ಪ್ರೀತಿ ಇದ್ದಲ್ಲಿ ಸ್ನೇಹವೇಕಿರುತ್ತೆ? ಸ್ನೇಹದ ಚೆಂದದ ಉತ್ತರ ಕೇಳಿ...
"ಯಾಕ್ ಮಗಾ, ಹುಡ್ಗಿ ಕೈಕೊಟ್ಲಾ...' ಎಂಬಲ್ಲಿಂದ ಹಿಡಿದು, 'ಎರ್ಡು ಪೆಗ್ ಹಾಕು, ಎಲ್ಲ ಸರಿ ಹೋಗತ್ತೆ' ಎಂಬಲ್ಲಿಯವರೆಗೆ 'ಡಿಫರೆಂಟ್, ಡಿಫರೆಂಟ್' ಸ್ನೇಹಿತರಿದ್ದಾರೆ. ಹಲವರ ಬದುಕು ಹಳಿ ತಪ್ಪುವುದಕ್ಕೂ ಕಾರಣವಾದ ಸ್ನೇಹಿತರಿದ್ದಾರೆ. ಮತ್ತೆಷ್ಟೋ ಜನರ ಬದುಕನ್ನು ಉದ್ಧಾರ ಮಾಡಿದವರೂ ಇದ್ದಾರೆ. ಇಂಥ ಸ್ನೇಹಿತರನ್ನೆಲ್ಲ ಇಂದು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.
ಪ್ರತಿ ವರ್ಷ ಆಗಸ್ಟ್ ಮೊದಲೇ ಭಾನುವಾರ(ಈ ವರ್ಷ ಆಗಸ್ಟ್ 08)ವನ್ನು 'ಸ್ನೇಹಿತರ ದಿನ'ವನ್ನಾಗಿ ಆಚರಿಸಲಾಗುತ್ತದೆ. ವ್ಯಕ್ತಿಯ ಬದುಕಲ್ಲಿ 'ಸ್ನೇಹಿತರು' ವಹಿಸಿರುವ ಅಮೂಲ್ಯ ಪಾತ್ರವನ್ನು ನೆನೆದು ಕೃತಜ್ಞತೆ ಅರ್ಪಿಸುವುದಕ್ಕೆ ಈ ದಿನ ಸಕಾಲ.
ವ್ಯಕ್ತಿಯ ಬದುಕಿನಲ್ಲಿ ಸ್ನೇಹಿತರ ಪಾತ್ರ ಎಂಥಾದ್ದು? ಎಲ್ಲ ಸ್ನೇಹಿತರೂ ಆತ್ಮದ ಗೆಳೆಯರಾಗೋಕೆ ಸಾಧ್ಯವಿಲ್ಲ ಯಾಕೆ? 'ಹಾಯ್' ಅನ್ನೋಕೆ ನೂರಿರಬಹುದು ಗೆಳೆಯರು. ಆದರೆ ಕಣ್ಣೀರುಕ್ಕಿದಾಗ ಹೆಗಲಾಗಿ ನಿಲ್ಲುವವರು ಕೆಲವರು ಮಾತ್ರ. ಅಂಥ ಸ್ನೇಹಿತರ ಮಹತ್ವವನ್ನು ತಿಳಿಸುವ ಕೆಲವು ಚೆಂದದ ಸಾಲುಗಳು ಇಲ್ಲಿವೆ. ಇವೆಲ್ಲವೂ ಎಲ್ಲೋ ಓದಿ, ಸಂಗ್ರಹಿಸಿದ ಸಾಲುಗಳು. ಇವನ್ನೆಲ್ಲ ಬರೆದ ಮಹಾತ್ಮರಿಗೆ ನಮ್ಮದೊಂದು ಕೃತಜ್ಞತೆ. ಜೊತೆಗೆ ವ್ಯಕ್ತಿಯ ಬದುಕಲ್ಲಿ ಅನೂಹ್ಯ ಪಾತ್ರ ವಹಿಸಿದ ಸ್ನೇಹಿತರಿಗೆಲ್ಲ "ಹ್ಯಾಪಿ ಫ್ರೆಂಡ್ಶಿಪ್ ಡೇ"

ಪ್ರೀತಿ ಇರುವಲ್ಲಿ ಸ್ನೇಹವೇಕಿರುತ್ತೆ?
ಅದೊಂದು ದಿನ ಸ್ನೇಹ ಪ್ರೀತಿಯನ್ನು ಕೇಳಿತು.
ನಾನು ಇರುವಲ್ಲಿ ನೀನೂ ಯಾಕೆ ಇರ್ತೀಯಾ?
ಅದಕ್ಕೆ ಸ್ನೇಹ ಹೇಳಿತು.
ನೀನೆಲ್ಲಿ ಕಣ್ಣೀರು ಬರುವಂತೆ ಮಾಡುತ್ತೀಯೋ
ಅಲ್ಲಿ ನಗು ಮೂಡಿಸಲಿಕ್ಕೆ ನಾನಿರುತ್ತೇನೆ!

ಸಾಗರದ ಅಲೆಗಳಂತೆ ಸ್ನೇಹಿತರು!
ನಿನ್ನ ಜೀವನ ಸಮುದ್ರದಂತೆ. ಅದರಲ್ಲಿ ನೀನು ಕಿನಾರೆಯಂತೆ
ಸ್ನೇಹಿತರು ಅಲೆಗಳು!
ಸಮುದ್ರದಲ್ಲಿ ಎಷ್ಟು ಅಲೆಗಳಿವೆ ಎಂಬುದು ಮುಖ್ಯವಲ್ಲ
ಎಷ್ಟು ಅಲೆಗಳು ಕಿನಾರೆಯನ್ನು ತಲುಪುತ್ತವೆ ಎಂಬುದು ಮುಖ್ಯ

ಭಿನ್ನತೆ-ಹೋಲಿಕೆ
ಸ್ನೇಹಕ್ಕೆ ಎರಡು ವಿಷಯಗಳು ಮುಖ್ಯವಾಗುತ್ತವೆ
ಮೊದಲನೆಯದು ಇಬ್ಬರ ನಡುವೆ ಹೋಲಿಕೆಯನ್ನು ಗುರುತಿಸುವುದು
ಎರಡನೆಯದು ಇಬ್ಬರ ನಡುವಿನ ಭಿನ್ನತೆಯನ್ನು ಗೌರವಿಸುವುದು!

ಸ್ನೇಹಿತನೆಂದರೆ...
ಸ್ನೇಹಿತನೆಂದರೆ ಅವನು,
ನಮ್ಮ ಎದೆಯೊಳಗಿನ ಕವಿತೆಯನ್ನು ಓದುವವನು
ನಾವು ಮರೆತಾಗ ಅದನ್ನು ಹಾಡುವವನು!

ಪ್ರೀತಿಯಿಂದ ಮೈದಡವಬೇಕು
ಸ್ನೇಹ ಪಕ್ಷಿ ಇದ್ದಂತೆ. ಅದನ್ನು ಗಟ್ಟಿಯಾಗಿ ಹಿಡಿದರೆ ಸತ್ತು ಹೋಗುತ್ತದೆ.
ಹಿಡಿತ ಸಡಿಲಿಸಿದರೆ ಹಾರಿ ಹೋಗುತ್ತದೆ.
ಪ್ರೀತಿಯಿಂದ ಮೈದಡವಿದರೆ ಸದಾ ನಮ್ಮೊಂದಿಗಿರುತ್ತದೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications