ಪ್ರೀತಿ ಇದ್ದಲ್ಲಿ ಸ್ನೇಹವೇಕಿರುತ್ತೆ? ಸ್ನೇಹದ ಚೆಂದದ ಉತ್ತರ ಕೇಳಿ...
"ಯಾಕ್ ಮಗಾ, ಹುಡ್ಗಿ ಕೈಕೊಟ್ಲಾ...' ಎಂಬಲ್ಲಿಂದ ಹಿಡಿದು, 'ಎರ್ಡು ಪೆಗ್ ಹಾಕು, ಎಲ್ಲ ಸರಿ ಹೋಗತ್ತೆ' ಎಂಬಲ್ಲಿಯವರೆಗೆ 'ಡಿಫರೆಂಟ್, ಡಿಫರೆಂಟ್' ಸ್ನೇಹಿತರಿದ್ದಾರೆ. ಹಲವರ ಬದುಕು ಹಳಿ ತಪ್ಪುವುದಕ್ಕೂ ಕಾರಣವಾದ ಸ್ನೇಹಿತರಿದ್ದಾರೆ. ಮತ್ತೆಷ್ಟೋ ಜನರ ಬದುಕನ್ನು ಉದ್ಧಾರ ಮಾಡಿದವರೂ ಇದ್ದಾರೆ. ಇಂಥ ಸ್ನೇಹಿತರನ್ನೆಲ್ಲ ಇಂದು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.
ಪ್ರತಿ ವರ್ಷ ಆಗಸ್ಟ್ ಮೊದಲೇ ಭಾನುವಾರ(ಈ ವರ್ಷ ಆಗಸ್ಟ್ 08)ವನ್ನು 'ಸ್ನೇಹಿತರ ದಿನ'ವನ್ನಾಗಿ ಆಚರಿಸಲಾಗುತ್ತದೆ. ವ್ಯಕ್ತಿಯ ಬದುಕಲ್ಲಿ 'ಸ್ನೇಹಿತರು' ವಹಿಸಿರುವ ಅಮೂಲ್ಯ ಪಾತ್ರವನ್ನು ನೆನೆದು ಕೃತಜ್ಞತೆ ಅರ್ಪಿಸುವುದಕ್ಕೆ ಈ ದಿನ ಸಕಾಲ.
ವ್ಯಕ್ತಿಯ ಬದುಕಿನಲ್ಲಿ ಸ್ನೇಹಿತರ ಪಾತ್ರ ಎಂಥಾದ್ದು? ಎಲ್ಲ ಸ್ನೇಹಿತರೂ ಆತ್ಮದ ಗೆಳೆಯರಾಗೋಕೆ ಸಾಧ್ಯವಿಲ್ಲ ಯಾಕೆ? 'ಹಾಯ್' ಅನ್ನೋಕೆ ನೂರಿರಬಹುದು ಗೆಳೆಯರು. ಆದರೆ ಕಣ್ಣೀರುಕ್ಕಿದಾಗ ಹೆಗಲಾಗಿ ನಿಲ್ಲುವವರು ಕೆಲವರು ಮಾತ್ರ. ಅಂಥ ಸ್ನೇಹಿತರ ಮಹತ್ವವನ್ನು ತಿಳಿಸುವ ಕೆಲವು ಚೆಂದದ ಸಾಲುಗಳು ಇಲ್ಲಿವೆ. ಇವೆಲ್ಲವೂ ಎಲ್ಲೋ ಓದಿ, ಸಂಗ್ರಹಿಸಿದ ಸಾಲುಗಳು. ಇವನ್ನೆಲ್ಲ ಬರೆದ ಮಹಾತ್ಮರಿಗೆ ನಮ್ಮದೊಂದು ಕೃತಜ್ಞತೆ. ಜೊತೆಗೆ ವ್ಯಕ್ತಿಯ ಬದುಕಲ್ಲಿ ಅನೂಹ್ಯ ಪಾತ್ರ ವಹಿಸಿದ ಸ್ನೇಹಿತರಿಗೆಲ್ಲ "ಹ್ಯಾಪಿ ಫ್ರೆಂಡ್ಶಿಪ್ ಡೇ"

ಪ್ರೀತಿ ಇರುವಲ್ಲಿ ಸ್ನೇಹವೇಕಿರುತ್ತೆ?
ಅದೊಂದು ದಿನ ಸ್ನೇಹ ಪ್ರೀತಿಯನ್ನು ಕೇಳಿತು.
ನಾನು ಇರುವಲ್ಲಿ ನೀನೂ ಯಾಕೆ ಇರ್ತೀಯಾ?
ಅದಕ್ಕೆ ಸ್ನೇಹ ಹೇಳಿತು.
ನೀನೆಲ್ಲಿ ಕಣ್ಣೀರು ಬರುವಂತೆ ಮಾಡುತ್ತೀಯೋ
ಅಲ್ಲಿ ನಗು ಮೂಡಿಸಲಿಕ್ಕೆ ನಾನಿರುತ್ತೇನೆ!

ಸಾಗರದ ಅಲೆಗಳಂತೆ ಸ್ನೇಹಿತರು!
ನಿನ್ನ ಜೀವನ ಸಮುದ್ರದಂತೆ. ಅದರಲ್ಲಿ ನೀನು ಕಿನಾರೆಯಂತೆ
ಸ್ನೇಹಿತರು ಅಲೆಗಳು!
ಸಮುದ್ರದಲ್ಲಿ ಎಷ್ಟು ಅಲೆಗಳಿವೆ ಎಂಬುದು ಮುಖ್ಯವಲ್ಲ
ಎಷ್ಟು ಅಲೆಗಳು ಕಿನಾರೆಯನ್ನು ತಲುಪುತ್ತವೆ ಎಂಬುದು ಮುಖ್ಯ

ಭಿನ್ನತೆ-ಹೋಲಿಕೆ
ಸ್ನೇಹಕ್ಕೆ ಎರಡು ವಿಷಯಗಳು ಮುಖ್ಯವಾಗುತ್ತವೆ
ಮೊದಲನೆಯದು ಇಬ್ಬರ ನಡುವೆ ಹೋಲಿಕೆಯನ್ನು ಗುರುತಿಸುವುದು
ಎರಡನೆಯದು ಇಬ್ಬರ ನಡುವಿನ ಭಿನ್ನತೆಯನ್ನು ಗೌರವಿಸುವುದು!

ಸ್ನೇಹಿತನೆಂದರೆ...
ಸ್ನೇಹಿತನೆಂದರೆ ಅವನು,
ನಮ್ಮ ಎದೆಯೊಳಗಿನ ಕವಿತೆಯನ್ನು ಓದುವವನು
ನಾವು ಮರೆತಾಗ ಅದನ್ನು ಹಾಡುವವನು!

ಪ್ರೀತಿಯಿಂದ ಮೈದಡವಬೇಕು
ಸ್ನೇಹ ಪಕ್ಷಿ ಇದ್ದಂತೆ. ಅದನ್ನು ಗಟ್ಟಿಯಾಗಿ ಹಿಡಿದರೆ ಸತ್ತು ಹೋಗುತ್ತದೆ.
ಹಿಡಿತ ಸಡಿಲಿಸಿದರೆ ಹಾರಿ ಹೋಗುತ್ತದೆ.
ಪ್ರೀತಿಯಿಂದ ಮೈದಡವಿದರೆ ಸದಾ ನಮ್ಮೊಂದಿಗಿರುತ್ತದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ












Click it and Unblock the Notifications