'ಹೋಂ ಸ್ಟೇ'; ಕೊಡಗಿಗೆ ಕಪ್ಪುಚುಕ್ಕೆಯಾಗುತ್ತಿವೆಯೇ ಈ ಆತಿಥ್ಯದ ಮನೆಗಳು?
ಹಸಿರಿನ ಸಿರಿ ಹೊದ್ದ ಕೊಡಗಿನ ಚೆಲುವನ್ನು ಕಣ್ತುಂಬಿಕೊಳ್ಳಲು ರಾಜ್ಯ, ದೇಶ ಮಾತ್ರವಲ್ಲ ವಿದೇಶಗಳಿಂದಲೂ ಜನ ಬರುತ್ತಿದ್ದರು. ಆದರೆ ಪ್ರಕೃತಿ ಎಂದರೆ ಕೊಡಗು ಎಂಬಷ್ಟು ಹೆಸರಾಗಿದ್ದ ಈ ಜಿಲ್ಲೆಯ ಸಂಪೂರ್ಣ ಚಿತ್ರಣವೇ ಬದಲಾಗಿ ಹೋದದ್ದು, ಕಳೆದ ವರ್ಷ ಆಗಸ್ಟ್ ನಲ್ಲಿ ಸಂಭವಿಸಿದ ಮಳೆ, ಭೂಕುಸಿತದಿಂದ.
ಭೂಕುಸಿತದ ಜಾಡು ಹಿಡಿದು ಹೊರಟಾಗ ಹಲವು ಅಚ್ಚರಿಗಳು ಎದುರಾದವು. ಭೂಮಿಯ ಮೇಲೆ ಮನುಷ್ಯನ ಅತಿಕ್ರಮಣ ಸಾಬೀತಾಗಿತ್ತು. ಅದಕ್ಕೆ ಒಂದು ಉದಾಹರಣೆಯಾಗಿ ದೊರೆತದ್ದು, ಹೋಂ ಸ್ಟೇಗಳು. ಎಲ್ಲೆಂದರಲ್ಲಿ ನಿರ್ಮಾಣವಾಗಿರುವ ಹೋಂಸ್ಟೇಗಳು ಕೊಡಗಿನ ಸಂಸ್ಕೃತಿಗೆ ಮಾರಕವಾಗಿವೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದ್ದು, ಹೋಂಸ್ಟೇಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಇವಕ್ಕೆ ಪುಷ್ಠಿ ನೀಡುತ್ತಿರುವುದೂ ಸುಳ್ಳಲ್ಲ. ಪ್ರವಾಸೋದ್ಯಮಕ್ಕೆ ಬೆನ್ನಾಗಿ ನಿಲ್ಲಬೇಕಿದ್ದ ಈ ಹೋಂ ಸ್ಟೇಗಳು ಜಿಲ್ಲೆಗೆ ಕಪ್ಪುಚುಕ್ಕೆಯಾಗುತ್ತಿರುವುದಾದರೂ ಏಕೆ? ಇಲ್ಲಿದೆ ಅದಕ್ಕೆ ಉತ್ತರ...

ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ನೆರವಾಗಿದ್ದ ಹೋಂ ಸ್ಟೇ
ಒಂದು ಕಾಲದಲ್ಲಿ ಕಾಫಿ ಬೆಲೆ ಕುಸಿದಾಗ ಕೆಲವು ಬೆಳೆಗಾರರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಆರಂಭಿಸಿದ ಹೋಂ ಸ್ಟೇ ಉದ್ಯಮ ಬಹಳಷ್ಟು ಮಂದಿಯ ಬದುಕಿಗೆ ಆಸರೆಯಾಗಿತ್ತು. ಆದರೆ ವರ್ಷಗಳು ಉರುಳುತ್ತಿದ್ದಂತೆ ಹೋಂ ಸ್ಟೇ ಉದ್ದೇಶವೇ ಬದಲಾಯಿತು. ಹೋಂ ಸ್ಟೇ ಅನ್ನು ಅಕ್ರಮ ಚಟುವಟಿಕೆಗೆ ಬಳಸುವ ಮೂಲಕ ಹಣ ಗಳಿಸುವ ದಂಧೆಗೆ ಇಳಿದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಗೌಪ್ಯವಾಗಿ ಸಾಗುವ ಅಕ್ರಮ ಚಟುವಟಿಕೆ
ಇಂದು ಕೊಡಗಿನಲ್ಲಿ ಹೋಂ ಸ್ಟೇಗಳು ನಾಯಿಕೊಡೆಗಳಂತೆ ನಿರ್ಮಾಣವಾಗಿವೆ. ಇವುಗಳ ಪೈಕಿ ಕೆಲವು ಪರವಾನಗಿ ಹೊಂದಿದ್ದರೆ ಬಹಳಷ್ಟು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಹೋಂಸ್ಟೇಗಳನ್ನು ಸ್ಥಳೀಯ ಕಾಫಿ ಬೆಳೆಗಾರರು ಪ್ರಾಮಾಣಿಕವಾಗಿ ನಡೆಸುತ್ತಿದ್ದರೆ, ಮತ್ತೆ ಕೆಲವು ಹೋಂಸ್ಟೇಗಳನ್ನು ಅಕ್ರಮ ಚಟುವಟಿಕೆಗಾಗಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೊರಗಿನವರು ಹೋಂಸ್ಟೇ ಉದ್ಯಮಕ್ಕಾಗಿ ಕೋಟ್ಯಂತರ ಹಣವನ್ನು ಸುರಿಯುತ್ತಿದ್ದಾರೆ. ಇಲ್ಲಿನ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲಿ ಹೋಂಸ್ಟೇ ನಿರ್ಮಿಸಿ ಬಳಿಕ ಅಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಾರೆ. ಕೆಲವು ಪ್ರಕರಣಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುತ್ತವೆಯಾದರೂ ಉಳಿದಂತೆ ಎಲ್ಲವೂ ಇಲ್ಲಿ ಗೌಪ್ಯವಾಗಿಯೇ ನಡೆಯುತ್ತಿವೆ.

ಹಣ ಮಾಡುವ ಹಪಹಪಿ
ಈಗಾಗಲೇ ಹೋಂಸ್ಟೇನಲ್ಲಿ ಹನಿಟ್ರಾಪ್, ವೇಶ್ಯಾವಾಟಿಕೆ, ರೇವ್ ಪಾರ್ಟಿ ಮೊದಲಾದ ಅಕ್ರಮ ಚಟುವಟಿಕೆ ನಡೆದಿರುವ ಸುದ್ದಿಗಳು ಹೊರ ಬರುತ್ತಿರುವುದರಿಂದ ಹೋಂಸ್ಟೇ ನಡೆಸುವವರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೆಲ್ಲ ಹೋಂಸ್ಟೇ ಸ್ಥಾಪನೆಗೆ ಕಠಿಣ ಕ್ರಮಗಳಿರಲಿಲ್ಲ. ಆದರೆ ಇದೀಗ ಹಲವು ರೀತಿಯ ಕಾನೂನು ಕ್ರಮಗಳಿದ್ದು, ಎಲ್ಲ ನಿಯಮಗಳನ್ನು ಪಾಲನೆ ಮಾಡಲೇಬೇಕಾಗಿದೆ. ಇದನ್ನು ಪಾಲಿಸಿಕೊಂಡು ಪ್ರಾಮಾಣಿಕವಾಗಿ ಹೋಂಸ್ಟೇಗಳನ್ನು ನಡೆಸುವವರು ಇದ್ದಾರೆ. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಹಣ ಮಾಡುವ ದೃಷ್ಟಿಯಿಂದ ಅಕ್ರಮ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತಾ ಹೋಂಸ್ಟೇ ನಡೆಸುವವರು ಹೆಚ್ಚಾಗಿದ್ದು, ಇಲ್ಲಿ ಹಣವೊಂದಿದ್ದರೆ ಎಲ್ಲವೂ ದೊರೆಯುತ್ತದೆ. ಹೀಗಾಗಿ ವೀಕೆಂಡ್ ಮಸ್ತಿಗಾಗಿ ಜನ ಇತ್ತ ಮುಖ ಮಾಡುತ್ತಿದ್ದಾರೆ.

ಬಂದವರ ಮಾಹಿತಿಯನ್ನೂ ಪಡೆಯುವುದಿಲ್ಲ
ಕೆಲವರು ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಕಾಫಿ ತೋಟ ಖರೀದಿಸಿ ಭವ್ಯ ಬಂಗಲೆ ಕಟ್ಟಿ ವ್ಯವಹಾರ ಮಾಡುತ್ತಾರೆ. ಅಲ್ಲಿಗೆ ಸ್ಥಳೀಯರಿಗೆ ಪ್ರವೇಶವೇ ಇಲ್ಲದ ಕಾರಣದಿಂದ ಅಲ್ಲಿ ಏನು ನಡೆಯುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಯಾವತ್ತಾದರೊಂದು ದಿನ ಖಚಿತ ಮಾಹಿತಿ ಸಿಕ್ಕಿ ಪೊಲೀಸರು ಕದ ತಟ್ಟಿದಾಗ ಮಾತ್ರ ಅಲ್ಲಿ ಏನು ನಡೆಯುತ್ತಿತ್ತು ಎಂಬುದು ಬೆಳಕಿಗೆ ಬರುತ್ತದೆ. ಕಳೆದೊಂದು ದಶಕದಲ್ಲಿ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪಟ್ಟಣ ಮಾತ್ರವಲ್ಲದೆ, ಹಳ್ಳಿಹಳ್ಳಿಗಳಲ್ಲಿಯೂ ಪ್ರವಾಸಿಗರು ಕಾಣಸಿಗುತ್ತಾರೆ. ಕಾಫಿ ತೋಟಗಳ ನಡುವೆ ಇರುವ ಹೋಂಸ್ಟೇಗಳಲ್ಲಿ ಒಂದೆರಡು ದಿನಗಳನ್ನು ಕಳೆದು ಹೋಗುತ್ತಾರೆ. ಹಾಗೆ ಬಂದವರು ಯಾರು? ಅವರ ಹಿನ್ನಲೆ ಏನು? ಇದ್ಯಾವುದನ್ನು ಪ್ರಶ್ನಿಸದೆ ವಾಸ್ತವ್ಯಕ್ಕೆ ಅನುವು ಮಾಡಿಕೊಡುತ್ತಿರುವುದು ದುರಂತವೇ ಸರಿ.

ಗಾಳಿಗೆ ತೂರಿಹೋದ ಕಾನೂನು
ಎಲ್ಲ ಹೋಂಸ್ಟೇಗಳನ್ನು ಅಧಿಕೃತವಾಗಿ ನೋಂದಣಿ ಮಾಡಿ ಸಿಸಿಟಿವಿ ಅಳವಡಿಸಿ ಪಕ್ಕ ಮಾಹಿತಿಗಳನ್ನು ಪೊಲೀಸರಿಗೆ ನೀಡಬೇಕೆಂಬ ಕಾನೂನು ಇದ್ದರೂ ಅದನ್ನೆಲ್ಲ ಗಾಳಿಗೆ ತೂರಿ ಕೆಲವರು ಅನಧಿಕೃತವಾಗಿ ಹೋಂಸ್ಟೇಗಳನ್ನು ನಡೆಸುತ್ತಿದ್ದು ಅಲ್ಲಿ ಎಲ್ಲ ರೀತಿಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೊಡಗಿಗೊಂದು ಸುತ್ತು ಹೊಡೆದು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕುವುದಲ್ಲದೆ, ಅಧಿಕೃತ ಹೋಂಸ್ಟೇಗಳತ್ತ ನಿಗಾ ವಹಿಸದೆ ಹೋದರೆ ಮುಂದೊಂದು ದಿನ ಅಕ್ರಮ ಚಟುವಟಿಕೆಗಳಿಗೆ ಕೊಡಗು ತಾಣವಾಗುವ ದಿನಗಳು ದೂರವಿಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications