Nadi Tarangini: ನಾಡಿ ಮಿಡಿತವನ್ನು ತಿಳಿಯಲು ನೂತನ ಆಯುರ್ವೇದ ಸಾಧನ ಅಭಿವೃದ್ಧಿ- ಸಿಡಿಎಸ್ಸಿಒ ಅನುಮೋದನೆ
ದೇಹ ಆರೋಗ್ಯದಿಂದಿರಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಯಲು ನಾಡಿ ಮಿಡಿತವನ್ನು ಪರೀಕ್ಷಿಸುವುದು ಪ್ರಾಚೀನಕಾಲದಿಂದಲೂ ರೂಢಿಯಲ್ಲಿದೆ. ಇದೀಗ ನಾಡಿ ಮಿಡಿತಗಳನ್ನು ತಿಳಿಯಲು ಆಯುರ್ವೇದ ವೈದ್ಯರು ದೇಶಿಯ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO)ನಿಂದ ಅನುಮೋದನೆ ಕೂಡ ಸಿಕ್ಕಿದೆ. ನಾಡಿ ತರಂಗಿಣಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನಾಡಿ ರೋಗನಿರ್ಣಯದ ಸಾಧನವಾಗಿದೆ.
ಹೌದು... ಖ್ಯಾತ ಆಯುರ್ವೇದ ವೈದ್ಯರು ನಾಡಿ ಮಿಡಿತವನ್ನು ಪರೀಕ್ಷಿಸುವ ದೇಶಿಯ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ದೇಶದಲ್ಲಿನ ಸೌಂದರ್ಯವರ್ಧಕಗಳು, ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ರಾಷ್ಟ್ರೀಯ ನಿಯಂತ್ರಕವಾದ ಸಿಡಿಎಸ್ಸಿಒನಿಂದ ಅನುಮೋದನೆ ಕೂಡ ಸಿಕ್ಕಿದೆ.

ಈ ಸಾಧನವನ್ನು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಜೆ.ಬಿ. ಜೋಶಿ, ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ಕುಲಪತಿ (ಹಿಂದೆ ಯುಡಿಸಿಟಿ) ಮತ್ತು ಮರಾಠಿ ವಿದ್ಯಾನ್ ಪರಿಷತ್ತಿನ ಅಧ್ಯಕ್ಷ, ಡಾ ಅನಿರುದ್ಧ ಜೋಶಿ ಅವರು ಐಐಟಿ ಬಾಂಬೆಯಲ್ಲಿ ಆರು ವರ್ಷಗಳ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಿದ್ದಾರೆ. ಸೋಮವಾರ ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಇಬ್ಬರೂ ತಾವು ಅಭಿವೃದ್ಧಿಪಡಿಸಿದ ಸಾಧನದ ಬಗ್ಗೆ ವಿವರಗಳನ್ನು ಹಂಚಿಕೊಂಡರು.
ಈ ನಾಡಿನ ತರಂಗಿಣಿ ಸಾಧನದ ಬೆಲೆ 55,000 ರೂಪಾಯಿ ಇದೆ. ಅದರ ತಯಾರಿಕಾ ಕಂಪನಿ ಆತ್ರೇಯ ಇನ್ನೋವೇಶನ್ಸ್ ಪುಣೆಯ ಹಿಂಜೆವಾಡಿಯಲ್ಲಿದೆ. ಪ್ರಸ್ತುತ ಕಂಪನಿಯು ವರ್ಷಕ್ಕೆ 5,000 ನಾಡಿ ತರಂಗಿಣಿ ಸಾಧನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗೆ ಕಂಪನಿಯು ಇದರಿಂದಾಗಿ 5 ಕೋಟಿ ನಿಧಿಯನ್ನು ಪಡೆದಿದ್ದು, ಈ ಹಣವನ್ನು ಕಂಪನಿಯು ಹೆಚ್ಚಿನ ಸಂಶೋಧನೆ, ವಿತರಣಾ ಜಾಲವನ್ನು ಸ್ಥಾಪಿಸಲು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸುತ್ತಿದೆ.

CDSCO ಪ್ರಮಾಣೀಕರಣದ ಪ್ರಕ್ರಿಯೆಯಲ್ಲಿ ಈ ಸಾಧನವನ್ನು 25,000ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಿ ಪರೀಕ್ಷಿಸಿದೆ. ನಾಡಿ ತರಂಗಿಣಿಯ ಮೂಲಕ ನಾಡಿಯನ್ನು ಪರೀಕ್ಷಿಸಿದಾಗ 22 ಆಯುರ್ವೇದ ನಿಯತಾಂಕಗಳನ್ನು ಒಳಗೊಂಡಿರುವ 10 ಪುಟಗಳ ವರದಿಯನ್ನು ಪಡೆಯಲಾಗುತ್ತದೆ. ಈ ಸಾಧನದಿಂದ ಪಡೆದ ವರದಿಯು 10 ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತದೆ. ನಾಡಿನ ತರಂಗಿಣಿಯ ನಿಖರತೆ ಶೇಕಡಾ 85 ರಷ್ಟಿದೆ ಎಂಬ ಅಂಶವನ್ನೂ ಜೋಶಿ ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಜೆ.ಬಿ. ಜೋಶಿ, "ಎರಡು ದಶಕಗಳ ಹಿಂದೆ ರೂಪಿಸಲಾದ ಕಲ್ಪನೆಯು ಅದರ ಬಳಕೆಗೆ ಸರ್ಕಾರದ ಅನುಮೋದನೆಯನ್ನು ಪಡೆಯುವ ಮೂಲಕ ವಾಸ್ತವಕ್ಕೆ ಬರುತ್ತಿರುವುದನ್ನು ನೋಡಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ಆಯುರ್ವೇದ ಚಿಕಿತ್ಸೆಗೆ ಹೊಸ ದಿಕ್ಕನ್ನು ಮಾತ್ರ ನೀಡುವುದಿಲ್ಲ. ಇದು ತಂತ್ರಜ್ಞಾನದ ಬಳಕೆಯೊಂದಿಗೆ ಆಯುರ್ವೇದ ಪದ್ಧತಿಗಳ ಪ್ರಮಾಣೀಕರಣ ಪ್ರಕ್ರಿಯೆಯ ಆರಂಭವನ್ನು ಗುರುತಿಸುತ್ತದೆ. ಇದರಿಂದ ಜನರು ತಮ್ಮ ನಾಡಿ ಮಿಡಿತಗಳಿಂದ ಸುಲಭವಾಗಿ ತಿಳಿಯಬಹುದು'' ಎಂದು ಹೇಳಿದರು.
ಈ ಸಾಧನದ ಸಂಶೋಧನಾ ಪ್ರಕ್ರಿಯೆಯ ಕುರಿತು ಮಾತನಾಡಿದ ಡಾ.ಜೋಶಿ, "ನನ್ನ ತಂದೆ ಪ್ರೊ.ಜೆ.ಬಿ.ಜೋಶಿ ಅವರಿಗೆ ಸುಮಾರು 20 ವರ್ಷಗಳ ಹಿಂದೆ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಪುಣೆಯ ವೈದ್ಯ ಅಶೋಕ್ ಶ್ರೀಪಾದ್ ಭಟ್ ಅವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದರು. ಆ ಸಮಯದಲ್ಲಿ ನಾನು ನಾಡಿ ಪರೀಕ್ಷೆಯು ರೋಗನಿರ್ಣಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಅರಿತುಕೊಂಡೆ. ಹೀಗಾಗಿ ಆಯುರ್ವೇದದಲ್ಲಿ ರೋಗನಿರ್ಣಯ ಪ್ರಕ್ರಿಯೆಯ ಪ್ರಮುಖ ಭಾಗವಾದ ನಾಡಿ ಪರೀಕ್ಷೆಗೆ ಸೂಕ್ತವಾದ ವೈದ್ಯಕೀಯ ಸಾಧನವನ್ನು ಅಭಿವೃದ್ಧಿಪಡಿಸುವ ಆಲೋಚನೆ ಬಂತು. ಐಐಟಿ ಬಾಂಬೆಯಲ್ಲಿ ನನ್ನ ಸಂಶೋಧನಾ ಕಾರ್ಯದ ಸಮಯದಲ್ಲಿ, ಪೀಜೋಎಲೆಕ್ಟ್ರಿಕ್ ಪ್ರೆಶರ್ ಸೆನ್ಸರ್ಗಳ ಆಧಾರದ ಮೇಲೆ ಬೆರಳಿನ ಸ್ಪರ್ಶ ಸಂವೇದನೆಗೆ ಹತ್ತಿರವಾದ ಸಾಧನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸುವ ಮೊದಲು ನಾನು 7 ರಿಂದ 10 ವಿಭಿನ್ನ ಸಂವೇದಕಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಪಿಎಚ್ಡಿ ವಿಷಯವೂ ಆಗಿತ್ತು'' ಎಂದು ಹೇಳಿದರು.
ಸಂಶೋಧನಾ ಯೋಜನೆ
"ಇದು ನಾಡಿ ತರಂಗವನ್ನು ಗುರುತಿಸುವ ಸಾಧನವಾಗಿರುವುದರಿಂದ ಅದಕ್ಕೆ 'ನಾಡಿ ತರಂಗಿಣಿ' ಎಂದು ಹೆಸರಿಡಲಾಗಿದೆ. ಈಗ ನಾವು ಆಧುನಿಕ ಸಾಧನದ ಮೂಲಕ ನಾಡಿ ಪರೀಕ್ಷೆ ಮಾಡಲು ಸಮರ್ಥರಾಗಿದ್ದೇವೆ. ಈ ಸಂಶೋಧನಾ ಯೋಜನೆಗಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನಿಂದ ಸಂಶೋಧನಾ ಅನುದಾನವನ್ನು ಸ್ವೀಕರಿಸಲಾಗಿದೆ. ಇದಾದ ನಂತರ ಖ್ಯಾತ ಉದ್ಯಮಿ ಆನಂದ್ ದೇಶಪಾಂಡೆ ಸಂಶೋಧನೆಯನ್ನು ಪ್ರಯೋಗಾಲಯಕ್ಕೆ ಸೀಮಿತಗೊಳಿಸದೆ ಜನರ ಬಳಕೆಗೆ ಮಾರುಕಟ್ಟೆಗೆ ತರಬೇಕು ಎಂದು ಸಲಹೆ ನೀಡಿದಾಗ, ನಾನು ಆತ್ರೇಯ ಇನ್ನೋವೇಶನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಈ ಸಾಧನವನ್ನು ತಯಾರಿಸಲು ಶ್ರಮಿಸಿದೆ'' ಎಂದು ಜೋಶಿ ಹೇಳಿದರು.
ಕಳೆದ ವರ್ಷ ನಾಡಿ ತರಂಗಿಣಿ ಸಾಧನದ ಸಂವೇದನಾ ತಂತ್ರಜ್ಞಾನ ಮತ್ತು ಪ್ರಕ್ರಿಯೆಯು US ಪೇಟೆಂಟ್ ಪಡೆಯಿತು. US ಪೇಟೆಂಟ್ನ ಹೊರತಾಗಿ ಸಾಧನವು ಯುರೋಪ್, ಇಂಡೋನೇಷ್ಯಾ ಮತ್ತು ಭಾರತಕ್ಕೆ ಪೇಟೆಂಟ್ಗಳನ್ನು ಸಹ ಪಡೆದುಕೊಂಡಿದೆ. ಪ್ರಸ್ತುತ, ನಾಡಿ ತರಂಗಿಣಿಯನ್ನು ದೇಶಾದ್ಯಂತ 1250 ಕ್ಕೂ ಹೆಚ್ಚು ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಬಳಸಲಾಗುತ್ತಿದೆ ಮತ್ತು ಇದುವರೆಗೆ 5 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳನ್ನು ಈ ಸಾಧನದೊಂದಿಗೆ ಪರೀಕ್ಷಿಸಲಾಗಿದೆ.
ಇಲ್ಲಿ ಮತ್ತೊಂದು ಗಮನಸಿದಬೇಕಾದ ವಿಷಯವೆಂದರೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಈ ಸಾಧನವನ್ನು ಪ್ರಸ್ತಾಪಿಸಿ ಈ ಸಾಧನವನ್ನು ಹೊಗಳಿದ್ದರು.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications