುತ್ತದೆ.
* ಈ ಯೋಜನೆಯ ಜಾರಿ ಮಾಡಲು ಸರಕಾರಕ್ಕೆ ನೆರವಾಗುವ ಎನ್ಜಿಒಗಳು ಯೋಜನೆಯ ಫಲಾನುಭವಿಗಳಿಗೆ ಐಡಿ ಕಾರ್ಡ್ ನೀಡುತ್ತದೆ. ಹೀಗೆ ಪ್ರತೀ ಐಡಿ ಕಾರ್ಡ್ ವಿತರಣೆ ಮಾಡಿದರೆ ಆ ಎನ್ಜಿಒಗೆ ಸರಕಾರ ೨೫ ರೂ ಸಹಾಯ ಒದಗಿಸುತ್ತದೆ
* ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಡೇ ಕೇರ್ ಕೇಂದ್ರಗಳನ್ನು ಸರಕಾರ ಸ್ಥಾಪಿಸುತ್ತದೆ.
* ಹಿರಿಯ ನಾಗರಿಕ ಸಹಾಯಕ್ಕಾಗಿ ವಿವಿಧ ಕಡೆ ಹೆಲ್ಪ್ಲೈನ್ಗಳನ್ನು ಒದಗಿಸಲಾಗುತ್ತದೆ. ಎನ್ಜಿಒಗಳಲ್ಲದೇ ಪೊಲೀಸ್ ಇಲಾಖೆ ಕೂಡ ಇಲ್ಲಿ ನೆರವಾಗುತ್ತದೆ.

ಸಂಧ್ಯಾ ಸುರಕ್ಷಾ ಯೋಜನೆ ಯಾರಿಗೆ?
* ಈ ಯೋಜನೆಯ ಫಲಾನುಭವಿಯಾಗಿರುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಇವರು 65ವರ್ಷ ಮೇಲ್ಪಟ್ಟ ವಯಸ್ಸಿನವರಾಗಬೇಕು
* ಅರ್ಜಿದಾರ ಮತ್ತವರ ದಂಪತಿಯ ಒಟ್ಟು ವಾರ್ಷಿಕ ಆದಾಯ 20 ಸಾವಿರ ರೂ ಮೀರಬಾರದು. ಇದನ್ನು ಸ್ಥಳೀಯ ರೆವೆನ್ಯೂ ಅಧಿಕಾರಿಯಿಂದ ಪ್ರಮಾಣ ಪತ್ರ ಪಡೆಯಬೇಕು.
* ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು ಈ ಪಂಗಡಗಳಲ್ಲಿನ ಬಡ ಕುಟುಂಬದ ವೃದ್ಧರಿಗೆ ಈ ಯೋಜನೆ ಇದೆ.
* ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ವಿಕಲಚೇತನರ ಪಿಂಚಣಿ ಅಥವಾ ಇತರ ಯೋಜನೆಗಳಿಂದ ಪಿಂಚಣಿ ಪಡೆಯುತ್ತಿರುವ ವ್ಯಕ್ತಿಗಳು ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.

ದಾಖಲೆಗಳು ಏನು ಬೇಕು?
* ವಾಸಸ್ಥಳ ದಾಖಲೆ
* ಆದಾಯ ಪ್ರಮಾಣಪತ್ರ
* ವಯಸ್ಸಿನ ದಾಖಲೆ (ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಾಸ್ಪೋರ್ಟ್, ಡಿಎಲ್, ರೇಷನ್ ಕಾರ್ಡ್, ವೋಟರ್ ಐಡಿ, ಟ್ರಾನ್ಸ್ಫರ್ ಸರ್ಟಿಫಿಕೇಟ್ ಆಗಬಹುದು)
* ಬ್ಯಾಂಕ್ ಪಾಸ್ಬುಕ್
* ತಹಶೀಲ್ದಾರರಿಂದ ಆಕ್ಯುಪೇಶನ್ ಸರ್ಟಿಫಿಕೇಟ್

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ನಲ್ಲಿ ಅರ್ಜಿ ನಮೂನೆ ಸಿಗುತ್ತದೆ. ಅದು ಬಿಟ್ಟರೆ ಉಳಿದಂತೆ ಪ್ರತಿಯೊಂದು ಕ್ರಮವೂ ಆಫ್ಲೈನ್ನಲ್ಲೇ ಮಾಡಬೇಕು. ಆನ್ಲೈನ್ನಲ್ಲಿ, ಅಥವಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಬೇಕು.
ನಂತರ ಅಗತ್ಯ ದಾಖಲೆಗಳ ಸಮೇತ ಅರ್ಜಿಯನ್ನು ಗ್ರಾಪಂ ಕಚೇರಿ, ಮುನಿಸಿಪಾಲ್ಟಿ ಕಚೇರಿ ಅಥವಾ ಬ್ಲಾಕ್ ಕಚೇರಿಯಲ್ಲಿ ಸಲ್ಲಿಸಬೇಕು.
(ಒನ್ಇಂಡಿಯಾ ಸುದ್ದಿ)
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications