ವಿರೋಧದ ನಡುವೆಯೇ ರಷ್ಯಾ ಜತೆ ಆ ಒಪ್ಪಂದದಿಂದ 35 ಸಾವಿರ ಕೋಟಿ ರೂ ಉಳಿಸಿದ ಭಾರತ
ರಷ್ಯಾ ಜೊತೆಗಿನ ಸ್ನೇಹ ಭಾರತಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟಿದೆ. ಭಾರತ ರಷ್ಯಾದಿಂದ ಅಗ್ಗದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಪಶ್ಚಿಮದ ದೇಶಗಳು ಟೀಕಿಸಿದ್ದವು. ಹಾಗೂ ಉಕ್ರೇನ್ ಯುದ್ಧದ ನಡುವೆ ಯುಎಸ್ ಸೇರಿದಂತೆ ಹಲವು ದೇಶಗಳ ಕಠಿಣ ನಿರ್ಬಂಧಗಳ ಹೊರತಾಗಿಯೂ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿತು. ಇತ್ತೀಚೆಗೆ ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ಚರ್ಚೆಯಲ್ಲಿತ್ತು. ಈ ವೇಳೆ ಪ್ರಧಾನಿ ಮೋದಿ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಪುಟಿನ್ ಅವರಿಗೆ ಸಲಹೆಯನ್ನೂ ನೀಡಿದರು. ಈ ಸಲಹೆಗೆ ಪ್ರಪಂಚದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು, ರಷ್ಯಾದಿಂದ ಭಾರತವು ಅಗ್ಗದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಪಶ್ಚಿಮದ ಕೆಲವು ದೇಶಗಳು ಟೀಕಿಸಿದ ಸಮಯದಲ್ಲಿ ಉಭಯ ನಾಯಕರ ಸಭೆ ನಡೆಯಿತು. ಆದರೆ ಉಕ್ರೇನ್ ಯುದ್ಧದ ನಂತರ, ಯುಎಸ್ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ಹೇರಿದ ಕಠಿಣ ನಿರ್ಬಂಧಗಳ ಹೊರತಾಗಿಯೂ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿತು. ರಷ್ಯಾದಿಂದ ತೈಲ ಖರೀದಿಯ ಮೂಲಕ ಭಾರತ 35 ಸಾವಿರ ಕೋಟಿ ರೂಪಾಯಿಗಳ ಭಾರಿ ಉಳಿತಾಯ ಭಾರತವು ಸಾಧಿಸಿಕೊಂಡಿದೆ.

ವಿರೋಧದ ನಡುವೆಯೂ ಭಾರತದ ಈ ನಿರ್ಧಾರ
ವಾಸ್ತವವಾಗಿ ಪಾಶ್ಚಿಮಾತ್ಯ ದೇಶಗಳ ವಿರೋಧದ ನಡುವೆಯೂ ಭಾರತ ತೈಲ ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಈ ನಿರ್ಧಾರದ ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ರಾಯಿಟರ್ಸ್ ವರದಿಯಲ್ಲಿ ಡೇಟಾವನ್ನು ಪ್ರಸ್ತುತಪಡಿಸುತ್ತಾ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತವು ರಷ್ಯಾದಿಂದ 6.6 ಮಿಲಿಯನ್ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಇದು ಎರಡನೇ ತ್ರೈಮಾಸಿಕದಲ್ಲಿ 84.2 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ. ಈ ಸಮಯದಲ್ಲಿ ರಷ್ಯಾ ಪ್ರತಿ ಬ್ಯಾರೆಲ್ಗೆ $ 30 ರಿಯಾಯಿತಿಯನ್ನು ನೀಡಿತು. ಈ ಕಾರಣದಿಂದಾಗಿ, ಮೊದಲ ತ್ರೈಮಾಸಿಕದಲ್ಲಿ ಒಂದು ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವೆಚ್ಚ ಸುಮಾರು $ 790 ಆಗಿತ್ತು.

ಭಾರತಕ್ಕೆ 35,000 ಕೋಟಿ ಲಾಭ
ಇದರ ನಂತರ ಇದು ಎರಡನೇ ತ್ರೈಮಾಸಿಕದಲ್ಲಿ $ 740ಗೆ ಇಳಿಯಿತು. ಈ ಮೂಲಕ ಭಾರತಕ್ಕೆ ಒಟ್ಟು 35,000 ಕೋಟಿ ರೂ. ಇದೇ ಅವಧಿಯಲ್ಲಿ ಇತರ ಮೂಲಗಳಿಂದ ಆಮದು ಮಾಡಿಕೊಳ್ಳುವ ವೆಚ್ಚ ಹೆಚ್ಚಾಯಿತು. ರಷ್ಯಾದಿಂದ ಅಗ್ಗದ ತೈಲ ಆಮದು 2022ರಲ್ಲಿ 10 ಪಟ್ಟು ಹೆಚ್ಚಾಗಿದೆ. ಇದರಿಂದ ವಹಿವಾಟು 11.5 ಬಿಲಿಯನ್ ಡಾಲರ್ ತಲುಪಿದೆ. ವರ್ಷದ ಅಂತ್ಯದ ವೇಳೆಗೆ ಇದು ದಾಖಲೆಯ $13.6 ಬಿಲಿಯನ್ ತಲುಪುವ ಸಾಧ್ಯತೆಯಿದೆ. ಚೀನಾದ ನಂತರ ರಷ್ಯಾ ಕಚ್ಚಾ ತೈಲದ ಎರಡನೇ ಅತಿದೊಡ್ಡ ಖರೀದಿದಾರನಾಗಿ ಭಾರತ ಹೊರಹೊಮ್ಮಿದೆ.

ರಷ್ಯಾ 3ನೇ ಅತಿದೊಡ್ಡ ತೈಲ ಪೂರೈಕೆದಾರ
ಜುಲೈನಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದ್ದ ರಷ್ಯಾ ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಯಿತು. ಆದಾಗ್ಯೂ, ಸೌದಿ ಅರೇಬಿಯಾ ನಂತರ ಆಗಸ್ಟ್ನಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆದುಕೊಂಡಿತು ಮತ್ತು ಈಗ ರಷ್ಯಾ ಭಾರತಕ್ಕೆ ಮೂರನೇ ಅತಿದೊಡ್ಡ ತೈಲ ಪೂರೈಕೆದಾರನಾಗಿ ಉಳಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.3 ಶತಕೋಟಿ ಡಾಲರ್ಗೆ ಹೋಲಿಸಿದರೆ, ಏಪ್ರಿಲ್-ಜುಲೈ ಅವಧಿಯಲ್ಲಿ ರಷ್ಯಾದಿಂದ ಭಾರತದ ಖನಿಜ ತೈಲ ಆಮದು ಎಂಟು ಪಟ್ಟು ಏರಿಕೆಯಾಗಿ 11.2 ಶತಕೋಟಿ ಡಾಲರ್ಗೆ ತಲುಪಿದೆ ಎಂದು ಡೇಟಾ ತೋರಿಸುತ್ತದೆ.

2021-22ರಲ್ಲಿ ದೇಶದ ತೈಲ ಆಮದು ಬಿಲ್ ದ್ವಿಗುಣ?
ಮಾರ್ಚ್ನಿಂದ ಭಾರತವು ರಷ್ಯಾದಿಂದ ಆಮದುಗಳನ್ನು ಹೆಚ್ಚಿಸಿದಾಗ, ಅದು ಕಳೆದ ವರ್ಷ $1.5 ಶತಕೋಟಿಗಿಂತ ಸ್ವಲ್ಪಮಟ್ಟಿಗೆ $12 ಶತಕೋಟಿಗೆ ಹೆಚ್ಚಾಗಿದೆ. ಇದರಲ್ಲಿ ಸುಮಾರು 7 ಬಿಲಿಯನ್ ಡಾಲರ್ ಜೂನ್ ಮತ್ತು ಜುಲೈನಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಈ ಆಮದು ಬೇಡಿಕೆಯ 83% ಪೂರೈಸುವುದರಿಂದ ತೈಲ ಬೆಲೆಗಳು ಭಾರತಕ್ಕೆ ಮುಖ್ಯವಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಸಾಕಷ್ಟು ಹಣವನ್ನು ವ್ಯಯಿಸುತ್ತದೆ.
2021-22ರ ದೇಶದ ತೈಲ ಆಮದು ಬಿಲ್ 119 ಬಿಲಿಯನ್ ಡಾಲರ್ಗೆ ದ್ವಿಗುಣಗೊಂಡಿದೆ ಎಂಬ ಅಂಶವೂ ಇದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದೆ. ಇದು ಸರ್ಕಾರದ ಹಣಕಾಸಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿತು ಮತ್ತು ಸಾಂಕ್ರಾಮಿಕ ರೋಗದ ನಂತರ ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಬೀರಿತು. ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದು ಹಣದುಬ್ಬರ ನಿರ್ವಹಣಾ ತಂತ್ರದ ಭಾಗವಾಗಿದೆ ಮತ್ತು ಇತರ ದೇಶಗಳು ಅದೇ ರೀತಿ ಮಾಡುತ್ತಿವೆ ಎಂದು ಸೆಮಿನಾರ್ನಲ್ಲಿ ಹೇಳಿಕೊಂಡಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications