ನಿಮಗೆ ಬೇಕಾದ ವಾಟ್ಸಪ್ ಚಾಟ್ ಡಿಲೀಟ್ ಆದ್ರೆ ಚಿಂತೆ ಬೇಡ... ಈ ರೀತಿ ರಿಕವರ್ ಮಾಡಿಕೊಳ್ಳಿ
ವಾಟ್ಸಪ್ ಇಂದು ಭಾರತ ಸೇರಿದಂತೆ ವಿಶ್ವದ ಪ್ರಮುಖ ಭಾಗಗಳಲ್ಲಿ ಸಂದೇಶಗಳನ್ನು ರವಾನಿಸಲು ಇರುವ ಪ್ರಮುಖ ವೇದಿಕೆಯಾಗಿದೆ. ಲಕ್ಷಾಂತರ ಭಾರತೀಯರು ಪ್ರತಿದಿನ ವಿವಿಧ ಕಾರ್ಯಗಳಿಗಾಗಿ ಮತ್ತು ಸಾವಿರಾರು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಮೆಟಾ ಮಾಲೀಕತ್ವದ ಟೆಕ್ಸ್ಟಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಕೆಲವೊಮ್ಮೆ ವಿವಿಧ ಕಾರಣಗಳಿಂದ ಪ್ರಮುಖ ಸಂದೇಶಗಳು ಆಕಸ್ಮಿಕವಾಗಿ ಅಳಿಸಿ ಹೋಗುತ್ತವೆ. ಕೆಲವೊಮ್ಮೆ ವಾಟ್ಸಪ್ ಬಳಕೆದಾರ ಹಳೆ ಫೋನ್ನಿಂದ ಹೊಸ ಫೋನ್ಗೆ ಬದಲಾಯಿಸಿಕೊಳ್ಳುವಾಗ ತನ್ನ ಚಾಟ್ಗಳನ್ನು ಕಳೆದುಕೊಳ್ಳುತ್ತಾರೆ.
ಮಹತ್ವವಾದ ವಾಟ್ಸಪ್ ಸಂದೇಶಗಳನ್ನು ಕಳೆದುಕೊಳ್ಳುದು ಕೆಲವೊಮ್ಮೆ ಸಮಸ್ಯೆ ತಂದೊಡ್ಡಬಹುದು. ಪ್ರಮುಖವಾಗಿ ಕೆಲವು ಲಿಂಕ್ಸ್, ಫೋಟೋಗಳು, ಕಾಂಟ್ಯಾಕ್ಟ್ ನಂಬರ್, ಹೀಗೆ ಕೆಲವು ಚಾಟ್ಗಳು ಕಳೆದುಕೊಳ್ಳಲು ತುಂಬಾ ಮೌಲ್ಯಯುತವಾಗಿಬಹುದು. ಒಂದು ವೇಳೆ ಬಳಕೆದಾರರು ತಮ್ಮ ವಾಟ್ಸಪ್ನಲ್ಲಿರುವ ಸಂದೇಶಗಳು ಡಿಲೀಟ್ ಆದರೆ ಚಿಂತಿಸುವ ಅಗತ್ಯವಿಲ್ಲ. ಡಿಲೀಟ್ ಆದ ಸಂದೇಶಗಳನ್ನು ಗೂಗಲ್ ಡ್ರೈವ್ ಅಥವಾ ಮೊಬೈಲ್ ಬ್ಯಾಕ್ ಅಪ್ ಸಹಾಯದಿಂದ ಮರು ಪಡೆಯಬಹುದಾಗಿದೆ. ಅದಕ್ಕಾಗಿ ನೀವು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಆ ಮೂಲಕ ಅಳಿಸಿ ಹೋದ ವಾಟ್ಸ್ಆ್ಯಪ್ ಸಂಭಾಷಣೆಗಳನ್ನು ಮರು ಪಡೆಯಬಹುದು.

ನಿಮ್ಮ ಅಳಿಸಿ ಹೋದ ವಾಟ್ಸಪ್ ಸಂದೇಶಗಳನ್ನು ಈ ರೀತಿ ಪಡೆದುಕೊಳ್ಳಿ
> ನಿಮ್ಮ ಮೊಬೈಲ್ನ ಫೈಲ್ ಮ್ಯಾನೇಜರ್ ಆಪ್ಗೆ ಹೋಗಿ, ಒಂದು ವೇಳೆ ಕಾಣದಿದ್ದರೆ ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಿ.
>ಇಂಟರ್ನಲ್ ಸ್ಟೋರೇಜ್ನಲ್ಲಿರುವ ವಾಟ್ಸ್ಪ್ ಆಪ್ ಫೋಲ್ಡರ್ ಫೋಲ್ಡರ್ಗೆ ಹೋಗಿ.
>ವಾಟ್ಸಪ್ ಫೋಲ್ಡರ್ನಲ್ಲಿ ಡಾಟಾಬೆಸಸ್ ಅನ್ನು ಆಯ್ಕೆ ಮಾಡಿ, ಇಲ್ಲಿ ದಿನಾಂಕಗಳ ಪ್ರಕಾರ ನಿಮ್ಮ ಎಲ್ಲಾ ಚಾಟ್ಗಳು ಬ್ಯಾಕ್ಅಪ್ ಆಗಿರುತ್ತದೆ.
> ವಾಟ್ಸಪ್ ಚಾಟ್ ಹಿಸ್ಟರಿಯಲ್ಲಿ ನೀವು ಮರು ಪಡೆಯಲು ಬಯಸುತ್ತಿರುವ ದಿನಾಂಕದಲ್ಲಿ ಬ್ಯಾಕ್ಅಪ್ಅನ್ನು ಆಯ್ಕೆ ಮಾಡಿಕೊಳ್ಳಿ.
> ಒಂದು ವೇಳೆ ಬ್ಯಾಕ್ಅಪ್ ನಿಮ್ಮ ಹೆಚ್ಚುವರಿ ಮೆಮೊರಿ ಕಾರ್ಡ್ನಲ್ಲಿದ್ದರೆ, ಅದನ್ನು ಕಾಪಿ ಮಾಡಿ ಇಂಟರ್ನಲ್ ಸ್ಟೋರೇಜ್ಗೆ ಪೇಸ್ಟ್ ಮಾಡಿಕೊಳ್ಳಬೇಕು.
>ನಂತರ msgstore.db.crypt12 ಎಂಬ ಹೆಸರಿನ ಫೈಲ್ಗಳನ್ನು msgstore_BACKUP.db.crypt12 ಎಂದು ಬದಲಿಸಬೇಕು.
> ನಂತರ msgstore-YYY-MM-DD.1.db.crypt12. ಹುಡುಕಿ, ಅದನ್ನು msg.db.crypt12. ಬದಲಾಯಿಸಬೇಕು.
> ನಂತರ ನಿಮ್ಮ ಮೊಬೈಲ್ನಲ್ಲಿ ವಾಟ್ಸಪ್ಅನ್ನು ಡಿಲೀಟ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಿ, ನಿಮ್ಮ ಮೊಬೈಲ್ ನಂತರ ಮೂಲಕ ಸೈನ್ ಇನ್ ಆಗಿ ಮತ್ತು Restore ಅನ್ನು ಕ್ಲಿಕ್ ಮಾಡಿ. ಆಗ ಡಿಲೀಟ್ ಆಗಿರುವ ನಿಮ್ಮೆಲ್ಲಾ ಸಂದೇಶಗಳನ್ನು ಮರಳಿಪಡೆಯಬಹುದು.

ವಾಟ್ಸ್ಆ್ಯಪ್ ಆಪ್ ತನ್ನ ಸರ್ವರ್ಗಳಲ್ಲಿ ನಿಮ್ಮ ಸಂಭಾಷಣೆಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಗಮನವಿರಲಿ. ಅದು ಗೂಗಲ್ ಡ್ರೈವ್ ಅಥವಾ ನಿಮ್ಮ ಮೊಬೈಲ್ನ ಇಂಟರ್ನಲ್ ಸ್ಟೋರೇಜ್ನಲ್ಲಿ ಡಾಟಾಬೇಸ್ಗಳನ್ನು ರಚನೆ ಮಾಡಿ ಉಳಿಸಿರುತ್ತದೆ. ಇದು ಆಕಸ್ಮಿಕವಾಗಿ ಅಳಿಸಿ ಹೋದ ಚಾಟ್ಗಳನ್ನು ಮರು ಸ್ಥಾಪಿಸಲು ಇವುಗಳನ್ನು ಬಳಸಬಹುದು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications