ಉಡುಪಿ: ಮಕರ ಸಂಕ್ರಾಂತಿ ಚೂರ್ಣೋತ್ಸವದ ವೇಳೆ ನಡೆಯುವ ವಿಸ್ಮಯ
ಕೃಷ್ಣನ ನಾಡು, ಕರಾವಳಿಯ ಉಡುಪಿಯಲ್ಲಿ ಈಗ ಪರ್ಯಾಯ ಮಹೋತ್ಸವದ ಸಂಭ್ರಮ. ನಾಲ್ಕನೇ ಬಾರಿಗೆ ಅಷ್ಟಮಠಗಳಲ್ಲೊಂದಾದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಪ್ರಸನ್ನರು ಸರ್ವಜ್ಞ ಪೀಠವನ್ನು ಏರಲಿದ್ದಾರೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಮಹೋತ್ಸವ ಜನವರಿ ಹದಿನೆಂಟರ ನಸುಕಿನಲ್ಲಿ ಆರಂಭವಾಗಲಿದೆ.
ಪ್ರತೀ ವರ್ಷ ಧನುರ್ಮಾಸದ ಶುಕ್ಲಪಕ್ಷದ ಸಪ್ತಮಿಯಂದು ಉಡುಪಿಯಲ್ಲಿ ಸಪ್ತೋತ್ಸವ ನಡೆಯುವ ಪದ್ದತಿಯಿದೆ. ಈ ಉತ್ಸವದ ಆರನೇ ದಿನ ಅಂದರೆ ಮಕರ ಸಂಕ್ರಾಂತಿಯ ಪರ್ವಕಾಲದಂದು ಮೂರು ತೇರು ಉತ್ಸವ ಮತ್ತು ಕೊನೆಯ ದಿನ ಬೆಳಗ್ಗೆ ಚೂರ್ಣೋತ್ಸವ ನಡೆಯುತ್ತದೆ.
ಈ ತೇರಿನ ಸಮಯದಲ್ಲಿ ಅಷ್ಟಮಠದ ಬಹುತೇಕ ಎಲ್ಲಾ ಯತಿಗಳು ಪಾಲ್ಗೊಳ್ಳುತ್ತಾರೆ. ಅದರಂತೆಯೇ, ಈ ಬಾರಿಯೂ ಕೊರೊನಾ ನಿರ್ಬಂಧದ ನಡುವೆಯೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಉತ್ಸವ ವೈಭವದಿಂದ ಮುಕ್ತಾಯಗೊಂಡಿದೆ.
ಜನವರಿ ಹದಿನೈದರ ಬೆಳಗ್ಗೆ ಶ್ರೀಕೃಷ್ಣ, ಮುಖ್ಯಪ್ರಾಣನಿಗೆ ಪೂಜೆಯ ನಂತರ, ಉತ್ಸವ ಮೂರ್ತಿಯನ್ನು ಬ್ರಹ್ಮರಥದಲ್ಲಿ ಇರಿಸಿ ವೈಭವದ ಉತ್ಸವವು ನಡೆಯುತ್ತದೆ. ಆದರೆ, ಒಂದು ಕೌತುಕದ ಘಟನೆ ನಡೆದರೆ ಮಾತ್ರ ಬ್ರಹ್ಮರಥ ಮುಂದಕ್ಕೆ ಚಲಿಸಲು ಆರಂಭಿಸುವುದು ಎನ್ನುವ ಪ್ರತೀತಿಯಿದೆ.

ಸೋದೆ ಮಠದ ಪರ್ಯಾಯದ ಅವಧಿಯಲ್ಲಿ ಬ್ರಹ್ಮರಥ ನವೀಕರಣ
ಕೆಲವು ವರ್ಷಗಳ ಹಿಂದೆ ಅಂದರೆ ಸೋದೆ ಮಠದ ಪರ್ಯಾಯದ ಅವಧಿಯಲ್ಲಿ ಬ್ರಹ್ಮರಥವನ್ನು ನವೀಕರಣವನ್ನು ಮಾಡಲಾಗಿತ್ತು. 250 ವರ್ಷಗಳಷ್ಟು ಹಳೆಯದಾದ ರಥವನ್ನು ವಿಶ್ವವಲ್ಲಭ ತೀರ್ಥರು ತಮ್ಮ ಪರ್ಯಾಯದ ಅವಧಿಯಲ್ಲಿ ಒಂದೂವರೆ ಕೋಟಿ ರೂಪಾಯಿ ವ್ಯಯಿಸಿ ಸಿದ್ದ ಪಡಿಸಿದ್ದರು. ರಥವನ್ನು ನವೀಕರಣ ಮಾಡುವ ಯೋಜನೆಯನ್ನು ಶ್ರೀಗಳು ಕೈಗೆತ್ತಿಕೊಂಡಾಗ ಬಹುತೇಕ ರಥವು ಶಿಥಿಲಗೊಂಡಿತ್ತು. ಹಾಗಾಗಿ, ನೂತನವಾಗಿಯೇ ಶ್ರೀಗಳು ರಥವನ್ನು ನಿರ್ಮಿಸಿ, ಶ್ರೀಕೃಷ್ಣನಿಗೆ ಅರ್ಪಿಸಿದ್ದರು. ಗೋಪಾಲ ಆಚಾರ್ಯ ನೇತೃತ್ವದ 50-60 ಜನರ ತಂಡ ರಥವನ್ನು ನವೀಕರಣಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಎಳೆಯಲಾಗುತ್ತದೆ
ಸಪ್ತೋತ್ಸವದ ಭಾಗವಾಗಿ ನಡೆಯುವ ಚೂರ್ಣೋತ್ಸವದಲ್ಲಿ ಒಂದು ರಥವನ್ನು (ಬ್ರಹ್ಮರಥ) ಮಾತ್ರ ಎಳೆಯುವ ಪದ್ದತಿಯಿದೆ. ಈ ಉತ್ಸವದ ಉಳಿದ ದಿನಗಳಲ್ಲಿ ಎರಡು ರಥ, ಮಕರ ಸಂಕ್ರಾಂತಿಯಂದು ಮೂರು ರಥ ಎಳೆಯಲಾಗುತ್ತದೆ. ಕೊನೆಯ ದಿನ ದೇವರನ್ನು ರಥದದಲ್ಲಿ ಕೂರಿಸಿ, ಪರ್ಯಾಯ ಪೀಠಾಧಿಪತಿಗಳು ಪೂಜೆ ಸಲ್ಲಿಸಿದ ನಂತರ, ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಎಳೆಯಲಾಗುತ್ತದೆ. ಆದರೆ, ಅದಕ್ಕೆ ಮುನ್ನ ಗರುಡ ಮೂರು ಸುತ್ತು ರಥಕ್ಕೆ ಆಗಸದಲ್ಲಿ ಸುತ್ತು ಹಾಕುತ್ತಾನೆ.
|
ಗರುಡ ಪ್ರದಕ್ಷಿಣೆ ಹಾಕುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆ
ಕೃಷ್ಣಮಠದ ಆವರಣದಲ್ಲಿ ಗರುಡನ ಗುಡಿಯೂ ಇದೆ, ಪ್ರತೀದಿನ ಕೃಷ್ಣ, ಮುಖ್ಯಪ್ರಾಣನ ನಂತರ ಗರುಡನಿಗೆ ಸ್ವಾಮೀಜಿಗಳು ಪೂಜೆ ಸಲ್ಲಿಸುತ್ತಾರೆ. ಗರುಡ ದೇವರು ಕೃಷ್ಣನಿಗೆ ನಮನ ಸಲ್ಲಿಸುವ ಸಲುವಾಗಿ ಉತ್ಸವ ಹೊರಡುವ ಮುನ್ನ ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಾನೆ ಎನ್ನುವುದು ಪ್ರತೀತಿ. ಈ ವಿಸ್ಮಯವನ್ನು ಬಾಲ್ಯದಿಂದಲೂ ನೋಡಿದವರು ಇದಕ್ಕೆ ಸಾಕ್ಷಿಯಾಗುತ್ತಾರೆ. ಒಂದು ದಿನದ ಹಿಂದೆ ನಡೆದ ಉತ್ಸವದ ವೇಳೆಯೂ ಗರುಡ ಪ್ರದಕ್ಷಿಣೆ ಹಾಕುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗವಿ ಗಂಗಾಧರೇಶ್ವರಿನಿಗೆ ವರ್ಷಕ್ಕೊಮ್ಮೆ ಸೂರ್ಯ ರಶ್ಮಿ ಸಿಂಚನ
ಬ್ರಹ್ಮರಥವನ್ನು ಎಳೆಯಲು ಸಾವಿರಾರು ಭಕ್ತರು ರಥಬೀದಿಯಲ್ಲಿ ಸೇರಿರುತ್ತಾರೆ. ಗರುಡ ಪ್ರದಕ್ಷಿಣೆ ಹಾಕುವ ವೇಳೆ, ಭಕ್ತರು ಗೋವಿಂದ..ಗೋವಿಂದ ಎಂದು ಉದ್ಘರಿಸುತ್ತಾರೆ. ಇದಾದ ನಂತರವಷ್ಟೇ ರಥದ ಮುಂದೆ ಈಡುಗಾಯಿಯನ್ನು ಸ್ವಾಮೀಜಿಗಳು ಒಡೆದು, ನಂತರ ರಥವನ್ನು ಎಳೆಯಲು ಆರಂಭಿಸಲಾಗುತ್ತದೆ. ಗವಿ ಗಂಗಾಧರೇಶ್ವರಿನಿಗೆ ವರ್ಷಕ್ಕೊಮ್ಮೆ ಸೂರ್ಯ ರಶ್ಮಿ ಸಿಂಚನ ಆಗುವ ಹಾಗೇ, ಉಡುಪಿಯಲ್ಲಿ ಚೂರ್ಣೋತ್ಸವದಂದು ಈ ವಿಸ್ಮಯಕ್ಕೆ ಭಕ್ತರು ಸಾಕ್ಷಿಯಾಗುತ್ತಾರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications